ಮಂಗಳೂರು | ರಾಷ್ಟ್ರೀಯ ಚೆಸ್ ಪಂದ್ಯಾಟ ಇಂದು ಸಮಾರೋಪ

May 6, 2025
7:02 AM

ಮಂಗಳೂರು ಟೌನ್ ಹಾಲ್ ನಲ್ಲಿ ಶನಿವಾರದಿಂದ ನಡೆಯುತ್ತಿದ್ದ ರಾಷ್ಟ್ರೀಯ ಓಪನ್ ಕ್ಲಾಸಿಕಲ್ ರೇಟೆಡ್ ಚೆಸ್ ಪಂದ್ಯಾಟವು  ಇಂದು ಸಮಾರೋಪಗೊಳ್ಳಲಿದೆ.

Advertisement
Advertisement

ಪಂದ್ಯಾಟದಲ್ಲಿ 285 ಚೆಸ್‌ ಆಟಗಾರರು ಇದ್ದಾರೆ. ಕರ್ನಾಟಕ, ಕೇರಳ, ಗೋವಾ,ತಮಿಳುನಾಡು, ಒರಿಸ್ಸಾ, ಆಂದ್ರಪ್ರದೇಶ, ಮೇಘಾಲಯ, ಮಹಾರಾಷ್ಟ್ರ, ದೆಹಲಿ ಸೇರಿದಂತೆ ದೇಶದ ವಿವಿದೆಡೆಯಿಂದ ಆಟಗಾರರು ಆಗಮಿಸಿದ್ದಾರೆ.  8 ಸುತ್ತುಗಳಲ್ಲಿ ನಡೆಯುವ ಚೆಸ್‌ ಪ೦ದ್ಯಾಟದಲ್ಲಿ ಈಗಾಗಲೇ 6 ಸುತ್ತು ಪೂರ್ತಿಗೊಂಡಿದೆ. ಇನ್ನು ಎರಡು ಸುತ್ತುಗಳು ಮಂಗಳವಾರ ನಡೆಯಲಿದೆ. ಆ ಬಳಿಕ ಸಮಾರೋಪ ಸಮಾರಂಭ ನಡೆಯುತ್ತದೆ.

ರಚನಾತ್ಮಕ ಸುದ್ದಿಗಳನ್ನು ಪಡೆಯಲು  “ದ ರೂರಲ್‌ ಮಿರರ್.ಕಾಂ” ಓದಿರಿ. ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ..

ಆರು ಸುತ್ತುಗಳ ನಂತರ ದಕ್ಷಿಣ ಕನ್ನಡದ 3 ಆಟಗಾರ್ತಿಯರು 5.5 ಅಂಕಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.  ದಕ್ಷಿಣ ಕನ್ನಡದ ಮೂವರು ಉದಯೋನ್ಮುಖ ಚೆಸ್ ಆಟಗಾರರು ಆರು ತೀವ್ರ ಸುತ್ತುಗಳ ನಂತರ ‌ ಮುನ್ನಡೆ ಸಾಧಿಸಿದ್ದಾರೆ.  ಆರುಷಿ ಎಸ್ ಎಚ್ ಡಿಸಿಲ್ವಾ, ಲಕ್ಷಿತ್ ಬಿ ಸಾಲಿಯಾನ್ ಮತ್ತು ರುದ್ರ ರಾಜೀವ್ – ಅವರು 6 ರಲ್ಲಿ 5.5 ಅಂಕಗಳನ್ನು ಗಳಿಸಿದರು.

Advertisement

5 ನೇ ಸುತ್ತಿನಲ್ಲಿ, ಆರುಷಿ ಎಸ್ ಎಚ್ ಡಿಸಿಲ್ವಾ ಪಂದ್ಯಾವಳಿಯ ಅಗ್ರ ಶ್ರೇಯಾಂಕಿತ ತಮಿಳುನಾಡಿನ ಶಾಮ್ ಆರ್ ಅವರನ್ನು  ಡ್ರಾದಲ್ಲಿ ಮುಗಿಸಿದರು.  ನಂತರ ಕೇರಳದ ಸ್ಯಾಮ್ಯುಯೆಲ್ ಅಜಿತ್ ವಿರುದ್ಧ 6 ನೇ ಸುತ್ತಿನಲ್ಲಿ  ಜಯ ಸಾಧಿಸಿದರು.

ಲಕ್ಷಿತ್ ಬಿ ಸಾಲಿಯಾನ್ ಅವರು ರಕ್ಷಣಾ ಖಾತೆಗಳ ಕ್ರೀಡಾ ನಿಯಂತ್ರಣ ಮಂಡಳಿಯ ಪ್ರದೀಪ್ ತಿವಾರಿ ಅವರೊಂದಿಗೆ 5 ನೇ ಸುತ್ತಿನಲ್ಲಿ ಡ್ರಾ ಸಾಧಿಸಿ  6 ನೇ ಸುತ್ತಿನಲ್ಲಿ, ದಕ್ಷಿಣ ಕನ್ನಡದ ಇನ್ನೊಬ್ಬ ಯುವ ಆಟಗಾರ ಆರುಷ್ ಭಟ್ ವಿರುದ್ಧ ಗೆಲುವು ಸಾಧಿಸುವ ಮೂಲಕ ತಮ್ಮ ಅಂಕಗಳನ್ನು 5.5 ಕ್ಕೆ ಏರಿಸಿಕೊಂಡರು.

ಮತ್ತೊಬ್ಬ ಆಟಗಾರ್ತಿ ರುದ್ರ ರಾಜೀವ್, 5 ನೇ ಸುತ್ತಿನಲ್ಲಿ ಕೇರಳದ ನೀರದ್ ಪಿ ವಿರುದ್ಧ ಅವರು ಜಯಗಳಿಸಿದರು ಮತ್ತು 6 ನೇ ಸುತ್ತಿನಲ್ಲಿ ತಮಿಳುನಾಡಿನ ರಕ್ಷಿತ್ ಎಂ ಅವರನ್ನು ಸೋಲಿಸುವ ಮೂಲಕ ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದರು.

ರಮೇಶ್‌ ಕೋಟೆ
ಪಂದ್ಯಾಟಕ್ಕಾಗಿ ಕಳೆದ ಕೆಲವು ದಿನಗಳಿಂದ ತಂಡವಾಗಿ ದಕ್ಷಿಣ ಕನ್ನಡ ಜಿಲ್ಲಾ ಚೆಸ್‌ ಎಸೋಸಿಯೇಶನ್‌ ಕೆಲಸ ಮಾಡಿದೆ. ದೇಶದ ವಿವಿದೆಡೆಯ ಸ್ಫರ್ಧಾಳುಗಳು ಆಗಮಿಸಿ ಆಟವಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಚೆಸ್‌ ಪ್ರತಿಭೆಗಳು ಮುಂಚೂಣಿಯಲ್ಲಿರುವುದು ಖುಷಿ ನೀಡಿದೆ ಎಂದು ದಕ್ಷಿಣ ದನ್ನಡ ಜಿಲ್ಲಾ ಚೆಸ್‌ ಎಸೋಸಿಯೇಶನ್‌ ಅಧ್ಯಕ್ಷ ರಮೇಶ್‌ ಕೋಟೆ ಹೇಳಿದರು.

ಮಂಗಳವಾರ(ಇಂದು) ಎರಡು ಪಂದ್ಯಾಟ ನಡೆಯಲಿದೆ. ಆ ಬಳಿಕ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಸದ ಬ್ರಿಜೇಶ್‌ ಚೌಟ, ಕೆಎಸ್‌ಆರ್‌ಟಿಸಿ ಅಧಿಕಾರಿ ರಾಜೇಶ್‌ ಶೆಟ್ಟಿ ಭಾಗವಹಿಸುವರು.

ರಚನಾತ್ಮಕ ಸುದ್ದಿಗಳನ್ನು ಪಡೆಯಲು  “ದ ರೂರಲ್‌ ಮಿರರ್.ಕಾಂ” ಓದಿರಿ. ವ್ಯಾಟ್ಸಪ್‌ ಚಾನೆಲ್‌ ಫಾಲೋ ಮಾಡಲು ಇಲ್ಲಿ ಕ್ಲಿಕ್‌ ಮಾಡಿರಿ..

Advertisement

The National Open Classical Rated Chess Tournament, which has been taking place at the Mangalore Town Hall since Saturday, is set to conclude today.

Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬೆಳೆ ವಿಮೆಗೆ ನೋಂದಾಯಿಸಲು ರೈತರಿಗೆ ಕೃಷಿ ಇಲಾಖೆ ಸೂಚನೆ | ಭತ್ತ ಬೆಳೆಯುವವರಿಗೆ ವಿಶೇಷ ಗಮನ |
June 23, 2025
11:22 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 23-06-2025 | ಜೂ.29 ರಿಂದ ಬೆಳೆಗಳಿಗೆ ಔಷಧಿ ಸಿಂಪಡಣೆಗೆ ಅವಕಾಶ ಸಿಗಬಹುದೇ..? | ಜೂನ್ ಕೊನೆಯಲ್ಲಿ ಮುಂಗಾರು ದುರ್ಬಲಗೊಳ್ಳಬಹುದಾ..?
June 23, 2025
1:26 PM
by: ಸಾಯಿಶೇಖರ್ ಕರಿಕಳ
ದೇಸೀ ಗೋವು ಸಾಕಾಣಿಕೆಗೆ ಹಳ್ಳಿಯಷ್ಟೇ ಅಲ್ಲ, ನಗರದಲ್ಲೂ ಸಾಧ್ಯ
June 23, 2025
1:18 PM
by: ದ ರೂರಲ್ ಮಿರರ್.ಕಾಂ
ದುಡಿಯುವ ವರ್ಗದಲ್ಲಿ ಮಹಿಳೆಯರ ಸಹಭಾಗಿತ್ವಕ್ಕೆ ಆದ್ಯತೆ | ಮಹಿಳಾ ನೇತೃತ್ವದ ಅಭಿವೃದ್ಧಿಗೆ ಮುನ್ನುಡಿ
June 23, 2025
12:03 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group