Advertisement
ಅನುಕ್ರಮ

ನಾಯಕತ್ವ – ತಂಡ ನಿರ್ವಹಣೆ ಮತ್ತು ಪ್ರೇರಣೆಯ ಕಲೆ

Share

ನಾಯಕನು ಜನ್ಮದಿಂದ ಬರುವುದಿಲ್ಲ, ಸೇವೆ ಮತ್ತು ಪ್ರೇರಣೆಯಿಂದ ರೂಪುಗೊಳ್ಳುತ್ತಾನೆ.! ನಾಯಕನು ಬೆಳೆಯುವುದು ಅಧಿಕಾರದಿಂದಲ್ಲ, ವಿಶ್ವಾಸದಿಂದಲೇ ನಿಜವಾದ ನಾಯಕತ್ವ ಬೆಳೆಯುತ್ತದೆ.!

Advertisement
Advertisement

ಸಮಾಜದ ಬೆಳವಣಿಗೆಯಲ್ಲಿ ನಾಯಕತ್ವದ ಪಾತ್ರ ಅಪಾರ. ನಾಯಕತ್ವವೆಂದರೆ ಕೇವಲ ಅಧಿಕಾರ ಹಿಡಿಯುವುದು ಅಥವಾ ನಿರ್ಧಾರಗಳನ್ನು ಕೈಗೊಳ್ಳುವುದಲ್ಲ; ಅದು ತಂಡವನ್ನು ದಿಕ್ಕು ತೋರಿಸುವುದು, ಪ್ರೇರೇಪಿಸುವುದು ಮತ್ತು ಒಟ್ಟಾಗಿ ಗುರಿ ಸಾಧನೆಗೆ ಮುನ್ನಡೆಸುವುದು. ಒಬ್ಬ ನಾಯಕನು ದಿಕ್ಕು ತೋರಿಸುವ ದೀಪಸ್ತಂಭದಂತಿದ್ದಾನೆ – ಕತ್ತಲೆಯಲ್ಲಿರುವ ಹಡಗಿನವರನ್ನು ಸುರಕ್ಷಿತ ತೀರಕ್ಕೆ ತಲುಪಿಸುವ ಮಾರ್ಗದರ್ಶಕ.

ನಾಯಕತ್ವದ ಲಕ್ಷಣಗಳು :

1  .ತಂಡ ನಿರ್ವಹಣೆ (Team Management) : ತಂಡ ಯಶಸ್ವಿಯಾಗಲು ಪ್ರತಿ ಸದಸ್ಯರ ಸಾಮರ್ಥ್ಯಗಳನ್ನು ಗುರುತಿಸಿ, ಅವರಿಗೆ ತಕ್ಕ ಕೆಲಸ ಹಂಚುವುದು ಅಗತ್ಯ. ಉತ್ತಮ ನಾಯಕನಾದವನು ಸಾಮರಸ್ಯದ  ವಾತಾವರಣ ನಿರ್ಮಿಸುತ್ತಾನೆ,ಸಂಘರ್ಷಗಳನ್ನು ಶಾಂತಿಯುತವಾಗಿ ಪರಿಹರಿಸುತ್ತಾನೆ,ಪ್ರತಿ ವ್ಯಕ್ತಿಯ ಶಕ್ತಿಯನ್ನು ಗುರಿಯತ್ತ ಕೇಂದ್ರೀಕರಿಸುತ್ತಾನೆ.

ಉದಾಹರಣೆಗೆ, ಕ್ರಿಕೆಟ್ ತಂಡದಲ್ಲಿ ನಾಯಕನು ಕೇವಲ ಆಟಗಾರನಾಗಿರದೆ, ಪ್ರತಿ ಆಟಗಾರನ ಸಾಮರ್ಥ್ಯವನ್ನು ಅರ್ಥಮಾಡಿಕೊಂಡು ತಕ್ಕ ಜಾಗದಲ್ಲಿ ಬಳಸುವ ತಂತ್ರಜ್ಞನಾಗಿರುತ್ತಾನೆ.

2 ಪ್ರೇರಣೆ (Motivation) : ಪ್ರತಿ ತಂಡದ ಸದಸ್ಯನು ಪ್ರೇರಣೆ ಪಡೆದಾಗ ಮಾತ್ರ ತನ್ನ ಶ್ರೇಷ್ಠತೆ ತೋರುತ್ತಾನೆ. ಒಬ್ಬ ಉತ್ತಮ ನಾಯಕನು ಸಾಧನೆಯ ದೃಷ್ಟಾಂತವನ್ನು ತೋರಿಸಿ ಇತರರಲ್ಲಿ ಉತ್ಸಾಹ ತುಂಬುತ್ತಾನೆ,ವಿಫಲತೆಯಲ್ಲಿಯೂ ನಿರಾಶೆಗೊಳಿಸದೆ, ಅದನ್ನು ಪಾಠವನ್ನಾಗಿ ಪರಿವರ್ತಿಸುತ್ತಾನೆ,ಸಣ್ಣ ಯಶಸ್ಸುಗಳನ್ನೂ ಗುರುತಿಸಿ ತಂಡವನ್ನು ಶ್ಲಾಘಿಸುತ್ತಾನೆ.

ಈ ರೀತಿಯ ಪ್ರೇರಣೆಯಿಂದ ‘ನಾವು’ ಎಂಬ ಮನೋಭಾವ ಬೆಳೆಯುತ್ತದೆ. ಒಂದು ಸಾಂಘಿಕ ಶಕ್ತಿ ವೃದ್ಧಿಯಾಗುತ್ತದೆ.

3 .ದೃಷ್ಟಿಕೋನ ಮತ್ತು ನಿರ್ಧಾರ (Vision & Decision Making) :  ಇದು ಅತ್ಯಂತ ಮಹತ್ವದ ವಿಷಯ.ನಾಯಕನ ದೃಷ್ಟಿ ದೀರ್ಘಾವಧಿಯದ್ದಾಗಿರಬೇಕು. ಅವನು ಕೇವಲ ಇಂದಿನ ಫಲಿತಾಂಶವನ್ನೇ ನೋಡುವುದಲ್ಲ, ಭವಿಷ್ಯದ ಯಶಸ್ಸಿನ ಅಡಿಪಾಯವನ್ನೂ ಹಾಕುತ್ತಾನೆ. ಜೊತೆಗೆ, ತ್ವರಿತವಾಗಿ ಸರಿಯಾದ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವು ಅವಶ್ಯಕ. ಈ ದೃಷ್ಟಿಯಲ್ಲಿ ನಾಯಕನಾದವನು ಚಿಂತಿಸಿ ತಂಡವನ್ನು ಮುನ್ನಡೆಸಬೇಕು.

4 .ಸಂವಹನ ಮತ್ತು ಜವಾಬ್ದಾರಿ (Communication & Responsibility) : ಸ್ಪಷ್ಟವಾದ ಮತ್ತು ನಿಖರವಾದ  ಸಂಪರ್ಕ ಕೌಶಲ್ಯ ನಾಯಕನ ಬಲ.ಸೂಚನೆಗಳನ್ನು ಸರಳವಾಗಿ ಸರಿಯಾದ ಸಮಯದಲ್ಲಿ  ತಲುಪಿಸುವುದು, ಪ್ರತಿಕ್ರಿಯೆ ನೀಡುವುದು, ಹಾಗೂ ಪ್ರೋತ್ಸಾಹಿಸುವುದು  ಅವಶ್ಯ.

ನಾಯಕನು ಯಶಸ್ಸಿನ ಶ್ರೇಯಸ್ಸನ್ನು ತಂಡಕ್ಕೆ ನೀಡುತ್ತಾನೆ, ಆದರೆ ವಿಫಲತೆಯ ಹೊಣೆಗಾರಿಕೆಯನ್ನು ತಾನೇ ಹೊರುತ್ತಾನೆ. ಈ ರೀತಿಯ ನಾಯಕನ ನಡೆಗಳು ತಂಡಕ್ಕೆ ನಾಯಕನ ಮೇಲಿರುವ ವಿಶ್ವಾಸವನ್ನು ಹೆಚ್ಚಿಸುತ್ತದೆ.

ನೈಜ ಜೀವನದ ನಾಯಕತ್ವದ ಉದಾಹರಣೆಗಳು

ಮಹಾತ್ಮ ಗಾಂಧೀಜಿ: ಶಸ್ತ್ರಾಸ್ತ್ರವಿಲ್ಲದೆ ಅಹಿಂಸೆಯ ಮೂಲಕ ಸಾಮೂಹಿಕ ಹೋರಾಟವನ್ನು ನಡೆಸಿದ ಜಗತ್ತಿನ ವಿಶಿಷ್ಟ ನಾಯಕ. ಅವರ “ಸತ್ಯ ಮತ್ತು ಅಹಿಂಸೆ” ತತ್ತ್ವವೇ ತಂಡವನ್ನು ಒಗ್ಗೂಡಿಸಿದ ಪ್ರೇರಣೆಯಾಗಿತ್ತು.

ಡಾ. ಎ.ಪಿ.ಜೆ. ಅಬ್ದುಲ್ ಕಲಾಂ:ವಿಜ್ಞಾನದಲ್ಲಿ ದೊಡ್ಡ ಸಾಧನೆ ಮಾಡಿದರೂ, ತಮ್ಮ ಸಹೋದ್ಯೋಗಿಗಳಿಗೆ ಎಂದಿಗೂ ಶ್ರೇಯಸ್ಸು ನೀಡುತ್ತಿದ್ದರು. “ಯಶಸ್ಸು ತಂಡದದ್ದು, ವಿಫಲತೆ ನನ್ನದ್ದು” ಎಂಬ ಅವರ ಮಾತು ನಿಜವಾದ ನಾಯಕತ್ವದ ಮಾದರಿ.

ನಾರಾಯಣ ಮೂರ್ತಿ (Infosys): ತಾಂತ್ರಿಕ ಪರಿಣತಿ ಜೊತೆಗೆ ನೈತಿಕತೆ ಮತ್ತು ಪಾರದರ್ಶಕತೆಯನ್ನು ಒಟ್ಟುಗೂಡಿಸಿ ಕಂಪನಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಉದಾಹರಣೆ.

ಇವರೆಲ್ಲ ಸಮಾಜಕ್ಕೆ ಪ್ರೇರಣಾದಾಯಿ ವ್ಯಕ್ತಿಗಳು.

ಉತ್ತಮ ನಾಯಕನಾಗಲು ಮೈಗೂಡಿಸಿಕೊಳ್ಳಬೇಕಾದ ಅರ್ಹತೆಗಳು :

1 .ಆಲಿಸಿ (Listen): ತಂಡದ ಪ್ರತಿಯೊಬ್ಬರ ಮಾತನ್ನು ಗೌರವದಿಂದ ಕೇಳಿ.

2 .ಪ್ರೇರೇಪಿಸಿ (Motivate): ಸಣ್ಣ ಸಾಧನೆಗಳನ್ನೂ ಮೆಚ್ಚಿಸಿ, ದೊಡ್ಡ ಗುರಿಯತ್ತ ದಾರಿ ತೋರಿಸಿ.

3 .ವಿಶ್ವಾಸವಿಡಿ (Trust): ಕೆಲಸ ಹಂಚಿ, ಆದರೆ ವಿಶ್ವಾಸವನ್ನು ಕೊಡಿ.

4 .ಸ್ಪಷ್ಟವಾಗಿರಿ (Be Clear): ಗುರಿ, ವಿಧಾನ ಮತ್ತು ನಿರೀಕ್ಷೆಯನ್ನು ನೇರವಾಗಿ ಹೇಳಿ.

5 .ಜವಾಬ್ದಾರಿಯಾಗಿರಿ (Be Responsible): ವಿಫಲತೆಯ ಹೊಣೆಗಾರಿಕೆಯನ್ನು ತಾವೇ ಹೊತ್ತುಕೊಳ್ಳಿ.

ನಾಯಕತ್ವ ಎಂದರೆ ಕೇವಲ ಅಧಿಕಾರದ ಸ್ಥಾನವಲ್ಲ; ಅದು ಬದ್ಧತೆ, ಸೇವಾಭಾವ, ಮತ್ತು ಪ್ರೇರಣೆಯ ಮೂಲಕ ಇತರರನ್ನು ಬೆಳೆಸುವ ಕಲೆ. ಒಬ್ಬ ಉತ್ತಮ ನಾಯಕ ತನ್ನ ತಂಡವನ್ನು ಕೇವಲ ಗುರಿ ತಲುಪಿಸುವುದಲ್ಲ, ಅವರ ವ್ಯಕ್ತಿತ್ವವನ್ನು ಕೂಡಾ ಶ್ರೀಮಂತಗೊಳಿಸುತ್ತಾನೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಕುಮಾರಸುಬ್ರಹ್ಮಣ್ಯ ಮುಳಿಯಾಲ

ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರು, ಬೆಂಗಳೂರಿನ ಬಯೋ ಕ್ರಾಸ್ ಕೆಮ್, ಎಲ್ಎಲ್ ಪಿ  ಎಂಬ ಔಷಧಿ ಕಂಪೆನಿಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ. ದ.ಕ. ಜಿಲ್ಲೆಯ ಪುತ್ತೂರಿನ ಸಮೀಪ ಹಿಂದಾರು ಎಂಬಲ್ಲಿ ಅಡಿಕೆ , ತೆಂಗು, ಕರಿಮೆಣಸು ಕೃಷಿ ಭೂಮಿ ಹೊಂದಿದ್ದಾರೆ. ಮೂಲತಃ ಅಡ್ಯನಡ್ಕ ಸಮೀಪದ ಮುಳಿಯಾಲದವರಾಗಿದ್ದು ಕೃಷಿ ಭೂಮಿ ಹೊಂದಿದ್ದು, ಕೃಷಿ ಚಿಂತನೆಗಳನ್ನು ಹೊಂದಿದ್ದಾರೆ.

Published by
ಕುಮಾರಸುಬ್ರಹ್ಮಣ್ಯ ಮುಳಿಯಾಲ

Recent Posts

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ

ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲಾ ಮಕ್ಕಳಿಗೆ ಚೆಸ್ ಆಟವನ್ನು ಪರಿಚಯಿಸುವ “ಚೆಸ್…

6 hours ago

ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!

ಅಡಿಕೆ ಬೆಳೆಗಾರ ಇಂದು ಕೇವಲ ಬೆಳೆಗಾರನಲ್ಲ. ಅವನು ಹವಾಮಾನ ಬದಲಾವಣೆ, ರೋಗದ ಸಮಸ್ಯೆ,…

12 hours ago

ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ

ಕೇಂದ್ರ ಕೃಷಿ ಸಚಿವಾಲಯವು ಜನವರಿ 23, 2026ರವರೆಗಿನ ರಬಿ ಬೆಳೆ(ಚಳಿಗಾಲದ ಬಿತ್ತನೆ) ಬಿತ್ತನೆಯ…

13 hours ago

ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ

ದೇಶದಲ್ಲಿನ ಕೃಷಿ ಬೆಳೆಗಳಿಗೆ ಅಗತ್ಯವಾದ ಪೋಷಕಾಂಶ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರ ವಲಯವು ದೇಶೀಯ…

13 hours ago

ಶುದ್ಧ ಹಿಮಾಲಯವೂ ಸುರಕ್ಷಿತವಲ್ಲ..! ಮರುಭೂಮಿ ಧೂಳಿನೊಂದಿಗೆ ಹರಡುವ ರೋಗಕಾರಕಗಳು

ಹಿಮಾಲಯವನ್ನು ಶುದ್ಧ ಮತ್ತು ಸುರಕ್ಷಿತ ವಾತಾವರಣದ ಪ್ರತೀಕವೆಂದುಕೊಂಡಿದ್ದರೂ, ಜಾಗತಿಕ ಹವಾಮಾನ ಬದಲಾವಣೆ ಹಾಗೂ…

13 hours ago

ಕೃಷಿ ಆಧಾರಿತ ಕೈಗಾರಿಕೆ ಉತ್ತೇಜನದಿಂದ ರೈತರ ಭವಿಷ್ಯ ರೂಪಾಂತರ

ರಾಜಸ್ಥಾನದಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸುವ ಮೂಲಕ ರೈತರ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಬಹುದು…

13 hours ago