Advertisement
ಅನುಕ್ರಮ

ರಕ್ಷಣಾ ಸಚಿವರನ್ನು ತಲುಪಿದ ಮಾಸ್ಕ್ !

Share

ತ್ರಿಕೆಯಲ್ಲೊಂದು ಸುದ್ದಿ ಓದಿದೆ – ಉಡುಪಿಯ ಎರಡನೇ ಪಿಯು ವಿದ್ಯಾರ್ಥಿ ಇಶಿತಾ ಆಚಾರ್ಯ ಭಾರತೀಯ ಸೇನೆಗೆ ಮಾಸ್ಕ್ ತಯಾರಿಸಿ ಕಳುಹಿಸಿದ್ದಾರೆ. ಇವರ ಈ ದೇಶಪ್ರೀತಿಯ ಕಾರ್ಯಕ್ಕೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅಭಿನಂದಿಸಿದ್ದಾರೆ.

ತಾನು ಕಲಿವ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಮಾಸ್ಕ್ ಬ್ಯಾಂಕಿಗೆ ಈ ಮಾಸ್ಕ್ ಗಳು ಸೇರಬೇಕಾಗಿತ್ತು. ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಇದನ್ನು ಬಳಸುವ ಉದ್ದೇಶ. ಆದರೆ ಮುನ್ನೂರು ಮಾಸ್ಕ್ ತಯಾರಿಸುವ ಹೊತ್ತಿಗೆ ಎಸ್.ಎಸ್.ಎಲ್.ಸಿ.ಪರೀಕ್ಷೆ ಮುಗಿದಿತ್ತು! ಆಗಲೇ ಬ್ಯಾಂಕಿನಲ್ಲಿ ಮಾಸ್ಕ್ ನ ಠೇವಣಿ ಹೆಚ್ಚಾಗಿತ್ತು.
ಇಶಿತಾ ಯೋಚಿಸಿದರು. ಇದೂ ಕೂಡಾ ದೇಶಸೇವೆಯಲ್ಲವೆ? ಮಾಸ್ಕ್‌ ಗಳನ್ನು ಸೇನೆಗೆ ಯಾಕೆ ಕಳುಹಿಸಬಾರದು? ಯೋಚನೆ ಕಾರ್ಯರಂಗಕ್ಕಿಳಿಯಿತು. ಅಧಿಕಾರಿಗಳನ್ನು ಸಂಪರ್ಕಿಸಿ ವಿನಂತಿಸಿದರು. ಕೊನೆಗೆ ತಾನೇ ಸ್ವತಃ ಜುಲೈ ಮಧ್ಯ ಭಾಗದಲ್ಲಿ ರಕ್ಷಣಾ ಸಚಿವರಿಗೆ ಮಾಸ್ಕ್ ಗಳನ್ನು ಕೊರಿಯರ್ ಮೂಲಕ ಕಳುಹಿಸಿದರು. ಆಶ್ಚರ್ಯ, ಸೆಪ್ಟೆಂಬರಿನಲ್ಲಿ ರಕ್ಷಣಾ ಸಚಿವರಿಂದ ಅಭಿನಂದನಾ ಪತ್ರ.

 

ಇಶಿತಾ ಖುಷ್. 

ದೇಶದ ರಕ್ಷಣಾ ಮಂತ್ರಿಗಳು ವಿದ್ಯಾರ್ಥಿಯಾದ ನನಗೆ ಪತ್ರ ಬರೆಯಬಹುದೆಂಬ ಕನಸೂ ಇದ್ದಿರಲಿಲ್ಲ.” ಎಂದಿದ್ದಾರೆ.

ಯೂಟ್ಯೂಬಿನಲ್ಲಿರುವ ಮಾಸ್ಕ್ ತಯಾರಿ ಮಾಹಿತಿಯನ್ನು ಕಲಿತ ಇಶಿತಾ ಮಾಸ್ಕ್ ಸಿದ್ಧಪಡಿಸಿದ್ದಾರೆ. ನಿಜಕ್ಕೂ ಖುಷಿ ಪಡುವ ವಿಚಾರ.

ಇಶಿತಾ ಅಂಬಲಪಾಡಿಯವರು. ತಂದೆ ಗಿರೀಶ್ ಆಚಾರ್, ತಾಯಿ ನಂದಿತಾ ಆಚಾರ್. ಎಪ್ರಿಲ್-ಮೇ ಲಾಕ್‍ಡೌನಿನಲ್ಲಿ ಸಿದ್ಧವಾದ ಮಾಸ್ಕ್ ತಯಾರಿ ಈಗ ದೇಶ ಮಟ್ಟದ ಸುದ್ದಿ. ವಿದ್ಯಾರ್ಥಿ ದಿಸೆಯ ಈ ಸಣ್ಣ ಕೆಲಸ ಇದೆಯಲ್ಲಾ, ಇದು ದೇಶಮಟ್ಟದಲ್ಲಿ ದೊಡ್ಡದೇ. ‘ನಮ್ಮನ್ನು ಕಾಯುವ ಯೋಧರಿಗಾಗಿ ನಾವು ಇಷ್ಟಾದರೂ ಮಾಡಬೇಡ್ವೇ’ ಎನ್ನುವ ವಿದ್ಯಾರ್ಥಿನಿಯ ಆಶಯದ ಹಿಂದೆ ನಿಜಾರ್ಥದ ದೇಶಭಕ್ತಿಯಿದೆ.

ದೇಶಭಕ್ತಿಯನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸುವ ಕಾಲಘಟ್ಟದಲ್ಲಿ ಇಶಿತಾಳ ಸಣ್ಣ ಕೆಲಸ ಸದ್ದಾಗದು. ರಂಗುರಂಗಿನ ಮಾಧ್ಯಮಗಳಿಗೆ ಇದೇನೂ ದೊಡ್ಡ ಸುದ್ದಿಯಲ್ಲ. ವಾಹಿನಿಗಳೆಲ್ಲಾ ಡ್ರಗ್ಸ್ ಮಾಫಿಯಾದ ಸತ್ಯಗಳನ್ನು (!) ಕೆದಕುವ ಕೆಲಸದಲ್ಲಿವೆ. ಅವುಗಳಿಗೆ ಇಶಿತಾಳ ಕೆಲಸ ಕಾಣದು.

ಮಾಧ್ಯಮ ಬೆಳಕಿಗಾಗಿ ಅವರು ಮಾಸ್ಕ್ ತಯಾರಿಸಿದ್ದೂ ಅಲ್ಲ. ಆದರೆ ದೇಶದ ಬಗ್ಗೆ ಕನಿಷ್ಠ ಒಲವು ಮತ್ತು ಪ್ರೀತಿಯಿರುವ ಎಲ್ಲರೂ ಶ್ಲಾಘಿಸಬೇಕಾದ ಕಾರ್ಯವನ್ನು ಇಶಿತಾ ಮಾಡಿದ್ದಾರೆ.  ಕೋವಿಡ್ 19 ಯಾನದಲ್ಲಿ ಬದುಕು ಸಾಗುತ್ತಿದೆ. ವಿಷಾದಗಳ ಮಧ್ಯೆ ಇಂತಹ ಚಿಕ್ಕಪುಟ್ಟ ವಿಚಾರಗಳು ಪಾಸಿಟಿವ್ ಬೆಳಕಿಂಡಿಗಳಾಗಿ ಗೋಚರಿಸುತ್ತವೆ.

# ನಾ. ಕಾರಂತ ಪೆರಾಜೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ನಾ.ಕಾರಂತ ಪೆರಾಜೆ

ಪತ್ರಕರ್ತ , ಕಲಾವಿದ , ಅಂಕಣಕಾರ ನಾ.ಕಾರಂತ ಪೆರಾಜೆ ಅವರು ಪ್ರಸ್ತುತ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರಾಗಿ, ಕಲಾವಿದರಾಗಿ, ಅಂಕಣಕಾರರಾಗಿ ಗುರುತಿಸಿಕೊಂಡಿರುವ ನಾ.ಕಾರಂತ ಅವರು ತಾಳಮದ್ದಳೆಯಲ್ಲಿ ಅರ್ಥದಾರಿಯಾಗಿ ಹಾಗೂ ವಿವಿಧ ಮೇಳಗಳಲ್ಲಿ ವೇಷಧಾರಿಯೂ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪುತ್ತೂರು ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

Published by
ನಾ.ಕಾರಂತ ಪೆರಾಜೆ

Recent Posts

ಶಿರಾಡಿ ಘಾಟ್‌ನಲ್ಲಿ ಸೋಮವಾರ ಟ್ರಾಫಿಕ್‌ ಸಂಕಷ್ಟದ ಸಾಧ್ಯತೆ – ಮುಂಜಾಗ್ರತಾ ಕ್ರಮ ಅಗತ್ಯ

ಮೂರು ದಿನಗಳ ರಜೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಶಿರಾಡಿ ಘಾಟ್‌ನಲ್ಲಿ…

7 hours ago

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

15 hours ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

20 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

2 days ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

2 days ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

2 days ago