ಇಂದು ಅಂತಾರಾಷ್ಟ್ರೀಯ ಕುಟುಂಬ ದಿನ : ಅಂದಿನ ಕೂಡು ಕುಟುಂಬ ಇಂದಿನ ವಿಭಕ್ತ ಕುಟುಂಬ

May 15, 2024
10:50 PM

ನಮ್ಮ ದೇಶದಲ್ಲಿ ವಸುದೈವ ಕುಟುಂಬಕಂ ಎಂಬ ನುಡಿಯಿದೆ. ಇದರ ಅರ್ಥ ಇಡೀ ವಿಶ್ವವೇ(World) ನಮ್ಮ ಕುಟುಂಬ(Family) ಎಂದು. ಇದು ಕುಟುಂಬವೊಂದರ ಮಹತ್ವವನ್ನು ಸಾರುತ್ತದೆ. ಹೀಗೆ ಕುಟುಂಬಗಳನ್ನು ಗೌರವಿಸುವ ಮತ್ತು ಸಮಾಜಕ್ಕೆ(Social) ಅವುಗಳ ಮಹತ್ವವನ್ನು ತಿಳಿಸುವುದಕ್ಕೆ ಪ್ರತಿ ವರ್ಷ ಮೇ.15 ರಂದು ಅಂತಾರಾಷ್ಟ್ರೀಯ ಕುಟುಂಬ ದಿನವನ್ನಾಗಿ(International Family day) ಆಚರಿಸಲಾಗುತ್ತದೆ.​ ‘ಕುಟುಂಬಗಳು ಮತ್ತು ಹವಾಮಾನ ಬದಲಾವಣೆ'(Family and climate change) ಎಂಬುದು ಈ ವರ್ಷದ ಘೋಷವಾಕ್ಯ(Theme) ಆಗಿದೆ.

‘ಕುಟುಂಬ’ ಪ್ರತಿಯೊಬ್ಬ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿದೆ, ಅದು ಮಗುವಾಗಿರಲಿ ಅಥವಾ ವಯಸ್ಕರಾಗಿರಲಿ. ಕುಟುಂಬವು ನಮ್ಮ ಇಡೀ ಜೀವನವನ್ನು ನಿರ್ಮಿಸುವ ಅಡಿಪಾಯವಾಗಿದೆ. ನಮ್ಮನ್ನು ಪೋಷಿಸುವ ಮತ್ತು ಉನ್ನತೀಕರಿಸುವ ಹಾಗೂ ನಮ್ಮನ್ನು ಅತ್ಯುತ್ತಮ ವ್ಯಕ್ತಿಯನ್ನಾಗಿ ಪರಿವರ್ತಿಸುವ ಬೆಂಬಲಿಸುವ ಭಾವನಾತ್ಮಕವಾಗಿ ಆರೋಗ್ಯಕರ ಕುಟುಂಬ ಸದಸ್ಯರನ್ನು ಹೊಂದಿದ್ದರೆ ಅಂಥವರು ಅದೃಷ್ಟವಂತರು.

ಅಂತಾರಾಷ್ಟ್ರೀಯ ಕುಟುಂಬ ದಿನದ ಇತಿಹಾಸ: 1983 ರಲ್ಲಿ, ಯುರೋಪಿಯನ್ ಎಕನಾಮಿಕ್ ಅಂಡ್ ಸೋಷಿಯಲ್ ಕೌನ್ಸಿಲ್ ಮತ್ತು ಕಮಿಷನ್ ಫಾರ್ ಸೋಷಿಯಲ್ ಡೆವಲಪ್‌ಮೆಂಟ್ ವಿಶ್ವಸಂಸ್ಥೆಗೆ (ಯುಎನ್) ಕುಟುಂಬ ವಿಷಯಗಳ ಮೇಲೆ ಗಮನ ಹರಿಸುವಂತೆ ಒತ್ತಾಯಿಸಿತು. ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ಪ್ರಪಂಚದಾದ್ಯಂತದ ಕುಟುಂಬಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಯುಎನ್ ಒಪ್ಪಿಕೊಂಡಿತ್ತು. ನಂತರ 1993ರಲ್ಲಿ ಮೇ.15 ಅನ್ನು ಅಂತಾರಾಷ್ಟ್ರೀಯ ಕುಟುಂಬ ದಿನವನ್ನಾಗಿ ಘೋಷಿಸಿತು.

ಹವಾಮಾನ ಬದಲಾವಣೆಯಿಂದ ಉಂಟಾದ ಮಾಲಿನ್ಯವು ಕುಟುಂಬಗಳ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ. ಹವಾಮಾನ ಬದಲಾವಣೆಯಿಂದ ಸೃಷ್ಟಿಯಾಗುವ ಚಂಡಮಾರುತಗಳು, ಬರಗಾಲಗಳು ಮತ್ತು ಪ್ರವಾಹಗಳಂತಹವುಗಳು ಆಗಾಗ ಜನರನ್ನು ಸ್ಥಳಾಂತರಿಸಲು ಮತ್ತು ತಮ್ಮ ಜೀವನ ವಿಧಾನಗಳನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಇಂತಹ ಘಟನೆಗಳು ಕೃಷಿ ಉತ್ಪಾದಕತೆ ಮತ್ತು ನೀರಿನ ಲಭ್ಯತೆಯ ಮೇಲೆ ಪರಿಣಾಮ ಬೀರುವ ಮೂಲಕ ಹಸಿವು ಮತ್ತು ಅಸ್ಥಿರತೆಯನ್ನು ಹೆಚ್ಚಿಸುತ್ತವೆ.

ಹವಾಮಾನ ಬದಲಾವಣೆಯ ಪರಿಣಾಮಗಳಿಂದ ಕೃಷಿ ಮತ್ತು ಮೀನುಗಾರಿಕೆಯಂತಹ ಕ್ಷೇತ್ರಗಳ ಆರ್ಥಿಕತೆಯ ಮೇಲೆ ಹೊಡೆತ ಬೀಳುತ್ತದೆ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಕಡಿಮೆ ಮಾಡುವುದು ಮತ್ತು ಅವುಗಳಿಗೆ ಹೊಂದಿಕೊಳ್ಳುವುದು ಸದ್ಯದ ಪರಿಸ್ಥಿಯಲ್ಲಿ ಕಷ್ಟವಾಗಿದೆ. ಶಿಕ್ಷಣ, ಬಳಕೆಯ ಮಾದರಿಗಳ ಬದಲಾವಣೆ ಮತ್ತು ಬದ್ಧತೆ ಮೂಲಕ ಕುಟುಂಬಗಳು ಸಬಲೀಕರಣಗೊಳ್ಳುವುದು ಅರ್ಥಪೂರ್ಣ ಮತ್ತು ಯಶಸ್ವಿ ಹವಾಮಾನ ಕ್ರಿಯೆಗೆ ಅತ್ಯಗತ್ಯ.

ಕುಟುಂಬಗಳು ತಲೆಮಾರುಗಳ ಮೂಲಕ ಮೌಲ್ಯಗಳನ್ನು ರವಾನಿಸುತ್ತವೆ, ಆದ್ದರಿಂದ ಚಿಕ್ಕ ವಯಸ್ಸಿನಿಂದಲೇ ಸುಸ್ಥಿರ ಅಭ್ಯಾಸಗಳು ಮತ್ತು ಹವಾಮಾನ ಜಾಗೃತಿಯನ್ನು ಮೂಡಿಸುವುದು ಮುಖ್ಯ. ಬಾಲ್ಯದ ಶಿಕ್ಷಣದಲ್ಲಿ ಆರ್ಥಿಕ ತತ್ವಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ, ತ್ಯಾಜ್ಯವನ್ನು ಕಡಿಮೆ ಮಾಡುವ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಮರುಬಳಕೆ ಮಾಡುವುದರೊಂದಿಗೆ ನಾವು ಸುಸ್ಥಿರ ಆರ್ಥಿಕತೆಯನ್ನು ನಿರ್ಮಿಸಬಹುದು.

ಕುಟುಂಬ ಸದಸ್ಯರೊಂದಿಗೆ ನೆನಪುಗಳನ್ನು ಮತ್ತು ಬಂಧವನ್ನು ಬಲಪಡಿಸುವ ಮಾರ್ಗಗಳು:

ನಿಮ್ಮ ಕುಟುಂಬದೊಂದಿಗೆ ಸಮಯ ಕಳೆಯಿರಿ: ಜೀವನದ ಜಂಜಾಟದಲ್ಲಿ ನಮ್ಮ ಕುಟುಂಬಸ್ಥರನ್ನು ನಾವು ಕಡೆಗಣಿಸುತ್ತಿರುತ್ತೇವೆ. ಆದರೆ ಸಮಯ ಹೊಂದಿಸಿಕೊಳ್ಳುವುದು ಸ್ವಲ್ಪ ಕಷ್ಟವಾದರೂ ನಿಮ್ಮ ಕುಟುಂಬಕ್ಕೆ ಮೊದಲ ಆದ್ಯತೆ ನೀಡುವುದು ಮುಖ್ಯ.

ಸಂವಹನವನ್ನು ಮುಂದುವರಿಸಿ: ಇದು ಒತ್ತಡದ ಉಂಟು ಮಾಡುವ ವಿಷಯಗಳ ಬಗ್ಗೆ ಅಥವಾ ಕೇವಲ ದೈನಂದಿನ ವಿಷಯಗಳ ಬಗ್ಗೆ ಆತ್ಮೀಯರೊಂದಿಗೆ ಆಲೋಚನೆಗಳು, ಭಾವನೆಗಳು ಮತ್ತು ತೊಂದರೆಗಳನ್ನು ಪರಸ್ಪರ ಹಂಚಿಕೊಳ್ಳುವುದರಿಂದ ನಿಮಗೆ ಬೆಂಬಲ ತೊರೆಯುತ್ತದೆ ಮತ್ತು ಆರೋಗ್ಯಕರ ಸಂಪರ್ಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಕುಟುಂಬದೊಂದಿಗೆ ಹೊಸ ಚಟುವಟಿಕೆಗಳನ್ನು ಮಾಡುವುದು: ನಿಮ್ಮ ಕುಟುಂಬದೊಂದಿಗೆ ಹೊಸ ಚಟುವಟಿಕೆಗಳನ್ನು ಪ್ರಯತ್ನಿಸುವುದು. ಉದಾಹರಣೆಗೆ ಹೊಸ ಪಾಕವಿಧಾನವನ್ನು ಪ್ರಯತ್ನಿಸುವುದು ಅಥವಾ ಚಾರಣಕ್ಕೆ ಹೋಗುವುದು. – ಅಂತರ್ಜಾಲ ಮಾಹಿತಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ವಳಲಂಬೆಯಲ್ಲಿ ಎ.19 ರಂದು ‘ಸಂಗೀತ ಸಂಭ್ರಮ’
April 15, 2026
10:40 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 15-04-2026 | ಕರ್ನಾಟಕದಲ್ಲಿ ಬಿಸಿಗಾಳಿಯ ನಡುವೆ ಮಳೆಯ ಸುಳಿವು – ಏಪ್ರಿಲ್ 18 ರಿಂದ ಮಳೆ…!
April 15, 2026
2:01 PM
by: ಸಾಯಿಶೇಖರ್ ಕರಿಕಳ
ವಿಷು ಹಬ್ಬದ ಅರ್ಥವೇನು ಗೊತ್ತಾ..? ಸೂರ್ಯ ಸಂಕ್ರಮಣದ ಈ ರಹಸ್ಯ ನಿಮ್ಮ ಜೀವನವೇ ಬದಲಾಯಿಸಬಹುದು..!
April 15, 2026
8:02 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಬೇಸಿಗೆ ಬಿತ್ತನೆ ಭರ್ಜರಿ ಏರಿಕೆ..! 64 ಲಕ್ಷ ಹೆಕ್ಟೇರ್ ದಾಟಿದ ಕೃಷಿ ವ್ಯಾಪ್ತಿ, 0.77 ಲಕ್ಷ ಹೆಕ್ಟೇರ್ ಹೆಚ್ಚಳ
April 15, 2026
7:47 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror