Advertisement
Opinion

#NagaraPamchami | ಬಂದಿದೆ ನಾಗರ ಪಂಚಮಿ…. ನಾಗರ ಹಾವುಗಳು ಕಾಣಿಸುತ್ತಿಲ್ಲ….!!

Share

ನಮ್ಮ ಮಲೆನಾಡಿನಲ್ಲಿ ಒಂದು ಇಪ್ಪತ್ತು ವರ್ಷಗಳ ಹಿಂದೆ ಯಥೇಚ್ಛವಾಗಿ ಇದ್ದ “ನಾಗರ ಹಾವು ” ಸರ್ಪ ಸಂಕುಲ ಇವತ್ತು ಅಪರೂಪದಲ್ಲಿ ಅಪರೂಪವಾಗಿರುವುದು ಕಳವಳಕಾರಿಯಾಗಿದೆ.

ಈಗ ಹಿಂದೆಂದಿಗಿಂತ ನಾಗಾರಾಧನೆ ಹೆಚ್ಚಾಗಿದೆ‌ . ಯಾರೇ ಜಾತಕ ತಗೊಂಡು ಜ್ಯೋತಿಷಿಗಳ ಬಳಿ ಹೋದರೂ ” ಜಾತಕ ನಿಗೆ” ನಾಗದೋಷ ಇದೆ ಎಂದು ಹೇಳಿ “ಸರ್ಪ ಸಂಸ್ಕಾರ” ದ ಚೀಟಿ ಬರೆದು ಕೊಡುತ್ತಾರೆ.‌ಆದ ಕಾರಣ ಚಂದ ಚಂದದ ನಾಗ ಶಿಲ್ಪಗಳು , ಅದ್ದೂರಿ ನಾಗರ ಕಟ್ಟೆಯಲ್ಲಿ ಪ್ರತಿಷ್ಠಾಪಿತವಾಗಿ ವಿರಾಜಮಾನವಾಗಿ ನಾಗರ ಪಂಚಮಿಯಲ್ಲದೇ ಬೇರೆ ವಿಶೇಷ ದಿನಗಳಲ್ಲೂ ಪೂಜೆ ಪುನಸ್ಕಾರ ಪಡೆಯುತ್ತಿವೆ.

ಆದರೆ ನಾಗರ ಈ ವೈಭವತೆ ಪಡೆಯುವ ಹೊತ್ತಿನಲ್ಲೇ ನಿಜ ನಾಗರಹಾವುಗಳು ಕಣ್ಣಿಗೆ ಕಾಣಿಸುತ್ತಿಲ್ಲ…!!.  ಈ ಕಪ್ಪೆ , ಆಮೆ , ಏಡಿ ಮುಂತಾದವುಗಳ ಜೊತೆಯಲ್ಲಿ ನಾಗರ ಹಾವು ಕೇರೆ ಹಾವೂ ಕಾಣದಂತಾಗಿರುವುದು ನಿಸರ್ಗದ ಕಳವಳಕಾರಿ ಬೆಳವಣಿಗೆಯಾಗಿದೆ. ಈ “ನಿಜ ನಾಗರ ಹಾವಿ”ನ ಸಂತತಿ ಕ್ಷೀಣಿಸುತ್ತಿರುವ ಬಗ್ಗೆ ಯಾರು ಏನೆನ್ನುತ್ತಾರೋ ಗೊತ್ತಿಲ್ಲ…!?

ಈ ನಾಗ ಸಂತತಿ ಕ್ಷೀಣಿಸಲು ಇತ್ತೀಚೆಗೆ ಮಲೆನಾಡಿನಲ್ಲಿ ಹೆಚ್ಚಿರುವ ಜೆಸಿಬಿ ಕೆಲಸಗಳೂ ಬಹು ಮುಖ್ಯ ಕಾರಣ ಎನಿಸುತ್ತದೆ. ಜೆಸಿಬಿ ಕೆಲಸಗಳು ಮಣ್ಣಿನ ಅಡಿಯಲ್ಲಿನ‌ ನಾಗರ ಹಾವಿನ ಆವಾಸ ಸ್ಥಾನವನ್ನು ನಾಶ ಮಾಡುತ್ತಿರುವುದು ನಾಗರ ಹಾವು ಗಳಿಗೆ ನೆಲೆಯಿಲ್ಲದಂತಾಗಿದೆ. ಪ್ರಾಕೃತಿಕವಾಗಿಯೂ ಆಹಾರ ಸರಪಳಿಯಲ್ಲಿನ ತಪ್ಪಿರುವ ಕೊಂಡಿಯೂ ಕಾರಣವಾಗುತ್ತದೆ.

ಆಗುಂಬೆಯ ಕಾಳಿಂಗ ಸರ್ಪ ಉದ್ಯಾನ ಕೇಂದ್ರ ಮಾಡಿದ ಮೇಲೆ ಮಲೆನಾಡು ಕರಾವಳಿಯ ನೂರು ಕಿಮೀ ಫಸಲೆಯಲ್ಲಿ‌
(ಸುತ್ತ ಮುತ್ತಲಿನ ಪರಿಸರದಲ್ಲಿ) ಎಲ್ಲೇ ಕಾಳಿಂಗ ಸರ್ಪ ಕಾಣಿಸಿಕೊಂಡರೂ ಅದನ್ನು ಆಗುಂಬೆಗೆ ತೆಗೆದುಕೊಂಡು ಹೋಗಿ ಬಿಡುತ್ತಾರೆ.ಆಗುಂಬೆ – ಮಲೆನಾಡು ಪ್ರದೇಶದಲ್ಲಿ ವಿಪರೀತ ಹೆಚ್ಚಿದ ಕಾಳಿಂಗ ಸರ್ಪಗಳು.

ಪರಿಸರದಲ್ಲಿ ಯಾವತ್ತೂ ಏಕಜಾತಿಯ ಪ್ರಾಣಿ ಗಳೂ, ಕೃಷಿ ಹೆಚ್ಚಾಗುವುದು ನಿಸರ್ಗ ಸಹಜತೆಗೆ ವಿರೋಧವಾಗಿರುತ್ತದೆ.
ನಿಸರ್ಗದಲ್ಲಿ “ವೈವಿಧ್ಯತೆ ” ಇರಲೇ ಬೇಕು.ಆದರೆ ಈಗ ನಮ್ಮ ಮಲೆನಾಡಿನಲ್ಲಿ ವೈವಿಧ್ಯತೆಯೇ ಇಲ್ಲವಾಗಿದೆ. ಈ ಏಕಜಾತಿ ಸರಣಿಯಲ್ಲಿ ಅಡಿಕೆ ಕೃಷಿ, ಮಂಗನ ಸಂತತಿಯ ಜೊತೆಯಲ್ಲಿ ಕಾಳಿಂಗ ಸರ್ಪಗಳ ಹೆಚ್ಚಳ ಕೂಡ ಸೇರಿದೆ.

ಕಾಳಿಂಗ ಸರ್ಪಗಳು ತಾವಿದ್ದ ಸ್ಥಳದಿಂದ ಎಂಬತ್ತು ಕಿಲೋಮೀಟರ್ ವಿಸ್ತೀರ್ಣದಲ್ಲಿ ಸಂಚರಿಸುತ್ತವೆ. ಅವಕ್ಕೆ ಅವುಗಳ ಆಹಾರ ವಾದ ನಾಗರಹಾವುಗಳೂ , ಕೇರೆ ಹಾವುಗಳು ಎಲ್ಲೇ ಅಡಗಿದ್ದರೂ ತಿಳಿಯುತ್ತದೆ. ಕಾಳಿಂಗ ಸರ್ಪ ಗಳು ನಾಗರ ಹಾವುಗಳನ್ನು ಹುಡುಕಿ ಹುಡುಕಿ ತಿನ್ನುತ್ತಿವೆ….

ನಾನು ಈಗ್ಗೆ ಕೆಲವು ವರ್ಷಗಳಿಂದ ನಾಗರಹಾವು ಗಳನ್ನೇ ನೋಡಿಲ್ಲ..!!. “ನಾಗರ ಹಾವುಗಳು” ಇಲ್ಲವೇ ಇಲ್ಲ ಎನ್ನುವ ಮಟ್ಟಿಗೆ ಕಾಣೆಯಾಗಿರುವುದು ಅತ್ಯಂತ ನೋವಿನ ಸಂಗತಿ. ಪಾಪದ ಜೀವಿಗಳಾದ ನಾಗರ ಹಾವು ಗಳು ಇತ್ತೀಚಿನ ವರ್ಷಗಳಲ್ಲಿ ಮನುಷ್ಯ ನಿಂದ ಪೂಜೆ ಪುನಸ್ಕಾರವನ್ನು ಪಡೆಯುವ ಕಾಲದಲ್ಲಿ ನಿಜ ನಾಗರ ಹಾವಿನ ಸಂತತಿ ನಾಶವಾಗುತ್ತಿರುವುದು ಚಿಂತನೆ ಮಾಡುವ ಸಂಗತಿಯಾಗಿದೆ.

ಮಲೆನಾಡು ಕರಾವಳಿಯ ಸುತ್ತ ಮುತ್ತ ಎಲ್ಲೇ ಕಾಳಿಂಗ ಸರ್ಪ ಸಿಕ್ಕರೂ ಆ ಕಾಳಿಂಗ ಸರ್ಪವನ್ನು ” ಆಗುಂಬೆ” ಗೆ ತಂದು ಬಿಡುವುದನ್ನ ನಿಲ್ಲಿಸಬೇಕು. ‌ಅರಣ್ಯ ಇಲಾಖೆ ಮತ್ತು ಪರಿಸರ ಪರರು ಈ ಬಗ್ಗೆ ಚಿಂತನೆ ನೆಡಸಿ ಕಾರ್ಯೋನ್ಮುಖವಾಗಲಿ…

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ತೆಂಗು–ಅಡಿಕೆ ನಡುವೆ ಏಲಕ್ಕಿ, ಮೆಣಸು, ಅರಿಶಿಣ | ತುಮಕೂರಿನಲ್ಲೂ ಬೆಳೆಗಾರರು ಪರ್ಯಾಯ ಆದಾಯದ ಕಡೆಗೆ ಹೆಜ್ಜೆ

ತೆಂಗು–ಅಡಿಕೆ ತೋಟಗಳ ನಡುವೆ ಅರಿಶಿಣ, ಏಲಕ್ಕಿ, ಮೆಣಸು ಬೆಳೆದು ತುಮಕೂರು ಜಿಲ್ಲೆಯ ರೈತರು…

14 hours ago

ಮಳೆ ಕೊರತೆ ನೀಗಿಸಲು ಕರ್ನಾಟಕದಲ್ಲಿ ಮೋಡ ಬಿತ್ತನೆ

ಮುಂಗಾರು ಮಳೆಯ ಕೊರತೆ ಎದುರಿಸುತ್ತಿರುವ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಹೆಚ್ಚಿಸಲು ಸರ್ಕಾರ…

15 hours ago

ಕಸ್ತೂರಿ ರಂಗನ್ ವರದಿ ಜಾರಿಗೆ ಅವಕಾಶವಿಲ್ಲ

ಕಸ್ತೂರಿ ರಂಗನ್ ವರದಿ ಜಾರಿಗೆ ಕರ್ನಾಟಕ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ…

15 hours ago

ಪ್ರತೀ ವರ್ಷ “ಕ್ಲೈಮೇಟ್ ರಿಪೋರ್ಟ್ ಕಾರ್ಡ್” ಏಕೆ ಬೇಕು..? ನಮ್ಮ ನಗರ-ಹಳ್ಳಿಗಳು ಹವಾಮಾನ ಬದಲಾವಣೆಗೆ ಎಷ್ಟು ಸಿದ್ಧ?

ಭಾರತದ 126 ಪ್ರಮುಖ ನಗರಗಳ ಹವಾಮಾನ ಸಿದ್ಧತೆಯನ್ನು ಅಳೆಯಲಾಗಿದ್ದರೂ, 2021ರ ಮೌಲ್ಯಮಾಪನದಲ್ಲಿ ರಾಷ್ಟ್ರೀಯ…

1 day ago

ಭಾರತದ ಕಾಫಿಗೆ ಜಾಗತಿಕ ಬೇಡಿಕೆ ಹೆಚ್ಚಳ : ‘ಇಂಡಿ ಕಾಫಿ’ಗೆ ಹೊಸ ಬ್ರ್ಯಾಂಡ್‌ ಒತ್ತು

ಭಾರತದ ಕಾಫಿ ರಫ್ತು ಗಳಿಕೆ 2021-22ರ ಸುಮಾರು 1 ಶತಕೋಟಿ ಡಾಲರ್‌ನಿಂದ 2025-26ರಲ್ಲಿ…

1 day ago

ಕಸವೆಂದು ಎಸೆಯುವ ಮೀನಿನ ಮುಳ್ಳು–ಹುರುಪೆಯಲ್ಲಿ ‘ಸಂಜೀವಿನಿ’!

ಮೀನಿನ ಮುಳ್ಳು ಮತ್ತು ಹುರುಪೆಯನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಹಲ್ಲುಗಳ ಪುನರ್ ನಿರ್ಮಾಣ ಹಾಗೂ…

1 day ago