ಭಾರತದಲ್ಲಿ ಕೇರಳದ ನಂತರ ನೈಸರ್ಗಿಕ ರಬ್ಬರ್ ಉತ್ಪಾದನೆಯ ಎರಡನೇ ಅತಿದೊಡ್ಡ ಉತ್ಪಾದಕ ರಾಜ್ಯ ತ್ರಿಪುರಾ. ಇದೀಗ ತ್ರಿಪುರಾದಿಂದ 14 ಟನ್ ರಬ್ಬರ್ ನೇಪಾಳಕ್ಕೆ ರವಾನಿಸಿದೆ ಎಂದು ರಬ್ಬರ್ ಬೋರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.
ರಬ್ಬರ್ ಬೋರ್ಡ್ ಪ್ರವರ್ತಿತ ಮಣಿಮಲಯಾರ್ ರಬ್ಬರ್ಸ್ ಪ್ರೈವೇಟ್ ಲಿಮಿಟೆಡ್ 2020 ರಲ್ಲಿ ತ್ರಿಪುರಾದಿಂದ ನೇಪಾಳಕ್ಕೆ 18 ಟನ್ ನೈಸರ್ಗಿಕ ರಬ್ಬರ್ ರಫ್ತು ಮಾಡಿತ್ತು. ಮಣಿಮಲಯರ್ ರಬ್ಬರ್ ಜನರಲ್ ಮ್ಯಾನೇಜರ್ ಅರುಣಾಭಾ ಮಜುಂದಾರ್ ಅವರ ಪ್ರಕಾರ, 14,550 ಕೆ.ಜಿ. (ಲ್ಯಾಟೆಕ್ಸ್) ತ್ರಿಪುರಾದಲ್ಲಿ ಉತ್ಪಾದನೆಯಾಗಿದ್ದು, ಇದನ್ನು ಶೂ ಉತ್ಪಾದನೆಗಾಗಿ ಕಠ್ಮಂಡುವಿಗೆ ರವಾನೆ ಮಾಡಲಾಗಿದೆ ಎನ್ನುತ್ತಾರೆ. ನೇಪಾಳಕ್ಕೆ ರಕ್ಸಾಲ್-ಬಿರ್ಗುಂಜ್ ಗಡಿ ಮಾರ್ಗದ ಮೂಲಕ ವಾಹನದ ಮೂಲಕ ಸಾಗಿಸಲಾಗಿದೆ.
1997 ರಿಂದ, ಮೇಘಾಲಯದ ಗುವಾಹಟಿ, ಸಿಲ್ಚಾರ್ ಮತ್ತು ತುರಾದಲ್ಲಿ ಕಚೇರಿಗಳನ್ನು ಹೊಂದಿರುವ ಮಣಿಮಲಯರ್ ರಬ್ಬರ್ಸ್ ರೈತರಿಗೆ ಮಾರುಕಟ್ಟೆ ಸಹಾಯವನ್ನು ಒದಗಿಸಿದೆ. ತ್ರಿಪುರಾದಲ್ಲಿ ಪ್ರಸ್ತುತ 89,264 ಹೆಕ್ಟೇರ್ ಭೂಮಿಯಲ್ಲಿ ನೈಸರ್ಗಿಕ ರಬ್ಬರ್ ಬೆಳೆಯುತ್ತದೆ, ವಾರ್ಷಿಕವಾಗಿ 1,691 ಕೋಟಿ ಮೌಲ್ಯದ 93,371 ಟನ್ ರಬ್ಬರ್ ಅನ್ನು ನೀಡುತ್ತದೆ. ತ್ರಿಪುರಾದಲ್ಲಿ, ರಬ್ಬರ್ ಕೃಷಿಯು ಆದಿವಾಸಿಗಳು ಸೇರಿದಂತೆ ಸುಮಾರು ಎರಡು ಲಕ್ಷ ಕುಟುಂಬಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ನೆರವಾಗಿದೆ.
ರಬ್ಬರ್ ಬೋರ್ಡ್ ಅಧಿಕಾರಿಗಳ ಪ್ರಕಾರ, ಏಳು ಈಶಾನ್ಯ ರಾಜ್ಯಗಳು ವಾರ್ಷಿಕವಾಗಿ 1,90,000 ಹೆಕ್ಟೇರ್ಗಳಲ್ಲಿ ರಬ್ಬರ್ ಬೆಳೆಯುತ್ತವೆ 1,11,700 ಟನ್ ನೈಸರ್ಗಿಕ ರಬ್ಬರ್ ಅನ್ನು ಉತ್ಪಾದಿಸುತ್ತವೆ. ಅಸ್ಸಾಂ 58,000 ಹೆಕ್ಟೇರ್ ಗಳಲ್ಲಿ ವಾರ್ಷಿಕವಾಗಿ 31,000 ಟನ್ ನೈಸರ್ಗಿಕ ರಬ್ಬರ್ ಅನ್ನು ಉತ್ಪಾದಿಸುತ್ತದೆ. ಮೇಘಾಲಯವು 17,000 ಹೆಕ್ಟೇರ್ಗಳಲ್ಲಿ 9,500 ಟನ್, ನಾಗಾಲ್ಯಾಂಡ್ನಲ್ಲಿ 6,100 ಟನ್ಗಳೊಂದಿಗೆ 15,000 ಹೆಕ್ಟೇರ್ಗಳಲ್ಲಿ ಉತ್ಪಾದನೆಯಾಗುತ್ತದೆ.
ಹೆಚ್ಚಿನ ವಿವರಗಳನ್ನು ಪಡೆಯಲು ಜ್ಯೋತಿಷ್ಯರೊಂದಿಗೆ ಸಂಪರ್ಕಿಸಬಹುದು. 9535156490
ಜಗತ್ತಿನಲ್ಲಿ ಎಲ್ಲವನ್ನೂ ಹಣದಿಂದಲೇ ಖರೀದಿ ಮಾಡಲು ಸಾಧ್ಯವಿಲ್ಲ. ನೀತಿ, ನಡತೆ, ಬದ್ಧತೆಗಳು ಹಣ ಕೊಟ್ಟರೂ…
ಯಕ್ಷಗುರು, ಭಾಗವತ ಶ್ರೀ ಪಾಲೆಚ್ಚಾರು ಗೋವಿಂದ ನಾಯಕ್ ಅವರಿಗೆ ‘ಈಶಾವಾಸ್ಯ ಪ್ರಶಸ್ತಿ ಪುರಸ್ಕಾರ’…
ಬೆಂಗಳೂರು ನಗರದಲ್ಲಿ ಮೇ ತಿಂಗಳಲ್ಲಿ 315 ಮಿಲಿಮೀಟರ್ ಮಳೆಯಾಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ.…
ಹಾಲು ಉತ್ಪಾದನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮುಂಚೂಣಿಯಲ್ಲಿದ್ದು, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದ…
ಕೇರಳದ ವಯನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಪರಿಣಾಮ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲೂಕಿನ…