ಶಾಸ್ತ್ರಿಗಳಿಗೆ ಬದುಕೇ ಯಕ್ಷಗಾನವಾಗಿತ್ತು. ಯಕ್ಷಗಾನವೇ ಬದುಕು. ಹಲವು ಪ್ರಸಂಗಗಳು ಕಂಠಸ್ಥವಾಗಿದ್ದುವು. ರಂಗದ ನಿರ್ದೇಶಕ. ರಂಗಭಾಷೆಯ ಅನುಷ್ಠಾನದತ್ತ ಬಿಗು ನಿಲುವು. ಪೌರಾಣಿಕ ಪ್ರಸಂಗಗಳ ಪದ್ಯಗಳಿಗೆ ಮೋಹಕ ಧ್ವನಿಯ ಸ್ಪರ್ಶ. ವಿವಿಧ ಮೇಳಗಳಲ್ಲಿ ತಿರುಗಾಟ. ಹವ್ಯಾಸಿ ಆಟ-ಕೂಟಗಳಲ್ಲಿ ವ್ಯವಸಾಯ.
ತಿರುಮಲೇಶ್ವರ ಶಾಸ್ತ್ರಿಗಳು ತೆಂಕುತಿಟ್ಟು ಯಕ್ಷಗಾನದ ಭಾಗವತಿಕೆಯ ಪರಂಪರೆಯಲ್ಲಿ ತಮ್ಮ ವಿಶಿಷ್ಟ ಅನುಭವದಿಂದ ‘ತೆಂಕಬೈಲು’ ಮಟ್ಟು ಸ್ಥಾಪಿಸಿದ ಹೆಗ್ಗಳಿಕೆ. ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಗೆ ಇವರ ಅನುಭವದ ಕೊಡುಗೆ ಅನನ್ಯ.
ಅಪಾರ ಶಿಷ್ಯವೃಂದವನ್ನು ಹೊಂದಿದ ಶಾಸ್ತ್ರಿಗಳಿಗೆ ಎರಡು ವರುಷದ ಹಿಂದೆ ಪದ್ಯಾಣ ಪ್ರಶಸ್ತಿ ಪ್ರಾಪ್ತವಾಗಿತ್ತು. ಈ ಸಂದರ್ಭದಲ್ಲಿ ಕಿರು ಪುಸ್ತಿಕೆಯೊಂದು ಮುದ್ರಣಗೊಂಡಿತ್ತು. ತಿರುಮಲೇಶ್ವರ ಶಾಸ್ತ್ರಿಯವರ ಪುತ್ರ ಮುರಳಿಕೃಷ್ಣ. ಇವರ ಅಧ್ಯಾಪಕರು. ತಂದೆಯ ಶೈಲಿಯನ್ನು ಮುಂದುವರಿಸುತ್ತಿರುವ ಭಾಗವತ.
ICAR 16 ಹೊಸ ಜಾನುವಾರು ಮತ್ತು ನಾಯಿ ತಳಿಗಳಿಗೆ ರಾಷ್ಟ್ರೀಯ ನೋಂದಣಿ ನೀಡಿದ್ದು,…
ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಆಗಸ್ಟ್ 26ರವರೆಗೆ ಮೋಡ ಮತ್ತು ಅಲ್ಲಲ್ಲಿ ಬಿಟ್ಟುಬಿಟ್ಟು…
ಭಾರತದಲ್ಲಿ ಸಮಸ್ಯೆ ಕೇವಲ ಉದ್ಯೋಗಗಳ ಕೊರತೆಯಲ್ಲ, ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯ ಹೊಂದಿದ ಅಭ್ಯರ್ಥಿಗಳ…
ಕರಾವಳಿ ಮತ್ತು ಮಲೆನಾಡಿನ ಅಡಿಕೆ ತೋಟಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಎಲೆಚುಕ್ಕೆ, ಹಳದಿ ಎಲೆ ಹಾಗೂ…
ಕರ್ನಾಟಕದಲ್ಲಿ ಮುಂಗಾರು ಮತ್ತೆ ಚುರುಕಾಗಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ…
ಅಳಿವಿನಂಚಿನಲ್ಲಿದ್ದ ಕೇರಳದ ಪೆರಿಯಾರ್ ಕುಳ್ಳನ್ ಹಸುವಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ರಾಷ್ಟ್ರೀಯ…