Opinion

ನಭೋಮಂಡಲಕ್ಕೆ ಇಣುಕುನೋಟ | ಗಗನಯಾತ್ರಿಗಳನ್ನು ಸ್ವಾಗತಿಸೋಣ…|

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಬಾಹ್ಯಾಕಾಶವನ್ನು ರಾತ್ರಿ ಹಾಗೆಯೇ ಒಂದೊಮ್ಮೆ ಕಣ್ಣು ತಲುಪುವ ವರೆಗೂ ವೀಕ್ಷಿಸುತ್ತಾ ಕುಳಿತಾಗ ಎಷ್ಟೊಂದು ಬೆಳಕಿನ ಪುಂಜಗಳು ಮಿನುಗುತ್ತಾ ಜಗಮಗಿಸುತ್ತಾ ಇರುವುದನ್ನು ನೋಡುತ್ತಾ ಈ ಬ್ರಹ್ಮಾಂಡದ ಶಕ್ತಿಯನ್ನು, ವಿಸ್ತಾರವನ್ನು ಮನದಲ್ಲೇ ಕಲ್ಪಿಸಿಕೊಳ್ಳಬಹುದೇ….………ಮುಂದೆ ಓದಿ……..

Advertisement

ನಮ್ಮ ಕಲ್ಪನೆ ಕೇವಲ ಬಿಂದುವಿನೊಳಗಿನ ಬಿಂದುವಿಗಿಂತಲೂ ಕಡಿಮೆ ಎನ್ನಬಹುದು. ಈ ಆಕಾಶ ಎಂಬ ಅನಂತದಲ್ಲಿ ಎಷ್ಟೋ ಆಕಾಶಗಂಗೆಗಳಿವೆಯಂತೆ , ಅದರಲ್ಲಿ ಎಷ್ಟೋ ಕ್ಷೀರಪಥಗಳು, ಈ ಕ್ಷೀರಪಥಗಳಲ್ಲಿ ಭೂಮಂಡಲದಂತಹ ಎಷ್ಟೋ ಎಷ್ಟೋ ಮಂಡಲಗಳು…. ಕಲ್ಪನಾತೀತವಲ್ಲವೇ… ಹೌದು…ಈ ಲೋಕಗಳ ದೂರದ ಅಳತೆ ಬೆಳಕಿನ ವೇಗದಲ್ಲಿ…ಅಂದರೆ ಬೆಳಕು ಸೆಕುಂಡಿಗೆ ಮೂರು ಲಕ್ಷ ಕಿಮೀ ವೇಗದಲ್ಲಿ ಸಾಗುವುದಂತೆ, ಅಂದರೆ ಗಂಟೆಗೆ ಬೆಳಕಿನ ವೇಗ ಎಷ್ಟು ಎಂದು ಲೆಕ್ಕಿಸಿದರೆ…. ಮೂರುಲಕ್ಷ ಗುಣಿಸು ಅರುವತ್ತು ಗುಣಿಸು ಅರುವತ್ತು ಅಂದರೆ ಒಂದು ಗಂಟೆಗೆ ಬೆಳಕು ಚಲಿಸುವ ದೂರ….ಆಕಾಶಗಂಗೆಯ ಒಂದು ಮೂಲೆಗೆ ತಲುಪಲು ಈ ಬೆಳಕಿನ ವೇಗದಲ್ಲಿ ಎಷ್ಟೋ ನೂರು, ಸಾವಿರ ವರ್ಷಗಳ ಪಯಣ ಬೇಕಂತೆ , ….ಕಲ್ಪನಾತೀತವಲ್ಲವೇ….

ಇದೇ ಕಲ್ಪನಾತೀತವೇ ದೇವರು ಎಂದು ನಮ್ಮಂತಹ ಸಾಮಾನ್ಯ ಜನ ಶರಣೆನ್ನುವುದು. ಇಂತಹ ಮಹಾನತೆಯನ್ನೇ, ಕಣ್ಣಿಗೆ, ಮನಸ್ಸಿಗೆ ನಿಲುಕದ್ದನ್ನು ನಮ್ಮ ಪೂರ್ವಿಕರು, ಋಷಿ ಮುನಿಗಳು ,ದಾರ್ಶನಿಕರು ದೇವರು ಎಂದು ನಿಯಮಿಸಿದರು. ಅಂತೆಯೇ…

ನಮೋಸ್ತ್ವನಂತಾಯ
ಸಹಸ್ರಮೂರ್ತಯೇ
ಸಹಸ್ರಪಾದಾಕ್ಷಿ ಶಿರೋರುಬಾಹವೇ
ಸಹಸ್ರನಾಮ್ನೇ ಪುರುಷಾಯ
ಶಾಶ್ವತೇ ಸಹಸ್ರ ಕೋಟಿ
ಯುಗಧಾರಿಣೇ ನಮಃ ….

ಎಂದದ್ದು…. ಸಾಮಾನ್ಯರಾದ ನಾವು ಇಷ್ಟನ್ನು ತಿಳಿದರೆ ಸಾಕಲ್ಲವೇ…..

ಈ ಜಗನ್ನಿಯಮದ ಹಿನ್ನೆಲೆ ಮುನ್ನೆಲೆ ಕಂಡುಕೊಳ್ಳಲು ಈ ವಿಜ್ಞಾನಿಗಳು ಒಂದು ಬಿಂದುವಿನಷ್ಟು ಮೇಲೇರಿ ಕೊರಳುದ್ದ ಮಾಡಿನೋಡುವ ತಾಣವೇ ಸ್ಪೇಸ್ ಸ್ಟೇಷನ್….

ಹೌದು, ಸುನಿತಾ ವಿಲಿಯಂ ಮತ್ತು ವಿಲ್ಮೋರ್ ನಭೋಮಂಡಲಕ್ಕೆ ಇಣುಕುನೋಟ ಮಾಡುವುದಕ್ಕೋಸ್ಕರ ಬಾಹ್ಯಾಕಾಶದಲ್ಲಿ ಸ್ಥಾಪಿತ ಸ್ಪೇಸ್ ಸ್ಟೇಷನತ್ತ ಹಾರಿ, ಏರಿ ಸಿಲುಕಿಕೊಂಡಿದ್ದಾರೆ. ಜೀವವೆಂಬ ಜೀವವನ್ನು ಹಿಡಿದಿಟ್ಟುಕೊಂಡಿದ್ದಾರೆ.ಅಂತಹ ಮಹಾತಾಯಿಗಾಗಿ ನಮ್ಮೆಲ್ಲರ ಪ್ರಾರ್ಥನೆ ಬೇಕೇಬೇಕಿದೆಯಲ್ಲವೇ…

ಒಂಬತ್ತು ತಿಂಗಳ ಹಿಂದೆ ಜೂನ್ 5 ರಂದು ISS ಅಂದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಟಾರ್ ಲೈನ್ ಸ್ಪೇಸ್ ಕ್ರಾಫ್ಟ್ ಮೂಲಕ ಕೇವಲ ಎಂಟು ದಿನಗಳ ಪರೀಕ್ಷಾರ್ಥ ಕಾರ್ಯಕ್ಕೆ ಹಾರಿ ಹೋದ ಸುನಿತಾ ಮತ್ತು ವಿಲ್ಮೋರ್ ಸ್ಪೆಸ್ ಕ್ರಾಫ್ಟ್ ನಲ್ಲಿ ಹೀಲಿಯಂ ಇಂಧನದ ಸೋರುವಿಕೆಯಿಂದ ಸಂಭವಿಸಬಹುದಾದ ಅಪಾಯದ ಮುನ್ನೆಚ್ಚರಿಕೆಯ ಕಾರಣ ಹಿಂದಿರುಗಿ ಬರಲಾರದೆ ಬಾಹ್ಯಾಕಾಶ ನಿಲ್ದಾಣದಲ್ಲೇ ಜೀವವನ್ನು ಕೈಯಲ್ಲಿ ಹಿಡಿದು ಕ್ಷಣ ಕ್ಷಣಗಳನ್ನೂ ಕಳೆದದ್ದು ಇತಿಹಾಸ.

ಹಾಗಿದ್ದರೆ ಈ ಸ್ಪೆಸ್ ಸ್ಟೇಷನ್ ಅಂದರೆ ಏನು. ಇದು 1998 ರಲ್ಲಿ ಅಮೆರಿಕ, ರಷ್ಯಾ, ಜಪಾನ್, ಕೆನಡ ಮುಂತಾದ ದೇಶಗಳು ಸೇರಿ ನೆಲದಿಂದ ನಾನ್ನೂರ ಎಂಟು ಕಿಮೀ ದೂರದಲ್ಲಿ ಆಕಾಶದಲ್ಲಿ ನಿರ್ಮಿಸಿದಂತಹ ನಿಲ್ದಾಣ. ಇದರ ವಿಸ್ತೀರ್ಣ ಎಷ್ಟು ಎಂದು ತಿಳಿದರೆ ಆಶ್ಚರ್ಯವಾಗುತ್ತದೆ, ನಾಲ್ಕೂವರೆ ಲಕ್ಷ ಕೆಜಿ ತೂಕದ 35್8239 ಅಡಿ ವಿಸ್ತಾರದ,ಅಂದರೆ ಸುಮಾರು ಎರಡು ಎಕರೆ ಪ್ರದೇಶವಂತೆ. ಇಲ್ಲಿಗೆ ತಲುಪಲು ರಾಕೆಟ್ ಗೆ 28 ಗಂಟೆ ಬೇಕಂತೆ. ಅಂದರೆ ರಾಕೆಟು ಭೂಮಿಯ ಕಕ್ಷೆಯಿಂದ ಹೊರದಾಟಲು ಸೆಕುಂಡಿಗೆ 7.9 ಕಿಮೀ ವೇಗ ಬೇಕಂತೆ. ಅಂದರೆ ನಿಮಿಷಕ್ಕೆ 480 ಕಿಮೀ ವೇಗ, ಉಹಿಸಲೂ ಕಷ್ಟವಾಗುತ್ತಿದೆಯಲ್ಲವೇ….

ಹಾಗಿದ್ದರೆ ಈ ಬಾಹ್ಯಾಕಾಶ ನಿಲ್ದಾಣವನ್ನು‌ ಈ ಸ್ಪೆಸ್ ಕ್ರಾಫ್ಟ್ ಒಂದು ನಿಮಿಷದಲ್ಲೇ ಮುಟ್ಟಬಹುದಲ್ಲಾ….ಇಲ್ಲ…ಬಾಹ್ಯಾಕಾಶ ನಿಲ್ದಾಣ ಗಂಟೆಗೆ 27600 ಕಿಮೀ ವೇಗದಲ್ಲಿ ಭೂಮಿಗೆ ಪರಿಭ್ರಮಣ ‌ಮಾಡುತ್ತಿದೆಯಂತೆ….92 ನಿಮಿಷಗಳಲ್ಲಿ ಭೂಮಿಯನ್ನೊಂದು ಸುತ್ತು ಬರುತ್ತದಂತೆ….

ವಿಜ್ಞಾನವೇ (ಇರುವುದನ್ನೇ ಕಂಡುಕೊಳ್ಳುವುದು ವಿಜ್ಞಾನ ಅಷ್ಟೇ) ಇಷ್ಟು ವೇಗದಲ್ಲಿ ಸುತ್ತು ಬರುತ್ತಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ಸ್ಪೇಸ್ ಕ್ರಾಫ್ಟ್ ತನ್ನ ವೇಗವನ್ನೂ ಸರಿಯಾಗಿಸಿಕೊಂಡು ಸೇರಬೇಕಿದೆ…. ಇದಕ್ಕಾಗಿ 28 ಗಂಟೆಗಳ ಮಹಾನ್ ವೇಗದ ಪಯಣ ಬೇಕಾಗುವುದು. ಅಂತಹ ಸ್ಪೇಸ್ ಸ್ಟೇಷನಿಗೆ Crew 10 NASA Space X Dragon ಈಗಾಗಲೇ ತಲುಪಿ ಸೇರಿಕೊಂಡಿದೆ. ಇಷ್ಟರ ತನಕದ ಕಾರ್ಯಾಚರಣೆ ಯಶಸ್ವಿಯಾಗಿ ನಡೆದಿದೆ. ಇನ್ನು ಸುನಿತಾ ಮತ್ತು ವಿಲ್ಮೋರರನ್ನು ಈ ನಾಸಾದ ಸ್ಪೇಸ್  ಡ್ರಾಗನ್ ನಲ್ಲಿ ತಾಯ್ನೆಲಕ್ಕೆ ಕರೆತರುವುದೊಂದೇ ಬಾಕಿ…ಎಲ್ಲವೂ ಸರಿಯಾಗಿ ನಡೆದರೆ ಕೊಲಂಬಿಯಾ ಉಡಾವಣಾ ಕ್ಷೇತ್ರದಲ್ಲಿ 19 ನೇ ತಾರೀಕಿನಂದು ಸುನಿತಾ, ವಿಲ್ಮೋರರು ಇರುತ್ತಾರೆ, ಅಂತಹ ಕಾರ್ಯ ಸಿದ್ದಿಸಲಿ‌, ತಾಯ್ನೆಲಕ್ಕೆ ಮುಟ್ಟಿ ನಮ್ಮಂತೆಯೇ ಅವರು ಮುಂದಿನ ಜೀವನ ನಡೆಸುವಂತಾಗಲೆಂದು ಪ್ರಾರ್ಥಿಸೋಣವಲ್ಲವೇ.

ಬರಹ :
ಸುರೇಶ್ಚಂದ್ರ ತೊಟ್ಟೆತ್ತೋಡಿ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

‌ ಪ್ರಗತಿಪರ ಕೃಷಿಕ, ಬರಹಗಾರ

Published by
ಟಿ ಆರ್ ಸುರೇಶ್ಚಂದ್ರ ತೊಟ್ಟೆತ್ತೋಡಿ

Recent Posts

ಭಾರತದಿಂದ ‘ಆಪರೇಷನ್ ಸಿಂಧೂರ್’ | ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ ನಾಶ | 9 ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ |

ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ…

18 minutes ago

ಯುದ್ಧ ಆದರೆ ಕೃಷಿ ಉತ್ಪನ್ನಗಳ ಧಾರಣೆ ಏನಾಗಬಹುದು?

ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…

23 hours ago

ಪ್ರೀತಿಯ ಹಂಬಲ ಇರುವ, ವಯಸ್ಸಾದ, ಅನುಭವ ಹೊಂದಿದ ವ್ಯಕ್ತಿಗಳನ್ನು ಗೌರವಿಸುವ 5 ರಾಶಿಯ ಹುಡುಗಿಯರು |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

23 hours ago

ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ

ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್…

23 hours ago

ಸಹಜ ಸಾವನ್ನಪ್ಪುವ ಕಾಡುಪ್ರಾಣಿಗಳನ್ನು ಸುಡುವಂತಿಲ್ಲ | ಪ್ರಕೃತಿ ಚಕ್ರ ಕಾಪಾಡಲು ಸಹಕಾರಿ | ರಾಜ್ಯ ಸರ್ಕಾರದಿಂದ ಸುತ್ತೋಲೆ

ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲಿ ಸಹಜವಾಗಿ ಸಾವನ್ನಪ್ಪುವ ಕಾಡುಪ್ರಾಣಿಗಳ ಕಳೇಬರವನ್ನು ಸುಡದೆ ಕಾಡಿನಲ್ಲಿಯೇ…

1 day ago

ಬದರೀನಾಥ ಧಾಮ ಯಾತ್ರಾ ಆರಂಭ | ಭಾರೀ ಪ್ರಮಾಣದಲ್ಲಿ ಆಗಮಿಸಿರುವ ಭಕ್ತರು | ಸುರಕ್ಷತೆಗಾಗಿಅರೆಸೇನಾ ಪಡೆ ನಿಯೋಜನೆ

ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು  ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…

2 days ago