Advertisement
MIRROR FOCUS

ಕಪ್ಪತಗುಡ್ಡದ ಮಡಿಲಿನಲ್ಲಿ ಪರಿಸರ ಸಂರಕ್ಷಣೆ ಕುರಿತ ಸಾಹಿತ್ಯಿಕ ಚಟುವಟಿಕೆ | ಪ್ರಕೃತಿ ಮಾತೆಯ ಸೇವೆಗೆ ಸನ್ನದ್ಧರಾಗಲು ಕರೆ

Share

ಕಪ್ಪತಗುಡ್ಡದ(Kappata gudda) ಮಡಿಲಿನಲ್ಲಿ ಶ್ರೀ ನಂದಿವೇರಿ ಸಂಸ್ಥಾನ ಮಠದ ಆವರಣದ ಶರಣ ಸಂಗಮದಲ್ಲಿ  ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸಾಹಿತ್ಯಾವಲೋಕನ, ಕವಿಗೋಷ್ಠಿ ಹಾಗೂ ಚಾರಣ ಸಂಭ್ರಮವು ಯಶಸ್ವಿಯಾಗಿ ಜರುಗಿತು. ಪರಿಸರ ಸಂರಕ್ಷಣೆ(Save Environment) ಕುರಿತಾದ ಸಾಹಿತ್ಯ ರಚಿಸಿ ಜನಸಾಮಾನ್ಯರನ್ನು ತಲುಪುವಂತೆ ಮಾಡುವುದು ಸಾಹಿತಿಗಳ(Poets) ಆದ್ಯತೆಯಾಗಬೇಕಾಗಿದೆಯೆಂದು ನುಡಿದರು. ಆ ನಿಟ್ಟಿನಲ್ಲಿ ಶ್ರೀ ನಂದಿವೇರಿ ಮಠವು ಉದಯೋನ್ಮುಖ ಸಾಹಿತಿ ಹಾಗೂ ಕವಿಗಳಿಗೆ ವೇದಿಕೆ ಕಲ್ಪಿಸಿದ್ದು, ಪ್ರಕೃತಿಯ ಮಡಿಲಲ್ಲಿ ನೆಲ ಜಲ ಅರಣ್ಯ ಸಂರಕ್ಷಣೆ ಕುರಿತು ಆಯೋಜಿಸಲಾಗುವ ಸಾಹಿತ್ಯಿಕ ಚಟುವಟಿಕೆ ಹಾಗೂ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಪ್ರಕೃತಿ ಮಾತೆಯ ಸೇವೆಗೆ ಸನ್ನದ್ಧರಾಗಲು ಕರೆ ನೀಡಿದರು.

Advertisement
Advertisement

ಪ್ರಾಸ್ತಾವಿಕವಾಗಿ ಮಾತನಾಡಿದ ಭಾಲಚಂದ್ರ ಜಾಬಶೆಟ್ಟಿಯವರು   ಶ್ರೀ ನಂದಿವೇರಿ ಮಠವು ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿ ಕಪ್ಪತಗುಡ್ಡ ಉತ್ಸವ, ಔಷಧೀಯ ಸಸ್ಯಗಳ ಅಭಿವೃದ್ಧಿ, ಸಾವಯವ ಕೃಷಿ, ನೈಸರ್ಗಿಕ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಜಲ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ, ಎರೆಗೊಬ್ಬರ ತಯಾರಿಕೆ, ಸೋಲಾರ ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ ರೈತರು ಹಾಗೂ ಜನಸಾಮಾನ್ಯರು ತೊಡಗುವಂತೆ ಹಾಗೂ ಕಪ್ಪತಗುಡ್ಡದೊಂದಿಗೆ ಜನಸಾಮಾನ್ಯರು ಭಾವಬಂಧ ಬೆಸೆಯುವ ಪೂರಕ ಚಟುವಟಿಗೆಗಳಲ್ಲಿ ತೊಡಗಿದೆಯೆಂದರು.

Advertisement

ಆಶಯ ನುಡಿಗಳನ್ನಾಡಿದ ನಿವೃತ್ತ ಪ್ರಾಚಾರ್ಯ ಡಾ. ಶ್ಯಾಮಸುಂದರ ಬಿದರಕುಂದಿಯವರು  ಸದಾಕಾಲವೂ ಪರಿಸರ ಪೂರಕ ಕೈಂಕರ್ಯದಲ್ಲಿ ತೊಡಗಬೇಕಿದೆ.  ಸೂಕ್ತ ತ್ಯಾಜ್ಯ ನಿರ್ವಹಣೆಯನ್ನು ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುವದೇ ಪರಿಸರ ಸೇವೆಯಾಗಿದ್ದು ಅದೂ ಕೂಡ ಸಾಹಿತ್ಯ ಸೇವೆಯಾಗಿದೆಯೆಂದು ನುಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ನೀಲಗಂಗಾ ಚರಂತಿ ಮಠ, ಸಾಹಿತಿ ಜ್ಯೋತಿ ಬದಾಮಿ,  ಹಾಗೂ ವಿಜಯಪುರದ ಶ್ರೀಶೈಲ ಆಲೂರ ಈ ಸಂದರ್ಭದಲ್ಲಿ ಮಾತನಾಡಿದರು.

ಮತ್ತೊಬ್ಬ ಸಾಹಿತಿ ಹಾಗೂ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಎಮ್.ವಾಯ್.ಮೆಣಸಿನಕಾಯಿ ಈ ಸಂದರ್ಭದಲ್ಲಿ ಮಾತನಾಡಿದರು. ವಿಜಯನಗರ ಜಿಲ್ಲೆಯ ಸಂಡೂರಿನ ಪರಿಸರಪ್ರೇಮಿ ಹಾಗೂ ನಿರಂತರ ಬೀಜದುಂಡೆ ಪಸರಿಸಿ ವೃಕ್ಷಾಂದೋಲನದ ರೂವಾರಿ ಎಚ್.ಎಮ್.ಸಿದ್ಧಲಿಂಗ ಸ್ವಾಮಿ ಹತ್ತು ಸಾವಿರ ಬೀಜದುಂಡೆಗಳನ್ನು ಸ್ವಾಮೀಜಿಯವರಿಗೆ ಹಸ್ತಾಂತರಿಸಿದರು. ಚಾರಣ ಸಂದರ್ಭದಲ್ಲಿ ವನದೇವಿಗೆ ಬೀಜದುಂಡೆ ಚರಗ ನಮನವನ್ನು ಅರ್ಪಿಸಲಾಯಿತು. ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಂಗಲಾ ಮೆಟಗಡ್ಡರವರು ನಿಸರ್ಗದ ಉಳಿವಿಗಾಗಿ ನಾವೆಲ್ಲಾ ಕಂಕಣಬದ್ಧರಾಗಿದ್ದು, ನಂದಿವೇರಿ ಮಠದ ಚಟುವಟಿಕೆಗಳಿಂದ ಪ್ರಭಾವಿರಾಗಿ ಪ್ರತ್ಯಕ್ಷವಾಗಿ ಪ್ರಕೃತಿಮಡಿಲಲ್ಲಿ ಆಯೋಜಿಸಿರುವ ಸಾಹಿತ್ಯಾವಲೋಕನ ಹಾಗೂ ಕವಿಗೋಷ್ಠಿಯು ಒಂದು ರಸದೌತಣವಾಗಿದೆಯೆಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ನುಡಿದರು.

Advertisement

ಕಪ್ಪತಗುಡ್ಡದ ಕುರಿತಾದ ಸ್ವರಚಿತ ಕಾವ್ಯಗಳನ್ನು ಕವಿ ಹಾಗೂ ಕವಿಯಿತ್ತಿಯರು ವಾಚಿಸಿ ನುಡಿನಮನಗಳನ್ನು ಕಪ್ಪತಗುಡ್ಡಕ್ಕೆ ಅರ್ಪಿಸಿ ಕಪ್ಫತಗುಡ್ಡದ ಸಂರಕ್ಷಣೆಗೆ ತನು ಮನ ಧನದಿಂದ ಕೈಜೋಡಿಸುತ್ತೇವೆಯೆಂದು ಪ್ರತಿಜ್ಞೆಗೈದರು. ಬೆಳಗಾವಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು, ಸಾಹಿತಿಗಳು ಹಾಗೂ ಕವಿಗಳು, ಹಾಗೂ ವಿಜ್ಞಾನ ಶಿಕ್ಷಕ ರವಿ ದೇವರಡ್ಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕಿಸಾನ್‌ ಸಮ್ಮಾನ್‌ ನಿಧಿಯ ಮೂಲಕ ರೈತರಿಗೆ 21,000 ಕೋಟಿ ರೂಪಾಯಿ |

ಕಿಸಾನ್‌ ಸಮ್ಮಾನ್‌ ನಿಧಿಯಿಂದ 9 ಕೋಟಿ 50 ಲಕ್ಷ  ರೈತರಿಗೆ  21 ಸಾವಿರ…

45 mins ago

ತುಮಕೂರು ಜಿಲ್ಲೆಯಲ್ಲಿ ದಾಖಲೆಯ ಹಾಲು ಉತ್ಪಾದನೆ

ತುಮಕೂರು ಜಿಲ್ಲೆಯಲ್ಲಿ 1351 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿನಿತ್ಯ 9.40…

1 hour ago

ಕೋಲಾರದಲ್ಲಿ ಸಾವಿರಕ್ಕೂ ಅಧಿಕ ನಕಲಿ ವೈದ್ಯರ ವಿರುದ್ಧ ಪ್ರಕರಣ |

ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿನ  ಜೈವಿಕ ತ್ಯಾಜ್ಯಗಳನ್ನು ನಗರಸಭೆ ಕಸ ಹಾಗೂ ಜನನಿಬಿಡ ಪ್ರದೇಶಗಳಲ್ಲಿ…

1 hour ago

ಹೊರನಾಡು ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿ

ಚಿಕ್ಕಮಗಳೂರು ಜಿಲ್ಲೆಯ ಹೊರನಾಡಿನ ಪ್ರಸಿದ್ದ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ…

2 hours ago

ವೆದರ್‌ ಮಿರರ್‌ | 19.09.2024 | ರಾಜ್ಯದ ಹಲವೆಡೆ ಸಾಮಾನ್ಯ ಮಳೆ ಸಾಧ್ಯತೆ |

20.09.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…

9 hours ago