2026 ರ ನೈಋತ್ಯ ಮುಂಗಾರು ಕುರಿತು ಭಾರತೀಯ ಹವಾಮಾನ ಇಲಾಖೆ (IMD) ಸದ್ಯದ ನಿರೀಕ್ಷೆಯಂತೆ ಮುನ್ಸೂಚನೆ ನೀಡಿದ್ದು, ಈ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ದೀರ್ಘಾವಧಿಯ ಸರಾಸರಿ (LPA)ಯ 92% ಮಳೆಯಷ್ಟೇ ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ ಈಗಿನ ಹವಾಮಾನ ಸ್ಥಿತಿಯಲ್ಲಿ ನಿರೀಕ್ಷೆಗಿಂತ ಮೊದಲೇ ಮಳೆ ಆರಂಭವಾಗುವ ಸೂಚನೆಯನ್ನೂ ನೀಡಿದೆ. ಆದರೆ ಅಧಿಕೃತವಾದ ಘೋಷಣೆ ಆಗಿಲ್ಲ.
ಮೇ 14 ರಿಂದ ಮೇ 20 ರ ನಡುವೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಾನ್ಸೂನ್ ಮಳೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದಷ್ಟೇ ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಹೇಳಿದ್ದಾರೆ.
ಭಾರತದ ಆರ್ಥಿಕತೆಯ ಹೃದಯವಾದ ಕೃಷಿ ಕ್ಷೇತ್ರಕ್ಕೆ ನೈಋತ್ಯ ಮುಂಗಾರು ಅತ್ಯಂತ ಪ್ರಮುಖವಾಗಿದೆ. ದೇಶದ ವಾರ್ಷಿಕ ಮಳೆಯ ಸುಮಾರು 70% ಈ ಅವಧಿಯಲ್ಲೇ ಲಭ್ಯವಾಗುತ್ತದೆ. ಆದರೆ ಇತ್ತೀಚಿನ ಮುನ್ಸೂಚನೆಯ ಪ್ರಕಾರ, 2026ರ ಮುಂಗಾರು ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ. ಇದು ರೈತರಿಗೆ ಎಚ್ಚರಿಕೆಯ ಸಂದೇಶ ನೀಡುತ್ತದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
ಈಗಿನಂತೆ ಮುಂಗಾರು ಆಗಮನದ ದಿನಾಂಕಗಳು (ಅಂದಾಜು):
- ಅಂಡಮಾನ್ & ನಿಕೋಬಾರ್: ಮೇ 14–20
- ಕೇರಳ: ಜೂನ್ 1 ಸುಮಾರಿಗೆ
- ಮುಂಬೈ: ಜೂನ್ 10 ಸುಮಾರಿಗೆ
- ಮಧ್ಯ ಭಾರತ: ಜೂನ್ ಮಧ್ಯಭಾಗ
- ದೆಹಲಿ-ಎನ್ಸಿಆರ್: ಜೂನ್ 27–30
- ದೇಶವ್ಯಾಪಿ: ಜುಲೈ 15 ಸುಮಾರಿಗೆ
ಆದರೆ, ಕೆಲವು ಜಾಗತಿಕ ಮಾದರಿಗಳು, ವಿಶೇಷವಾಗಿ ಇತರ ಕೆಲವು ಸೂಚನೆಯಂತೆ, ಕೇರಳಕ್ಕೆ ಮುಂಗಾರು ಮೇ ಕೊನೆಯ ವಾರದಲ್ಲೇ ತಲುಪುವ ಸಾಧ್ಯತೆ ಇದೆ. ಐಎಂಡಿ ಇನ್ನೂ ಅಧಿಕೃತವಾಗಿ ಆರಂಭಿಕ ಆರಂಭವನ್ನು ಘೋಷಿಸದಿದ್ದರೂ, ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ-ರೇಂಜ್ ವೆದರ್ ಫೋರ್ಕಾಸ್ಟ್ಸ್ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಹವಾಮಾನ ಮಾದರಿಗಳು, ಮೇ ಕೊನೆಯ ವಾರದ ವೇಳೆಗೆ ಮಾನ್ಸೂನ್ ಕೇರಳವನ್ನು ತಲುಪಬಹುದು ಎಂದು ಸೂಚಿಸುತ್ತವೆ.
ಎಚ್ಚರಿಕೆ: ಬೇಗ ಬಂದರೂ ವೇಗ ಕಡಿಮೆ ಆಗಬಹುದು : ತಜ್ಞರ ಪ್ರಕಾರ, ಮುಂಗಾರು ಬೇಗ ಆರಂಭವಾದರೂ ದೇಶದಾದ್ಯಂತ ಅದರ ಪ್ರಗತಿ ನಿಧಾನವಾಗುವ ಸಾಧ್ಯತೆ ಇದೆ. ಗಾಳಿಯ ಮಾದರಿ ಮತ್ತು ಸಮುದ್ರ ತಾಪಮಾನ ಇದಕ್ಕೆ ಕಾರಣವಾಗಬಹುದು.
ಎಲ್ ನಿನೊ ಪ್ರಭಾವ : ಜುಲೈ ವೇಳೆಗೆ ಎಲ್ ನಿನೊ (El Niño) ಪರಿಸ್ಥಿತಿ ಬೆಳೆಯುವ ಸಾಧ್ಯತೆ ಹೀಗಾಗಿ ಮಳೆ ಅಸ್ಥಿರವಾಗುವ ಸಾಧ್ಯತೆ ಇದೆ. ಆದರೆ ಕೆಲವು ಪ್ರದೇಶಗಳಲ್ಲಿ ಬರದಂತಹ ಪರಿಸ್ಥಿತಿ ಉಂಟಾಗಬಹುದು.
ಕೃಷಿಗೆ ಪರಿಣಾಮ ಏನು? : ಮುಂಗಾರು ಭಾರತಕ್ಕೆ ಅತ್ಯಂತ ಮಹತ್ವದ್ದು, ಅದರಲ್ಲೂ ಕೃಷಿ ಕ್ಷೇತ್ರಕ್ಕೆ ನೈಋತ್ಯ ಮುಂಗಾರು ಅತ್ಯಂತ ಪ್ರಮುಖವಾಗಿದೆ. ದೇಶದ ವಾರ್ಷಿಕ ಮಳೆಯ 70% ಈ ಅವಧಿಯಲ್ಲೇ ಬರುತ್ತದೆ ಹೀಗಾಗಿ ಖಾರಿಫ್ ಬೆಳೆಗಳು ಸಂಪೂರ್ಣವಾಗಿ ಮಳೆಯ ಮೇಲೆ ಅವಲಂಬಿತವಾಗಿದೆ. ಜಲಾಶಯಗಳು, ವಿದ್ಯುತ್ ಉತ್ಪಾದನೆ, ಗ್ರಾಮೀಣ ಆರ್ಥಿಕತೆ ಮೇಲೆ ಕೂಡಾ ಮಳೆ ಪರಿಣಾಮ ಬೀರಬಹುದು. ಕಡಿಮೆ ಮಳೆಯಾದರೆ ರೈತರಿಗೆ ಸವಾಲು ಹೆಚ್ಚಾಗುವ ಸಾಧ್ಯತೆ ಇದೆ.
ಪೂರ್ವ ಮಳೆಯ ರಿಲೀಫ್ : ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆಯು ಕೆಲವು ಭಾಗಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದ್ದು, ತೀವ್ರ ಬಿಸಿಲಿನಿಂದ ಸ್ವಲ್ಪ ಮಟ್ಟಿನ ಪರಿಹಾರ ಸಿಗಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
IMD forecasts below-normal monsoon rainfall (92% of LPA) for 2026. While monsoon may arrive early in Kerala, El Niño conditions could affect rainfall distribution, impacting agriculture and water resources.

