Advertisement
MIRROR FOCUS

ಶಿಲೀಂದ್ರ ನಾಶಕವಾಗಿ ಎಲೆಯ ಔಷಧಿ | ಬೆಳಕಿಗೆ ಬಂದ ಥೈಲ್ಯಾಂಡ್‌ ವರದಿ | ಅಡಿಕೆ ಎಲೆಚುಕ್ಕಿ ರೋಗಕ್ಕೂ ಪರಿಹಾರ? |

Share

ವಿವಿಧ ಎಲೆಗಳು ಕೂಡಾ ಶಿಲೀಂದ್ರನಾಶಕವಾಗಿ ಕೆಲಸ ಮಾಡುತ್ತದೆ ಎನ್ನುವ ಅಧ್ಯಯನ ವರದಿಯೊಂದು ಈಗ ಮತ್ತೆ ಬೆಳಕಿಗೆ ಬಂದಿದೆ.  ಎಲೆಗಳ ರಸವನ್ನು ತೆಗೆದು ಸಂಸ್ಕರಣೆ ಮಾಡಿ ಬಳಕೆ ಮಾಡಿದರೆ ಶಿಲೀಂದ್ರನಾಶಕವಾಗಿ ಬಳಕೆ ಮಾಡಬಹುದು ಎಂದು ಥೈಲ್ಯಾಂಡ್‌ ವರದಿಯೊಂದು ಈಗ ಚರ್ಚೆಗೆ ಬಂದಿದೆ. ವಿವಿಧ ಕೃಷಿ ಸಮಸ್ಯೆಗಳಿಗೂ ರಾಸಾಯನಿಕದ ಬದಲು ಬಳಕೆ ಮಾಡಬಹುದು ಎನ್ನುವುದು ಚರ್ಚೆ. ಇದೇ ಮಾದರಿ ಎಲೆಚುಕ್ಕಿ ರೋಗಕ್ಕೂ ಪರಿಹಾರ ಕಾಣಬಹುದು ಎಂಬುದು ಚರ್ಚೆಯ ಭಾಗವಾಗಿದೆ.

ಥೈಲ್ಯಾಂಡ್‌ನ ಸಂಶೋಧನಾ ವಿಭಾಗವೊಂದು ಈ ಬಗ್ಗೆ ಸುಮಾರು 10 ವರ್ಷಗಳ ಹಿಂದೆ ಅಧ್ಯಯನ ಮಾಡಿತ್ತು. ಸುಮಾರು 1 ಬಗೆಯ ಎಲೆಗಳನ್ನು ಸಂಗ್ರಹಿಸಿ ಅವುಗಳ ಅಧ್ಯಯನ ನಡೆಸಲಾಗಿತ್ತು. ಅನೇಕ ಸಮಯಗಳವರೆಗೆ ವಿವಿಧ ರೀತಿಯಲ್ಲಿ ಪ್ರಯೋಗ ನಡೆಸಿದ ಬಳಿಕ ಕೆಲವು ಜಾತಿಯ ಮರ ಅಥವಾ ಗಿಡಗಳ ಎಲೆಗಳೂ ಶಿಲೀಂದ್ರನಾಶಕವಾಗಿ ಬಳಕೆ ಮಾಡಬಹುದು ಎನ್ನುವುದು  ಅಧ್ಯಯನ ವರದಿ ತಿಳಿಸಿತ್ತು. ಉಷ್ಣವಲಯದ ಹಣ್ಣಿನ ಸಸ್ಯಗಳಲ್ಲಿ ಕಂಡುಬರುವ ರೋಗಕ್ಕೆ ಕಾರಣವಾಗುವ ಶಿಲೀಂದ್ರಗಳ ನಿರ್ವಹಣೆ ಮೂಲಕ ಪ್ರಯತ್ನ ಮಾಡಲಾಗಿತ್ತು. ಈ ರೋಗದ ನಿರ್ವಹಣೆಗೆ ರಾಸಾಯನಿಕ ಶಿಲೀಂಧ್ರನಾಶಕಗಳ ಬಳಕೆ ಸಾಮಾನ್ಯವಾಗಿತ್ತು. ಆದರೆ ಈ ಶಿಲೀಂದ್ರವು ಕ್ರಮೇಣ ಪ್ರತಿರೋಧದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಈ ವರದಿ ಹೇಳಿತ್ತು. ಇದಕ್ಕಾಗಿ ಸಸ್ಯಜನ್ಯವಾದ ಶಿಲೀಂದ್ರನಾಶಕಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ.

ಸಾಮಾನ್ಯವಾಗಿ ಹಿಪ್ಪಲಿ, ಕಾಡುಹಿಪ್ಪಲಿ, ಮಾವು, ಪಪ್ಪಾಯಿ ಸೇರಿದಂತೆ ಹಲವು ಬಗೆಯ ಎಲೆಗಳು ಪರಿಣಾಮಕಾರಿಯಾಗಿ ಸಂಸ್ಕರಣೆ ಹಾಗೂ ಸೂಕ್ತ ಮಾದರಿಯ ವಿಧಾನಗಳ ಬಳಿಕ ಸಿಂಪಡಿಸಿದರೆ ಶಿಲೀಂದ್ರನಾಶಕವಾಗಿ ಬಳಕೆ ಮಾಡಲು ಸಾಧ್ಯವಾಗುತ್ತದೆ. ಈಗ ಅಡಿಕೆ ಎಲೆಚುಕ್ಕಿ ರೋಗದ ನಿರ್ವಹಣೆಗೂ ಕೂಡಾ ಹಿಪ್ಪಲಿ ಎಲೆಯ ಕಷಾಯದ ಮೂಲಕ ಸಿಂಪಡಣೆ ಮಾಡಿದರೆ ನಿಯಂತ್ರಣವಾಗುತ್ತದೆ ಎನ್ನುವುದಕ್ಕೆ ಥೈಲ್ಯಾಂಡ್‌ ಅಧ್ಯಯನ ವರದಿ ತಾಳೆಯಾಗುತ್ತಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…

2 hours ago

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

1 day ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

1 day ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಲೋಕದಲ್ಲಿ ಪುಟ್ಟ ಮನಸ್ಸಿನ ಖುಷಿ

ನನ್ನ ಚಿತ್ರ – ನನ್ನ ಖುಷಿ | ಗಣೇಶನನ್ನು ಬಣ್ಣಗಳಲ್ಲಿ ಅರಳಿಸಿದ ಪುಟಾಣಿ…

1 day ago

ವಿಘ್ನಗಳ ಆಚೆ ಕಾಣುವ ಗಣೇಶತತ್ತ್ವ

ಗಣೇಶ ಚತುರ್ಥಿಯನ್ನು ಕೇವಲ ಧಾರ್ಮಿಕ ಆಚರಣೆಯಾಗಿ ನೋಡುವುದಕ್ಕಿಂತ, ಗಣೇಶನ ರೂಪಲಕ್ಷಣಗಳಲ್ಲಿರುವ ಜೀವನದ ಸಂದೇಶಗಳನ್ನು…

1 day ago