ಪರಿಸರೋತ್ಸವದೊಂದಿಗೆ ಬಿಡುಗಡೆಯಾದ “Echo…. The reflection of reality” ಕಿರುಚಿತ್ರ |

June 12, 2022
10:57 PM

“ಇಕೋ.. ನೈಜತೆಯ ಪ್ರತಿಫಲನ”(Echo…. The reflection of reality) ಕಿರಚಿತ್ರ ಬಿಡುಗಡೆ ಸಮಾರಂಭವು ರಂಗಚೇತನ ಕಾಸರಗೋಡು ಮತ್ತು ಬಿ.ಪಿ ಪಿ. ಎ. ಎಲ್. ಪಿ. ಶಾಲೆ ಪೆರ್ಮುದೆ ಸಹಯೋಗದೊಂದಿಗೆ ನಡೆಯಿತು.

ರಂಗಚೇತನ ಕಾಸರಗೋಡು ಮತ್ತು ರಿದಮ್ ಮೀಡಿಯಾ ಕ್ರೀಯೇಷನ್ ಅವರ ಗಡಿನಾಡ ಖ್ಯಾತ ಯುವ ರಂಗಕರ್ಮಿ ಸದಾಶಿವ ಬಾಲಮಿತ್ರ ಅವರ ಚಿತ್ರಕಥೆ, ನಿರ್ದೇಶನ ,  ಮೆಲ್ವಿನ್ ಮಾಸ್ಟರ್ ಪೆರ್ಮುದೆ ಹಾಗೂ  ರಂಜಿತ್ ರಮಣ ಶರ್ಮರವರ ಕ್ಯಾಮರಾ ,ಎಡಿಟಿಂಗ್, ಡಬ್ಬಿಂಗ್ ಮತ್ತು ಸಂಗೀತದೊಂದಿಗೆ , ಖ್ಯಾತ ಚಲನಚಿತ್ರ ನಟ ಬಾಲಕೃಷ್ಣ ಅಡೂರು , ಭರವಸೆಯ ಬೆಳಕು ಸಮನ್ವಿತಾ ಗಣೇಶ್ ಅಣಂಗೂರು ಸಹಿತ ಕಾಸರಗೋಡು ಜಿಲ್ಲೆಯ ವಿವಿಧ ಕನ್ನಡ ಶಾಲೆಗಳ ಐವತ್ತಕ್ಕೂ ಹೆಚ್ಚಿನ ಪ್ರತಿಭಾವಂತ ಮಕ್ಕಳು ಹಾಗೂ ರಂಗಚೇತನ ಕಾಸರಗೋಡು ಇದರ ಸದ್ಯರು ಮನೋಜ್ಞ ಅಭಿನಯ ನೀಡಿದ ಕಿರಚಿತ್ರ ಬಿಡುಗಡೆ ಸಮಾರಂಭವು ರಂಗಚೇತನ ಕಾಸರಗೋಡು ಮತ್ತು ಬಿ.ಪಿ ಪಿ. ಎ. ಎಲ್. ಪಿ. ಶಾಲೆ ಪೆರ್ಮುದೆ ಸಹಯೋಗದೊಂದಿಗೆ ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ನಡೆಯಿತು.

ವಿಶ್ವ ಪರಿಸರ ದಿನದಂದು ” ಪರಿಸರೋತ್ಸವ ದೊಂದಿಗೆ ಪೆರ್ಮುದೆ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಳ ಅರಣ್ಯ ಇಲಾಖೆಯ ಸಹಕಾರದೊಂದಿಗೆ “ಶಾಲೆಗೊಂದು ವಿದ್ಯಾವನ”  ಮುರಳಿ ಮಾದವ ಪೆಲ್ತಾಜೆ ಅವರಿಂದ “ಒಂದೇ ಒಂದು ಭೂಮಿ,” ಪರಿಸರ ಜಾಗೃತಿ ಕಾರ್ಯಾಗಾರ, ಅಪೂರ್ವ ಗಿಡಗಳ ಪ್ರದರ್ಶನ, ಪುಸ್ತಕ ಪ್ರದರ್ಶನ ಗಳು ಗಮನಸೆಳೆಯಿತು.

ನಂತರ ನಡೆದ “ಇಕ್ಕೋ…” ಕಿರುಚಿತ್ರ ಬಿಡುಗಡೆ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ “ಲಿಮ್ಕಾ ವಿಶ್ವ ದಾಖಲೆಯ ಯೋಗ ರತ್ನ ಕು.ಅಭಿಜ್ಞಾನ ಹರೀಶ್ ಮತ್ತು  yoga for kid,s kasaragod ತಂಡದ ಯೋಗ ನೃತ್ಯ, ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಇವರ ಶಿಷ್ಯೆಯರಾದ ತನ್ವಿ.ಕೆ.ಟಿ.ಮತ್ತು ಇಷಿಕಾ.ಕೆ.ಟಿ, ನೃತ್ಯ ವಿದೂಷಿ ವಿದ್ಯಾಲಕ್ಷ್ಮಿ ಯವರ ಶಿಷ್ಯರಾದ ಚೇತನ್ ಎಡಕ್ಕಾನ ಮತ್ತು ನೂತನ್ ಎಡಕ್ಕಾನರವರ ಭರತನಾಟ್ಯ, ಅರಸು ಡ್ಯಾನ್ಸ್ ಅಕಾಡೆಮಿ ಮಂಜೇಶ್ವರ ತಂಡದ ನೃತ್ಯ ರೂಪಕಗಳು ಸಾಂಸ್ಕೃತಿಕ ಸಂಭ್ರಮವನ್ನು ನೀಡಿತು.

ಸಂಜೆ ಚಲನಚಿತ್ರ ನಟ  ಬಾಲಕೃಷ್ಣ ಮಾಸ್ಟರ್ ಅಡೂರು ಅವರ ಅದ್ಯಕ್ಷತೆ ಯಲ್ಲಿ ನಡೆದ ಪರಿಸರ ಕಾಳಜಿಯ ಇಕ್ಕೋ ಕಿರುಚಿತ್ರವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ  ದಿನೇಶ್. ವಿ ಲೋಕಾರ್ಪಣೆಗೊಳಿಸಿದರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತ ಶಿವ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷರಾದ  ಚನಿಯಪ್ಪ ನಾಯಕ್ ,ಮಂಜೇಶ್ವರ ಬಿ.ಆರ್.ಸಿ ಯ ಬಿ ಪಿ.ಸಿ  ವಿಜಯಕುಮಾರ್ ಪಾವಳ ಮೊದಲಾದವರು ಕಾರ್ಯಕ್ರಮ ದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಗಳು ರಂಗಚೇತನ ಗೌರವಾಧ್ಯಕ್ಷ ಯತೀಶ್ ಕುಮಾರ್ ರೈ ಮುಳ್ಳೇರಿಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತೆ ವಿದ್ಯಾ ಗಣೇಶ್ ಅಣಂಗೂರು ನಿರೂಪಿಸಿದರು.ಕಾರ್ಯದರ್ಶಿ ಅಶೋಕ ಕುಮಾರ್ ಕೊಡ್ಲಮೊಗೆರು ಸ್ವಾಗತಿಸಿ ,ಸದಾಶಿವ ಬಾಲಮಿತ್ರ ವಂದಿಸಿದರು. ಕಾರ್ಯಕ್ರಮ ದಲ್ಲಿ ಕಿರುಚಿತ್ರ ತಂಡದ ಎಲ್ಲಾ ಸದಸ್ಯರನ್ನು ರಂಗಚೇತನ ಕಾಸರಗೋಡು ವತಿಯಿಂದ ಗೌರವಿಸಲಾಯಿತು. ಬಳಿಕ ಕಿರುಚಿತ್ರದ ಪ್ರದರ್ಶನ ನಡೆಯಿತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!
August 15, 2026
7:42 AM
by: ದ ರೂರಲ್ ಮಿರರ್.ಕಾಂ
ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!
August 15, 2026
7:18 AM
by: ದ ರೂರಲ್ ಮಿರರ್.ಕಾಂ
ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?
August 14, 2026
7:14 AM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror