MIRROR FOCUS

ಹಲಸು ಮೌಲ್ಯವರ್ಧನೆ | ಹಲಸು ಮೇಳದಲ್ಲಿ ರುಚರುಚಿಯಾದ ತಿಂಡಿ…! | ಅಡುಗೆ ಮನೆಗೆ ಯಾವಾಗ..?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಈಗ ಹಲಸು ಮೇಳ-ಮಾವು ಮೇಳದ ಗೌಜಿ. ಕರಾವಳಿ ಜಿಲ್ಲೆ ಮಾತ್ರವಲ್ಲ ಇದೀಗ ರಾಜ್ಯದೆಲ್ಲಡೆ ಹಲಸು-ಮಾವು ಮೇಳ ನಡೆಯುತ್ತಿದೆ. ಕಳೆದ ಎರಡು ವಾರದಲ್ಲಿ ಮಂಗಳೂರು, ಬೆಂಗಳೂರು,ಮೈಸೂರಿನಲ್ಲಿ ಹಲಸು ಮೇಳ ನಡೆದಿದೆ, ಪುತ್ತೂರಿನಲ್ಲಿ ಈಗ ನಡೆಯುತ್ತಿದೆ. ಹಲಸು ಮೇಳದಲ್ಲಿ ಪ್ರತೀ ಸಲವೂ ರುಚಿ ರುಚಿಯಾದ ಖಾದ್ಯದ ಪರಿಚಯವಾಗುತ್ತದೆ. ಈ ಖಾದ್ಯಗಳು ಮನೆಮನಗೆ ತಲಪಿದಾದ ಹಸಲು ಮೌಲ್ಯವರ್ಧನೆಯ ಗುರಿ ಸಾಕಾರವಾಗುತ್ತದೆ.

Advertisement
Advertisement
ಹಲಸು ಮೇಳದಲ್ಲಿ ಮಾರಾಟಕ್ಕೆ ಬಂದಿರುವ ಹಲಸು
ಪುತ್ತೂರಿನಲ್ಲಿ ಹಲಸು ಮೇಳ

ಕಳೆದ  ಕೆಲವು ವರ್ಷಗಳಿಂದ ಕೇರಳದಲ್ಲಿ ಹಲಸು ಮೌಲ್ಯವರ್ಧನೆ ಬಗ್ಗೆ ಕೆಲಸವಾಗುತ್ತಲೇ ಇತ್ತು. ಸಣ್ಣ ಸಣ್ಣ ಹಳ್ಳಿಯಲ್ಲೂ ಹಲಸು ಮೌಲ್ಯವರ್ಧನೆ ನಡೆದಿದೆ, ನಡೆಯುತ್ತಿದೆ. ಇದರ ಒಂದು ಭಾಗವೇ ಹಲಸು ಮೇಳ. ಹಲಸು ಮೇಳದ ಮೂಲಕ ಹಲಸು ಉತ್ಪನ್ನಗಳ ಪರಿಚಯ ಆ ಮೂಲಕ ಹಲಸಿನ ಮಾನ. ಆ ಹಲಸು ಉತ್ಪನ್ನಗಳನ್ನು ಮನೆ ಮನೆಗೂ ತಲಪಿ ಅಡುಗೆ ಮನೆಯವರೆಗೂ ಮೌಲ್ಯವರ್ಧನೆಯಾಗಬೇಕು. ಈ ಕೆಲಸ ನಡೆಯುತ್ತಿದೆ. ಈ ಬಗ್ಗೆ ರಾಜ್ಯದಲ್ಲಿ ಕೂಡಾ ಕಳೆದ ಹಲವು ಸಮಯಗಳಿಂದ ಕೆಲಸ ನಡೆಯುತ್ತಿದೆ.  5-6 ವರ್ಷಗಳಿಂದ ಹಲಸು ಮೌಲ್ಯವರ್ಧನೆ ಬಗ್ಗೆ  ಅಡಿಕೆ ಪತ್ರಿಕೆ ಎಚ್ಚರಿಸುತ್ತಿದೆ, ಅಭಿಯಾನದ ಮಾದರಿಯಲ್ಲಿ ಕೆಲಸ ಮಾಡಿತ್ತು. ಇದೀಗ ರಾಜ್ಯದಲ್ಲೂ ಹಲಸು ಮೇಳವು ಸ್ಥಾನ ಪಡೆದುಕೊಂಡಿದೆ. ಜನಾಕರ್ಷಣೆಯ ಕೇಂದ್ರವೂ ಆಗಿದೆ.

ಕಳೆದ ಒಂದು ವಾರದಲ್ಲಿ ಹಲವು ಕಡೆ ಹಲಸು ಮೇಳವಾಗಿದೆ. ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮೇ 24 ರಂದು ಮಾವು ಹಾಗೂ ಹಲಸು ಮೇಳ ಆರಂಭವಾಗಿದೆ. ಇದು ಜೂನ್ 10ರವರೆಗೆ ನಡೆಯಲಿದೆ. ಮೇಳವನ್ನು ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಆಯೋಜಿಸಿದೆ. ಇಲ್ಲಿ 74 ಮಳಿಗೆಗಳನ್ನು ಮಾವು ಬೆಳೆಗಾರರಿಗೆ, 9 ಮಳಿಗೆ ಹಲಸು ಬೆಳೆಗಾರರಿಗೆ ಮತ್ತು 14 ಮಳಿಗೆಗಳನ್ನು ಇತರೆ ಹಣ್ಣಿನ ಉತ್ಪನ್ನಗಳ ಮಾರಾಟಕ್ಕೆ ಒದಗಿಸಲಾಗಿದೆ.

ಮೈಸೂರಿನಲ್ಲಿ ಕೂಡಾ ಹಲಸು ಮಾವು ಮೇಳ ನಡೆಯುತ್ತದೆ. ಈ ಬಾರಿ ನಗರದ ಕುಪ್ಪಣ್ಣ ಪಾರ್ಕ್‍ನಲ್ಲಿ ಮೇ 24ರಿಂದ 26ರವರೆಗೆ ಮಾವು ಮೇಳ ಆಯೋಜಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಮಾವಿನ ಹಣ್ಣುಗಳೊಂದಿಗೆ ಹಲಸಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟವೂ ಇರಲಿದೆ.

ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗ ಆಯೋಜಿಸಿರುವಂತ ಇದು ಏಳನೇ ವರ್ಷದ ಹಲಸಿನ ಹಬ್ಬ ನಡೆಯಿತು. ಸಾಕಷ್ಟು ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿದರು. ಇದೀಗ ಪುತ್ತೂರಿನಲ್ಲೂ 7 ನೇ ವರ್ಷದ ಹಲಸು ಮೇಳ ನಡೆಯುತ್ತಿದೆ. ಪುತ್ತೂರಿನ ಜೈನ್ ಭವನದಲ್ಲಿ ಮೇ 24ರ ಶುಕ್ರವಾರ ಮೇಳಕ್ಕೆ ಚಾಲನೆ ನೀಡಲಾಗಿದೆ. ಮೇ 26ರ ಭಾನುವಾರದ ವರೆಗೆ ಹಲಸು ಮೇಳ ನಡೆಯಲಿದೆ. ಮೇಳದಲ್ಲಿ  ಹಲಸಿನ ಹಣ್ಣಿನ ವಿವಿಧ ಖಾದ್ಯಗಳಾದ ಉಂಡ್ಲಕಾಳು, ಚಿಪ್ಸ್, ಹಪ್ಪಳ, ದೋಸೆ, ಮಂಚೂರಿ, ಕಬಾಬ್, ಮುಳುಕ್ಕ, ಜ್ಯೂಸ್, ರೊಟ್ಟಿ, ಕೇಕ್, ಹಲ್ವಾ, ಸೇಮಿಗೆ, ಬನ್ಸ್ ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್ ಕ್ರೀಮ್ ಸಹಿತ ಹಲವು ಬಗೆಯ ಖಾದ್ಯಗಳು  ಹಲಸುಪ್ರಿಯರ ಗಮನ ಸೆಳೆದವು.

Advertisement

ಪುತ್ತೂರಿನ ಹಲಸು ಮೇಳದಲ್ಲಿ ಮಾತನಾಡಿದ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ , ಹಲಸು ಮೌಲ್ಯವರ್ಧನೆಯ ಬಗ್ಗೆ ಆರಂಭದಲ್ಲಿ ಅಡಿಕೆ ಪತ್ರಿಕೆ ಬಹಳಷ್ಟು ಕೆಲಸ ಮಾಡಿದೆ. ಹೀಗಾಗಿ ಈಗ ಮಾನ ಬರುತ್ತಿದೆ. ಹಲಸು ಮೇಳಗಳು ಕೇವಲ ವಾಣಿಜ್ಯ ಉದ್ದೇಶದಿಂದ ನಡೆದಲ್ಲಿ ಅದರ ಮಹತ್ವ ಕಳೆದುಕೊಳ್ಳುತ್ತದೆ. ಹಲಸು ಮೌಲ್ಯವರ್ಧನೆಯ ಜೊತೆಗೆ ಕೃಷಿಕರೂ ಕೂಡಾ ಉತ್ತಮ ತಳಿಯ ಆಯ್ಕೆ ಮಾಡಿ ಹಲಸು ಬೆಳೆಯುವುದು ಹಾಗೂ ಮಾರುಕಟ್ಟೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಇದಕ್ಕೆ ಮೇಳಗಳು ನೆರವಾಗಬೇಕು ಎಂದು ಅವರು ಹೇಳಿದರು.

ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಅವರು ಮಾತನಾಡಿ, ಹಲಸು ಹಸಿದವರ ಹಣ್ಣು. ಹಲಸು ಮೌಲ್ಯವರ್ಧನೆಯಾದಾಗ ಕೃಷಿಯೂ ಬೆಳವಣಿಗೆ ಸಾಧ್ಯವಿದೆ. ಇದಕ್ಕಾಗಿ ನಿರಂತರ ಪ್ರಯತ್ನ ಅಗತ್ಯ ಎಂದು ಹೇಳಿದರು.


ಪುತ್ತೂರಿನ ಹಲಸು ಮೇಳದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ

ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

Advertisement
Advertisement
/**/
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮುಂಗಾರು ಮಳೆ ಸುದ್ದಿ | ಕೇರಳದಲ್ಲಿ ತೀವ್ರಗೊಳ್ಳಲಿದೆ ಮಳೆ | ದೆಹಲಿಯಲ್ಲೂ ಮಳೆ ಎಚ್ಚರಿಕೆ | ಹಿಮಾಚಲದಲ್ಲಿ 20 ಕ್ಕೂ ಹೆಚ್ಚು ಜೀವಹಾನಿ |

ಮುಂದಿನ 24 ಗಂಟೆಗಳಲ್ಲಿ ದೆಹಲಿಯನ್ನು ಮುಂಗಾರು ಆವರಿಸುವ ಸಾಧ್ಯತೆಯಿದೆ. ಎರಡು ದಿನಗಳ ಹಿಂದೆ…

4 hours ago

ಆಷಾಢ ಶುಕ್ರವಾರ, ಈ ಸ್ಥಳದಲ್ಲಿ ಈ ರಾಶಿಯವರು ಯಾವುದಾದರೂ ದೇವಿಯ ದೇವಸ್ಥಾನದಲ್ಲಿ ಹಿಟ್ಟಿನ ದೀಪ ಹಚ್ಚಿಡಿ..

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

5 hours ago

ಹೊಸರುಚಿ | ಬಲಿತ ಹಲಸಿನ ಕಾಯಿ ಬ್ರೇಡ್ ರೋಲ್

ಬಲಿತ ಹಲಸಿನ ಕಾಯಿ ಬ್ರೇಡ್ ರೋಲ್ :   ಬೇಕಾಗುವ ಸಾಮಗ್ರಿಗಳು  ಮತ್ತು ಮಾಡುವ…

5 hours ago

ಪರಿಸರ ವಿಚಾರದಲ್ಲಿ ಸರ್ಕಾರದ ಬೇಜವಾಬ್ದಾರಿ..! ಇಲ್ಲಿದೆ ಅಭಿಪ್ರಾಯ..

ಪರಿಸರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳಲ್ಲಿ ಸರ್ಕಾರ ಬೇಜಾವಾಬ್ದಾರಿ ತೋರಿದೆ ಎಂದು ಲೇಖಕ ಅರವಿಂದ್‌…

12 hours ago

ಬೆಂಗಳೂರು-ಕಣ್ಣೂರು ರೈಲು ವಿಳಂಬ | ಸಕಾಲಿಕ ಸೇವೆಗೆ ಪ್ರಯಾಣಿಕರ ಒತ್ತಾಯ

ಕಣ್ಣೂರು-ಬೆಂಗಳೂರು ರೈಲು ತಡವಾಗಿ ಆಗಮಿಸುತ್ತಿದ್ದು ರೈಲು ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ತಕ್ಷಣವೇ ಇಲಾಖೆ…

12 hours ago

ಶುರುವಾಯಿತು ಕಡಲುಕೊರೆತ..!

ಉಳ್ಳಾಲ ಪ್ರದೇಶದಲ್ಲಿ ಈ ಬಾರಿಯೂ ಕಡಲುಕೊರೆತ ಆರಂಭವಾಗಿದೆ. ಈ ಪ್ರದೇಶಕ್ಕೆ  ವಿಧಾನಸಭಾ ಸ್ಪೀಕರ್‌…

13 hours ago