ಸಂಪಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ “ಮಹಿಳಾ ಗ್ರಾಮಸಭೆ” ಯು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಈ ಸಭೆಯಲ್ಲಿ “ಮಹಿಳೆ ಮತ್ತು ಕಾನೂನು” ಬಗ್ಗೆ ನ್ಯಾಯವಾದಿ ಲತಾಕುಮಾರಿ ಅವರು ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಆಗುವ ಶೋಷಣೆಯನ್ನು ತಪ್ಪಿಸಲು ಮತ್ತು ಭಯವನ್ನು ಹೋಗಲಾಡಿಸಲು ಕಾನೂನಿನ ಅರಿವು ಹೊಂದಿರಬೇಕು. ಹಲವು ದೌರ್ಜನ್ಯವನ್ನು ತಪ್ಪಿಸಲು ಇಂದಿನ ದಿನಗಳಲ್ಲಿ ಹೊಸ ಹೊಸ ಕಾನೂನನ್ನು ಜಾರಿಗೆ ತರಲಾಗಿರುವ ಬಗ್ಗೆ ಮಾಹಿತಿ ನೀಡಿದರು. ಸಂವಿಧಾನದ 14ನೇ ವಿಧಿಯಲ್ಲಿ ಬರುವ ಸಮಾನತೆಯ ಬಗ್ಗೆ ತಿಳಿಸಿದರು.
NRLMನ ಮೇರಿ ಎಸ್ ಅವರು ಸಂಜೀವಿನಿ ಒಕ್ಕೂಟದ ಮೂಲಕ ಯೋಜನೆ ಸದುಪಯೋಗಪಡಿಸಿಕೊಳ್ಳಬಹುದು ಎಂದರು.”ರಾಷ್ಟೀಯ ಕೃಷಿ ವಿಕಾಸ ಯೋಜನೆ” ಬಗ್ಗೆ ಡಾ. ಅಶ್ವತಿ ,ತಾಳೆ ಕೃಷಿಯ ಬಗ್ಗೆ ಆಲೆಟ್ಟಿ ಗ್ರಾಮದ ಪ್ರಗತಿಪರ ಕೃಷಿಕರಾದ ಅಶೋಕ್ ಪ್ರಭು , ಮಕ್ಕಳ ಆರೋಗ್ಯ, ಶಿಕ್ಷಣ, ಸುರಕ್ಷತೆ, ಕಾನೂನು ಬಗ್ಗೆ ದೀಪಿಕಾ ಪಿ, ಮಹಿಳಾ ಸಬಲೀಕರಣದ ಬಗ್ಗೆ ಅನುಷ್ಯ ,ಸ್ವಸಹಾಯ ಸಂಘಗಳ ಬಗ್ಗೆ ಅವಿನಾಶ್ ಡೆಲ್ಲಾರಿಯೋ, ಬ್ಯಾಂಕ್ ನಿಂದ ಸಿಗಬಹುದಾದ ಸಾಲ ಸೌಲಭ್ಯಗಳ ಬಗ್ಗೆ ಸುಜಾತ ಮಾಹಿತಿ ನೀಡಿದರು.
ಶಿಲ್ಪಾ ಸನತ್ ಅಧ್ಯಕ್ಷರು ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸಂಪಾಜೆ, ತಾಳೆ ಬೆಳೆ ಕೃಷಿ 3F ಆಯಿಲ್ ಕಂಪನಿಯ ಕ್ಲಸ್ಟರ್ ಸೂಪರ್ ವೈಸರ್ ಸುಳ್ಯ ವಲಯ ಶ್ರೀ ರವಿಶಂಕರ್, ಪುಷ್ಪಲತಾ ಕೆ ಆರ್ PHC ಅರಂತೋಡು, ಚಿತ್ರ ಐ CHO ಗೂನಡ್ಕ, ಹರ್ಷಿತ CHO ಗೂನಡ್ಕ, ಗ್ರಾಮ ಪಂಚಾಯತ್ ನ ಗೌರವಾನ್ವಿತ ಸದಸ್ಯರುಗಳಾದ ಲೆಸ್ಸಿ ಮೊನಾಲಿಸಾ, ಜಗದೀಶ್ ರೈ, ರಜನಿ ಶರತ್, ಸುಶೀಲಾ ಪಿ, ಮಾಜಿ ಅಧ್ಯಕ್ಷರಾದ ಯಮನ ಬಿ ಎಸ್, ಸುಂದರಿ ಮುಂಡಡ್ಕ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಸಂಜೀವಿನಿ ಒಕ್ಕೂಟದ ಸದಸ್ಯೆಯರು, ಮಹಿಳಾ ಸ್ವಸಹಾಯ ಸಂಘದ ಸದಸ್ಯೆಯರು, ಗ್ರಾಮಸ್ಥರು ಮತ್ತು ಮಹಿಳೆಯರು ಉಪಸ್ಥಿತರಿದ್ದು ಮಾಹಿತಿಯನ್ನು ಪಡೆದುಕೊಂಡರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸರಿತಾ ಓಲ್ಗಾ ಡಿ’ಸೋಜಾ ಎಲ್ಲರನ್ನೂ ಸ್ವಾಗತಿಸಿದರು. ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ರಜನಿ ಶರತ್ ವಂದಿಸಿದರು.
ಕೊರೋನಾ ಸಂಬಂಧಿಸಿದ ವದಂತಿಗಳನ್ನು ಜನತೆ ನಂಬಬಾರದು. ಸಾಮಾಜಿಕ ಜಾಲತಾಣದಲ್ಲಿ ಬರುವ ಎಲ್ಲ ಸುದ್ದಿಗಳು…
ಮಾವಿನ ಹಣ್ಣಿನ ಕಾಲದಲ್ಲಿ ನಿತ್ಯ ಏನಾದರೊಂದು ಬಗೆ ಮಾಡಿ ಉಣಬಡಿಸದಿದ್ದರೆ ಮನೆಯಾಕೆಗೆ ಖಂಡಿತಾ…
ಅಡಿಕೆಯನ್ನು ಮುಖ್ಯವಾಗಿ ಬೀಡಾದ ತಯಾರಿಯಲ್ಲಿ ಒಂದು ಮೂಲ ಉತ್ಪನ್ನ ಆಗಿ ಬಳಸಲಾಗುತ್ತಿದೆ.ಇದನ್ನು ವಿವಿಧ…
ಜೂನ್ 11ರಿಂದ ಸ್ವಲ್ಪ ಮಟ್ಟಿಗೆ ಮುಂಗಾರು ಚುರುಕುಗೊಂಡು ರಾಜ್ಯದ ಅಲ್ಲಲ್ಲಿ ಮಳೆಯ ಮುನ್ಸೂಚನೆ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಮುಂಗಾರು ದುರ್ಬಲಗೊಂಡಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಂತಹ ಚಟುವಟಿಕೆಗಳು ಉಂಟಾದರೆ ಮಾತ್ರ ಮುಂಗಾರು ಸ್ವಲ್ಪ…