ಈ ಬಾರಿಯ ಬೇಸಗೆ ಹಾಗೂ ಬರಗಾಲ ಎಲ್ಲರಿಗೂ ಎಚ್ಚರಿಕೆಯ ಗಂಟೆಯಾಗಬೇಕು. ಉತ್ತಮ ಮಳೆಯ ನಿರೀಕ್ಷೆ ಇದೆ ಈ ಬಾರಿ. ಅದಕ್ಕಾಗಿ ನೀರು ಸಂರಕ್ಷಣೆ ಮಾಡೋಣ, ನೀರು ಇಂಗಿಸುವ ಕಡೆಗೂ ಆದ್ಯತೆ ನೀಡಬೇಕು. ಇದಕ್ಕಾಗಿ ರೈತರು ಏನು ಮಾಡಬಹುದು..?
ರೈತರು ತಮ್ಮ ಜಮೀನುಗಳಲ್ಲಿ ಎಕರೆಗೆ ಈ ರೀತಿ 20 ಕಂದಕ ತೆಗೆದು(5ಮೀ ಉದ್ದ, 1 ಮೀ ಆಗಲ, 2 ಅಡಿ ಆಳ) ಬಂದ ಮಣ್ಣಿನಿಂದ ಬದು ಹಾಕಿಕೊಂಡರೆ ಮಣ್ಣು ಸವಕಳಿ ತಡೆಯುವುದರ ಜೊತೆಗೆ 20 ಕಂದಕಗಳಲ್ಲಿ ಒಂದು ಮಳೆಗೆ 60,000 ಲೀ ನೀರು ನಿಲ್ಲಿಸಿ ಹಿಂಗಿಸಬಹುದು. ವರ್ಷದಲ್ಲಿ 8-10 ಮಳೆಯಾದರೆ 5ಲಕ್ಷ ಲೀ ಮಳೆನೀರನ್ನು ಭೂಮಿಗೆ ಹಿಂಗಿಸಬಹುದು. ಜೆಸಿಬಿ ಕರೆದರೆ 5-6ಗಂಟೆ ಕೆಲಸ, 6-7 ಸಾವಿರ ಖರ್ಚಾಗಬಹುದು.
ಯಾವುದೇ ಕಾರಣಕ್ಕೂ ಕಂದಕಗಳನ್ನು ಮುಚ್ಚಬಾರದು, ಉಳುಮೆ ಮಾಡುವಾಗ ಮುಚ್ಚದಂತೆ ಟ್ರಾಕ್ಟರ್ ಚಾಲಕನಿಗೆ ತಿಳಿಸಬೇಕು, ಪ್ರತಿ ವರ್ಷ ಮಳೆಗಾಲಕ್ಕೂ ಮುನ್ನ 2-3 ಜನ ಆಳು ಬಿಟ್ಟು ಕಂದಕಲ್ಲಿ ಬಿದ್ದಿರುವ ಮಣ್ಣನ್ನು ಎತ್ತಿಕೊಂಡು ಜಮೀನಿನಲ್ಲಿ ಹರಡಿಕೊಳ್ಳಬೇಕು. ಹೆಚ್ಚಾದ ನೀರು ಸುರಕ್ಷತವಾಗಿ ಹೊರಹೋಗಲು ಕಲ್ಲುಗಳಿಂದ / ಪೈಪ್ ಹಾಕಿ ದಾರಿ (ಕೋಡಿ) ಮಾಡಿಕೊಡಬೇಕು. ಈ ರೀತಿ ಎಲ್ಲರೂ ಮಾಡಿದರೆ, ಊರಿನಲ್ಲಿರುವ ಎಲ್ಲಾ ಬೋರುಗಳು ಮುಂದಿನ ವರ್ಷ ಚೆನ್ನಾಗಿ ನಡೆಯುತ್ತವೆ, ಇಲ್ಲದಿದ್ದರೆ ಮಳೆಗಾಲ ಮುಗಿದ 3-4 ತಿಂಗಳಿಗೆ ಟ್ಯಾಂಕರ್ ಅವಲಂಬನೆ ತಪ್ಪಿದ್ದಲ್ಲ, ಹಲವು ತೋಟಗಳು ಕಾಣೆಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
ಅಡಿಕೆ ತೋಟಗಳಲ್ಲಿ ಹೆಚ್ಚುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಮತ್ತು ಕೊಳೆ ರೋಗಗಳಿಗೆ…
ದೇಶಾದ್ಯಂತ ಮುಂಗಾರು ಮತ್ತಷ್ಟು ತೀವ್ರಗೊಂಡಿದ್ದು, ಉತ್ತರ ಭಾರತದ ಹಲವು ಭಾಗಗಳಿಗೆ ರೆಡ್ ಅಲರ್ಟ್…
ರಾಜ್ಯದಲ್ಲಿ ಮುಂಗಾರು ಮಳೆ 39% ಕೊರತೆಯಾಗಿದ್ದು, 26 ಜಿಲ್ಲೆಗಳ 178 ತಾಲ್ಲೂಕುಗಳಲ್ಲಿ ಬರದ…
ಪುತ್ತೂರಿನ ರಾಜಕೀಯದಲ್ಲಿ ವ್ಯಕ್ತಿತ್ವದ ಪ್ರಭಾವ ಹೆಚ್ಚುತ್ತಿರುವ ಕುರಿತು ಈ ವಿಶ್ಲೇಷಣೆ ಬೆಳಕು ಚೆಲ್ಲುತ್ತದೆ.…
ಕೊಪ್ಪರ ಬೆಲೆಯ ಏರಿಳಿತದಿಂದ ತುಮಕೂರಿನಲ್ಲಿ ರೈತರು ಅಡಿಕೆ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ಇದರ…
ಜುಲೈ 20ರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಇಳಿಮುಖವಾಗುವ ಲಕ್ಷಣಗಳಿವೆ. ಉತ್ತರ…