MIRROR FOCUS

ಶಿಲೀಂದ್ರ ನಾಶಕವಾಗಿ ಎಲೆಯ ಔಷಧಿ | ಬೆಳಕಿಗೆ ಬಂದ ಥೈಲ್ಯಾಂಡ್‌ ವರದಿ | ಅಡಿಕೆ ಎಲೆಚುಕ್ಕಿ ರೋಗಕ್ಕೂ ಪರಿಹಾರ? |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ವಿವಿಧ ಎಲೆಗಳು ಕೂಡಾ ಶಿಲೀಂದ್ರನಾಶಕವಾಗಿ ಕೆಲಸ ಮಾಡುತ್ತದೆ ಎನ್ನುವ ಅಧ್ಯಯನ ವರದಿಯೊಂದು ಈಗ ಮತ್ತೆ ಬೆಳಕಿಗೆ ಬಂದಿದೆ.  ಎಲೆಗಳ ರಸವನ್ನು ತೆಗೆದು ಸಂಸ್ಕರಣೆ ಮಾಡಿ ಬಳಕೆ ಮಾಡಿದರೆ ಶಿಲೀಂದ್ರನಾಶಕವಾಗಿ ಬಳಕೆ ಮಾಡಬಹುದು ಎಂದು ಥೈಲ್ಯಾಂಡ್‌ ವರದಿಯೊಂದು ಈಗ ಚರ್ಚೆಗೆ ಬಂದಿದೆ. ವಿವಿಧ ಕೃಷಿ ಸಮಸ್ಯೆಗಳಿಗೂ ರಾಸಾಯನಿಕದ ಬದಲು ಬಳಕೆ ಮಾಡಬಹುದು ಎನ್ನುವುದು ಚರ್ಚೆ. ಇದೇ ಮಾದರಿ ಎಲೆಚುಕ್ಕಿ ರೋಗಕ್ಕೂ ಪರಿಹಾರ ಕಾಣಬಹುದು ಎಂಬುದು ಚರ್ಚೆಯ ಭಾಗವಾಗಿದೆ.

Advertisement

ಥೈಲ್ಯಾಂಡ್‌ನ ಸಂಶೋಧನಾ ವಿಭಾಗವೊಂದು ಈ ಬಗ್ಗೆ ಸುಮಾರು 10 ವರ್ಷಗಳ ಹಿಂದೆ ಅಧ್ಯಯನ ಮಾಡಿತ್ತು. ಸುಮಾರು 1 ಬಗೆಯ ಎಲೆಗಳನ್ನು ಸಂಗ್ರಹಿಸಿ ಅವುಗಳ ಅಧ್ಯಯನ ನಡೆಸಲಾಗಿತ್ತು. ಅನೇಕ ಸಮಯಗಳವರೆಗೆ ವಿವಿಧ ರೀತಿಯಲ್ಲಿ ಪ್ರಯೋಗ ನಡೆಸಿದ ಬಳಿಕ ಕೆಲವು ಜಾತಿಯ ಮರ ಅಥವಾ ಗಿಡಗಳ ಎಲೆಗಳೂ ಶಿಲೀಂದ್ರನಾಶಕವಾಗಿ ಬಳಕೆ ಮಾಡಬಹುದು ಎನ್ನುವುದು  ಅಧ್ಯಯನ ವರದಿ ತಿಳಿಸಿತ್ತು. ಉಷ್ಣವಲಯದ ಹಣ್ಣಿನ ಸಸ್ಯಗಳಲ್ಲಿ ಕಂಡುಬರುವ ರೋಗಕ್ಕೆ ಕಾರಣವಾಗುವ ಶಿಲೀಂದ್ರಗಳ ನಿರ್ವಹಣೆ ಮೂಲಕ ಪ್ರಯತ್ನ ಮಾಡಲಾಗಿತ್ತು. ಈ ರೋಗದ ನಿರ್ವಹಣೆಗೆ ರಾಸಾಯನಿಕ ಶಿಲೀಂಧ್ರನಾಶಕಗಳ ಬಳಕೆ ಸಾಮಾನ್ಯವಾಗಿತ್ತು. ಆದರೆ ಈ ಶಿಲೀಂದ್ರವು ಕ್ರಮೇಣ ಪ್ರತಿರೋಧದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಈ ವರದಿ ಹೇಳಿತ್ತು. ಇದಕ್ಕಾಗಿ ಸಸ್ಯಜನ್ಯವಾದ ಶಿಲೀಂದ್ರನಾಶಕಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

ಸಾಮಾನ್ಯವಾಗಿ ಹಿಪ್ಪಲಿ, ಕಾಡುಹಿಪ್ಪಲಿ, ಮಾವು, ಪಪ್ಪಾಯಿ ಸೇರಿದಂತೆ ಹಲವು ಬಗೆಯ ಎಲೆಗಳು ಪರಿಣಾಮಕಾರಿಯಾಗಿ ಸಂಸ್ಕರಣೆ ಹಾಗೂ ಸೂಕ್ತ ಮಾದರಿಯ ವಿಧಾನಗಳ ಬಳಿಕ ಸಿಂಪಡಿಸಿದರೆ ಶಿಲೀಂದ್ರನಾಶಕವಾಗಿ ಬಳಕೆ ಮಾಡಲು ಸಾಧ್ಯವಾಗುತ್ತದೆ. ಈಗ ಅಡಿಕೆ ಎಲೆಚುಕ್ಕಿ ರೋಗದ ನಿರ್ವಹಣೆಗೂ ಕೂಡಾ ಹಿಪ್ಪಲಿ ಎಲೆಯ ಕಷಾಯದ ಮೂಲಕ ಸಿಂಪಡಣೆ ಮಾಡಿದರೆ ನಿಯಂತ್ರಣವಾಗುತ್ತದೆ ಎನ್ನುವುದಕ್ಕೆ ಥೈಲ್ಯಾಂಡ್‌ ಅಧ್ಯಯನ ವರದಿ ತಾಳೆಯಾಗುತ್ತಿದೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ವ್ಯಾಪಾರದಲ್ಲಿ ಈ ರಾಶಿಯವರಿಗೆ ಗಳಿಕೆಯ ಬದಲು ಖರ್ಚು ಹೆಚ್ಚಾಗುವ ಸೂಚನೆ

ವ್ಯಾಪಾರದ ಯಶಸ್ಸು ಒಂದು ಕಾಲದಿಂದ ಇನ್ನೊಂದು ಕಾಲಕ್ಕೆ ಬದಲಾಗುತ್ತದೆ, ಮತ್ತು ಜ್ಯೋತಿಷ್ಯ ಶಾಸ್ತ್ರದ…

9 hours ago

ಭೂಮಿಗೆ ಗಗನಯಾತ್ರಿ ಶುಭಾಂಶು ಶುಕ್ಲಾ ಮರುಯಾನ | ಕ್ಯಾಲಿಫೋರ್ನಿಯಾದ ಕಡಲತೀರದಲ್ಲಿ ಇಳಿಯಲಿರುವ ನೌಕೆ

ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಇತರ ಮೂವರು ಸಿಬ್ಬಂದಿಯನ್ನು…

17 hours ago

ಬದುಕು ಪುರಾಣ | ಮನವನ್ನು ಚುಚ್ಚುವ ಅಳಿಲು

ಸಾಮಾಜಿಕ ವ್ಯವಸ್ಥೆಯಲ್ಲಿ ‘ಸೇವೆ’ಗೆ ಮೌಲ್ಯ ನಿರ್ಧರಿಸಲು ಕಷ್ಟಸಾಧ್ಯ. ಆತ್ಮಾರ್ಥ ಸೇವೆಗಳು ಸದ್ದಾಗುವುದಿಲ್ಲ. ಫಕ್ಕನೆ…

18 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಧಾತ್ರಿ ಕೆ ರಾವ್

ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…

1 day ago