Advertisement
ಸುದ್ದಿಗಳು

ಗುಜರಾತಿನಲ್ಲಿ ಮದ್ಯನಿಷೇಧ ಆದೇಶ ಸಡಿಲ | ಅಡಿಕೆ ಮಾರುಕಟ್ಟೆಯಲ್ಲಿ ನಿಧಾನವಾಗಿ ಪರಿಣಾಮ.. ?

Share

ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ ಯಲ್ಲಿ “ಜಾಗತಿಕ ವ್ಯಾಪಾರ ಪರಿಸರ ವ್ಯವಸ್ಥೆ”ಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಗುಜರಾತ್ ಸರ್ಕಾರ, ಈ ಪ್ರದೇಶದಲ್ಲಿ ಮದ್ಯ ನಿಷೇಧ ಆದೇಶವನ್ನು ಹಿಂಪಡೆದಿದೆ. ಈ ಆದೇಶ ಅಡಿಕೆ ಮೇಲೆ ಪರಿಣಾಮ ಬೀರೀತೇ ಎಂಬುದು ಈಗ ಚರ್ಚೆಯಾಗುತ್ತಿರುವ ವಿಷಯ. ಅಂದ ಹಾಗೆ ಅಡಿಕೆಗೂ ಮದ್ಯಕ್ಕೂ ಏನು ಸಂಬಂಧ…?.

Advertisement
Advertisement
Advertisement
Advertisement

ಗುಜರಾತ್ ರಚನೆಯಾದಾಗಿನಿಂದ ರಾಜ್ಯದಲ್ಲಿ ಮದ್ಯದ ಪಾನೀಯಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ. ಈ ಹಿಂದೆ ರಾಜ್ಯದ ಯಾವುದೇ ಪ್ರದೇಶದಲ್ಲಿ ಇಂತಹ ವಿನಾಯಿತಿ ನೀಡಿರಲಿಲ್ಲ. ಆದರೆ ಗಿಫ್ಟ್ ಸಿಟಿ ಜಾಗತಿಕ ಆರ್ಥಿಕ ಮತ್ತು ತಾಂತ್ರಿಕ ಕೇಂದ್ರವಾಗಿ ಹೊರಹೊಮ್ಮಿದೆ. ಇದು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿದೆ. ಜಾಗತಿಕ ವ್ಯಾಪಾರ ಪರಿಸರ ವ್ಯವಸ್ಥೆಯನ್ನು ಕಲ್ಪಿಸಲು ಗಿಫ್ಟ್ ಸಿಟಿ ಪ್ರದೇಶದಲ್ಲಿ `ವೈನ್ ಮತ್ತು ಡೈನ್’ ಸೌಲಭ್ಯಕ್ಕೆ ಅನುಮತಿ ನೀಡುವ ಮಹತ್ವದ ನಿರ್ಧಾರವನ್ನುಗುಜರಾತ್‌ ಸರ್ಕಾರ ಕೈಗೊಂಡಿದೆ.

Advertisement

ಆದರೆ, ಮದ್ಯಕ್ಕೂ ಅಡಿಕೆಗೂ ಏನು ಸಂಬಂಧ…? ಇದು ಪ್ರಶ್ನೆ. ಆ ಬಳಿಕ ಉಳಿದ ಚರ್ಚೆ. ಅಡಿಕೆ ಬಹುಪಾಲು ಬಳಕೆಯಾಗುವುದು ಚಟದ ಕಾರಣದಿಂದ. ಅಂದರೆ ಜಗಿದು ಉಗಿಯಲು. ಉತ್ತರ ಭಾರತದಲ್ಲಿ ಚಳಿಯ ಕಾರಣದಿಂದ ಕೆಲವರು ಅಡಿಕೆ ಜಗಿದರೆ, ಇನ್ನೂ ಕೆಲವರು ಚಟದ ಕಾರಣದಿಂದ ಅಡಿಕೆ ಜಗಿಯುತ್ತಾರೆ.  ಕೆಲವು ಕಡೆಗಳಲ್ಲಿ ಮದ್ಯಪಾನದ ನಂತರ ಅಡಿಕೆ ಜಗಿಯುವವರೂ ಇದ್ದಾರೆ, ಮದ್ಯದ ನಂತರ ಇದೂ ಒಂದಿರಲಿ ಎನ್ನುವ ಚಟವೂ ಇದೆ.

ಈಗ ಗುಜರಾತ್‌ನ ಕೆಲವು ಭಾಗದಲ್ಲಿ ಅಡಿಕೆ ಜಗಿಯುವವರ ಪ್ರಮಾಣ ಹೆಚ್ಚಾಗಿದೆ. ಮದ್ಯ ನಿಷೇಧದ ಹಿನ್ನೆಲೆಯಲ್ಲಿ ಅಡಿಕೆಯೇ ಪ್ರಮುಖವಾದ ಚಟವಾಗಿತ್ತು. ಈಗ ಮದ್ಯ ಪಾನಕ್ಕೆ ಅವಕಾಶ ಆದಂತೆಲ್ಲಾ ನಿಧಾನವಾಗಿ ಅಡಿಕೆ ಜಗಿಯವ ಚಟದ ಬದಲಾಗಿ ಮದ್ಯದ ಚಟ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಗುಟ್ಕಾ ಸೇರಿದಂತೆ ಅಡಿಕೆ ಹುಡಿ ಜಗಿಯುವ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯ ಬಗ್ಗೆ ಅಡಿಕೆ ಮಾರುಕಟ್ಟೆ ವಲಯ ಚರ್ಚೆ ಮಾಡುತ್ತದೆ. ಉತ್ತರ ಭಾರತದ ಕಡೆಗಳಲ್ಲಿ ಮದ್ಯದ ನಂತರ ಅಡಿಕೆ ಹುಡಿ ಜಗಿಯುವ ಪ್ರಮಾಣ ಕಡಿಮೆಯಾಗಿದೆ. ಇದಕ್ಕಾಗಿ ಗುಟ್ಕಾ ಹಾಗೂ ಅಡಿಕೆ ಹುಡಿ ಬಳಕೆಯಾಗುವ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ಗುಜರಾತ್‌ ಕಡೆಗಳಲ್ಲಿ ಗುಣಮಟ್ಟದ ಅಡಿಕೆಯೇ ಹೆಚ್ಚು ಬೇಡಿಕೆ ಇರುವ ಪ್ರದೇಶ. ಈಗ ಮದ್ಯ ನಿಷೇಧ ವಾಪಾಸಾತಿ ಬಳಿಕ ಅಡಿಕೆ ಮಾರುಕಟ್ಟೆ ಮೇಲೆ ನಿಧಾನವಾಗಿ ಪರಿಣಾಮ ಬೀರಬಹುದೇ , ಅಥವಾ  ಇನ್ನಷ್ಟು ಬೇಡಿಕೆ ವ್ಯಕ್ತವಾಗಬಹುದೇ ಎಂಬುದು ಸದ್ಯ ಮಾರುಕಟ್ಟೆಯಲ್ಲಿ ನಡೆಯುವ ಚರ್ಚೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೇಂದ್ರ ಬಜೆಟ್‌ | ರೈತರಿಗೆ ಕಿಸಾನ್ ಕಾರ್ಡ್ ನಿಂದ ಪ್ರಯೋಜನ | ಕೃಷಿ ವಲಯಕ್ಕೆ 137757 ಕೋಟಿ ಅನುದಾನ |

ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…

10 hours ago

ಆನೆಗಳ ಚಲನ ವಲನಗಳ ಬಗ್ಗೆ ಸ್ವದೇಶಿ ನಿರ್ಮಿತ ರೇಡಿಯೊ ಕಾಲರ್ ಅಳವಡಿಕೆ | ಅರಣ್ಯ ಸಚಿವ ಈಶ್ವರ್ ಖಂಡ್ರೆ

ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…

10 hours ago

ಹೊಸರುಚಿ | ಪಪ್ಪಾಯ ಹಣ್ಣು ಬರ್ಫಿ

ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…

19 hours ago

ಸೀತೆ ಪುನೀತೆಯೆ ? ಮತ್ತೊಮ್ಮೆ ಅಗ್ನಿ ಪರೀಕ್ಷೆಯೇ?

ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…

21 hours ago

ಎಲ್ಲಾ ಕೃಷಿ ಆದಾಯವನ್ನು ಬ್ಯಾಂಕ್‌ ಉಳಿತಾಯ ಖಾತೆ ಮೂಲಕ ವ್ಯವಹಾರ ಮಾಡಬೇಕು ಏಕೆ..?

ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…

1 day ago

ತುಮಕೂರು ಜಿಲ್ಲೆ | 10 ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭ

ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…

1 day ago