2026 ಮುಂಗಾರು ಮುನ್ಸೂಚನೆ – ಕೇರಳಕ್ಕೆ ನಿರೀಕ್ಷೆಗಿಂತ ಮುನ್ನವೇ ಆಗಮನ? – ಮಳೆ ಕಡಿಮೆಯಾಗುವ ಸಾಧ್ಯತೆ- ಕೃಷಿಗೆ ದೊಡ್ಡ ಸವಾಲು

May 3, 2026
8:17 AM
2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು ಕೃಷಿಗೆ ಸವಾಲು ಉಂಟುಮಾಡುವ ಸಾಧ್ಯತೆ ಇದೆ.

2026 ರ ನೈಋತ್ಯ ಮುಂಗಾರು ಕುರಿತು ಭಾರತೀಯ ಹವಾಮಾನ ಇಲಾಖೆ (IMD) ಸದ್ಯದ ನಿರೀಕ್ಷೆಯಂತೆ ಮುನ್ಸೂಚನೆ ನೀಡಿದ್ದು, ಈ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ದೀರ್ಘಾವಧಿಯ ಸರಾಸರಿ (LPA)ಯ 92% ಮಳೆಯಷ್ಟೇ ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ಈಗಿನ ಹವಾಮಾನ ಸ್ಥಿತಿಯಲ್ಲಿ ನಿರೀಕ್ಷೆಗಿಂತ ಮೊದಲೇ ಮಳೆ ಆರಂಭವಾಗುವ ಸೂಚನೆಯನ್ನೂ ನೀಡಿದೆ. ಆದರೆ ಅಧಿಕೃತವಾದ ಘೋಷಣೆ ಆಗಿಲ್ಲ.

ಮೇ 14 ರಿಂದ ಮೇ 20 ರ ನಡುವೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾನ್ಸೂನ್ ಮಳೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದಷ್ಟೇ ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.

ಭಾರತದ ಆರ್ಥಿಕತೆಯ ಹೃದಯವಾದ ಕೃಷಿ ಕ್ಷೇತ್ರಕ್ಕೆ ನೈಋತ್ಯ ಮುಂಗಾರು ಅತ್ಯಂತ ಪ್ರಮುಖವಾಗಿದೆ. ದೇಶದ ವಾರ್ಷಿಕ ಮಳೆಯ ಸುಮಾರು 70% ಈ ಅವಧಿಯಲ್ಲೇ ಲಭ್ಯವಾಗುತ್ತದೆ.  ಆದರೆ ಇತ್ತೀಚಿನ ಮುನ್ಸೂಚನೆಯ ಪ್ರಕಾರ, 2026ರ ಮುಂಗಾರು ಸಾಮಾನ್ಯಕ್ಕಿಂತ ಕಡಿಮೆ  ಮಳೆಯಾಗುವ ಸಾಧ್ಯತೆ ಇದೆ. ಇದು ರೈತರಿಗೆ ಎಚ್ಚರಿಕೆಯ ಸಂದೇಶ ನೀಡುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

ಈಗಿನಂತೆ ಮುಂಗಾರು ಆಗಮನದ ದಿನಾಂಕಗಳು (ಅಂದಾಜು):

  • ಅಂಡಮಾನ್ & ನಿಕೋಬಾರ್: ಮೇ 14–20
  • ಕೇರಳ: ಜೂನ್ 1 ಸುಮಾರಿಗೆ
  • ಮುಂಬೈ: ಜೂನ್ 10 ಸುಮಾರಿಗೆ
  • ಮಧ್ಯ ಭಾರತ: ಜೂನ್ ಮಧ್ಯಭಾಗ
  • ದೆಹಲಿ-ಎನ್‌ಸಿಆರ್: ಜೂನ್ 27–30
  • ದೇಶವ್ಯಾಪಿ: ಜುಲೈ 15 ಸುಮಾರಿಗೆ

ಆದರೆ, ಕೆಲವು ಜಾಗತಿಕ ಮಾದರಿಗಳು, ವಿಶೇಷವಾಗಿ ಇತರ ಕೆಲವು ಸೂಚನೆಯಂತೆ, ಕೇರಳಕ್ಕೆ ಮುಂಗಾರು ಮೇ ಕೊನೆಯ ವಾರದಲ್ಲೇ ತಲುಪುವ ಸಾಧ್ಯತೆ ಇದೆ. ಐಎಂಡಿ ಇನ್ನೂ ಅಧಿಕೃತವಾಗಿ ಆರಂಭಿಕ ಆರಂಭವನ್ನು ಘೋಷಿಸದಿದ್ದರೂ, ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ-ರೇಂಜ್ ವೆದರ್ ಫೋರ್ಕಾಸ್ಟ್ಸ್  ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಹವಾಮಾನ ಮಾದರಿಗಳು, ಮೇ ಕೊನೆಯ ವಾರದ ವೇಳೆಗೆ ಮಾನ್ಸೂನ್ ಕೇರಳವನ್ನು ತಲುಪಬಹುದು ಎಂದು ಸೂಚಿಸುತ್ತವೆ.

ಎಚ್ಚರಿಕೆ: ಬೇಗ ಬಂದರೂ ವೇಗ ಕಡಿಮೆ ಆಗಬಹುದು : ತಜ್ಞರ ಪ್ರಕಾರ, ಮುಂಗಾರು ಬೇಗ ಆರಂಭವಾದರೂ ದೇಶದಾದ್ಯಂತ ಅದರ ಪ್ರಗತಿ ನಿಧಾನವಾಗುವ ಸಾಧ್ಯತೆ ಇದೆ. ಗಾಳಿಯ ಮಾದರಿ ಮತ್ತು ಸಮುದ್ರ ತಾಪಮಾನ ಇದಕ್ಕೆ ಕಾರಣವಾಗಬಹುದು.

 ಎಲ್ ನಿನೊ ಪ್ರಭಾವ : ಜುಲೈ ವೇಳೆಗೆ ಎಲ್ ನಿನೊ (El Niño) ಪರಿಸ್ಥಿತಿ ಬೆಳೆಯುವ ಸಾಧ್ಯತೆ ಹೀಗಾಗಿ  ಮಳೆ ಅಸ್ಥಿರವಾಗುವ ಸಾಧ್ಯತೆ ಇದೆ. ಆದರೆ ಕೆಲವು ಪ್ರದೇಶಗಳಲ್ಲಿ ಬರದಂತಹ ಪರಿಸ್ಥಿತಿ ಉಂಟಾಗಬಹುದು.

ಕೃಷಿಗೆ ಪರಿಣಾಮ ಏನು?ಮುಂಗಾರು ಭಾರತಕ್ಕೆ ಅತ್ಯಂತ ಮಹತ್ವದ್ದು, ಅದರಲ್ಲೂ ಕೃಷಿ ಕ್ಷೇತ್ರಕ್ಕೆ ನೈಋತ್ಯ ಮುಂಗಾರು ಅತ್ಯಂತ ಪ್ರಮುಖವಾಗಿದೆ. ದೇಶದ ವಾರ್ಷಿಕ ಮಳೆಯ 70% ಈ ಅವಧಿಯಲ್ಲೇ ಬರುತ್ತದೆ ಹೀಗಾಗಿ ಖಾರಿಫ್ ಬೆಳೆಗಳು ಸಂಪೂರ್ಣವಾಗಿ ಮಳೆಯ ಮೇಲೆ ಅವಲಂಬಿತವಾಗಿದೆ. ಜಲಾಶಯಗಳು, ವಿದ್ಯುತ್ ಉತ್ಪಾದನೆ, ಗ್ರಾಮೀಣ ಆರ್ಥಿಕತೆ ಮೇಲೆ ಕೂಡಾ ಮಳೆ ಪರಿಣಾಮ ಬೀರಬಹುದು.  ಕಡಿಮೆ ಮಳೆಯಾದರೆ ರೈತರಿಗೆ ಸವಾಲು ಹೆಚ್ಚಾಗುವ ಸಾಧ್ಯತೆ ಇದೆ.

ಪೂರ್ವ ಮಳೆಯ ರಿಲೀಫ್ :  ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆಯು ಕೆಲವು ಭಾಗಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದ್ದು, ತೀವ್ರ ಬಿಸಿಲಿನಿಂದ ಸ್ವಲ್ಪ ಮಟ್ಟಿನ ಪರಿಹಾರ ಸಿಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

IMD forecasts below-normal monsoon rainfall (92% of LPA) for 2026. While monsoon may arrive early in Kerala, El Niño conditions could affect rainfall distribution, impacting agriculture and water resources.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 10-09-2026 | ಕರ್ನಾಟಕದಲ್ಲಿ ಮಳೆ ಏಕೆ ಇಳಿಮುಖವಾಗುತ್ತಿದೆ..?
September 10, 2026
11:29 AM
by: ಸಾಯಿಶೇಖರ್ ಕರಿಕಳ
ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ
September 10, 2026
10:59 AM
by: ದ ರೂರಲ್ ಮಿರರ್.ಕಾಂ
ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ : ಮಂಗಳೂರು ಮಹಾನಗರಪಾಲಿಕೆ ಸೂಚನೆ
September 9, 2026
9:26 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 09-09-2026 | ಕರ್ನಾಟಕದಲ್ಲಿ ಮಳೆಯ ಚಿತ್ರಣ ಬದಲಾಗುತ್ತಿದೆ – ಸೆ.11ರಿಂದ ಕರಾವಳಿಯಲ್ಲಿ ಬದಲಾವಣೆ
September 9, 2026
1:50 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror