MIRROR FOCUS

ಕಲಾವಿದ ಮೋಹನ್‌ ಸೋನಾ ಇನ್ನಿಲ್ಲ | ಗ್ರಾಮೀಣ ಭಾಗದ ಮೇರು ಕಲಾವಿದ ಮೋಹನ್ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಪ್ರಸಿದ್ದ ಕಲಾವಿದ ಮೋಹನ್‌ ಸೋನಾ ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ರಾತ್ರಿ ನಿಧನರಾದರು. ಗ್ರಾಮೀಣ ಭಾಗದ ಮೇರು ಕಲಾವಿದರಾಗಿದ್ದ ಮೋಹನ್‌  ಸೋನಾ ಚಿತ್ರ ಕಲಾವಿದರಾಗಿ, ನಟರಾಗಿ, ಸೃಜನಶೀಲ ಕಲಾವಿದರಾಗಿ , ನಾಟಕಕಾರರಾಗಿ , ನಿರ್ದೇಶಕರಾಗಿ ಹೆಸರು ಮಾಡಿದ್ದರು.
ಚೋಮ, ನಾಳೆ ಯಾರಿಗೂ ಇಲ್ಲ ತೆರಗಳಲ್ಲಿ ಅಭಿನಯ ಮಾಡಿದ್ದರು. ಸೋಣಂಗೇರಿಯ ಬಯಲು ಚಿತ್ರಾಲಯ ರಾಜ್ಯದಲ್ಲಿ ಪ್ರಸಿದ್ಧವಾಗಿತ್ತು.  ಮೋಹನ್‌ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಮೋಹನ್‌ ಸೋನಾ ಬಗ್ಗೆ ಕಲಾವಿದ ಜೀವನ್‌ ರಾಂ ಅವರ ಪೇಸ್‌ ಬುಕ್‌ ವಾಲಲ್ಲಿ ಹೀಗೆ ಬರೆದಿದ್ದಾರೆ..
This is box title
ನಿಮ್ಮ ಬಗ್ಗೆ ನಾನೇನು ಹೇಳಲಿ ಸೋನ !?? ನನ್ನ 30 ವರ್ಷದ ರಂಗ ಬದುಕಿನಲ್ಲಿ ನಿಮ್ಮಂತಹ ಮೇರು ವ್ಯಕ್ತಿತ್ವದ ಮತ್ತೊಬ್ಬ ಕಲಾವಿದನನ್ನು ನಾನು ಕಂಡಿಲ್ಲ.ನಿಮ್ಮನ್ನು ನೋಡಿಕೊಂಡೇ ಬೆಳೆದವನು ನಾನು. ನನಗೂ ಗುರು ನೀವು.  ಕಳೆದ ಐದು ತಿಂಗಳಿನಿಂದಂತೂ ನಿಮ್ಮ ಬಗೆಗಿನ ಸಾಕ್ಷ್ಯಚಿತ್ರ ನಿರ್ಮಾಣದ ನೆಪದಲ್ಲಿ….ಸೋನ.. ಸೋನ… ಸೋನ…ಸೋನ ಅಂತ ಅದೆಷ್ಟು ಸಾವಿರ ಬಾರಿ ನನ್ನ ನಾಲಗೆ ನುಡಿದಿರಬಹುದೋ!! ಕಲೆ,ಶಿಕ್ಷಣ,ರಂಗಭೂಮಿಯ ವಿಷಯದಲ್ಲಿ ನಿಮಗಿರುವ ಅಪಾರ ಜ್ಞಾನದ ವಿಶ್ವರೂಪ ದರ್ಶನ ಮಾಡಿಸಿಕೊಳ್ಳುತ್ತಿದ್ದೆ..ಮೋಸ ಮಾಡಿದ್ರಿ ನೀವು…ಕೋಪ ಸೋನ.!! ಪ್ರತಿದಿನ ಪ್ರತಿಕ್ಷಣ ನೀವೇ ನನ್ನೊಳಗಿದ್ದು ನನ್ನೊಳಗಿನ ಕ್ರಿಯಾಶೀಲತೆಯನ್ನು ಹೊರಹಾಕ್ತಿದ್ರೀ ಅನಿಸ್ತದೆ.ಈ ಸಾಕ್ಷ್ಯಚಿತ್ರವನ್ನು ಲೋಕ ನೋಡುವುದು ಆಮೇಲಿನ ಮಾತು…ಮೊದಲು ನೀವು ನೋಡಬೇಕೆಂಬ ಹಂಬಲ ನನ್ನದಾಗಿತ್ತು.  …ಖಂಡಿತ ನಾನು ತಡ ಮಾಡಿಲ್ಲ..ನೀವೇ ಹೋಗಲು ಅವಸರಿಸಿದ್ರಿ…  ಬೇಗನೇ ಮುಗಿಸುವೆ ಕೆಲಸ..ನೋಡಬೇಕು ನೀವು. ಮತ್ತೆ ಹುಟ್ಟಿ ಬರುವಿರೆಂಬ ನಂಬಿಕೆಯಲ್ಲಿ…!!
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸಸ್ಯ ಪರಿಚಯ | ಕರ್ಲೆಂಕಿ

ಅಚ್ಚ ಹಸುರಿನ ಉರುಟುರುಟಾದ ರೂಪಾಯಿ ನಾಣ್ಯದಷ್ಟು ಗಾತ್ರದ ಎಲೆಗಳ ದಂಟುಗಳನ್ನು ಹೊಂದಿರುವ ಗಿಡ…

4 hours ago

ಹವಾಮಾನ ಮಾಹಿತಿ | ಈಗ ಎಲ್ಲೆಲ್ಲಾ ಭರ್ಜರಿ ಮಳೆ..? ಎಲ್ಲಿ ಕುಸಿತ..?

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಭರ್ಜರಿಯಾಗಿ ಸುರಿದ ಮಳೆ ಈಗ ಸ್ವಲ್ಪ ವಿರಾಮ…

5 hours ago

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆ | ರಾಜ್ಯದ ನದಿಗಳಿಗೆ 79 ಸಾವಿರದ 44 ಕ್ಯೂಸೆಕ್ ನೀರು

ಮಹಾರಾಷ್ಟ್ರದಲ್ಲಿ  ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ನದಿ ಪಾತ್ರಗಳಿಗೆ 79 ಸಾವಿರದ 44 ಕ್ಯೂಸೆಕ್…

6 hours ago

ವಾರದ ಅತಿಥಿ | ಮರ ಬಳಸದೆಯೇ ಮನೆ ನಿರ್ಮಾಣ, “ದ್ವಾರಕಾ”ದಿಂದ ಪರಿಸರಕ್ಕೊಂದು ಕೊಡುಗೆ

ಕಳೆದ ಸುಮಾರು 5-6 ವರ್ಷಗಳಿಂದ ಮನೆಗಳಿಗೆ ಮರ ಬಳಕೆ ಮಾಡುತ್ತಿಲ್ಲ. ಈಗಾಗಲೇ ಸುಮಾರು…

10 hours ago

ಶುಕ್ರವಾರ ಮಹಾಲಕ್ಷ್ಮಿಯ ಈ ಮಂತ್ರವನ್ನು ಭಕ್ತಿಯಿಂದ ಪಠಿಸಿದರೆ ಹಣದ ಸಮಸ್ಯೆ ನಿವಾರಣೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

20 hours ago

60 ಸೆಕೆಂಡುಗಳಲ್ಲಿ 10 ಆಸನಗಳ ಪ್ರದರ್ಶಿಸಿದ ಋತ್ವಿ | ಯೋಗದಲ್ಲಿ ಚನ್ನರಾಯಪಟ್ಟಣದ ಬಾಲಕಿ ಸಾಧನೆ

ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ  ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬಾಲಕಿ ಋತ್ವಿ ಯೋಗ…

1 day ago