Advertisement
MIRROR FOCUS

ಮಳೆ ನೀರನ್ನು ಹಿಡಿದಿಡುವ ಕಾರ್ಯ ಆಗಲಿ | ಬರಗಾಲ ಬಂದರು ನೀರಿನ ಬವಣೆ ತಪ್ಪಿಸಬಹುದು |

Share

ಈ ಬಾರಿಯ ಬೇಸಗೆ ಹಾಗೂ ಬರಗಾಲ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಬೇಕು. ಉತ್ತಮ ಮಳೆಯ ನಿರೀಕ್ಷೆ ಇದೆ ಈ ಬಾರಿ. ಅದಕ್ಕಾಗಿ ನೀರು ಸಂರಕ್ಷಣೆ ಮಾಡೋಣ, ನೀರು ಇಂಗಿಸುವ ಕಡೆಗೂ ಆದ್ಯತೆ ನೀಡಬೇಕು. ಇದಕ್ಕಾಗಿ ರೈತರು ಏನು ಮಾಡಬಹುದು..?

ರೈತರು ತಮ್ಮ ಜಮೀನುಗಳಲ್ಲಿ ಎಕರೆಗೆ ಈ ರೀತಿ 20 ಕಂದಕ ತೆಗೆದು(5ಮೀ ಉದ್ದ, 1 ಮೀ ಆಗಲ, 2 ಅಡಿ ಆಳ) ಬಂದ ಮಣ್ಣಿನಿಂದ ಬದು ಹಾಕಿಕೊಂಡರೆ ಮಣ್ಣು ಸವಕಳಿ ತಡೆಯುವುದರ ಜೊತೆಗೆ 20 ಕಂದಕಗಳಲ್ಲಿ ಒಂದು ಮಳೆಗೆ 60,000 ಲೀ ನೀರು ನಿಲ್ಲಿಸಿ ಹಿಂಗಿಸಬಹುದು. ವರ್ಷದಲ್ಲಿ 8-10 ಮಳೆಯಾದರೆ 5ಲಕ್ಷ ಲೀ ಮಳೆನೀರನ್ನು ಭೂಮಿಗೆ ಹಿಂಗಿಸಬಹುದು. ಜೆಸಿಬಿ ಕರೆದರೆ 5-6ಗಂಟೆ ಕೆಲಸ, 6-7 ಸಾವಿರ ಖರ್ಚಾಗಬಹುದು.

ಯಾವುದೇ ಕಾರಣಕ್ಕೂ ಕಂದಕಗಳನ್ನು ಮುಚ್ಚಬಾರದು, ಉಳುಮೆ ಮಾಡುವಾಗ ಮುಚ್ಚದಂತೆ ಟ್ರಾಕ್ಟರ್ ಚಾಲಕನಿಗೆ ತಿಳಿಸಬೇಕು, ಪ್ರತಿ ವರ್ಷ ಮಳೆಗಾಲಕ್ಕೂ ಮುನ್ನ 2-3 ಜನ ಆಳು ಬಿಟ್ಟು ಕಂದಕಲ್ಲಿ ಬಿದ್ದಿರುವ ಮಣ್ಣನ್ನು ಎತ್ತಿಕೊಂಡು ಜಮೀನಿನಲ್ಲಿ ಹರಡಿಕೊಳ್ಳಬೇಕು. ಹೆಚ್ಚಾದ ನೀರು ಸುರಕ್ಷತವಾಗಿ ಹೊರಹೋಗಲು ಕಲ್ಲುಗಳಿಂದ / ಪೈಪ್ ಹಾಕಿ ದಾರಿ (ಕೋಡಿ) ಮಾಡಿಕೊಡಬೇಕು. ಈ ರೀತಿ ಎಲ್ಲರೂ ಮಾಡಿದರೆ, ಊರಿನಲ್ಲಿರುವ ಎಲ್ಲಾ ಬೋರುಗಳು ಮುಂದಿನ ವರ್ಷ ಚೆನ್ನಾಗಿ ನಡೆಯುತ್ತವೆ, ಇಲ್ಲದಿದ್ದರೆ ಮಳೆಗಾಲ ಮುಗಿದ 3-4 ತಿಂಗಳಿಗೆ ಟ್ಯಾಂಕರ್ ಅವಲಂಬನೆ ತಪ್ಪಿದ್ದಲ್ಲ, ಹಲವು ತೋಟಗಳು ಕಾಣೆಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 03-09-2026 | ಕರಾವಳಿ–ಮಲೆನಾಡಿನಲ್ಲಿ ಮತ್ತೆ ಮಳೆಯ ಸಾಧ್ಯತೆ…?

ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…

3 hours ago

ಹಿಮಾಲಯದಲ್ಲಿ ಹಿಮ ಕರಗಿದರೆ ಅದರ ಪರಿಣಾಮ ಎಲ್ಲಿಗೆ ತಲುಪುತ್ತದೆ? – ಹಿಮಾಲಯದ ದುರಂತದ ಬಳಿಕ ನೇಪಾಳದ ಪ್ರಧಾನಿ ಎಚ್ಚರಿಕೆ

ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…

9 hours ago

ನಾವು ತಿನ್ನುವ ಆಹಾರದಲ್ಲಿ ಕೀಟನಾಶಕ – ಕರ್ನಾಟಕದಲ್ಲಿ 9,176 ಮಾದರಿಗಳಲ್ಲಿ 334 ಮಿತಿ ಮೀರಿವೆ – ದೇಶದ ಅಂಕಿ ಏನು ಹೇಳುತ್ತದೆ?

2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…

17 hours ago

ಒಂದೇ ತೆಂಗಿನ ಮರದಿಂದ ₹10,000 ಆದಾಯ? ಮೌಲ್ಯವರ್ಧನೆಗೆ ಹೊಸ ದಾರಿ ತೋರಿದ ವಿಶ್ವ ತೆಂಗು ದಿನ

ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…

21 hours ago

ಹವಾಮಾನ ವರದಿ | 02-09-2026 | ಉತ್ತರ ಭಾರತದ ವಾಯುಭಾರ ಕುಸಿತ ದುರ್ಬಲವಾಗುವ ಸಾಧ್ಯತೆ

ಕರಾವಳಿಯಲ್ಲಿ ಮುಂದಿನ ಎರಡು ದಿನ ಅಲ್ಲಲ್ಲಿ ಸಾಮಾನ್ಯ ಮಳೆಯಾದರೂ ಜೋರು ಮಳೆಯ ಸಾಧ್ಯತೆ…

1 day ago

ಕೃಷಿಗೆ ಸಾಲ ಹೆಚ್ಚಿಸಿ – ಅಲ್ಪಾವಧಿ ಮಾತ್ರವಲ್ಲ, ದೀರ್ಘಾವಧಿ ಸಾಲವೂ ಬೇಕು – ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಸೂಚನೆ

ಕೃಷಿ ಉತ್ಪಾದನೆ ಹೆಚ್ಚಿಸಲು ಬ್ಯಾಂಕ್‌ಗಳು ರೈತರಿಗೆ ಹೆಚ್ಚಿನ ಸಾಂಸ್ಥಿಕ ಸಾಲ ನೀಡಬೇಕು ಎಂದು…

1 day ago