ಉತ್ತರ ಭಾರತದಲ್ಲಿ ಏರಿದ ತಾಪಮಾನ | ಎಳನೀರಿಗೆ ​ ಬೇಡಿಕೆ |

June 10, 2023
11:51 AM

ದಕ್ಷಿಣ ಭಾರತದಲ್ಲಿ ಮಳೆ ವಾತಾವರಣ ಹೆಚ್ಚಾಗುತ್ತಿದ್ದರೆ  ಉತ್ತರ ಭಾರತದಲ್ಲಿ ತಾಪಮಾನ ಏರುತ್ತಲೇ ಇದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂಗಾರು ಮಳೆ ಆಗಮಿಸಿದೆ.  ಮುಂಗಾರು ಪೂರ್ವ ಮಳೆಯು ಕೆಲವೆಡೆ ಬಿದ್ದಿದೆ. ತಕ್ಕ ಮಟ್ಟಿಗೆ ತಾಪಮಾನ ತಗ್ಗುವ ಸಾಧ್ಯತೆ ಇದೆ. ಆದರೆ ದೇಶದ ರಾಜಧಾನಿ ದೆಹಲಿಯಲ್ಲಿ 42 ರಿಂದ 43 ಡಿಗ್ರಿ ಉಷ್ಣಾಂಶವಿದೆ. ದಿನನಿತ್ಯ 2 ಎಳನೀರನ್ನ ಕುಡಿಯಲು ವೈದ್ಯರು ಸಲಹೆ ನೀಡಿದ್ದಾರೆ. ಹಾಗಾಗಿ ಅಲ್ಲಿ ಎಳ ನೀರಿಗೆ ಎಲ್ಲಿಲ್ಲದ ಡಿಮ್ಯಾಂಡ್ ಬಂದಿದೆ. ಆದರೆ ದೂರದ ದೆಹಲಿಗೆ ಎಳನೀರು ಹೋಗುವು  ನಮ್ಮ  ಕರುನಾಡಿನಿಂದ, ಅದರಲ್ಲೂ ಮಂಡ್ಯದಿಂದ. ಅದರಲ್ಲೂ ಮದ್ದೂರಿನ ಎಳನೀರು ಅಂದ್ರೆ ದೆಹಲಿಯಲ್ಲಿ ಸಿಕ್ಕಾಪಟ್ಟೆ ಫೇಮಸ್.

ಮಂಡ್ಯದ ಎಳನೀರು ಈಗ ದೆಹಲಿ, ರಾಜಸ್ಥಾನ ಹಾಗೂ ಯುಪಿಯಲ್ಲಿಯೂ ಜನರ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಬೃಹತ್ ಲಾರಿ ಮೂಲಕ  ಎಳನೀರನ್ನು ಉತ್ತರಭಾರತದ ರಾಜ್ಯಗಳಿಗೆ ಮಂಡ್ಯದಿಂದ ಸಾಗಿಸಲಾಗುತ್ತಿದೆ. ರೈತರ ತೋಟದಿಂದ ಲೋಡ್ ಗಟ್ಟಲೆ ಎಳನೀರು ಸಾಗಾಟವಾಗುತ್ತಿದೆ. ತಮಿಳುನಾಡು, ಯುಪಿ, ರಾಜಸ್ತಾನ ಹಾಗೂ ದೆಹಲಿಗೆ ರವಾನೆಯಾಗುತ್ತಿದೆ. ಬೇಡಿಕೆ ಹೆಚ್ಚಾದಂತೆಯೇ   17 ರೂ ಇದ್ದ ಎಳನೀರು ಈಗ 35 ರೂ ಗೆ ಹೆಚ್ಚಾಗಿದೆ. ಈಗ ಎಳನೀರು ಒಳ್ಳೆ ಆದಾಯ ತಂದು ಕೊಡುತ್ತಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!
August 15, 2026
7:42 AM
by: ದ ರೂರಲ್ ಮಿರರ್.ಕಾಂ
ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!
August 15, 2026
7:18 AM
by: ದ ರೂರಲ್ ಮಿರರ್.ಕಾಂ
ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?
August 14, 2026
7:14 AM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror