ಶಿಲೀಂದ್ರ ನಾಶಕವಾಗಿ ಎಲೆಯ ಔಷಧಿ | ಬೆಳಕಿಗೆ ಬಂದ ಥೈಲ್ಯಾಂಡ್‌ ವರದಿ | ಅಡಿಕೆ ಎಲೆಚುಕ್ಕಿ ರೋಗಕ್ಕೂ ಪರಿಹಾರ? |

November 2, 2022
9:40 AM

ವಿವಿಧ ಎಲೆಗಳು ಕೂಡಾ ಶಿಲೀಂದ್ರನಾಶಕವಾಗಿ ಕೆಲಸ ಮಾಡುತ್ತದೆ ಎನ್ನುವ ಅಧ್ಯಯನ ವರದಿಯೊಂದು ಈಗ ಮತ್ತೆ ಬೆಳಕಿಗೆ ಬಂದಿದೆ.  ಎಲೆಗಳ ರಸವನ್ನು ತೆಗೆದು ಸಂಸ್ಕರಣೆ ಮಾಡಿ ಬಳಕೆ ಮಾಡಿದರೆ ಶಿಲೀಂದ್ರನಾಶಕವಾಗಿ ಬಳಕೆ ಮಾಡಬಹುದು ಎಂದು ಥೈಲ್ಯಾಂಡ್‌ ವರದಿಯೊಂದು ಈಗ ಚರ್ಚೆಗೆ ಬಂದಿದೆ. ವಿವಿಧ ಕೃಷಿ ಸಮಸ್ಯೆಗಳಿಗೂ ರಾಸಾಯನಿಕದ ಬದಲು ಬಳಕೆ ಮಾಡಬಹುದು ಎನ್ನುವುದು ಚರ್ಚೆ. ಇದೇ ಮಾದರಿ ಎಲೆಚುಕ್ಕಿ ರೋಗಕ್ಕೂ ಪರಿಹಾರ ಕಾಣಬಹುದು ಎಂಬುದು ಚರ್ಚೆಯ ಭಾಗವಾಗಿದೆ.

ಥೈಲ್ಯಾಂಡ್‌ನ ಸಂಶೋಧನಾ ವಿಭಾಗವೊಂದು ಈ ಬಗ್ಗೆ ಸುಮಾರು 10 ವರ್ಷಗಳ ಹಿಂದೆ ಅಧ್ಯಯನ ಮಾಡಿತ್ತು. ಸುಮಾರು 1 ಬಗೆಯ ಎಲೆಗಳನ್ನು ಸಂಗ್ರಹಿಸಿ ಅವುಗಳ ಅಧ್ಯಯನ ನಡೆಸಲಾಗಿತ್ತು. ಅನೇಕ ಸಮಯಗಳವರೆಗೆ ವಿವಿಧ ರೀತಿಯಲ್ಲಿ ಪ್ರಯೋಗ ನಡೆಸಿದ ಬಳಿಕ ಕೆಲವು ಜಾತಿಯ ಮರ ಅಥವಾ ಗಿಡಗಳ ಎಲೆಗಳೂ ಶಿಲೀಂದ್ರನಾಶಕವಾಗಿ ಬಳಕೆ ಮಾಡಬಹುದು ಎನ್ನುವುದು  ಅಧ್ಯಯನ ವರದಿ ತಿಳಿಸಿತ್ತು. ಉಷ್ಣವಲಯದ ಹಣ್ಣಿನ ಸಸ್ಯಗಳಲ್ಲಿ ಕಂಡುಬರುವ ರೋಗಕ್ಕೆ ಕಾರಣವಾಗುವ ಶಿಲೀಂದ್ರಗಳ ನಿರ್ವಹಣೆ ಮೂಲಕ ಪ್ರಯತ್ನ ಮಾಡಲಾಗಿತ್ತು. ಈ ರೋಗದ ನಿರ್ವಹಣೆಗೆ ರಾಸಾಯನಿಕ ಶಿಲೀಂಧ್ರನಾಶಕಗಳ ಬಳಕೆ ಸಾಮಾನ್ಯವಾಗಿತ್ತು. ಆದರೆ ಈ ಶಿಲೀಂದ್ರವು ಕ್ರಮೇಣ ಪ್ರತಿರೋಧದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಈ ವರದಿ ಹೇಳಿತ್ತು. ಇದಕ್ಕಾಗಿ ಸಸ್ಯಜನ್ಯವಾದ ಶಿಲೀಂದ್ರನಾಶಕಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

ಸಾಮಾನ್ಯವಾಗಿ ಹಿಪ್ಪಲಿ, ಕಾಡುಹಿಪ್ಪಲಿ, ಮಾವು, ಪಪ್ಪಾಯಿ ಸೇರಿದಂತೆ ಹಲವು ಬಗೆಯ ಎಲೆಗಳು ಪರಿಣಾಮಕಾರಿಯಾಗಿ ಸಂಸ್ಕರಣೆ ಹಾಗೂ ಸೂಕ್ತ ಮಾದರಿಯ ವಿಧಾನಗಳ ಬಳಿಕ ಸಿಂಪಡಿಸಿದರೆ ಶಿಲೀಂದ್ರನಾಶಕವಾಗಿ ಬಳಕೆ ಮಾಡಲು ಸಾಧ್ಯವಾಗುತ್ತದೆ. ಈಗ ಅಡಿಕೆ ಎಲೆಚುಕ್ಕಿ ರೋಗದ ನಿರ್ವಹಣೆಗೂ ಕೂಡಾ ಹಿಪ್ಪಲಿ ಎಲೆಯ ಕಷಾಯದ ಮೂಲಕ ಸಿಂಪಡಣೆ ಮಾಡಿದರೆ ನಿಯಂತ್ರಣವಾಗುತ್ತದೆ ಎನ್ನುವುದಕ್ಕೆ ಥೈಲ್ಯಾಂಡ್‌ ಅಧ್ಯಯನ ವರದಿ ತಾಳೆಯಾಗುತ್ತಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

ಇದನ್ನೂ ಓದಿ

‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?
September 8, 2026
9:43 AM
by: ದ ರೂರಲ್ ಮಿರರ್.ಕಾಂ
ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!
September 7, 2026
9:38 PM
by: ದ ರೂರಲ್ ಮಿರರ್.ಕಾಂ
ಹಸು ಕರು ಹಾಕಿದ ಬಳಿಕದ “ಪ್ಲಾಸೆಂಟಾ” ದಿಂದ ತಯಾರಿಸಬಹುದೇ ನೈಸರ್ಗಿಕ ದ್ರಾವಣ?
September 7, 2026
8:58 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 07-09-2026 | ಕರ್ನಾಟಕದಲ್ಲಿ ಮುಂದಿನ ಮಳೆಯ ಚಿತ್ರಣ ಹೇಗಿದೆ..?
September 7, 2026
1:29 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror