Advertisement
MIRROR FOCUS

ಮಳೆ ನೀರನ್ನು ಹಿಡಿದಿಡುವ ಕಾರ್ಯ ಆಗಲಿ | ಬರಗಾಲ ಬಂದರು ನೀರಿನ ಬವಣೆ ತಪ್ಪಿಸಬಹುದು |

Share

ಈ ಬಾರಿಯ ಬೇಸಗೆ ಹಾಗೂ ಬರಗಾಲ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಬೇಕು. ಉತ್ತಮ ಮಳೆಯ ನಿರೀಕ್ಷೆ ಇದೆ ಈ ಬಾರಿ. ಅದಕ್ಕಾಗಿ ನೀರು ಸಂರಕ್ಷಣೆ ಮಾಡೋಣ, ನೀರು ಇಂಗಿಸುವ ಕಡೆಗೂ ಆದ್ಯತೆ ನೀಡಬೇಕು. ಇದಕ್ಕಾಗಿ ರೈತರು ಏನು ಮಾಡಬಹುದು..?

ರೈತರು ತಮ್ಮ ಜಮೀನುಗಳಲ್ಲಿ ಎಕರೆಗೆ ಈ ರೀತಿ 20 ಕಂದಕ ತೆಗೆದು(5ಮೀ ಉದ್ದ, 1 ಮೀ ಆಗಲ, 2 ಅಡಿ ಆಳ) ಬಂದ ಮಣ್ಣಿನಿಂದ ಬದು ಹಾಕಿಕೊಂಡರೆ ಮಣ್ಣು ಸವಕಳಿ ತಡೆಯುವುದರ ಜೊತೆಗೆ 20 ಕಂದಕಗಳಲ್ಲಿ ಒಂದು ಮಳೆಗೆ 60,000 ಲೀ ನೀರು ನಿಲ್ಲಿಸಿ ಹಿಂಗಿಸಬಹುದು. ವರ್ಷದಲ್ಲಿ 8-10 ಮಳೆಯಾದರೆ 5ಲಕ್ಷ ಲೀ ಮಳೆನೀರನ್ನು ಭೂಮಿಗೆ ಹಿಂಗಿಸಬಹುದು. ಜೆಸಿಬಿ ಕರೆದರೆ 5-6ಗಂಟೆ ಕೆಲಸ, 6-7 ಸಾವಿರ ಖರ್ಚಾಗಬಹುದು.

ಯಾವುದೇ ಕಾರಣಕ್ಕೂ ಕಂದಕಗಳನ್ನು ಮುಚ್ಚಬಾರದು, ಉಳುಮೆ ಮಾಡುವಾಗ ಮುಚ್ಚದಂತೆ ಟ್ರಾಕ್ಟರ್ ಚಾಲಕನಿಗೆ ತಿಳಿಸಬೇಕು, ಪ್ರತಿ ವರ್ಷ ಮಳೆಗಾಲಕ್ಕೂ ಮುನ್ನ 2-3 ಜನ ಆಳು ಬಿಟ್ಟು ಕಂದಕಲ್ಲಿ ಬಿದ್ದಿರುವ ಮಣ್ಣನ್ನು ಎತ್ತಿಕೊಂಡು ಜಮೀನಿನಲ್ಲಿ ಹರಡಿಕೊಳ್ಳಬೇಕು. ಹೆಚ್ಚಾದ ನೀರು ಸುರಕ್ಷತವಾಗಿ ಹೊರಹೋಗಲು ಕಲ್ಲುಗಳಿಂದ / ಪೈಪ್ ಹಾಕಿ ದಾರಿ (ಕೋಡಿ) ಮಾಡಿಕೊಡಬೇಕು. ಈ ರೀತಿ ಎಲ್ಲರೂ ಮಾಡಿದರೆ, ಊರಿನಲ್ಲಿರುವ ಎಲ್ಲಾ ಬೋರುಗಳು ಮುಂದಿನ ವರ್ಷ ಚೆನ್ನಾಗಿ ನಡೆಯುತ್ತವೆ, ಇಲ್ಲದಿದ್ದರೆ ಮಳೆಗಾಲ ಮುಗಿದ 3-4 ತಿಂಗಳಿಗೆ ಟ್ಯಾಂಕರ್ ಅವಲಂಬನೆ ತಪ್ಪಿದ್ದಲ್ಲ, ಹಲವು ತೋಟಗಳು ಕಾಣೆಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ದಾಖಲೆ: ಕಲಬುರಗಿ ಯುವ ರೈತನಿಗೆ ರಾಜ್ಯದ ಮೆಚ್ಚುಗೆ!

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…

15 hours ago

2026 ಮುಂಗಾರು ಮುನ್ಸೂಚನೆ – ಕೇರಳಕ್ಕೆ ನಿರೀಕ್ಷೆಗಿಂತ ಮುನ್ನವೇ ಆಗಮನ? – ಮಳೆ ಕಡಿಮೆಯಾಗುವ ಸಾಧ್ಯತೆ- ಕೃಷಿಗೆ ದೊಡ್ಡ ಸವಾಲು

2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…

18 hours ago

ಈರುಳ್ಳಿಯಲ್ಲಿ ಇಳುವರಿ ಹೆಚ್ಚಿಸುವ ರಹಸ್ಯ..! ಜೇನುನೊಣಗಳ ಪರಾಗಸ್ಪರ್ಶದಿಂದ ಡಬಲ್ ಲಾಭ

ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…

19 hours ago

ಗ್ರಾಮೀಣ ಜಾಲಕ್ಕೆ ನೆಟ್ವರ್ಕ್ ಬೂಸ್ಟ್‌ – ಬಿಎಸ್ಎನ್ಎಲ್ ಸುಧಾರಣೆಗೆ ಕೇಂದ್ರದ ಆದ್ಯತೆ

ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಸಂಪರ್ಕ ಒದಗಿಸಲು ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ.

19 hours ago

ಜಾಗತಿಕ ತಾಪಮಾನಕ್ಕೆ ಪರಿಹಾರ : ವೃಕ್ಷ ಸಂವರ್ಧನೆಗೆ ಒತ್ತು

ಜಾಗತಿಕ ತಾಪಮಾನ ನಿಯಂತ್ರಣಕ್ಕೆ ವೃಕ್ಷ ಸಂವರ್ಧನೆ ಮುಖ್ಯ ಎಂದು ಸಚಿವ ಈಶ್ವರ ಖಂಡ್ರೆ…

19 hours ago

ಕೃಷಿಗೆ ಹೊಸ ದಿಕ್ಕು – ICAR ಟಾಸ್ಕ್ ಫೋರ್ಸ್ ಘೋಷಣೆ – ರೈತರ ಆದಾಯ ಹೆಚ್ಚಳಕ್ಕೆ ಪ್ಲಾನ್

ICAR ಕೃಷಿ ಕ್ಷೇತ್ರವನ್ನು ಬಲಪಡಿಸಲು ಸ್ಪೆಷಲ್ ಟಾಸ್ಕ್ ಫೋರ್ಸ್ ರಚಿಸಿದೆ. ಹವಾಮಾನ ಸವಾಲುಗಳಿಗೆ…

1 day ago