ಬಹು ಪ್ರಯೋಜನಕಾರಿ ನುಗ್ಗೆ | ನುಗ್ಗೆಯ ಆಯುರ್ವೇದ ಗುಣಲಕ್ಷಣಗಳು ಏನು..? |

August 16, 2024
11:27 AM

ನುಗ್ಗೆಯು ಕಾಯಿ(Drumstick) ಹಾಗೂ ಸೊಪ್ಪು(Leavs) ಎರಡೂ ಬಗೆಯ ತರಕಾರಿಯಾಗಿದೆ(Vegetable). ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕಂಡುಬರುವ ಈ ಸಸ್ಯವು(Plant) ತುಂಬಾ ಔಷಧೀಯವಾಗಿದೆ(Medicinal). ಇಂದು ನಾವು ಈ ತರಕಾರಿಯ ಪ್ರಯೋಜನಗಳು ಮತ್ತು ಗುಣಲಕ್ಷಣಗಳನ್ನು ನಿಮಗೆ ಹೇಳಲಿದ್ದೇವೆ. ಶಾಸ್ತ್ರೀಯ ಹೆಸರು: ಮೊರಿಂಗಾ ಒಲಿಫೆರಾ.  ಹವಾಮಾನ – ಈ ಸಸ್ಯಕ್ಕೆ ಸಮಶೀತೋಷ್ಣ ಮತ್ತು ಆರ್ದ್ರ ವಾತಾವರಣದ ಅಗತ್ಯವಿದೆ. ಎತ್ತರ – ಸರಾಸರಿ ಎತ್ತರ 10ಮೀ. ಇದೆ.

ಪ್ರಮುಖ ಉಪಯೋಗಗಳು : ನುಗ್ಗೆಕಾಯಿಗಳನ್ನು ಪಲ್ಯ, ಹುಳಿ, ಗೊಜ್ಜು, ಸಾರು, ಕರಿ ಅಥವಾ ಒಣ ತರಕಾರಿಗಳಲ್ಲಿ ಬೇಯಿಸಿ ತಿನ್ನಲಾಗುತ್ತದೆ. ಈ ಸಸ್ಯದ ಎಲೆಗಳು, ಹೂವುಗಳು, ಹಣ್ಣುಗಳು, ತೊಗಟೆ ಮತ್ತು ಬೇರುಗಳು ಎಲ್ಲವನ್ನೂ ಬಳಸಲಾಗುತ್ತದೆ. ಆಯುರ್ವೇದ ಔಷಧಗಳು ಮತ್ತು ನೈಸರ್ಗಿಕ ಪರಿಹಾರಗಳಲ್ಲಿ ಬಳಕೆ ವ್ಯಾಪಕವಾಗಿದೆ. ಬೀಜಗಳಿಂದ ಎಣ್ಣೆಯನ್ನು ತೆಗೆಯಲಾಗುತ್ತದೆ ಮತ್ತು ನಾವು ಎಲೆಗಳಿಂದ ತರಕಾರಿಗಳನ್ನು ತಯಾರಿಸಬಹುದು. ನುಗ್ಗೆ ಮೂಳೆಗಳಿಗೆ ವರದಾನವಾಗಿದೆ. ಇದರಲ್ಲಿ ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಹೇರಳವಾಗಿ ದೊರೆಯುತ್ತದೆ. ಅಲ್ಲದೆ ಕಾರ್ಬೋಹೈಡ್ರೇಟ್, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್, ವಿಟಮಿನ್ ಎ, ಸಿ ಮತ್ತು ಬಿ ಮುಂತಾದ ಅನೇಕ ಜೀವಸತ್ವಗಳು ನುಗ್ಗೆಯಲ್ಲಿ ಕಂಡುಬರುತ್ತವೆ. ಎಳೆಯ ಎಲೆ ತರಕಾರಿಯನ್ನು ಮಹಾರಾಷ್ಟ್ರದಲ್ಲಿ ಮೃಗ ನಕ್ಷತ್ರದಲ್ಲಿ ವಿಶೇಷವಾಗಿ ಬಳಸಲಾಗುತ್ತದೆ. ಮಳೆಗಾಲದ ಆರಂಭದಲ್ಲಿ ದೇಹದಲ್ಲಿ ವಾತದೋಷ ಹೆಚ್ಚಾಗುವುದರಿಂದ ಆ ಸಮಯದಲ್ಲಿ ಈ ತರಕಾರಿಯನ್ನು ಸೇವಿಸಲಾಗುತ್ತದೆ.

ನುಗ್ಗೆಯ ಆಯುರ್ವೇದ ಗುಣಲಕ್ಷಣಗಳು:

  1. ಮೂಳೆಗಳನ್ನು ದೃಢವಾಗಿ ಮತ್ತು ಆರೋಗ್ಯಕರವಾಗಿಡಲು, ನುಗ್ಗೆಯನ್ನು ನಿಯಮಿತವಾಗಿ ಸೇವಿಸಬೇಕು.
  2. ನೀವು ಹೆಚ್ಚು ತೂಕವನ್ನು ಹೊಂದಿದ್ದರೆ ನುಗ್ಗೆ ಕಾಯಿಯ ಸೂಪ್ ಮಾಡಿ ಕುಡಿಯಿರಿ. ನಿಯಮಿತವಾಗಿ ಸೇವಿಸಿದರೆ ಕೊಬ್ಬಿನಂಶ ಕಡಿಮೆಯಾಗುತ್ತದೆ. ಇದರೊಂದಿಗೆ ನಿಯಮಿತ ವ್ಯಾಯಾಮವನ್ನೂ ಮಾಡಬೇಕು.
  3. ನೀವು ದೈಹಿಕವಾಗಿ ದುರ್ಬಲರಾಗಿದ್ದರೆ, ನಿಮ್ಮ ನಿಯಮಿತ ಆಹಾರದಲ್ಲಿ ನುಗ್ಗೆಕಾಯಿಯನ್ನು ತೆಗೆದುಕೊಳ್ಳಿ.
  4. ಸಂಧಿವಾತ, ನೇತ್ರ ರೋಗಗಳು, ಸ್ನಾಯು ದೌರ್ಬಲ್ಯ ಕೂಡ ನುಗ್ಗೆಯಿಂದ ಗುಣವಾಗುತ್ತದೆ.
  5. ನುಗ್ಗೆಯು ಉಷ್ಣವಾಗಿರುವುದರಿಂದ ವಾತ ಮತ್ತು ಕಫ ದೋಷಗಳಿಗೆ ಒಳ್ಳೆಯದು.
  6. ನುಗ್ಗೆಯು ಉತ್ತಮ ಜೀರ್ಣಕಾರಿಯಾಗಿದೆ. ಹೊಟ್ಟೆಯಲ್ಲಿ ಜೀರ್ಣಕ್ರಿಯೆಯು ರಕ್ತದ ಹರಿವನ್ನು ಸುಧಾರಿಸುತ್ತದೆ.
  7. ನುಗ್ಗೆಯ ಸಿಪ್ಪೆಯ ಕುಷಾಯದಿಂದ ದೇಹದ ಮೇಲೆ ಅಥವಾ ದೇಹದ ಒಳಭಾಗದಲ್ಲಿ ಊತ ಕಡಿಮೆಯಾಗುತ್ತದೆ.
  8. ತಲೆನೋವು ಮತ್ತು ತಲೆಭಾರದಲ್ಲಿ ನುಗ್ಗೆ ಬಹಳ ಪರಿಣಾಮಕಾರಿ.
  9. ನುಗ್ಗೆಯು ಜಂತುಹುಳು ನಿವಾರಕವಾಗಿರುವುದರಿಂದ ಹೊಟ್ಟೆಯಲ್ಲಿರುವ ಹುಳುಗಳು ಮಲದ ಮೂಲಕ ಹೊರಬರುತ್ತವೆ.
  10. ರಕ್ತದ ಕೊರತೆ, ಮೂತ್ರಪಿಂಡದ ಕಾಯಿಲೆ, ಅಧಿಕ ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳಲ್ಲಿ ನುಗ್ಗೆ ಪರಿಣಾಮಕಾರಿಯಾಗಿದೆ. ನುಗ್ಗೆ ಎಲೆಯ ರಸ ಅಥವಾ ಪುಡಿಯನ್ನು ಬೆಚ್ಚಗಿನ ನೀರಿನಿಂದ ಪ್ರತಿದಿನ ಸೇವಿಸಿದರೆ ಅದರ ಆರೋಗ್ಯ ಪ್ರಯೋಜನಗಳು ಗರಿಷ್ಠವಾಗಿರುತ್ತವೆ.

ಸೌಂದರ್ಯವನ್ನು ವೃದ್ಧಿಸಲು ನುಗ್ಗೆಯನ್ನು ಬಳಸಲಾಗುತ್ತದೆ: ಹಲವಾರು ಜೀವಸತ್ವಗಳ ಕೊರತೆ ಯನ್ನು ನುಗ್ಗೆಯು ತುಂಬುತ್ತದೆ. ನಿಮ್ಮ ಆಹಾರದಂತೆ ನಿಮ್ಮ ಮನಸ್ಸು ಮತ್ತು ಶರೀರ ಎಂಬ ಹೇಳಿಕೆಗೆ ಅನುಗುಣವಾಗಿ ನೀವು ನುಗ್ಗೆಯನ್ನು ನಿಯಮಿತವಾಗಿ ಸೇವಿಸಿದರೆ, ಅದು ಖಂಡಿತವಾಗಿಯೂ ನಿಮ್ಮ ಸೌಂದರ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಚರ್ಮದ ಕಾಯಿಲೆಗಳು, ಆಯಾಸ ಮತ್ತು ಕಣ್ಣಿನ ಕಾಯಿಲೆಗಳಿಗೆ ನಿಯಮಿತವಾಗಿ ನುಗ್ಗೆಯನ್ನು ಸೇವಿಸಿ. ಖಂಡಿತವಾಗಿಯೂ ಪ್ರಯೋಜನಗಳಿರುತ್ತವೆ ಮತ್ತು ದೇಹವು ಕಾಂತಿಯುತವಾಗುತ್ತದೆ.

ನುಗ್ಗೆಯನ್ನು ಹೇಗೆ ಬಳಸುವುದು? ನುಗ್ಗೆಯ ಎಲೆಗಳನ್ನು ಸೊಪ್ಪು ತರಕಾರಿಯಂತೆ ಹುಳಿ, ಸಾರು, ಪಲ್ಯ, ಗೊಜ್ಜು ಇತ್ಯಾದಿ ಮತ್ತು ಕಾಯಿಗಳನ್ನು ಪಲ್ಯ ಹುಳಿ ಸಾರು ಗೊಜ್ಜಿನಲ್ಲಿ ಬೆರೆಸಿ ಕುದಿಸಿ ತಿನ್ನುತ್ತಾರೆ. ಆದರೆ ಇದೆಲ್ಲ ಪ್ರಮುಖವಾಗಿ ಆಹಾರಕ್ಕೆ ರುಚಿ ಹಾಗೂ ಪರಿಮಳವನ್ನು ನೀಡುವ ಕೃತಿಯಾಗಿದೆ. ರುಚಿಯಿದ್ದಲ್ಲಿ ಆರೋಗ್ಯವಿಲ್ಲ. ನುಗ್ಗೆಯ ಸಂಪೂರ್ಣ ಲಾಭವನ್ನು ಪಡೆಯಬೇಕಿದ್ದರೆ ನುಗ್ಗೆಸೊಪ್ಪನ್ನು ಒಣಗಿಸಿ ಪುಡಿ ಮಾಡಿ ಗಾಜಿನ ಅಥವಾ ಪಿಂಗಾಣಿ ಶೇಖರಿಸಿ ಬರಣಿಯಲ್ಲಿ ಇಡಬೇಕು. ಈ ಪುಡಿಯನ್ನು ವಾರದಲ್ಲಿ ಐದರಿಂದ ಆರು ದಿನ ಬೆಳಿಗ್ಗೆ ಬೆಚ್ಚಗಿನ ನೀರಿನಲ್ಲಿ ಬೆರೆಸಿ, ಖಾಲಿ ಹೊಟ್ಟೆ ಸೇವಿಸಬೇಕು. ಅಥವಾ ಎಲೆಗಳನ್ನು ಅರೆದು ಸ್ಮೂದಿಯನ್ನು ತಯಾರಿಸಿ ಸೇವಿಸಬಹುದು. ಮೇಲಿನ ಎರಡು ಪರ್ಯಾಯಗಳಷ್ಟು ಉತ್ತಮವಲ್ಲದಿದ್ದರೂ ನುಗ್ಗೆ ಸೊಪ್ಪನ್ನು ಹಸಿ ಚಟ್ನಿ ಗಳಲ್ಲಿ ಬೆರೆಸಿ ಸೇವಿಸಬಹುದು. ನುಗ್ಗೆಕಾಯಿಗಳನ್ನು ಸಾರು, ಹುಳಿ, ಗೊಜ್ಜು ಪಲ್ಯಗಳಲ್ಲಿ ಬೆರೆಸದೆ ಪ್ರತ್ಯೇಕವಾಗಿ ಉಗಿಯಲ್ಲಿ ಬೇಯಿಸಿ ಅದರಲ್ಲಿ ಉಪ್ಪು ಮಸಾಲೆಗಳನ್ನು ಬೆರೆಸದೇ ಅದರ ತಿರುಳು ಮತ್ತು ಬೀಜಗಳನ್ನು ಸೇವಿಸಬೇಕು. ಒಣಗಿಸಿದ ನುಗ್ಗೆ ಬೀಜಗಳು ಕುಡಿಯುವ ನೀರನ್ನು ಶುದ್ಧೀಕರಿಸಲು ಉಪಯುಕ್ತವಾಗಿವೆ.

ಬರಹ :
 ಡಾ. ಪ್ರ. ಅ. ಕುಲಕರ್ಣಿ
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ
August 26, 2026
5:00 PM
by: ಮಹೇಶ್ ಪುಚ್ಚಪ್ಪಾಡಿ
ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ
August 26, 2026
10:44 AM
by: ದ ರೂರಲ್ ಮಿರರ್.ಕಾಂ
ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ
August 26, 2026
6:52 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ
August 25, 2026
10:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror