ಒಂದೊಂದು ಹಬ್ಬಕ್ಕೆ ಅದರದೇ ಆದ ವಿಶೇಷತೆಗಳಿರುತ್ತವೆ. ಹಬ್ಬದ ಹುಟ್ಟಿಗೆ ಕಾರಣಗಳು ಐತಿಹ್ಯಗಳಿರುತ್ತವೆ. ನವರಾತ್ರಿಯ ಕುರಿತಾಗಿಯು ಹಲವು ಕಥೆಗಳು, ಆಚರಣೆಯ ಕಾರಣಗಳಾಗಿವೆ.
ಲೋಕ ಕಂಟಕನಾಗಿದ್ದ ಮಹಿಷಾಸುರನ ವಧೆಗಾಗಿ ಜನ್ಮವೆತ್ತಿದ ಮಹಾತಾಯಿ ಒಂಬತ್ತು ದಿನಗಳ ಕಾಲ ಹೋರಾಡಿ ಆತನನ್ನು ವಧಿಸಿದಳು ಎಂಬ ಕಥಾಭಾಗವನ್ನು ಬಾಲ್ಯದಿಂದಲೇ ಕೇಳುತ್ತಾ ಬಂದಿದ್ದೇವೆ. ಶಕ್ತಿಯ ದೇವತೆಗೆ ನಮೋ ನಮಃ..
ಪ್ರತಿವರ್ಷ ದೇವಸ್ಥಾನಗಳಲ್ಲಿ ನವರಾತ್ರಿ ಪೂಜೆ ಹಿಂದಿನಿಂದಲೂ ನಡೆದುಕೊಂಡು ಬಂದಿರುತ್ತದೆ. ನಿರ್ದಿಷ್ಟವಾದ ಆರಾಧನಾ ವಿಧಾನ, ಆಹಾರದಲ್ಲಿ ಪಾಲಿಸಲೇಬೇಕಾದ ನಿಯಮಗಳು, ಪ್ರತಿಯೊಂದು ದಿನಕ್ಕೂ ವಿಭಿನ್ನ ನೈವೇದ್ಯಗಳು ನವರಾತ್ರಿಯ ವಿಶೇಷ.
ದೇವಿಯ ಆರಾಧನೆಯಲ್ಲಿ ಅಲಂಕಾರಕ್ಕೆ ಬಹಳ ಮಹತ್ವವಿದೆ. ಒಂಬತ್ತು ದಿನವೂ ಪ್ರತ್ಯೇಕ ಬಣ್ಣದ ವಸ್ತ್ರಗಳನ್ನು ದೇವಿಗೆ ಉಡಿಸುವ ಕ್ರಮವನ್ನು ಕೆಲವು ದೇವಾಲಯಗಳಲ್ಲಿ ಪಾಲಿಸುತ್ತಾರೆ. ಶೃಂಗೇರಿ ಶಾರದಾ ಅಮ್ಮನವರ ನವರಾತ್ರಿ ಅಲಂಕಾರ ವಿಶೇಷವಾಗಿರುತ್ತದೆ. ಪ್ರತಿಯೊಂದು ದಿನವೂ ವಿಶೇಷವಾಗಿ ಸಿಂಗರಿಸಲ್ಪಟ್ಟ ಮಾತೆಯ ವಸ್ತ್ರ ವಿನ್ಯಾಸಕ್ಕೆ ತಕ್ಕುದಾದ ಆಭರಣಗಳು. ನಿಜಕ್ಕೂ ಶಾರದಾ ಮಾತೆಯೇ ಪ್ರತ್ಯಕ್ಷವಾಗಿರುವಳೇನೋ ಎಂಬಷ್ಟು ಸಹಜ ಅನುಭವ.
ನವರಾತ್ರಿಯ ದಿನಗಳಲ್ಲಿ ಮಾಡಿದ ಪಾರಾಯಣ , ಅರ್ಚನೆ , ಪೂಜೆಗಳು ವರ್ಷವಿಡೀ ನಮ್ಮನ್ನು ರಕ್ಷಿಸುವುದರಲ್ಲಿ ಯಾವ ಸಂಶಯವೂ ಇಲ್ಲ.
-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ
ರಾಜ್ಯದ ಗ್ರಾಮ ಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…
ಜಲಾನಯನ ಯಾತ್ರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯಾತ್ರೆ ಸಂಚರಿಸಲಿದ್ದು, ನೀರು ನಿರ್ವಹಣೆ ಬಗ್ಗೆ…
15 ರಾಜ್ಯಗಳಲ್ಲಿ 2 ಸಾವಿರದ 590 ಮೊಬೈಲ್ ಸಂಪರ್ಕರಹಿತ ಗ್ರಾಮಗಳನ್ನು ಗುರುತಿಸಲಾಗಿದೆ. ಈ…
ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನ ಸುಮಾರು 33 ಸಾವಿರ ಹೆಕ್ಟೇರ್…
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…