Advertisement
ಸುದ್ದಿಗಳು

ಅಡಿಕೆ ಎಲೆಚುಕ್ಕಿ ರೋಗದ ದುಷ್ಪರಿಣಾಮ | ಅಡಿಕೆ ಹಾಳೆ ತಟ್ಟೆ ಉದ್ಯಮದ ಮೇಲೆ ಬೀರದಿರಲಿ ನಕಾರಾತ್ಮಕ ಪರಿಣಾಮ |

Share

ನಿಜ…, ಅಡಿಕೆ ಹಾಳೆ ತಟ್ಟೆಗೂ ಈ ಎಲೆಚುಕ್ಕಿಶಿಲೀಂದ್ರಕ್ಕೆ ಸಿಂಪಡಣೆ ಮಾಡುವ ಔಷಧಕ್ಕೂ ಯಾವುದೇ ಸಂಬಂಧವಿಲ್ಲ.
ಏಕೆಂದರೆ ಅಡಿಕೆ ಹಾಳೆ ತಟ್ಟೆ ತಯಾರಕರು ಅಡಿಕೆ ಹಾಳೆಯನ್ನು ಬಯಲು ಸೀಮೆಯ ಅಡಿಕೆ ತೋಟದಿಂದ ಆಮದು ಮಾಡಿ ಕೊಳ್ಳುತ್ತಾರೆ. ಅಲ್ಲಿನ ಹಾಳೆ ಸ್ವಚ್ಛ, ಶುಭ್ರ, ಫಂಗಸ್ ರಹಿತ (ಮಳೆ ಕಡಿಮೆ ಕಾರಣಕ್ಕೆ ಅಲ್ಲಿನ ಹಾಳೆಯಲ್ಲಿ ಫಂಗಸ್ ಇರೋಲ್ಲ) , ತೆಳು ಗಾತ್ರ ಮತ್ತು ಬಯಲು ಸೀಮೆಯ ಅಡಿಕೆ ಬೆಳೆ ಪ್ರದೇಶದಲ್ಲಿ ಅಡಿಕೆ ಹಾಳೆ ಯನ್ನು ಸಂಗ್ರಹಿಸಿ ಕ್ಯಾಂಟರ್ ನಲ್ಲಿ ತುಂಬಿ ಹಾಳೆ ತಟ್ಟೆ ತಯಾರಿಕಾ ಸಂಸ್ಥೆಗಳಿಗೆ ಒದಗಿಸುವ ವ್ಯವಸ್ಥೆ ಇದೆ.

ಇದೆಲ್ಲಾ ಕಾರಣಕ್ಕೆ ಮಲೆನಾಡು ಕರಾವಳಿಯ ಅಡಿಕೆ ಹಾಳೆ ತಟ್ಟೆ ಅಡಿಕೆ ಹಾಳೆ ಕಚ್ಚಾ ವಸ್ತುಗಳಿಗಾಗಿ ತಯಾರಕರು ಸ್ಥಳೀಯ ಅಡಿಕೆ ತೋಟಕ್ಕೆ ನೆಚ್ಚಿಕೊಂಡಿಲ್ಲ. ಅಡಿಕೆ ಹಾಳೆ ತಟ್ಟೆ ತಯಾರಿಸುವಾಗ ಅಡಿಕೆ ಹಾಳೆಯನ್ನು ಹೈ ಕಂಪ್ರೆಷರ್ ವಾಟರ್ ವಾಷ್ ಯಂತ್ರ ದಲ್ಲಿ ಚೆನ್ನಾಗಿ ತೊಳೆಯುತ್ತಾರೆ‌.

Advertisement

ಈ ಹಾಳೆ ತಟ್ಟೆ ತಯಾರಾಗಲು ಅತ್ಯಂತ ಹೆಚ್ಚಿನ ಉಷ್ಣತೆ ಯ ಡೈ ನಲ್ಲಿ ಕಾದು ಹಾಳೆ ತಟ್ಟೆ ಆಕಾರಕ್ಕೆ  ಆಗುತ್ತದೆ.
ಒಂದು ವೇಳೆ ಈ ಹಾಳೆಯಲ್ಲಿ ಈ ಯಾವುದೇ ಶಿಲೀಂದ್ರ ವೂ ಅದಕ್ಕೆ ಔಷಧ ಸಿಂಪಡಣೆ ಮಾಡಿದ್ದರೂ ಸುಟ್ಟು ಹೋಗಿರುತ್ತದೆ…ಈ ಬಗ್ಗೆ ಗ್ರಾಹಕರು ಭಯ ಪಡುವುದು ಬೇಡ ಮತ್ತು ಅಡಿಕೆ ತೋಟಕ್ಕೆ ಎಲೆಚುಕ್ಕಿ ಬಾಧಿತವಾಗಿದ್ದರೆ ಅಂತಹ ತೋಟದಲ್ಲಿ ಉತ್ತಮ ಹಾಳೆಯೂ ದೊರೆಯದು.

ಅಡಿಕೆ ಹಾಳೆತಟ್ಟೆ ತಯಾರಿಸುವಾಗ ಉಳಿದ ಅಡಿಕೆ ಹಾಳೆ ಚೂರನ್ನು ಪುಡಿ ಮಾಡಿ ಜಾನುವಾರುಗಳಿಗೆ ಮೇವಾಗಿಯೂ ಬಳಸಲಡ್ಡಿಯಿಲ್ಲ ಮತ್ತು ಅಡಿಕೆ ಹಾಳೆ ತಟ್ಟೆ ಉದ್ಯಮದ ಮಾಲಿಕರು ಕಡ್ಡಾಯವಾಗಿ ತಮ್ಮ ಉದ್ಯಮಕ್ಕೆ ಬರುವ ಕಚ್ಚಾ ವಸ್ತುಗಳ ಗುಣಮಟ್ಟದ ಬಗ್ಗೆ ಗಮನಹರಿಸಬೇಕಿದೆ.

Advertisement

ಅಡಿಕೆ ಹಾಳೆ ತಟ್ಟೆ ಉದ್ಯಮ ಕ್ಕೆ ಈಗಿರುವ ಮತ್ತು ಭವಿಷ್ಯದ ಮಾರುಕಟ್ಟೆ ಮತ್ತಷ್ಟು ಉಜ್ವಲವಾಗಲಿ. ಪರಿಸರಕ್ಕೆ ಈ ಹಾಳೆ ತಟ್ಟೆ ಯಿಂದ ಬಹಳ ದೊಡ್ಡ ಕೊಡುಗೆ ಇದೆ. ಈ ಉದ್ಯಮ ಚೆನ್ನಾಗಿ ಮುಂದುವರೆಯಲಿ…

ವಿದೇಶಕ್ಕೆ ರಫ್ತು ಮಾಡುವ ಹಾಳೆ ಉತ್ಪನ್ನ ಗಳ ತಯಾರಕರೂ ಈ ಗುಣಮಟ್ಟದ ಬಗ್ಗೆ ಗಮನ ಹರಿಸುವುದು ಭವಿಷ್ಯದ ದೃಷ್ಟಿಯಿಂದ ಆರೋಗ್ಯಕರ. ಯಾವುದೇ ಕಾರಣಕ್ಕೂ ಅಡಿಕೆ ಎಲೆಚುಕ್ಕಿ ರೋಗದ ಕರಿನೆರಳು ಅಡಿಕೆ ಹಾಳೆ ತಟ್ಟೆ ಉದ್ಯಮದ ಮೇಲೆ ಬೀಳದಿರಲಿ.

Advertisement

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಹಲಸಿನ ಹಾಲಿನಿಂದ ವಸಡು ರೋಗಕ್ಕೆ ಚಿಕಿತ್ಸೆ…? ಬ್ರೆಜಿಲ್‌ ವಿಜ್ಞಾನಿಗಳ ಹೊಸ ಸಂಶೋಧನೆ ಆಶಾಭರವಸೆ ಮೂಡಿಸಿದೆ

ಹಲಸಿನ ಹಾಲು, ದಾಳಿಂಬೆ ಸಿಪ್ಪೆಯ ಸಾರ ಮತ್ತು ಸಿಮ್ವಾಸ್ಟಾಟಿನ್‌ ಬಳಸಿ ವಿಜ್ಞಾನಿಗಳು ವಸಡು…

2 hours ago

ಅಡಿಕೆಗೆ ಬ್ಯಾನ್ ಅಲ್ಲ… ಕಲಬೆರಕೆ ಅಡಿಕೆಗೆ ಬ್ಯಾನ್ ಆಗಬೇಕು..! – ಮಲೆನಾಡಿನ ಅಡಿಕೆಗೆ ಪ್ರತ್ಯೇಕ ಮಾರುಕಟ್ಟೆ ಅಗತ್ಯ

ಅಡಿಕೆ ನಿಷೇಧಿಸುವ ಬದಲು ಕಲಬೆರಕೆ ಅಡಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ…

5 hours ago

ಬೆಲೆ ಕುಸಿದಾಗ ನಷ್ಟ ಬೇಡ – ರಂಬುಟಾನ್‌ ಫ್ರೀಜ್‌ ಮಾಡಿ, ನಂತರ ಮಾರಾಟ ಮಾಡಿ..! ಕೃಷಿಕನ ಹೊಸ ಪ್ರಯೋಗ

ರಂಬುಟಾನ್‌ ಬೆಲೆ ಕುಸಿದಾಗ ಹಣ್ಣನ್ನು ಫ್ರೀಜ್‌ ಮಾಡಿ ನಂತರ ಮಾರಾಟ ಮಾಡಿದರೆ ಉತ್ತಮ…

5 hours ago

ಚೆಸ್‌ ಬೋರ್ಡ್‌ನ ಆಚೆಗೂ ಗೆಲುವು – ಕಾಪುವಿನಲ್ಲಿ ಚೆಸ್ ಹಬ್ಬ, ವಿದ್ಯಾರ್ಥಿಗಳ ಕನಸುಗಳಿಗೆ ವೇದಿಕೆ | ಗ್ರಾಮೀಣ ಕರ್ನಾಟಕದಲ್ಲಿಯೂ ಬೆಳೆಯುತ್ತಿರುವ ಹೊಸ ಕ್ರೀಡಾ ಸಂಸ್ಕೃತಿ

ಕಾಪುವಿನಲ್ಲಿ ನಡೆಯುತ್ತಿರುವ ಕರ್ನಾಟಕ ಸ್ಟೇಟ್ ಸ್ಕೂಲ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು…

13 hours ago

ಕಾಪುವಿನಲ್ಲಿ ರಾಜ್ಯಮಟ್ಟದ ಶಾಲಾ ಚೆಸ್ ಚಾಂಪಿಯನ್‌ಶಿಪ್‌ಗೆ ಚಾಲನೆ – 400ಕ್ಕೂ ಅಧಿಕ ಪ್ರತಿಭೆಗಳು ಭಾಗಿ, 24 ಮಂದಿಗೆ ರಾಷ್ಟ್ರಮಟ್ಟದ ಅವಕಾಶ

ಕಾಪುವಿನಲ್ಲಿ ಆರಂಭವಾದ ಕರ್ನಾಟಕ ರಾಜ್ಯಮಟ್ಟದ ಶಾಲಾ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು…

15 hours ago

34 ಟನ್ ಅಡಿಕೆ ವಂಚನೆ – ಅಸ್ಸಾಂ ವ್ಯಾಪಾರಿಗಳಿಗೆ ಹರಿಯಾಣದಲ್ಲಿ ವಂಚನೆ..!

ಅಸ್ಸಾಂನ ಇಬ್ಬರು ಅಡಿಕೆ ವ್ಯಾಪಾರಿಗಳಿಗೆ ಸೇರಿದ ₹1.12 ಕೋಟಿ ಮೌಲ್ಯದ 34 ಟನ್…

15 hours ago