ಕೇರಳದಲ್ಲಾಗಲೀ(Kerala) ಕರಾವಳಿ(Coastal), ಮಲೆನಾಡಿನಲ್ಲಾಗಲೀ(Malenadu) ಹೂಕೋಸು(Cauliflower), ಎಲೆಕೋಸು(Cabbage) ಕೃಷಿ(cultivation) ಸಾಧ್ಯವಾಗುವುದಿಲ್ಲ. ಆದರೆ ಕೇರಳ ಕೃಷಿ ವಿಶ್ವವಿದ್ಯಾಲಯದ ಡಾ. ನಾರಾಯಣನ್ ಕುಟ್ಟಿ ( ಈಗ ವಿಶ್ರಾಂತ) ಅವರ ಸತತ ಪ್ರಯತ್ನದಿಂದ ಈಗ ಚಳಿಗಾಲದಲ್ಲಿ ರಾಸಾಯನಿಕ ಬಳಸದೆ ಕ್ಯಾಬೇಜ್, ಕಾಲಿಫ್ಲವರ್, ಬ್ರೊಕೊಲಿಗಳನ್ನು(Broccoli) ಕೇರಳದಾದ್ಯಂತ ಬೆಳೆಸಲು ಸಾಧ್ಯವಾಗುತ್ತಿದೆ. ಕೋಸುಗಳನ್ನು ವಾಣಿಜ್ಯ(Commercial crop) ಮಟ್ಟದಲ್ಲೂ ಬೆಳೆಯುವವರಿದ್ದಾರೆ. ಕೆಲವರು ಕಾಸರಗೋಡು(Kasargodu) ಜಿಲ್ಲೆಯಲ್ಲೂ ಬೆಳೆದು ಮಾರುತ್ತಾರೆ. ಹಾಗಾಗಿ ಉಕ, ಸಾಗರ, ಸಕ್ಲೇಶಪುರದಲ್ಲೂ ಸಾಧ್ಯ ಅನಿಸುತ್ತಿದೆ.
ಕೆಲವೊಂದು ನಿರ್ದಿಷ್ಟ ತಳಿಗಳು ಮಾತ್ರ ಈ ಪ್ರದೇಶದಲ್ಲಿ ಬೆಳೆ ಕೊಡುತ್ತದೆ. ಈ ತಳಿಗಳಲ್ಲಿ ಹಲವನ್ನು ಕೇಕೃವಿಯವರು ಗುರುತಿಸಿ ಪ್ರಕಟಿಸಿದ್ದಾರೆ. ಆಯ್ಕೆ ಮಾಡುವ ತಳಿ ಬಹಳ ಮುಖ್ಯ. ನಮ್ಮಲ್ಲಿಗೆ ಹೊಂದದ ತಳಿಯಾದರೆ, ಅದು ಎಲೆ ಬೆಳೆಸೀತು ಆದರೆ ಹೂಕೋಸು, ಎಲೆಕೋಸುಗಳ ಖಾದ್ಯ ಭಾಗ ಬೆಳೆಯದು! ನೆಂಟರು – ಸ್ನೇಹಿತರ ಬಳಿ ಹೇಳಿ ಯಾವುದೋ ತಳಿಯ ಬೀಜ ಬಿತ್ತಿ ಬೆಳೆದು ಸೋತವರಿದ್ದಾರೆ.
“ ಈ ಬೆಳೆಗಳಿಗೆ ರಾತ್ರಿ ಸೂಕ್ತ ಉಷ್ಣತೆ ಇರಬೇಕು. ಹಗಲಿನದು ಲೆಕ್ಕವಿಲ್ಲ. 15ರಿಂದ 20 ಡಿಗ್ರಿ ಸೆಲ್ಶಿಯಸ್ ಅತ್ಯುತ್ತಮ. 18ರಿಂದ 22ರ ವರೆಗೂ ನಡೆಯುತ್ತದೆ. ಈ ಉಷ್ಣತೆಯ ಶ್ರೇಣಿ ಇರುವಲ್ಲಿ ಬೆಳೆಸಬಹುದು” ಎನ್ನುತ್ತಾರೆ ನಾರಾಯಣನ್ ಕುಟ್ಟಿ. ಕೋಸಿನದು ಎರಡೂವರೆ ತಿಂಗಳ ಬೆಳೆ. ನವೆಂಬರ್ ಮೊದಲ ವಾರದಲ್ಲಿ ನೆಡಬೇಕು. ದಶಂಬರ ಮೊದಲ ವಾರಕ್ಕಿಂತ ತಡ ಆಗಬಾರದು. ಕಾಸರಗೋಡು, ದಕ, ಉಡುಪಿ ಜಿಲ್ಲೆಗಳಲ್ಲಿ ಮನೆ ಮಟ್ಟಿಗೆ ಕೋಸು ಬೆಳೆದು ಗೆದ್ದವರಿದ್ದಾರೆ. ಉಕ, ಸಾಗರ, ಚಿಕ್ಕಮಗಳೂರು ಊರುಗಳಲ್ಲಿ ಸಾಧ್ಯವೇ? ಹವಾಮಾನದ ಅಂಕಿ-ಅಂಶ ಗಮನಿಸಿದರೆ ಸಾಧ್ಯ. ಕೃಷಿಯ ಪ್ರಯೋಗ ಮಾಡಬೇಕಾದರೆ ಸೂಕ್ತ ತಳಿಯ ಬೀಜ ಬೇಕು. ಅದನ್ನು ಪ್ರೋ ಟ್ರೇಯಲ್ಲಿ ಗಿಡ ಮಾಡಲು ಕಲಿಯಬೇಕು. “ಫೆಬ್ರವರಿ 15ರೊಳಗೆ ಕೊಯ್ಲು ಮುಗಿಯಬೇಕು. ಅನಂತರ ರಾತ್ರಿಯ ಉಷ್ಣತೆ ಏರುತ್ತದೆ” ಎನ್ನುತ್ತಾರೆ ಡಾ. ನಾರಾಯಣನ್ ಕುಟ್ಟಿ. ಪ್ರಯೋಗಕ್ಕೆ ಮುಂದಾಗುವ ಆಸಕ್ತರಿದ್ದಾರೆಯೇ?
ಗೋಕರ್ಣದಲ್ಲಿ ನಡೆದ ಅನ್ನಬ್ರಹ್ಮ ಚಾತುರ್ಮಾಸ್ಯ ಧರ್ಮಸಭೆಯಲ್ಲಿ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು…
ಮಧ್ಯಪ್ರದೇಶದಲ್ಲಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಹಲವು…
ಗೋಕರ್ಣದ ಅಶೋಕೆಯ ಮೂಲಮಠದಲ್ಲಿ 'ಅನ್ನಬ್ರಹ್ಮ ಚಾತುರ್ಮಾಸ್ಯ' ಆರಂಭಗೊಂಡಿದ್ದು, ಸಮಾಜಕ್ಕೆ ಸರಿಯಾದ ದಾರಿ ತೋರಿಸುವುದು…
ಅಪೊಲೊ ಫಾರ್ಮಸಿ ವತಿಯಿಂದ ವಿವಿಧ ಹುದ್ದೆಗಳ ಭರ್ತಿಗಾಗಿ ಆಗಸ್ಟ್ 1ರಂದು ಪುತ್ತೂರಿನಲ್ಲಿ ನೇರ…
ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಇನ್ನೂ ಬಿಟ್ಟುಬಿಟ್ಟು ಮಳೆ ಮುಂದುವರಿಯಲಿದೆ. ಆದರೆ…
ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…