ಸುದ್ದಿಗಳು

ಬೆಳವಣಿಗೆಗೆ ಕಾಲೇಜು ಯೂನಿಯನ್ ಪೂರಕ | ಕಾಲೇಜು ಯುನಿಯನ್ ಉದ್ಘಾಟಿಸಿ ಗಾಯಕ ರತೀಶ್ ಕಂಡಡುಕ್ಕಂ

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕಾಲೇಜು ಯೂನಿಯನ್ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವನ್ನು ಪಸರಿಸುವುದರೊಂದಿಗೆ ಪ್ರತಿಯೊಬ್ಬರ ಸಮಸ್ಯೆ ಇಚ್ಛೆಗಳನ್ನು ಗಣನೆಗೆ ತೆಗೆದುಕೊಂಡು ಮುನ್ನಡೆಯುವ ಉತ್ತಮ ನಾಯಕತ್ವ ಗುಣ ಮಾತ್ರವಲ್ಲದೇ ವಿದ್ಯಾರ್ಥಿಗಳ ಸಾರ್ವತೋಮುಖ ಬೆಳವಣಿಗೆಗೆ, ಕಾಲೇಜಿನ ಅಭಿವೃದ್ಧಿಗೂ ಪೂರಕವಾಗಿಯೂ ಪ್ರವರ್ತಿಸುತ್ತದೆ ಎಂದು ಕಾಲೇಜು ಯೂನಿಯನ್ ಉದ್ಘಾಟಿಸಿ ಪ್ಲವರ್ಸ್ ಟಿವಿ ಕಾಮಿಡಿ ಉಲ್ಸವಂ ಖ್ಯಾತಿಯ ಗಾಯಕ ರತೀಶ್ ಕಂಡಡುಕ್ಕಂ ಹೇಳಿದರು.

Advertisement

ಕಾಲೇಜ್ ಆಫ್ ಅಪ್ಲೈಡ್ ಸಯನ್ಸ್, ಮಂಜೇಶ್ವರ ಕಾಲೇಜು ಆವರಣದಲ್ಲಿ ನಡೆದ 2022 – 23ನೇ ಸಾಲಿನ ಕಾಲೇಜು ಯೂನಿಯನ್ ಉದ್ಘಾಟನಾ ಸಮಾರಂಭ “ಧ್ವನಿ 2ಕೆ23” ಯಲ್ಲಿ ಕಾಲೇಜು ಯೂನಿಯನ್ ಉದ್ಘಾಟಿಸಿ ಅವರು ಮಾತನಾಡಿದರು. ಕಾಲೇಜು ವಿದ್ಯಾರ್ಥಿಗಳ ಧ್ವನಿಯಾಗುವ ಕಾಲೇಜು ಯೂನಿಯನ್ ಮತ್ತೊಂದೆಡೆ ಭವಿಷ್ಯದ ತಿಳಿವಳಿಕೆ ಹೊಂದಿದ ಜಾಗೃತ ಪೌರರ ಸೃಷ್ಟಿಗೂ ನಾಂದಿ ಹಾಡುತ್ತದೆ. ಮಾತ್ರವಲ್ಲದೆ ಅನ್ಯಾಯದ ವಿರುದ್ಧ ಧ್ವನಿ ಎತ್ತುವ, ಇತರರ ಸಮಸ್ಯೆಗೆ ಸ್ವಂದಿಸುವ, ಒಳಿತನ್ನು ಪ್ರಶಂಸಿಸುವ ಗುಣವನ್ನು ಬೆಳೆಸುತ್ತದೆ.

ಮುಖ್ಯ ಅತಿಥಿ ಪದ್ಮಶ್ರೀ ಅಮೈ ಮಹಾಲಿಂಗ ನಾಯ್ಕ್ ಮಾತನಾಡಿ, ಛಲವಿದ್ದರೆ ಸಾಧನೆ ಅಸಾಧ್ಯವಲ್ಲ. ಸೋಲನ್ನೇ ಗೆಲುವಿನ ಮೆಟ್ಟಿಳನ್ನಾಗಿಸಿ, ಹೀಯಾಳಿಕೆಗಳನ್ನೇ ಪ್ರೇರಣೆಯಾಗಿ ಸ್ವೀಕರಿಸಿ, ಯುವ ಜನಾಂಗ ಛಲ ಬಿಡದೆ ಮುನ್ನುಗಬೇಕಿದೆ, ತಮ್ಮ ವೈಯಕ್ತಿಕ ಬೆಳವಣಿಗೆಯೊಂದಿಗೆ ರಾಜ್ಯ, ರಾಷ್ಟ್ರದ ಬೆಳವಣಿಗೆಗೆಗೂ ಶ್ರಮಿಸಬೇಕಿದೆ.ನಿರುದ್ಯೋಗ ಸಮಸ್ಯೆಯ ಬಗ್ಗೆ ಚಿಂತಿಸುವ ಯುವಜನಾಂಗ ಇತರ ಕ್ಷೇತ್ರಗಳ ಮೇಲೆ ನೀಡುವ ಸಮಾನ ಆಸಕ್ತಿ, ಸ್ಥಾನಮಾನಗಳನ್ನು ಕೃಷಿ ಕ್ಷೇತ್ರಕ್ಕೂ ನೀಡಿದಲ್ಲಿ ಒಂದು ಮಟ್ಟಿಗೆ ನಿರುದ್ಯೋಗದ ಚಿಂತೆಯೂ ನಿವಾರಣೆಯಾಗುವ ಸಾಧ್ಯತೆಯಿದೆ. ಕೃಷಿ ಕ್ಷೇತ್ರದಲ್ಲೂ ಹಲವಾರು ಅವಕಾಶಗಳು ಅಡಕವಾಗಿದ್ದು ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ಸಫಲತೆ ನಮ್ಮದಾಗಲಿದೆ ಎಂದರು.

ಕಾಲೇಜು ಪ್ರಿನ್ಸಿಪಾಲ್ ನಳಿನಿ ಕೆ. ವಿ. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಮರ್ಸ್ ವಿಭಾಗದ ಮುಖ್ಯಸ್ಥ ಪ್ರದೀಪ್ ಕುಮಾರ್ ಸಿ. ಎಚ್., ಸ್ಟಾಫ್ ಅಡ್ವೈಸರ್ ಸೌಮಿನಿ, ಸ್ಟಾಫ್ ಸೆಕ್ರೆಟರಿ ಸ್ವಾತಿ ದೇವರಾಜ್, ಕಾಲೇಜ್ ಸುಪೆರಿಂಡೆಂಟ್ ನಾಗವೇಣಿ ಮತ್ತಿತರರು ಉಪಸ್ಥಿತರಿದ್ದರು.

ಕಾಲೇಜು ಯೂನಿಯನ್ ಅಧ್ಯಕ್ಷೆ ಸೀತಾರ ಪಿ. ಸ್ವಾಗತಿಸಿ ಕಾರ್ಯದರ್ಶಿ ಹರ್ಷಿಣಿ ಎಸ್. ವಂದಿಸಿದರು. ಕಂಪ್ಯೂಟರ್ ಅಸೋಸಿಯೇಷನ್ ಕಾರ್ಯದರ್ಶಿ ನಿಶಾ ನಿರೂಪಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸಾವಯವ ಕೃಷಿ ಉತ್ತೇಜನ | ಜೋಯಿಡಾ ತಾಲೂಕು ಸಾವಯವ ಕೃಷಿ ತಾಲೂಕು ಗುರಿ

ರಾಸಾಯನಿಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಗ್ಗುತ್ತಿದ್ದು, ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ನೈಸರ್ಗಿಕ…

2 hours ago

ವಿಕಸಿತ ಕೃಷಿ ಸಂಕಲ್ಪ ಅಭಿಯಾನ | 1 ಕೋಟಿ 34 ಲಕ್ಷಕ್ಕೂ ಅಧಿಕ ರೈತರೊಂದಿಗೆ ಸಂವಾದ

ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಅಡಿಯಲ್ಲಿ 2 ಸಾವಿರದ 170 ತಂಡಗಳನ್ನು ರಚಿಸಲಾಗಿತ್ತು.…

3 hours ago

ರಾಜ್ಯದಲ್ಲಿ 60 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ

ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲಿ ರಾಜ್ಯದ ಕೊಡುಗೆ ಅಪಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.…

3 hours ago

ಮಲೆನಾಡಿನಲ್ಲಿ “ಭಾರಿ” ಮಳೆಯ ದಿನದಲ್ಲಿ ಶಾಲೆಗೆ ರಜೆ ಕೊಡುವರಾರು…!?

ಮಲೆನಾಡು ಕರಾವಳಿಯ ಪ್ರದೇಶದ ಸರ್ಕಾರಿ ಶಾಲೆಗೆ ಹೋಗುವ ಅನೇಕ ಮಕ್ಕಳು ಹಳ್ಳ-ಹೊಳೆ ದಾಟಬೇಕು,…

3 hours ago

ಗುರು-ಬುಧನಿಂದ ಈ 5 ರಾಶಿಗೆ ಸಕಲೈಶ್ವರ್ಯ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

3 hours ago