Advertisement
MIRROR FOCUS

‘ಬಾರಿಸು ಕನ್ನಡ ಡಿಂಡಿಮ’ ಕವಿಯ ಹುಟ್ಟು ಹಬ್ಬದ ಸಂಭ್ರಮ

Share
ಸೂರ್ಯಾಸ್ತ, ಸೂರ್ಯೋದಯದ ನಿತ್ಯ ಬೆಡಗು, ಹಕ್ಕಿಗಳ ಇಂಚರ , ಮರದೆಲೆಯ ಮೇಲೆ ನಿಂತಿರುವ ನೀರ ಹನಿ, ಅದರಲ್ಲಿ ಪ್ರತಿಫಲಿಸುವ ಸೂರ್ಯಕಿರಣ, ಕುಣಿಯುವ ನವಿಲು , ಮರದಿಂದ ಮರಕೆ ಹೋಗುವ ಅಳಿಲು ಕೆಲವರ ಮೇಲೆ ಪ್ರಭಾವ ಬೀರುತ್ತವೆ. ಪ್ರಕೃತಿಯ ದೃಶ್ಯಗಳಿಂದ ಪ್ರೇರೇಪಿತವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡ ಜನಮುಖಿ ಕವಿಗಳಲ್ಲಿ ಪ್ರಮುಖರಾದವರು ಕುವೆಂಪುರವರು. ಕುಪ್ಪಳ್ಳಿ , ಕವಿಶೈಲ ಪರಿಸರದ ಅಪಾರ ಪ್ರಭಾವವನ್ನು ಕವಿಯ ಪ್ರತಿಯೊಂದು ರಚನೆಯಲ್ಲೂ ಪ್ರತಿಫಲಿಸುತ್ತದೆ.

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಹೆಸರಿನಿಂದ ಪ್ರಥಮ ಅಕ್ಷರಗಳನ್ನು ಆರಿಸಿಕೊಂಡು ಕುವೆಂಪು ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿ ಯುಗದ ಕವಿ ಜಗದ ಕವಿಯೆಂದು ಬೇಂದ್ರೆಯವರಿಂದಲೇ ಬಿರುದಾಂಕಿತರಾದವರು. ತಮ್ಮ ಬಾಲ್ಯವನ್ನು ಕುಪ್ಪಳ್ಳಿಯಲ್ಲಿ ಹಾಗೂ ಮುಂದಿನ ದಿನಗಳನ್ನು ಮೈಸೂರಿನ ಉದಯರವಿಯಲ್ಲೇ ಕಳೆದರು. ಅವರು 29 ಡಿಸೆಂಬರ್ 1904 ರಲ್ಲಿ ಜನಿಸಿದರು. ಇಂದು ಕವಿಯ 116 ನೇ ಹುಟ್ಟು ಹಬ್ಬ.

ಕುವೆಂಪು ಎಂಬ ಹೆಸರಿನೊಂದಿಗೆ ತಟ್ಟನೆ ನೆನಪಾಗುವುದು’ ಓ ನನ್ನ ಚೇತನ ‘ಎಂಬ ವಿಶ್ವ ಮಾನವ ಸಂದೇಶ ಸಾರುವ ಗೀತೆ. ಪ್ರೌಢಶಾಲಾ ವಿದ್ಯಾಭ್ಯಸದ ಆರಂಭದ ದಿನಗಳಲ್ಲಿ ನಮ್ಮ ಕನ್ನಡ ಟೀಚರ್ ಬಿ .ಎನ್. ಕಲಾವತಿಯವರು ಸೂಕ್ತ ರಾಗ ಅಳವಡಿಸಿ ಹಾಡುತ್ತಿದ್ದುದು ಇನ್ನೂ ಕಿವಿಯಲ್ಲಿ ರಿಂಗಿಣಿಸುತ್ತಿದೆ. ಕಣ್ಣು ಮುಚ್ಚಿ ಓ ನನ್ನ ಚೇತನ ಗೀತೆಯನ್ನು ಅವರು ಹಾಡುತ್ತಿದ್ದರೆ ಒಂದರೆಗಳಿಗೆ ಅಕ್ಕಪಕ್ಕದ ತರಗತಿಗಳು ಸ್ಥಬ್ದವಾಗುತ್ತಿತ್ತು.

ಭಾವಗೀತೆಗಳೇ ಆಗಿರಲಿ, ದೇಶಭಕ್ತಿ ಗೀತೆಗಳೇ ಆಗಿರಲಿ ಮನಸಿಗೆ ಮುಟ್ಟುವಂತೆ ಬರೆಯುತ್ತಿದ್ದವರು ಕುವೆಂಪು ಅವರು. ನಮ್ಮ ನೆಚ್ಚಿನ ಕವಿ ‘ರಾಷ್ಟ್ರ ಕವಿ’ಯೆಂಬ ಹೆಮ್ಮೆ. ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃಷಿಗೈದವರು ಕುವೆಂಪುರವರು. ಅವರ ಕವಿತೆಗಳು, ನಾಟಕಗಳು , ಕಾದಂಬರಿಗಳು ಮುಖ್ಯವಾಗಿ ಪ್ರಕೃತಿ, ದೇಶಪ್ರೇಮ, ಪ್ರೀತಿ ಆಧ್ಯಾತ್ಮ, ವೈಚಾರಿಕತೆಯ ವಿಷಯಗಳ ಆಧಾರಿತವಾಗಿರುತ್ತಿದ್ದುವು. ಕೆಲವೊಂದು ಕವಿತೆಗಳಂತು ಮನಸಿನಲ್ಲಿ ಕ್ರಾಂತಿಯ ಕಿಚ್ಚು ಹಚ್ಚುವಂತಿವೆ. ಕನ್ನಡ ನಾಡು ನುಡಿಯ ಒಳಿತಿಗಾಗಿ ಬರೆದ ಹಾಡುಗಳು ಕ್ರಾಂತಿಕಾರಿ ಯಾಗಿರುತ್ತಿತ್ತು. ಜನರ ಭಾವನೆಗಳನ್ನು ಬಡಿದೆಬ್ಬಿಸುವಂತಿರುತ್ತವೆ.
ಅವು ಅಂದಿಗೂ ಇಂದಿಗೂ ಎಂದಿಗೂ ಪ್ರಸ್ತುತ.

“ಬಾ ಇಲ್ಲಿ ಸಂಭವಿಸು ಇಂದೆನ್ನ ಹೃದಯದಲಿ
ನಿತ್ಯವೂ ಅವತರಿಪ ಸತ್ಯಾವತಾರ ||
ಮಣ್ಣಾಗಿ ಮರವಾಗಿ ಮಿಗವಾಗಿ ಖಗವಾಗಿ
ಭವಭವದಿ ಭವಿಸಿ ಹೇ! ಭವವಿದೂರ……………
ಎಂದು ಗಾಯಕ ಸಿ ಅಶ್ವಥ್ ಹಾಡುತ್ತಿದ್ದರೆ ಮೈ ರೋಮಾಂಚನವಾಗದಿರದು.

ಅವರೊಬ್ಬ ಕವಿ, ಕಾದಂಬರಿಗಾರ, ಚಿಂತಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ, ವಿಮರ್ಶಕ , ಹೋರಾಟಗಾರ ಎಲ್ಲವೂ.
ಸ್ವಾವಲಂಬನೆ , ಸ್ವಾತಂತ್ರ್ಯ , ಇಚ್ಛಾಶಕ್ತಿ ಸಾಧಿಸದ ಹೊರತು ಅಭಿವೃದ್ಧಿ ಅಸಾಧ್ಯವೆಂಬುದನ್ನು ಬಲವಾಗಿ ಪ್ರತಿಪಾದಿಸಿದರು ಕುವೆಂಪುರವರು.

ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಆಂಧ್ರಪ್ರದೇಶದ ಹೊಸ ಪ್ರಯೋಗ : ರೈತನ ತೋಟದಿಂದ ನೇರವಾಗಿ ಮನೆ ಬಾಗಿಲಿಗೆ ಕೃಷಿ ಉತ್ಪನ್ನ

ಆಂಧ್ರಪ್ರದೇಶ ಸರ್ಕಾರ ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ “Farm-to-Home”…

7 hours ago

ಭಾರತ ಕೃಷಿಯಲ್ಲಿ ಭರ್ಜರಿ ದಾಖಲೆ : ಆಹಾರ ಉತ್ಪಾದನೆ 3765 ಮಿಲಿಯನ್ ಟನ್!

2025-26ರಲ್ಲಿ ಭಾರತದಲ್ಲಿ 3765.63 ಲಕ್ಷ ಟನ್ ಆಹಾರ ಉತ್ಪಾದನೆ ಸಾಧ್ಯತೆ ಇದ್ದು, ಇದು…

17 hours ago

ಮಂಗಳೂರಿನಲ್ಲಿ ಉದ್ಯೋಗಾವಕಾಶ : ಮೇ 30ರಂದು ಕಸ್ಟಮರ್ ಸಪೋರ್ಟ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ನೇರ ಸಂದರ್ಶನ

ವಿ.ಆರ್.ಎನ್ ಇನ್ಪೋಟೆಕ್ ಕಂಪೆನಿಯ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹಾಗೂ ಟೆಲಿಕಾಲರ್ ಹುದ್ದೆಗಳಿಗೆ ಮೇ…

18 hours ago

ಬ್ಲಿಂಕಿಟ್‌ನಲ್ಲಿ ಉದ್ಯೋಗಾವಕಾಶ : ಜೂನ್ 1ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಬ್ಲಿಂಕಿಟ್ ಕಂಪೆನಿಯ ಪಿಕ್ಕರ್ ಹಾಗೂ ಪ್ಯಾಕರ್ ಹುದ್ದೆಗಳಿಗೆ ಜೂನ್ 1ರಂದು ಮಂಗಳೂರಿನಲ್ಲಿ ನೇರ…

18 hours ago

ಬಕ್ರೀದ್‌ಗೂ ಮುನ್ನ ದೇಶದಲ್ಲಿ ಹೊಸ ಚರ್ಚೆ | “ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ” — ಮುಸ್ಲಿಂ ಸಂಘಟನೆಗಳ ಬೇಡಿಕೆ

ಬಕ್ರೀದ್‌ಗೂ ಮುನ್ನ ಗೋಹತ್ಯೆ ಮತ್ತು ಗೋ ರಕ್ಷಣೆಯ ವಿಚಾರ ಮತ್ತೆ ದೇಶದಲ್ಲಿ ಚರ್ಚೆಗೆ…

24 hours ago

ಹವಾಮಾನ ಬದಲಾವಣೆ ಈಗ ಭವಿಷ್ಯದ ಸಮಸ್ಯೆಯಲ್ಲ- ಸ್ಥಳೀಯ ಮಟ್ಟದಲ್ಲೇ ಆರಂಭವಾಗುತ್ತಿದೆ ಕ್ರಿಯಾ ಯೋಜನೆ

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸಲು ದಕ್ಷಿಣ ಕನ್ನಡದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ…

1 day ago