Advertisement
ಸುದ್ದಿಗಳು

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಘ್ನನಾಶಕ ಗಣಪ ಉಪವಾಸದಲ್ಲಿ…!? | ಮೌನ ಪ್ರತಿಭಟನೆ ಮಾಡಿದ ಭಕ್ತರು….!! |

Share

ನಾಡಿನ ಪ್ರಸಿದ್ಧ ಹಾಗೂ ಶ್ರೀಮಂತ ದೇವಸ್ಥಾನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ವಿಘ್ನನಾಶಕ ಗಣಪ ಉಪವಾಸದಲ್ಲಿ..!?. ಹೀಗೊಂದು ಪ್ರಶ್ನೆ  ಎದ್ದಿದೆ. ಕಾರಣ, ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯ ಹಿತರಕ್ಷಣಾ ಸಮಿತಿಯ ಮೂವರು ಸದಸ್ಯರು “ವಿಘ್ನನಾಶಕ ಗಣಪ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೂಲಗಣಪ ಉಪವಾಸದಲ್ಲಿ ಇದ್ದಾನೆ” ಎಂದು ಶುಕ್ರವಾರ ಮೌನ ಪ್ರತಿಭಟನೆಯನ್ನು ಸಾಂಕೇತಿಕವಾಗಿ ದೇವಸ್ಥಾನದ ಗೋಪುರ ಬಳಿ ನಡೆಸಿದ್ದಾರೆ.  ಈ ಸಂದರ್ಭದಲ್ಲಿ ಮೂಲಗಣಪನ ದರ್ಶನ ಬೇಕು , ಮೂಲಗಣಪತಿಗೆ ಪೂಜೆ ಬೇಕು ಎಂದು ಒತ್ತಾಯಿಸಿದ್ದಾರೆ.

ಕಡಬ ತಾಲೂಕಿನಲ್ಲಿ ಬರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನಾಡಿನ ಪ್ರಸಿದ್ಧ ದೇವಸ್ಥಾನ. ಸಾಕಷ್ಟು ಮಂದಿ ಭಕ್ತರು  ನಾಡಿನ ವಿವಿದೆಡೆಯಿಂದ ಆಗಮಿಸುತ್ತಾರೆ. ನಾಗ ದೇವರಿಗೆ ವಿವಿಧ ರೀತಿಯ ಹರಕೆಯನ್ನೂ ಒಪ್ಪಿಸುತ್ತಾರೆ, ನೆಮ್ಮದಿ ಕಾಣುತ್ತಾರೆ. ಆದರೆ ಕಳೆದ ಕೆಲವು ಸಮಯಗಳಿಂದ ಇಲ್ಲಿ ವಿವಾದಗಳು ಸಾಕಷ್ಟು ಕಂಡುಬರುತ್ತಿದೆ. ಈ ಹಿಂದೆ ಸರ್ಪಸಂಸ್ಕಾರದ ವಿಚಾರವಾಗಿ ವಿವಾದ ಎದ್ದು ಸುದ್ದಿಯಾಗಿತ್ತು, ಆ ಬಳಿಕ ಕೊರೋನಾ ಕಾರಣದಿಂದ ಸೇವೆಗಳೂ ಕಡಿಮೆಯಾದವು, ವಿವಾದವೂ ತಣ್ಣಗಾಯಿತು. ಆ ಬಳಿಕವೂ ಸಣ್ಣ ಸಣ್ಣ ವಿವಾದಗಳು ಕಂಡುಬರುತ್ತಿತ್ತು. ಇದೀಗ ಭಕ್ತರೂ ಗಮನಿಸಬೇಕಾದ ಹಾಗೂ ಗಂಭೀರವಾದ ವಿವಾದವೊಂದು ಎದ್ದಿದೆ. ದೇವಸ್ಥಾನದಲ್ಲಿ ಗರ್ಭಗುಡಿಯ ಒಳಗಡೆ ಇರುವ ಮೂಲ ಮಹಾಗಣಪತಿ ಉಪವಾಸದಲ್ಲಿದ್ದಾರೆ ಎನ್ನುವುದು ಈಗಿನ ವಿವಾದದ ವಿಷಯ. ಈ ವಿವಾದ ಬೆಳೆದು  ದೇವಸ್ಥಾನದ ಮುಂದೆ ಸಾಂಕೇತಿಕವಾಗಿ ಮೂರು ಮಂದಿ ಧರಣಿ ಕುಳಿತುಕೊಳ್ಳುವ ಸ್ಥಿತಿಗೆ ಬಂದಿದೆ. ಅದರಲ್ಲಿ ದೇವಸ್ಥಾನದ ಈ ಹಿಂದಿನ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಭಾಗವಹಿಸಿದ್ದರು. ಹೀಗಾಗಿ ಈ ಪ್ರಕರಣ ಈಗ ಗಂಭೀರತೆ ಪಡೆದುಕೊಂಡಿದೆ.‌

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗರ್ಭಗುಡಿಯ ಒಳಗಡೆ ಇರುವ ಮೂಲ ಮಹಾಗಣಪತಿ ದೇವರ ವಿಗ್ರಹವನ್ನು ಭಕ್ತರ ದರ್ಶನಕ್ಕೆ ಇಡಬೇಕು, ಒಳಾಂಗಣದಲ್ಲಿ ಸೂಕ್ತವಾದ ಗುಡಿಯನ್ನು ನಿರ್ಮಿಸಿ ಗುಡಿಯಲ್ಲಿ ಮೂಲ ಮಹಾಗಣಪತಿ ದೇವರನ್ನು ಪ್ರತಿಷ್ಟಾಪನೆ  ಮಾಡಿ ಕ್ರಮಬದ್ಧವಾದ ಪೂಜೆ ಮತ್ತು ನೈವೇದ್ಯ ನಡೆಸಬೇಕು ಎಂದು ಆಗ್ರಹಿಸಿ  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿ ದೇವಸ್ಥಾನದ ಹಿತರಕ್ಷಣಾ ವೇದಿಕೆಯ ಪ್ರಮುಖರಿಂದ ಮೌನ ಧರಣಿ ಶುಕ್ರವಾರ ನಡೆಸಲಾಯಿತು. ಈ ಸಾಂಕೇತಿಕ ಧರಣಿಯಲ್ಲಿ  ಪ್ರಮುಖರಾದ ಶ್ರೀನಾಥ ಟಿಎಸ್, ಕೃಷ್ಣಮೂರ್ತಿ ಭಟ್, ಪ್ರಶಾಂತ್ ಭಟ್ ಮಾಣಿಲ ಭಾಗವಹಿಸಿದ್ದರು.

ಎರಡು ವಾರಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಆಡಳಿತಕ್ಕೆ ಮತ್ತು  ಸರಕಾರಕ್ಕೆ ಮನವಿ ನೀಡಿದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಪ್ರಮುಖರು,    ಕುಕ್ಕೆ ಶ್ರೀ  ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗರ್ಭಗುಡಿಯ ಒಳಗಡೆ ಇರುವ ಮೂಲ ಮಹಾಗಣಪತಿ  ದೇವರಿಗೆ ಸರಿಯಾಗಿ ಪೂಜೆ ನಡೆಯಬೇಕು ಹಾಗೂ ಮೂಲ ಗಣಪತಿ ದೇವರಿಗೆ ಪ್ರತ್ಯೇಕ ಗುಡಿ ನಿರ್ಮಾಣವಾಗಬೇಕು, ನೈವೇದ್ಯ ಸರಿಯಾಗಬೇಕು ಎಂದು ಒತ್ತಾಯಿಸಿದ್ದರು. ಧಾರ್ಮಿಕ ಕೇಂದ್ರಗಳಲ್ಲಿ ಭಕ್ತರಿಗೆ ಭಗವಂತನ ಸರಿಯಾದ ಅನುಗ್ರಹ ಹಾಗೂ ಫಲ ಸದ್ಯ ಸಿಗುತ್ತಿದ್ದರೂ ಪರಿಪೂರ್ಣವಾದ ಫಲ ಸಿಗಬೇಕಾದರೆ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಸರಿಯಾಗಿರಬೇಕು ಎಂಬುದು ಹಿತರಕ್ಷಣಾ ವೇದಿಕೆ ಒತ್ತಾಯವಾಗಿತ್ತು. ಆದರೆ ಗಣೇಶ ಚೌತಿಯಂದು ಕೂಡಾ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಶುಕ್ರವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದಲ್ಲಿ ದೇವಸ್ಥಾನದ ಹಿತರಕ್ಷಣಾ ವೇದಿಕೆಯ ಪ್ರಮುಖರಿಂದ ಮೌನ ಧರಣಿ ನಡೆಸಿದರು. ಸದ್ಯ ಇದು ಸಾಂಕೇತಿಕ ಧರಣಿಯಾಗಿದ್ದು, ಇಲ್ಲಿ ಯಾವುದೇ ರಾಜಕೀಯ ಇಲ್ಲ, ಧಾರ್ಮಿಕ ಹಿತಾಸಕ್ತಿ ಮಾತ್ರಾ ಎಂದು ಧರಣಿಯಲ್ಲಿ  ಭಾಗವಹಿಸಿದ ಪ್ರಶಾಂತ್‌ ಭಟ್‌ ಮಾಣಿಲ ಹೇಳಿದ್ದಾರೆ.

ಪ್ರಶಾಂತ್‌ ಭಟ್‌ ಮಾಣಿಲ ಧರಣಿ ಬಗ್ಗೆ ಹೀಗೆ ಹೇಳುತ್ತಾರೆ…..

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆಯಿಂದ ಹಲಸಿನತ್ತ “ಸಂತೋಷ” ಪಯಣ – ನೀರಿನ ಕೊರತೆಯ ಸವಾಲನ್ನು ಅವಕಾಶವಾಗಿಸಿದ ಕೃಷಿಕ

ನೀರಿನ ಕೊರತೆಯಿಂದ ಅಡಿಕೆ ತೋಟದ ಒಂದು ಭಾಗವನ್ನು ಹಲಸು ತೋಟವನ್ನಾಗಿ ಪರಿವರ್ತಿಸಿದ ಪುತ್ತೂರಿನ…

11 hours ago

ಬಾಳ ಮಧ್ಯಾಹ್ನದ ಲಹರಿ

"ಜೀವನ ಎಷ್ಟು ದೀರ್ಘ ಎಂಬುದಲ್ಲ, ಅದು ಎಷ್ಟು ಅರ್ಥಪೂರ್ಣ ಎಂಬುದೇ ನಿಜವಾದ ಲೆಕ್ಕ.…

13 hours ago

ಹವಾಮಾನ ವರದಿ | 05-07-2026 | ರಾಜ್ಯದಲ್ಲಿ ಮಳೆ ಇಳಿಮುಖದತ್ತ? ಜುಲೈ 8–10 ರಿಂದ ಹವಾಮಾನದಲ್ಲಿ ಬದಲಾವಣೆ ಸಾಧ್ಯತೆ

ಜುಲೈ 8ರಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಸಾಧ್ಯತೆ ಇದೆ. ಕರಾವಳಿ…

14 hours ago

ಮುಂಗಾರು ಮತ್ತಷ್ಟು ಚುರುಕು- ವಾಯುಭಾರ ಕುಸಿತದ ಲಕ್ಷಣ | ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ IMD ಎಚ್ಚರಿಕೆ ನೀಡಿ

ದೇಶದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ…

17 hours ago

ಅಡಿಕೆ ಕಳ್ಳಸಾಗಣೆ ಪ್ರಕರಣ – ಸಿಲ್ಚಾರ್ ಉದ್ಯಮಿಯ ಮನೆ ಮೇಲೆ ಇ.ಡಿ. ದಾಳಿ, ಹಣ ಅಕ್ರಮ ವರ್ಗಾವಣೆ ತನಿಖೆ ತೀವ್ರ

ಮ್ಯಾನ್ಮಾರ್ ಅಡಿಕೆ ಕಳ್ಳಸಾಗಣೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸಿಲ್ಚಾರ್ ಉದ್ಯಮಿಯ…

18 hours ago