Advertisement
The Rural Mirror ಕಾಳಜಿ

ಬೆನ್ನುಹುರಿ ಸರ್ಜರಿಗೆ ಸಹಾಯ ಬೇಕಿದೆ | ಬಾಲಕನ ಜೀವಕ್ಕೆ ನೆರವಾಗುವಿರಾ ?

Share
ದೇವರು ಯಾವ ರೂಪದಲ್ಲಿಯೂ ಬರಬಲ್ಲನು. ಈ ಬಾಲಕನ ಪರಿಸ್ಥಿತಿಯೂ ಹಾಗೆಯೇ. ದೇವರು ಒಲಿದಿದ್ದಾನೆ, ಆದರೆ ಈಗ ಸಮಾಜದ ಸಹಾಯ ಬೇಕಾಗಿದೆಯಷ್ಟೆ. ಈ ಬಾಲಕನ ಕತೆ ಸಿನಿಮಾದ ಮಾದರಿಯಲ್ಲೇ ಇದೆ.

ಮೂಲತ: ದಾವಣಗೆರೆಯ ಹರಿಹರ ಮೂಲದ 9 ವರ್ಷದ ಬಾಲಕ ಮಾಧವೇಶ್‌ ಬೆನ್ನು ಮೂಳೆ ವಕ್ರತೆಯಿಂದ ತೀರಾ ಸಂಕಷ್ಟದಲ್ಲಿದ್ದಾರೆ. ಮಾಧವೇಶ್‌ 6  ತಿಂಗಳಲ್ಲೇ ತಾಯಿಯನ್ನು ಕಳೆದುಕೊಂಡಿರುವ ಈ ಬಾಲಕ ಪಂಚಾಯತ್‌ ನಲ್ಲಿ ಬಿಲ್‌ ಕಲೆಕ್ಟರ್‌ ಆಗಿರುವ ತಂದೆಯ ಆಶ್ರಯದಲ್ಲಿ ಬೆಳೆಯುತ್ತಿದ್ದಾನೆ. ಬೆನ್ನು ಮೂಳೆ ವಕ್ರತೆಯ ಕಾರಣದಿಂದ ಶಾಲೆಗೆ ತೆರಳಲಾರದ ಸ್ಥಿತಿಯಲ್ಲಿದ್ದಾನೆ. ಈಚೆಗೆ ಆರೋಗ್ಯದ ಸಮಸ್ಯೆಯೂ ಹೆಚ್ಚಾಗಿದೆ. ವಿವಿದೆಡೆ ಔಷಧಿ ಮಾಡಿದರೂ ಪ್ರಯೋಜನ ಆಗಿರಲಿಲ್ಲ. ಕೊನೆಗೆ ದಾವಣಗೆರೆಯ ವೈದ್ಯರೊಬ್ಬರು ನೀಡಿದ ಸಲಹೆ ಮೇರೆಗೆ ಮಂಗಳೂರಿನಲ್ಲಿ ಚಿಕಿತ್ಸೆಯಾಗಬಹುದು ಎಂದರು. ಈ ಸಲಹೆ ಮೇರೆಗೆ ಮಂಗಳೂರಿನ ಆಸ್ಪತ್ರೆಗೆ ಬಂದಾಗ ವೆನ್ಲಾಕ್ ಆಸ್ಪತ್ರೆಯಲ್ಲಿ ಬೆನ್ನು ಮೂಳೆಯ ವಕ್ರತೆಗೆ ಔಷಧಿ ಅಸಾಧ್ಯ ಎಂದು ತಿಳಿದ ಬಳಿಕ ತೀರಾ ನಿರಾಸೆ‌  ಹಾಗೂ ದು:ಖದಿಂದ ಬಾಲಕ ಮಾಧವೇಶ್‌ ತಂದೆ ಕುಳಿತಿದ್ದಾಗ, ಮಂಗಳೂರಿನ ಪ್ರಸಿದ್ಧ ವೈದ್ಯರೊಬ್ಬರು ಚಹಾ ಕುಡಿಯಲು ಹೊರಬಂದಾಗ ವೆನ್ಲಾಕ್‌ ಒಪಿಡಿಯನ್ನು ಸುಮ್ಮನೆ ಗಮನಿಸಿದಾಗ ಮಾಧವೇಶ್‌ ಕಂಡರು. ತಕ್ಷಣವೇ ಮಾಧವೇಶ್‌ ತಂದೆಯ ಬಳಿ ಸಾಮಾಜಿಕ ಕಾಳಜಿಯ ಈ ವೈದ್ಯರು ಪರಿಶೀಲಿಸಿ, ಮುಂದಿನ ಚಿಕಿತ್ಸೆಗಾಗಿ   ಜನಸಮೂಹ ನಿಧಿಯನ್ನು ನಡೆಸಬಹುದೇ ಎಂದು ಸಾಮಾಜಿಕ ಕಾರ್ಯಕರ್ತರ ಮೂಲಕ ಕೋಟೆ ಫೌಂಡೇಶನ್‌ ಜೊತೆ ಚರ್ಚಿಸಿ ಮತ್ತು ಅಭಿಯಾನದೊಂದಿಗೆ ಮುಂದುವರಿಯಲು ನಿರ್ಧರಿಸಿದರು.

 

ಅಸಹಜವಾದ ಬೆನ್ನು ಮೂಳೆಯ ಕಾರಣದಿಂದ ಈಚೆಗೆ ಉಸಿರಾಟದ ಸಮಸ್ಯೆಯೂ ಹೆಚ್ಚಾಗಿತ್ತು.ಎರಡೂ ಪಾದಗಳು ದುರ್ಬಲವಾಗುತ್ತಿದ್ದವು. ಹೀಗಾಗಿ ತಕ್ಷಣವೇ ಆಪರೇಶನ್‌ ಆಗಬೇಕಾಗಿತ್ತು. ಇದಕ್ಕಾಗಿ ತಡ ಮಾಡದೆ ಈಗಾಗಲೇ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇನ್ನು ಎರಡು ವರ್ಷಗಳಲ್ಲಿ ಆಪರೇಶನ್‌ ಮಾಡಬೇಕಾಗಿದೆ. ಹೀಗಾಗಿ ಬೆಂಗಳೂರು ಮೂಲದ ರೈಟ್ ಟು ಲೈವ್ ಎಂಬ ಎನ್‌ ಜಿ ಒ ಮೂಲಕ ಮಂಗಳೂರಿನ ಮಂಗಳಾ ಆಸ್ಪತ್ರೆಯ ಡಾ.ಗಣಪತಿ ಹಾಗೂ ತಂಡದ ಸಹಕಾರದೊಂದಿಗೆ ಚಿಕಿತ್ಸೆ ನಡೆಸಲಾಗುತ್ತಿದೆ. ಒಟ್ಟು ಸುಮಾರು 8 ರಿಂದ  10  ಲಕ್ಷರೂಪಾಯಿ ಖರ್ಚಾಗುತ್ತದೆ. ಈಗಾಗಲೇ ಈ ಬಾಲಕನ ಕುಟುಂಬದ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ, ಮಂಗಳಾ ಆಸ್ಪತ್ರೆಯ ನಿರ್ವಹಣೆ ಮತ್ತು ಚಿಕಿತ್ಸೆ ನೀಡುವ ವೈದ್ಯರು ತಮ್ಮ ಶುಲ್ಕವನ್ನು ತ್ಯಜಿಸಲು ನಿರ್ಧರಿಸಿದ್ದಾರೆ . ಇದೀಗ ಔಷಧಿ ಶುಲ್ಕ ಹಾಗೂ ಇತರ ಶುಲ್ಕಗಳನ್ನು  ಭರಿಸಬೇಕಾಗಿದೆ. ಇದಕ್ಕೆ ಅಂದಾಜು 5,00,000 ರೂಪಾಯಿ ಅಗತ್ಯವಿದೆ. ಇದಕ್ಕಾಗಿ ಸಮಾಜದ ನೆರವು ಅಗತ್ಯವಿದೆ.  ಈಗಾಗಲೇ ರೈಟ್ ಟು ಲೈವ್ ತಂಡವು ಮಾಧವೇಶ್ ಅವರ ಮುಂದುವರಿದ ಚಿಕಿತ್ಸೆಗಾಗಿ ಹಣವನ್ನು ಸಂಗ್ರಹಿಸಲು  ಪ್ರಯತ್ನ ಮಾಡುತ್ತಿದೆ. ರೈಟ್ ಟು ಲೈವ್ ಗೆ ನಿಮ್ಮ ದೇಣಿಗೆಗಳನ್ನು‌ ನೀಡಬಹುದಾಗಿದೆ. ಈ ಕೆಳಗಿನ ಲಿಂಕ್‌ ಮೂಲಕ ರೈಟ್‌ ಟು ಲಿವ್‌ ಸಂಪರ್ಕ ಮಾಡಬಹುದು.

ನೆರವು ಮಾಡಲು ಇಚ್ಛೆ ಉಳ್ಳವರು ಈ ಕೆಳಗಿನ ಲಿಂಕ್‌ ಮೂಲಕ ಸಹಾಯ ಮಾಡಬಹುದು…

https://righttolive.org/Help-Madvesh-Get-Spine-Surgery

 

ಸಂಪರ್ಕ :  : 9164548564

ಹೆಚ್ಚಿನ ಮಾಹಿತಿಗೆ :  8904611393 / 7022872220

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಹವಾಮಾನ ವರದಿ | 10-09-2026 | ಕರ್ನಾಟಕದಲ್ಲಿ ಮಳೆ ಏಕೆ ಇಳಿಮುಖವಾಗುತ್ತಿದೆ..?

ಸೆ.11ರಿಂದ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಕಡಿಮೆಯಾಗಲಿದ್ದು, ಬಿಸಿಲು ಹೆಚ್ಚಾಗುವ ಲಕ್ಷಣಗಳಿವೆ.…

3 hours ago

ರಾಜ್ಯದಲ್ಲಿ ವಿದ್ಯುತ್‌ ಸಂಕಷ್ಟದ ಸುಳಿವು – ರಾತ್ರಿ 6.30 ರಿಂದ 9ರವರೆಗೆ ಪೂರೈಕೆ ವ್ಯತ್ಯಯ ಸಾಧ್ಯತೆ

ದುರ್ಬಲ ಮುಂಗಾರು ಮತ್ತು ಜಲ–ಪವನ ವಿದ್ಯುತ್‌ ಉತ್ಪಾದನೆ ಕುಸಿತದಿಂದ ರಾಜ್ಯದಲ್ಲಿ ವಿದ್ಯುತ್‌ ಪೂರೈಕೆಯ…

3 hours ago

ಪರಿಸರ ಸ್ನೇಹಿ ಗೌರಿ-ಗಣೇಶ ಹಬ್ಬ : ಮಂಗಳೂರು ಮಹಾನಗರಪಾಲಿಕೆ ಸೂಚನೆ

2026ರ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಮಂಗಳೂರು ಮಹಾನಗರಪಾಲಿಕೆ ಸೂಚಿಸಿದ್ದು, POP…

17 hours ago

ಹವಾಮಾನ ವರದಿ | 09-09-2026 | ಕರ್ನಾಟಕದಲ್ಲಿ ಮಳೆಯ ಚಿತ್ರಣ ಬದಲಾಗುತ್ತಿದೆ – ಸೆ.11ರಿಂದ ಕರಾವಳಿಯಲ್ಲಿ ಬದಲಾವಣೆ

ಕರ್ನಾಟಕದಲ್ಲಿ ಮಳೆಯ ಸಾಧ್ಯತೆ ಒಟ್ಟಾರೆ ಇಳಿಮುಖವಾಗುತ್ತಿದ್ದು, ಕರಾವಳಿಯಲ್ಲಿ ಸೆ.11ರಿಂದ ಮಳೆ ಕಡಿಮೆಯಾಗುವ ಲಕ್ಷಣಗಳಿವೆ.…

1 day ago

ಕ್ಯಾಂಪ್ಕೋ ಅಭಿವೃದ್ಧಿಯ ಹಾದಿಯಲ್ಲಿ: ₹2,900 ಕೋಟಿ ಅಡಿಕೆ ವ್ಯವಹಾರದ ನಡುವೆ ಮುಂದಿರುವ ಸವಾಲುಗಳೇನು?

2025-26ರಲ್ಲಿ ಕ್ಯಾಂಪ್ಕೋದ ಅಡಿಕೆ ಖರೀದಿ ಪ್ರಮಾಣ ಹಿಂದಿನ ವರ್ಷಕ್ಕಿಂತ ಕಡಿಮೆಯಾಗಿದ್ದರೂ, ಬೆಲೆ ಏರಿಕೆಯಿಂದ…

1 day ago

ಅಡಿಕೆಯಷ್ಟೇ ಅಲ್ಲ ಅದೇ ಮರಕ್ಕೆ ವೆನಿಲ್ಲಾ ಬಳ್ಳಿ | ಅಸ್ಸಾಂನಲ್ಲಿ ಅಡಿಕೆಯ ಜೊತೆಗೆ ಇನ್ನೊಂದು ಬೆಳೆ..

ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…

2 days ago