ರಾಷ್ಟ್ರೀಯ ಓಪನ್-ರಾಪಿಡ್ ರೇಟೆಡ್ ಚೆಸ್ ಪಂದ್ಯಾವಳಿ ಅಕ್ಟೋಬರ್ 2 ಮತ್ತು 3ರಂದು ಮಂಗಳೂರು ಟೌನ್ ಹಾಲ್ ನಲ್ಲಿ 9 ರೌಂಡ್ ಗಳಲ್ಲಿ ನಡೆಯಲಿದೆ ಎಂದು ದಕ್ಷಿಣ ಕನ್ನಡ ಚೆಸ್ ಎಸೋಸಿಯೇಶನ್ (DKCA) ಅಧ್ಯಕ್ಷ ರಮೇಶ್ ಕೋಟೆ ತಿಳಿಸಿದ್ದಾರೆ.…..ಮುಂದೆ ಓದಿ….
ಚೆಸ್ ದಿನೇ ದಿನೇ ಬಹಳ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದ್ದು, ದ ಕ ಜಿಲ್ಲೆಯಲ್ಲೂ ಹಲವಾರು ಮಂದಿ ಕ್ರೀಡಾಪಟುಗಳು ಇದ್ದಾರೆ. ಈಗಾಗಲೇ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ದ ಕ ಜಿಲ್ಲೆ ಹೊಂದಿದೆ.ಚೆಸ್ ಆಟದ ಬೆಳವಣಿಗೆಯ ಪೂರಕವಾಗಿ ಎಸೋಸಿಯೇಶನ್ ಈ ಪಂದ್ಯಾಟವನ್ನು ಹಮ್ಮಿಕೊಂಡಿದ್ದು,ಇದರಲ್ಲಿ,ಬೇರೆ ಬೇರೆ ರಾಜ್ಯಗಳ ಆಟಗಾರರು ಅಲ್ಲದೇ, ಅಂತಾರಾಷ್ಟ್ರೀಯ ಮಟ್ಟದ ಆಟಗಾರರ ಸಹಿತ ಸುಮಾರು 400 ಆಟಗಾರರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಕಾರ್ಯಕ್ರಮ ಉದ್ಘಾಟನೆಯನ್ನು ಅ 2 ರಂದು MRPL ನ ಆಡಳಿತ ಮಂಡಳಿ ನಿರ್ದೇಶಕ ಸುದರ್ಶನ್ ನೆರವೇರಿಸಲಿರುವರು.
ಮುಖ್ಯ ಅತಿಥಿಗಳಾಗಿ KSCA ಜನರಲ್ ಸೆಕ್ರೆಟರಿ ಅರವಿಂದ ಶಾಸ್ತ್ರಿ, ಶ್ರೀಶಾ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಗುರುರಾಜ್, ಭಾಗವಹಿಸಲಿರುವರು. ಅ.3 ರಂದು ಸಮಾರೋಪ ಸಮಾರಂಭ ನಡೆಯಲಿದೆ MRPL ನ GGM ಕೃಷ್ಣ ಹೆಗ್ಡೆ ಹಾಗೂ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಟೂರ್ನಿಯಲ್ಲಿ2.4 ಲಕ್ಷ ನಗದು ಬಹುಮಾನ,ಅಲ್ಲದೇ ಅಕ್ಟೋಬರ್ 3ರಂದು ಮಧ್ಯಾಹ್ನ ನಂತರ Blitz ಚೆಸ್ ಪಂದ್ಯಟವನ್ನೂ ಹಮ್ಮಿಕೊಳ್ಳಲಾಗಿದೆ. ಅಲ್ಲದೇ ವಿವಿಧ ವಿಭಾಗಗಳ ಟ್ರೋಫಿಜೊತೆಗೆ ಸುಮಾರು ನೂರೈವತ್ತಕ್ಕೂ ಮಿಕ್ಕಿ ಬಹುಮಾನಗಳು ಇರಲಿವೆ.ಮಂಗಳೂರಿನ MRPL ಸಂಸ್ಥೆ ಚೆಸ್ ಪಂದ್ಯಾವಳಿಗೆ ಹೆಚ್ಚಿನ ಮಹತ್ವ ನೀಡಿದ್ದು ಮಾತ್ರವಲ್ಲದೇ ದ.ಕ ಜಿಲ್ಲೆಯ ಸಂಪೂರ್ಣ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸಿದೆ ಎಂದು ರಮೇಶ್ ಕೋಟೆ ತಿಳಿಸಿದ್ದಾರೆ.
ಈ ಸಂದರ್ಭ ದಕ್ಷಿಣ ಕನ್ನಡ ಚೆಸ್ ಎಸೋಸಿಯೇಶನ್ (DKCA) ಗೌರವಾಧ್ಯಕ್ಷ ಸುನೀಲ್ ಆಚಾರ್ , ಉಪಾಧ್ಯಕ್ಷೆ ವಾಣಿ ಎಸ್ ಪಣಿಕ್ಕರ್ , ಖಜಾಂಜಿ ಪೂರ್ಣಿಮಾ ಎಸ್ ಆಳ್ವಾ , ಜೊತೆಕಾರ್ಯದರ್ಶಿ ಸತ್ಯಪ್ರಸಾದ್ ಕಮಿಲ, ಜೊತೆ ಖಜಾಂಜಿ ರಮ್ಯಾ ಎಸ್ ರೈ ಇದ್ದರು. …..ಮುಂದೆ ಓದಿ….
ರಮೇಶ್ ಕೋಟೆ ಅವರ ಜೊತೆಗಿನ ಮಾತುಕತೆ ಇಲ್ಲಿದೆ….
81 ವರ್ಷ ಎಂದರೆ ಸಹಸ್ರ ಚಂದ್ರ ದರ್ಶನದ ಸಂಧಿ ಕಾಲ. ಹವ್ಯಕ ಮಹಾಸಭೆ…
ಸೆಪ್ಟೆಂಬರ್ 25ರಂದು ಉತ್ತರ ಕನ್ನಡ ಭಾರಿ ಮಳೆಯ ಮುನ್ಸೂಚನೆ ಇದೆ. ಸೆಪ್ಟೆಂಬರ್ 26ರಿಂದ…
ಮೊಳಕೆಯೊಡೆದ ತೆಂಗಿನ ಕಾಯಿಯನ್ನು ಒಡೆದು ಅದರ ಒಳಗಿನ ಹೂವನ್ನು ತೆಗೆದು ಕತ್ತರಿಸಿ ಅದಕ್ಕೆ…
ಕೇರಳ ಹಾಗೂ ಕರ್ನಾಟಕದ ಕೆಲವು ಜಿಲ್ಲೆಗಳ ಕೆಲವು ಕಡೆ ನಾಳೆ(ಸೆ.24) ಉತ್ತಮ ಮಳೆಯಾಗಲಿದೆ.
ಜೈಸಲ್ಮೇರ್ನಲ್ಲಿ ವಿಶೇಷ ಪ್ಲಾಂಟೇಶನ್ ಡ್ರೈವ್ ಕಾರ್ಯಕ್ರಮದಲ್ಲಿ ಸುಮಾರು 5 ಲಕ್ಷ 20 ಸಾವಿರ…
ತೆಂಗು ಉತ್ಪಾದನೆಯಲ್ಲಿ ಭಾರತ 3ನೇ ಸ್ಥಾನದಲ್ಲಿದ್ದು, ದೇಶದಲ್ಲಿ ಮತ್ತಷ್ಟು ತೆಂಗು ಉತ್ಪಾದನೆಯಾಗಬೇಕಿದೆ.