ವಿಶೇಷ ವರದಿಗಳು

ರಬ್ಬರ್‌ ರಪ್ತು | ತ್ರಿಪುರಾದಿಂದ ನೇಪಾಳಕ್ಕೆ 14 ಟನ್ ನೈಸರ್ಗಿಕ ರಬ್ಬರ್ ರವಾನೆ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಭಾರತದಲ್ಲಿ ಕೇರಳದ ನಂತರ ನೈಸರ್ಗಿಕ ರಬ್ಬರ್‌ ಉತ್ಪಾದನೆಯ ಎರಡನೇ ಅತಿದೊಡ್ಡ ಉತ್ಪಾದಕ ರಾಜ್ಯ ತ್ರಿಪುರಾ. ಇದೀಗ ತ್ರಿಪುರಾದಿಂದ  14 ಟನ್‌ ರಬ್ಬರ್‌ ನೇಪಾಳಕ್ಕೆ ರವಾನಿಸಿದೆ ಎಂದು ರಬ್ಬರ್ ಬೋರ್ಡ್ ಅಧಿಕಾರಿಗಳು  ತಿಳಿಸಿದ್ದಾರೆ.

Advertisement

ರಬ್ಬರ್ ಬೋರ್ಡ್ ಪ್ರವರ್ತಿತ ಮಣಿಮಲಯಾರ್ ರಬ್ಬರ್ಸ್ ಪ್ರೈವೇಟ್ ಲಿಮಿಟೆಡ್ 2020 ರಲ್ಲಿ ತ್ರಿಪುರಾದಿಂದ ನೇಪಾಳಕ್ಕೆ 18 ಟನ್ ನೈಸರ್ಗಿಕ ರಬ್ಬರ್ ರಫ್ತು ಮಾಡಿತ್ತು. ಮಣಿಮಲಯರ್ ರಬ್ಬರ್‌ ಜನರಲ್ ಮ್ಯಾನೇಜರ್ ಅರುಣಾಭಾ ಮಜುಂದಾರ್‌ ಅವರ ಪ್ರಕಾರ,  14,550 ಕೆ.ಜಿ. (ಲ್ಯಾಟೆಕ್ಸ್) ತ್ರಿಪುರಾದಲ್ಲಿ ಉತ್ಪಾದನೆಯಾಗಿದ್ದು, ಇದನ್ನು ಶೂ ಉತ್ಪಾದನೆಗಾಗಿ ಕಠ್ಮಂಡುವಿಗೆ ರವಾನೆ ಮಾಡಲಾಗಿದೆ ಎನ್ನುತ್ತಾರೆ. ನೇಪಾಳಕ್ಕೆ ರಕ್ಸಾಲ್-ಬಿರ್‌ಗುಂಜ್ ಗಡಿ ಮಾರ್ಗದ ಮೂಲಕ ವಾಹನದ ಮೂಲಕ ಸಾಗಿಸಲಾಗಿದೆ.

1997 ರಿಂದ, ಮೇಘಾಲಯದ ಗುವಾಹಟಿ, ಸಿಲ್ಚಾರ್ ಮತ್ತು ತುರಾದಲ್ಲಿ ಕಚೇರಿಗಳನ್ನು ಹೊಂದಿರುವ ಮಣಿಮಲಯರ್ ರಬ್ಬರ್ಸ್ ರೈತರಿಗೆ ಮಾರುಕಟ್ಟೆ ಸಹಾಯವನ್ನು ಒದಗಿಸಿದೆ. ತ್ರಿಪುರಾದಲ್ಲಿ ಪ್ರಸ್ತುತ 89,264 ಹೆಕ್ಟೇರ್ ಭೂಮಿಯಲ್ಲಿ ನೈಸರ್ಗಿಕ ರಬ್ಬರ್  ಬೆಳೆಯುತ್ತದೆ, ವಾರ್ಷಿಕವಾಗಿ 1,691 ಕೋಟಿ ಮೌಲ್ಯದ 93,371 ಟನ್ ರಬ್ಬರ್ ಅನ್ನು ನೀಡುತ್ತದೆ. ತ್ರಿಪುರಾದಲ್ಲಿ, ರಬ್ಬರ್ ಕೃಷಿಯು ಆದಿವಾಸಿಗಳು ಸೇರಿದಂತೆ ಸುಮಾರು ಎರಡು ಲಕ್ಷ ಕುಟುಂಬಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ನೆರವಾಗಿದೆ.

ರಬ್ಬರ್ ಬೋರ್ಡ್ ಅಧಿಕಾರಿಗಳ ಪ್ರಕಾರ, ಏಳು ಈಶಾನ್ಯ ರಾಜ್ಯಗಳು ವಾರ್ಷಿಕವಾಗಿ 1,90,000 ಹೆಕ್ಟೇರ್‌ಗಳಲ್ಲಿ ರಬ್ಬರ್  ಬೆಳೆಯುತ್ತವೆ 1,11,700 ಟನ್ ನೈಸರ್ಗಿಕ ರಬ್ಬರ್ ಅನ್ನು ಉತ್ಪಾದಿಸುತ್ತವೆ. ಅಸ್ಸಾಂ 58,000 ಹೆಕ್ಟೇರ್ ಗಳಲ್ಲಿ ವಾರ್ಷಿಕವಾಗಿ 31,000 ಟನ್ ನೈಸರ್ಗಿಕ ರಬ್ಬರ್ ಅನ್ನು ಉತ್ಪಾದಿಸುತ್ತದೆ. ಮೇಘಾಲಯವು 17,000 ಹೆಕ್ಟೇರ್‌ಗಳಲ್ಲಿ 9,500 ಟನ್‌, ನಾಗಾಲ್ಯಾಂಡ್‌ನಲ್ಲಿ 6,100 ಟನ್‌ಗಳೊಂದಿಗೆ 15,000 ಹೆಕ್ಟೇರ್‌ಗಳಲ್ಲಿ ಉತ್ಪಾದನೆಯಾಗುತ್ತದೆ.

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಧಾತ್ರಿ ಕೆ ರಾವ್

ಧಾತ್ರಿ ಕೆ ರಾವ್ , 7ನೇ ತರಗತಿ ಶ್ರೀ ಅನ್ನಪೂರ್ಣೇಶ್ವರಿ ವಿದ್ಯಾಮಂದಿರ, ನಿಲುವಾಗಿಲು,…

9 hours ago

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಭವಿಷ್ಯ ಕೆ ಪಿ

ಭವಿಷ್ಯ ಕೆ ಪಿ, 8 ನೇ ತರಗತಿ, ಸೈಂಟ್‌ ಆನ್ಸ್‌ ಇಂಗ್ಲಿಷ್‌ ಮೀಡಿಯಂ…

9 hours ago

ಜು.16 ರಿಂದ ಕರಾವಳಿ-ಮಲೆನಾಡು ಭಾಗದಲ್ಲಿ ಭಾರೀ ಮಳೆ ಎನ್ನುತ್ತಿದೆ ಹವಾಮಾನ ವರದಿ

ರಾಜ್ಯದ ವಿವಿದೆಡೆ ಸದ್ಯ ಸಾಧಾರಣ ಮಳೆಯಾಗುತ್ತಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೂಡಾ…

10 hours ago

ಸಾವಯವ ತಾಲೂಕು-ಗೆಡ್ಡೆಗೆಣಸುಗಳ ಊರು ಜೋಯಿಡಾದಲ್ಲಿ ಬೆಳೆಗಳಿಗೆ ಹಂದಿ ಕಾಟ | ಕೃಷಿಗೆ ಅಪಾರ ಹಾನಿ

ಸಾವಯವ ತಾಲೂಕು ಎಂದು ಘೋಷಣೆ ಮಾಡಲು ಸಿದ್ಧವಾಗಿರುವ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿ…

10 hours ago