Opinion

ಮನುಷ್ಯ ಮತ್ತು ಅವನ ಅಹಂ | ಜೀವನದಲ್ಲಿ ಮನುಜ ತನ್ನನ್ನು ತಾನು ಸುಟ್ಟುಕೊಳ್ಳುವ ಪರಿ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸೂರ್ಯ ಇಡೀ ಪ್ರಪಂಚಕ್ಕೆ ಬೆಳಕು ಕೊಡುತ್ತಾನೆ. ಚಂದ್ರ ತಂಪಾದ ಬೆಳದಿಂಗಳು ಕೊಡುತ್ತಾನೆ. ಸಸ್ಯಗಳುಇಡೀ ಜೀವಸಂಕುಲಕ್ಕೆ ಪ್ರಾಣವಾಯು ಮತ್ತು ಆಹಾರ ಕೊಡುತ್ತವೆ. ಆದರೆ ಇವು ಯಾವುವೂ ಸಹ ನಾವು ಪರೋಪಕಾರ ಮಾಡುತ್ತಿದ್ದೇವೆ ಅಂಥ ಟಾಂ ಟಾಂ ಹೊಡೆಯುವುದಿಲ್ಲ. ಆದರೆ ಮನುಜ ಮನುಷ್ಯನಿಗೆ ಅಹಂ ಅನ್ನೋದು ಬಂದ್ರೆ ಅವನಿಗೆ ಶತ್ರುಗಳು ಬೇಕಾಗಿಲ್ಲ. ಅವನಿಗೆ ಅವನೇ ಶತ್ರು.

Advertisement
Advertisement

ಹೂಗಳಲ್ಲಿ ಅದ್ಬುತವಾದ ಪರಿಮಳವಿದೆ. ಆನೆಗೆ ಅಪಾರವಾದ ಶಕ್ತಿ ಇದೆ. ನವಿಲಿಗೆ ಮನೋಹರವಾದ ಗರಿಗಳಿವೆ. ಕೋಗಿಲೆಗೆ ಸುಂದರವಾದ ಕಂಠವಿದೆ. ಜಿಂಕೆ ಮೊಲದಂತಹ ಪ್ರಾಣಿಗಳು ನೋಡಲು ಸುಂದರವಾಗಿವೆ. ಜೇನು ಹುಳು ರುಚಿಕರವಾದ ಜೇನುತುಪ್ಪ ತಯಾರಿಸುತ್ತದೆ. ರೇಷ್ಮೆ ಹುಳು ಬೆಲೆ ಬಾಳುವ ರೇಷ್ಮೆ ಎಳೆ ತಯಾರಿಸುತ್ತವೆ. ಪರ್ಲ್ ಓಯ್‌ಸ್ಟರ್ ಎಂಬ ಕಪ್ಪೆಚಿಪ್ಪಿನ ಪ್ರಾಣಿ ಸುಂದರವಾದ ಮುತ್ತುಗಳನ್ನು ತಯಾರಿಸುತ್ತದೆ. ಆದರೆ ಇವುಗಳಲ್ಲಿ ಯಾವುವೂ ಸಹ ತಾವೇ ಗ್ರೇಟ್ ಅಂಥ ಬೀಗುವುದಿಲ್ಲ ಹಾಗೆ ಭಾವಿಸುವುದೂ ಇಲ್ಲ.

ಆದರೆ ಮನುಷ್ಯ ಅನ್ನೋ ಪ್ರಾಣಿಯಲ್ಲಿ ತಾನು ಗ್ರೇಟ್ ಎನ್ನುವ ಅಹಂ ಇರುತ್ತದೆ. ಮಾತಿಗೆ ಮುಂಚೆ ನಾನು ನಾನು ಅಂಥ ಬಡಬಡಿಸುತ್ತಾನೆ. ನಾನೊಬ್ಬ ಅದ್ಭುತ ಡಾಕ್ಟರ್, ಇಂಜಿನಿಯರ್, ಲಾಯರ್, ಲೇಖಕ, ಕವಿ, ನಟ, ಟೀಚರ್, ಪತ್ರಕರ್ತ, ರಾಜಕಾರಣಿ, ಸಮಾಜ ಸೇವಕ ಹೀಗೆ ಜಂಭ ಕೊಚ್ಚಿಕೊಳ್ಳುತ್ತಿರುತ್ತಾನೆ. ನಾನು ಎಷ್ಟು ಫೇಮಸ್ ಗೊತ್ತಾ? ನಾನು ಎಷ್ಟು ಬುದ್ದಿವಂತ ಗೊತ್ತಾ? ನಾನೆಷ್ಟು ಹ್ಯಾಂಡ್‌ಸಮ್ ಗೊತ್ತಾ? ನನ್ನ ಬಗ್ಗೆ ಬೇರೆಯವರನ್ನು ಕೇಳು, ನಾನು ಎಷ್ಟು ಗ್ರೇಟ್ ಅಂಥ ಹೇಳ್ತಾರೆ, ನನ್ನನ್ನು ಏನು ಅಂಥ ತಿಳಿದುಕೊಂಡಿದ್ದೀಯ? ನನ್ನ ಬಗ್ಗೆ ನಿನಗೆ ಸರಿಯಾಗಿ ಗೊತ್ತಿಲ್ಲ. ನನ್ನ ಸುದ್ದಿಗೆ ಬಂದರೆ ಚೆನ್ನಾಗಿರಲ್ಲ. ನಾನು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸುತ್ತೀನಿ.

ಹೀಗೆ ಬೇರೆಯವರ ಎದುರು ಬಡಬಡಿಸುತ್ತ, ಭ್ರಮೆಗಳಲ್ಲಿ, ಸ್ವಕುಚ ಮರ್ಧನದಲ್ಲಿ ಆನಂದ ಅನುಭವಿಸುವ ಏಕೈಕ ಪ್ರಾಣಿ ಮನುಷ್ಯ. ತನ್ನನ್ನು ಎಲ್ಲರೂ ಹೊಗಳಲಿ, ಗ್ರೇಟ್‌ ಅನ್ನಲಿ ಅಂಥ ನಿರೀಕ್ಷೆ ಮಾಡುತ್ತಾನೆ. ಎಂತಹ ಅತಿರಥ ಮಹಾರಥರಾಗಲಿ ಒಂದಲ್ಲ ಒಂದು ದಿನ ಮಣ್ಣಲ್ಲಿ ಮಣ್ಣಾಗಿ ಹೋಗುವುದು ನಿಶ್ಚಿತ. ಬದುಕಿದ್ದಾಗ ಹೀಗೆಲ್ಲಾ ಹಾರಾಡುವ ಮನುಷ್ಯನಿಗೆ, ತಾನು ಸತ್ತ ಕೆಲವು ದಿನಗಳ ನಂತರ ಸಮಾಜ ಇರಲಿ, ತನ್ನ ಮನೆಯವರೂ ಕೂಡ ತನ್ನನ್ನು ನೆನೆಸಿಕೊಳ್ಳುವುದಿಲ್ಲ ಎಂಬ ಸತ್ಯ ತಿಳಿದಿರುವುದಿಲ್ಲ.

ರಮೇಶ್ ಹೆಚ್. ಟಿ. ( ವಾಟ್ಸ್‌ ಆಪ್‌ ಬರಹ)

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸುಸ್ಥಿರ ಅಭಿವೃದ್ಧಿ ಯಾವಾಗಲೂ ತತ್ವಶಾಸ್ತ್ರ ಮತ್ತು ಸಿದ್ಧಾಂತದ ಮೂಲತತ್ವಾಗಿದೆ

ಇತ್ತೀಚಿನ  ದಿನಗಳಲ್ಲಿ ಮಾಲಿನ್ಯದ ಬಗ್ಗೆ ಹೆಚ್ಚುತ್ತಿರುವ ಕಾಳಜಿ, ಪರಿಸರ ಸಂರಕ್ಷಣೆಯ ಬಗ್ಗೆ ಚಿಂತಿಸುವಂತೆ…

3 hours ago

ನಿಮಗೆ ಸಾಡೇಸಾತಿ ಶುರುವಾಗಿದ್ರೆ ಶನಿ ನೀಡ್ತಾನೆ ಈ 6 ಸೂಚನೆ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

3 hours ago

ಹೊಸರುಚಿ | ಹಲಸಿನ ಹಣ್ಣಿನ ಮಲ್ಪುರಿ

ಹಲಸಿನ ಹಣ್ಣಿನ ಮಲ್ಪುರಿಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣಿನ ಪಲ್ಪ್ 1/2 ಕಪ್,…

4 hours ago

ಗ್ರಾಮ ಪಂಚಾಯ್ತಿಗೊಂದು ಕೆಪಿಎಸ್ ಶಾಲೆ | ಮುಂದಿನ ದಿನಗಳಲ್ಲಿ 500 ಕೆಪಿಎಸ್ ಶಾಲೆ ಆರಂಭ

ರಾಜ್ಯದಲ್ಲಿ ಪ್ರತಿ  ಗ್ರಾಮ ಪಂಚಾಯಿತಿಗೊಂದು ಕರ್ನಾಟಕ ಪಬ್ಲಿಕ್ ಶಾಲೆ- ಕೆಪಿಎಸ್  ತೆರೆಯುವ ಉದ್ದೇಶ …

13 hours ago

ಅಸುರಕ್ಷಿತ ಜಾಲತಾಣಗಳಲ್ಲಿ ವಹಿವಾಟು ನಡೆಸದಂತೆ ಸಾರ್ವಜನಿಕರು ಎಚ್ಚರವಾಗಿರಬೇಕು

ಆನ್‌ಲೈನ್ ಆರ್ಥಿಕ ವಂಚನೆ ಅಪರಾಧಗಳನ್ನು ತಪ್ಪಿಸುವ ದೃಷ್ಟಿಯಿಂದ ಸಾರ್ವಜನಿಕ ವೈಫೈ ಅನ್ನು ಬಳಸದಂತೆ…

13 hours ago