ಮಂಗಳೂರಿನ ಕೊಣಾಜೆಯಲ್ಲಿ ಇಂದು ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಾಳಪುಣಿಯ ಹೂಹಾಕುವಕಲ್ಲಿನ ಬಳಿಯ ಬೆಳ್ಳೇರಿಯ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಕುಸುಮ ಎಂಬ ಮಹಿಳೆ ಒಂಟಿಯಾಗಿ ವಾಸಿಸುತ್ತಿದ್ದರು. ಮಹಿಳೆಯನ್ನು ಅತ್ಯಾಚಾರವೆಸಗಿ ಕೊಲೆಗೈಯಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಮಹಿಳೆ ವಿವಸ್ತ್ರವಾಗಿದ್ದು, ಸುಟ್ಟಗಾಯಗಳೂ ಇವೆ. ಮನೆಯ ಕರ್ಟೈನ್ ಕೂಡಾ ಅರ್ಧ ಸುಟ್ಟಿದ್ದು, ಅಗ್ನಿ ಆಕಸ್ಮಿಕವಾಗಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel