MIRROR FOCUS

ಮಳೆ ನೀರನ್ನು ಹಿಡಿದಿಡುವ ಕಾರ್ಯ ಆಗಲಿ | ಬರಗಾಲ ಬಂದರು ನೀರಿನ ಬವಣೆ ತಪ್ಪಿಸಬಹುದು |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಈ ಬಾರಿಯ ಬೇಸಗೆ ಹಾಗೂ ಬರಗಾಲ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಬೇಕು. ಉತ್ತಮ ಮಳೆಯ ನಿರೀಕ್ಷೆ ಇದೆ ಈ ಬಾರಿ. ಅದಕ್ಕಾಗಿ ನೀರು ಸಂರಕ್ಷಣೆ ಮಾಡೋಣ, ನೀರು ಇಂಗಿಸುವ ಕಡೆಗೂ ಆದ್ಯತೆ ನೀಡಬೇಕು. ಇದಕ್ಕಾಗಿ ರೈತರು ಏನು ಮಾಡಬಹುದು..?

Advertisement

ರೈತರು ತಮ್ಮ ಜಮೀನುಗಳಲ್ಲಿ ಎಕರೆಗೆ ಈ ರೀತಿ 20 ಕಂದಕ ತೆಗೆದು(5ಮೀ ಉದ್ದ, 1 ಮೀ ಆಗಲ, 2 ಅಡಿ ಆಳ) ಬಂದ ಮಣ್ಣಿನಿಂದ ಬದು ಹಾಕಿಕೊಂಡರೆ ಮಣ್ಣು ಸವಕಳಿ ತಡೆಯುವುದರ ಜೊತೆಗೆ 20 ಕಂದಕಗಳಲ್ಲಿ ಒಂದು ಮಳೆಗೆ 60,000 ಲೀ ನೀರು ನಿಲ್ಲಿಸಿ ಹಿಂಗಿಸಬಹುದು. ವರ್ಷದಲ್ಲಿ 8-10 ಮಳೆಯಾದರೆ 5ಲಕ್ಷ ಲೀ ಮಳೆನೀರನ್ನು ಭೂಮಿಗೆ ಹಿಂಗಿಸಬಹುದು. ಜೆಸಿಬಿ ಕರೆದರೆ 5-6ಗಂಟೆ ಕೆಲಸ, 6-7 ಸಾವಿರ ಖರ್ಚಾಗಬಹುದು.

ಯಾವುದೇ ಕಾರಣಕ್ಕೂ ಕಂದಕಗಳನ್ನು ಮುಚ್ಚಬಾರದು, ಉಳುಮೆ ಮಾಡುವಾಗ ಮುಚ್ಚದಂತೆ ಟ್ರಾಕ್ಟರ್ ಚಾಲಕನಿಗೆ ತಿಳಿಸಬೇಕು, ಪ್ರತಿ ವರ್ಷ ಮಳೆಗಾಲಕ್ಕೂ ಮುನ್ನ 2-3 ಜನ ಆಳು ಬಿಟ್ಟು ಕಂದಕಲ್ಲಿ ಬಿದ್ದಿರುವ ಮಣ್ಣನ್ನು ಎತ್ತಿಕೊಂಡು ಜಮೀನಿನಲ್ಲಿ ಹರಡಿಕೊಳ್ಳಬೇಕು. ಹೆಚ್ಚಾದ ನೀರು ಸುರಕ್ಷತವಾಗಿ ಹೊರಹೋಗಲು ಕಲ್ಲುಗಳಿಂದ / ಪೈಪ್ ಹಾಕಿ ದಾರಿ (ಕೋಡಿ) ಮಾಡಿಕೊಡಬೇಕು. ಈ ರೀತಿ ಎಲ್ಲರೂ ಮಾಡಿದರೆ, ಊರಿನಲ್ಲಿರುವ ಎಲ್ಲಾ ಬೋರುಗಳು ಮುಂದಿನ ವರ್ಷ ಚೆನ್ನಾಗಿ ನಡೆಯುತ್ತವೆ, ಇಲ್ಲದಿದ್ದರೆ ಮಳೆಗಾಲ ಮುಗಿದ 3-4 ತಿಂಗಳಿಗೆ ಟ್ಯಾಂಕರ್ ಅವಲಂಬನೆ ತಪ್ಪಿದ್ದಲ್ಲ, ಹಲವು ತೋಟಗಳು ಕಾಣೆಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕೃಷಿಕರ ಪರವಾದ ಬರಹಗಾರರ ಮುಂದಿರುವ ಸವಾಲುಗಳು

ಕೃಷಿಯಲ್ಲಿ ಯಾವುದೇ ಬಲವಾದ ಸಂಘಟನೆ ಇಲ್ಲ. ನಮ್ಮ ಧ್ವನಿ ಎತ್ತಲು ಯಾರೂ ಇಲ್ಲ.ಇಂತಹ…

12 hours ago

ಮೇ 13 ರಿಂದ 25 ರವರೆಗೆ ಈ ರಾಶಿಗಳಿಗೆ ಅದೃಷ್ಟ!, ಕೆಲವು ರಾಶಿಗಳಿಗೆ ಕಠಿಣ ಕಾಲ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದು ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

13 hours ago

ಅಪರೇಷನ್ ಸಿಂಧೂರ | ಭಾರತೀಯ ಸೇನೆಯ ಕಾರ್ಯಾಚರಣೆಗೆ ರಾಜ್ಯದೆಲ್ಲೆಡೆ ಸಂಭ್ರಮಾಚರಣೆ

ಭಾರತೀಯ ಸೇನಾಪಡೆಯು, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ…

22 hours ago

ಹವಾಮಾನ ವರದಿ | 07-05-2025 | ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆ | ಮೇ 11 ರಿಂದ ಮಳೆ ಪುನರಾರಂಭಗೊಳ್ಳುವ ಲಕ್ಷಣ

ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಕರಾವಳಿಯಲ್ಲಿ…

1 day ago

ಹೊಸರುಚಿ | ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ

ಉಪ್ಪಿನಲ್ಲಿ ಹಾಕಿದ ಹಲಸಿನ ಕಾಯಿ ಚಟ್ಟಂಬಡೆ..

2 days ago