Advertisement
ಸುದ್ದಿಗಳು

Rubber Market | ರಬ್ಬರ್‌ ಬೆಲೆ ಕುಸಿತ | ರಬ್ಬರ್‌ ಬೆಳೆಗಾರರಿಗೆ ಇನ್ನು ಸಂಕಷ್ಟ |

Share

ದೇಶದಲ್ಲಿ ರಬ್ಬರ್‌(Rubber) ಬೆಲೆ ಕುಸಿಯುತ್ತಿದೆ. ಅದಲ್ಲೂ ರಬ್ಬರ್‌ ಲ್ಯಾಟೆಕ್ಸ್‌ ದರ ಗಣನೀಯವಾಗಿ ಇಳಿಕೆ ಕಂಡಿದೆ. ಪ್ರತಿ ಕೆಜಿಗೆ 185 ರೂ.ಗೆ ತಲುಪಿದ್ದ ರಬ್ಬರ್ ಲ್ಯಾಟೆಕ್ಸ್‌ (Latex) ದರ ಈಗ ಗಣನೀಯವಾಗಿ ಕುಸಿತ ಕಂಡಿದೆ. ರಬ್ಬರ್‌ ಶೀಟ್‌ ಧಾರಣೆಯೂ ಇಳಿಕೆಯ ಹಾದಿಯಲ್ಲಿಯೇ ಇದೆ. ಹೀಗಾಗಿ ರಬ್ಬರ್‌ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇನ್ನು ರಬ್ಬರ್‌ ಉತ್ಪಾದನೆಯ ಸಮಯವಾದ್ದರಿಂದ ಬೆಳೆಗಾರರು ಈಗಾಗಲೇ ಕೇರಳದಲ್ಲಿ ಪ್ರತಿಭಟನೆಯ ಹಾದಿಯಲ್ಲಿದ್ದಾರೆ.

ಈ ಹಿಂದೆ ಕೇರಳ ಸೇರಿದಂತೆ ವಿವಿದೆಡೆ ರಬ್ಬರ್ ಶೀಟ್‌ಗಳನ್ನು ಮಾರಾಟ ಮಾಡುವ ಬದಲು, ಅನೇಕ ರೈತರು ಲ್ಯಾಟೆಕ್ಸ್‌ ಮೂಲಕ ರಬ್ಬರ್‌ ಮಾರಾಟ ಮಾಡುತ್ತಿದ್ದರು. ವೆಚ್ಚಗಳ ಕೊರತೆಯ ನಿರ್ವಹಣೆಯನ್ನು ಮಾಡುವ ಉದ್ದೇಶದಿಂದ ಹಾಗೂ ರಬ್ಬರ್‌ ಲ್ಯಾಟೆಕ್ಸ್‌ಗೆ ಬೇಡಿಕೆ ಇದ್ದುದರಿಂದಲೂ ಬೆಳೆಗಾರರು ಈ ಮಾರ್ಗವನ್ನು ಅನುಸರಿಸಿದ್ದರು. ಆದರೆ ಇದೀಗ ಗಣನೀಯವಾಗಿ ರಬ್ಬರ್‌ ಲ್ಯಾಟೆಕ್ಸ್‌ ಹಾಗೂ ರಬ್ಬರ್‌ ಶೀಟ್‌ ಧಾರಣೆ ಇಳಿಕೆಯಾಗಿದೆ.

ಕೊರೋನಾ ಸಮಯದಲ್ಲಿ ಮಾಸ್ಕ್‌ ಹಾಗೂ ಗ್ಲೌಸ್‌ಗಳ ಅಗತ್ಯ ಹಾಗೂ ಬೇಡಿಕೆ ಹೆಚ್ಚಾಗಿತ್ತು. ಈ ಸಂದರ್ಭ ರಬ್ಬರ್‌ ಲ್ಯಾಟೆಕ್ಸ್‌ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಲ್ಯಾಟೆಕ್ಸ್ ಬೇಡಿಕೆ ಹಾಗೂ ಬೆಲೆ ಹೆಚ್ಚಾಗಿತ್ತು. ಕೊರೋನಾ ನಂತರ ಲ್ಯಾಟೆಕ್ಸ್‌ನ ಬೇಡಿಕೆಯಲ್ಲಿ ಕುಸಿತಕ್ಕೆ ಕಾರಣವಾಯಿತು ಮತ್ತು ಆದ್ದರಿಂದ ಈಗ ಲಾಟೆಕ್ಸ್‌ ಬೇಡಿಕೆ ಕಡಿಮೆಯಾಯಿತು. ಈಗ ರಬ್ಬರ್‌ ಶೀಟ್‌ ಧಾರಣೆಯೂ ಇಲ್ಲವಾಗಿರುವುದು  ಬೆಳೆಗಾರರಿಗೆ ಸಂಕಷ್ಟ ತಂದಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಮಿಜೋರಾಂನಲ್ಲಿ ಅಕ್ರಮವಾಗಿ ಅಡಿಕೆ ಸಾಗಾಟಕ್ಕೆ ತಡೆ – ₹54.88 ಲಕ್ಷ ಮೌಲ್ಯದ 98 ಚೀಲ ವಶ

ಮಿಜೋರಾಂದ ಚಾಂಫೈ ಜಿಲ್ಲೆಯಲ್ಲಿ ₹54.88 ಲಕ್ಷ ಮೌಲ್ಯದ 98 ಚೀಲ ಅಡಿಕೆ ವಶಪಡಿಸಲಾಗಿದೆ.…

4 hours ago

ಹವಾಮಾನ ವರದಿ | 18-04-2026 | ರಾಜ್ಯದ ಬಹುತೇಕ ಕಡೆ ಸೆಖೆ ಮುಂದುವರಿಕೆ – ಏಪ್ರಿಲ್ 19 ರಿಂದ ಕರಾವಳಿಯಲ್ಲಿ ಮಳೆ ಆರಂಭ!

ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಏಪ್ರಿಲ್ 19ರಿಂದ ಮಳೆ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ.…

12 hours ago

ಗ್ರಾಮೀಣ ಮೌಲ್ಯಗಳು ಮತ್ತು ನಗರ ಜೀವನ – ಸಮತೋಲನವೇ ನಿಜವಾದ ಮಾರ್ಗ!

ಗ್ರಾಮ ಮತ್ತು ನಗರ ಜೀವನ ಪರಸ್ಪರ ವಿರುದ್ಧವಲ್ಲ, ಪೂರಕ ಶಕ್ತಿಗಳು. ಸಮತೋಲನವೇ ಸಮೃದ್ಧ…

19 hours ago

ದೇಶಾದ್ಯಂತ ಹವಾಮಾನದಲ್ಲಿ ಬದಲಾವಣೆ..! 13 ರಾಜ್ಯಗಳಲ್ಲಿ ಮಳೆ-ಚಂಡಮಾರುತ ಎಚ್ಚರಿಕೆ, ಉತ್ತರ ಭಾರತದಲ್ಲಿ 40°C ದಾಟಿದ ಉಷ್ಣತೆ

ದೇಶದಲ್ಲಿ ಹವಾಮಾನ ತೀವ್ರ ಬದಲಾವಣೆ ಕಂಡುಬರುತ್ತಿದ್ದು, 13 ರಾಜ್ಯಗಳಲ್ಲಿ ಮಳೆ ಮತ್ತು ಗಾಳಿ…

19 hours ago

ಅಂಜನಾದ್ರಿ ಬೆಟ್ಟ ಏರುವವರಿಗೆ ಸಮಯ ನಿಗದಿ .! ಮಧ್ಯಾಹ್ನ 11ರಿಂದ 4ರವರೆಗೆ ಪ್ರವೇಶ ಬ್ಯಾನ್

ಅಂಜನಾದ್ರಿ ಬೆಟ್ಟ ಏರಲು ಮಧ್ಯಾಹ್ನ 11ರಿಂದ ಸಂಜೆ 4ರವರೆಗೆ ನಿರ್ಬಂಧ ವಿಧಿಸಲಾಗಿದೆ. ಬಿಸಿಲಿನ…

19 hours ago

ಕಲಬುರಗಿಯಲ್ಲಿ 43.2°C ತಾಪಮಾನ ದಾಖಲು..! ರಾಜ್ಯದಲ್ಲಿ ಬಿಸಿ ಏರಿಕೆ – ಮುಂದಿನ 5 ದಿನ ಎಚ್ಚರಿಕೆ

ರಾಜ್ಯದಲ್ಲಿ ಉಷ್ಣಾಂಶ ಏರಿಕೆ ಮುಂದುವರಿದಿದ್ದು, ಕಲಬುರಗಿಯಲ್ಲಿ 43.2°C ದಾಖಲಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ…

19 hours ago