ಧಾರ್ಮಿಕ

ಶಕ್ತಿಯ ದೇವತೆಗೆ ನಮೋ ನಮಃ..

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಒಂದೊಂದು ಹಬ್ಬಕ್ಕೆ ಅದರದೇ ಆದ ವಿಶೇಷತೆಗಳಿರುತ್ತವೆ. ಹಬ್ಬದ ಹುಟ್ಟಿಗೆ ಕಾರಣಗಳು ಐತಿಹ್ಯಗಳಿರುತ್ತವೆ. ನವರಾತ್ರಿಯ ಕುರಿತಾಗಿಯು ಹಲವು ಕಥೆಗಳು, ಆಚರಣೆಯ ಕಾರಣಗಳಾಗಿವೆ.

Advertisement

ಲೋಕ ಕಂಟಕನಾಗಿದ್ದ ಮಹಿಷಾಸುರನ ವಧೆಗಾಗಿ ಜನ್ಮವೆತ್ತಿದ ಮಹಾತಾಯಿ ಒಂಬತ್ತು ದಿನಗಳ ಕಾಲ ಹೋರಾಡಿ ಆತನನ್ನು ವಧಿಸಿದಳು ಎಂಬ ಕಥಾಭಾಗವನ್ನು ಬಾಲ್ಯದಿಂದಲೇ ಕೇಳುತ್ತಾ ಬಂದಿದ್ದೇವೆ. ಶಕ್ತಿಯ ದೇವತೆಗೆ ನಮೋ ನಮಃ..
ಪ್ರತಿವರ್ಷ ದೇವಸ್ಥಾನಗಳಲ್ಲಿ ನವರಾತ್ರಿ ಪೂಜೆ ಹಿಂದಿನಿಂದಲೂ ನಡೆದುಕೊಂಡು ಬಂದಿರುತ್ತದೆ. ನಿರ್ದಿಷ್ಟವಾದ ಆರಾಧನಾ ವಿಧಾನ, ಆಹಾರದಲ್ಲಿ ಪಾಲಿಸಲೇಬೇಕಾದ ನಿಯಮಗಳು, ‌ಪ್ರತಿಯೊಂದು ದಿನಕ್ಕೂ ವಿಭಿನ್ನ ನೈವೇದ್ಯಗಳು ನವರಾತ್ರಿಯ ವಿಶೇಷ.

ದೇವಿಯ ಆರಾಧನೆಯಲ್ಲಿ ಅಲಂಕಾರಕ್ಕೆ ಬಹಳ ಮಹತ್ವವಿದೆ. ಒಂಬತ್ತು ದಿನವೂ ಪ್ರತ್ಯೇಕ ಬಣ್ಣದ ವಸ್ತ್ರಗಳನ್ನು ದೇವಿಗೆ ಉಡಿಸುವ ಕ್ರಮವನ್ನು ಕೆಲವು ದೇವಾಲಯಗಳಲ್ಲಿ ಪಾಲಿಸುತ್ತಾರೆ. ಶೃಂಗೇರಿ ಶಾರದಾ ಅಮ್ಮನವರ ನವರಾತ್ರಿ ಅಲಂಕಾರ ವಿಶೇಷವಾಗಿರುತ್ತದೆ. ಪ್ರತಿಯೊಂದು ದಿನವೂ ವಿಶೇಷವಾಗಿ ಸಿಂಗರಿಸಲ್ಪಟ್ಟ ಮಾತೆಯ ವಸ್ತ್ರ ವಿನ್ಯಾಸಕ್ಕೆ ತಕ್ಕುದಾದ ಆಭರಣಗಳು. ನಿಜಕ್ಕೂ ಶಾರದಾ ಮಾತೆಯೇ ಪ್ರತ್ಯಕ್ಷವಾಗಿರುವಳೇನೋ ಎಂಬಷ್ಟು ಸಹಜ ಅನುಭವ. ‌
ನವರಾತ್ರಿಯ ದಿನಗಳಲ್ಲಿ ಮಾಡಿದ ಪಾರಾಯಣ , ಅರ್ಚನೆ , ಪೂಜೆಗಳು ವರ್ಷವಿಡೀ ನಮ್ಮನ್ನು ರಕ್ಷಿಸುವುದರಲ್ಲಿ ಯಾವ ಸಂಶಯವೂ ಇಲ್ಲ.

-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಹವಾಮಾನ ವರದಿ | 30-04-2025 | ಸಂಜೆ ಗುಡುಗು ಸಹಿತ ಮಳೆಯ ಮುನ್ಸೂಚನೆ |

ಈಗಿನಂತೆ ಮೇ 1ರಿಂದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಹಾಗೂ ಮೇ 5ರಿಂದ ಉತ್ತರ…

6 hours ago

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ

ಮೇ 4 ರಂದು ದೇಶಾದ್ಯಂತ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಮೈಸೂರು ಜಿಲ್ಲೆಯ…

10 hours ago

ಗುಡುಗು ಸಿಡಿಲಿನ ಮುನ್ಸೂಚನೆ ಬಗ್ಗೆ ಆಪ್‌ನಲ್ಲಿ ಮಾಹಿತಿ

ಸಾರ್ವಜನಿಕರು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ವರುಣ ಮಿತ್ರ ಸಹಾಯವಾಣಿ 9243345433…

10 hours ago

ಸತತ ಸೋಲಿನ ಬಳಿಕ ಪುಟಿದೇಳುವರು ಈ ರಾಶಿಯವರು…!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

10 hours ago

ಹೊಸರುಚಿ | ಗುಜ್ಜೆ ಸುಕ್ಕಾ

ಗುಜ್ಜೆ ಸುಕ್ಕಾಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ:  ಗುಜ್ಜೆ ಚಿಕ್ಕ ದಾಗಿ ಕಟ್…

12 hours ago

ಬೈಂದೂರು | ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮ | 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ |

ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…

1 day ago