ಶಾಸ್ತ್ರಿಗಳಿಗೆ ಬದುಕೇ ಯಕ್ಷಗಾನವಾಗಿತ್ತು. ಯಕ್ಷಗಾನವೇ ಬದುಕು. ಹಲವು ಪ್ರಸಂಗಗಳು ಕಂಠಸ್ಥವಾಗಿದ್ದುವು. ರಂಗದ ನಿರ್ದೇಶಕ. ರಂಗಭಾಷೆಯ ಅನುಷ್ಠಾನದತ್ತ ಬಿಗು ನಿಲುವು. ಪೌರಾಣಿಕ ಪ್ರಸಂಗಗಳ ಪದ್ಯಗಳಿಗೆ ಮೋಹಕ ಧ್ವನಿಯ ಸ್ಪರ್ಶ. ವಿವಿಧ ಮೇಳಗಳಲ್ಲಿ ತಿರುಗಾಟ. ಹವ್ಯಾಸಿ ಆಟ-ಕೂಟಗಳಲ್ಲಿ ವ್ಯವಸಾಯ.
ತಿರುಮಲೇಶ್ವರ ಶಾಸ್ತ್ರಿಗಳು ತೆಂಕುತಿಟ್ಟು ಯಕ್ಷಗಾನದ ಭಾಗವತಿಕೆಯ ಪರಂಪರೆಯಲ್ಲಿ ತಮ್ಮ ವಿಶಿಷ್ಟ ಅನುಭವದಿಂದ ‘ತೆಂಕಬೈಲು’ ಮಟ್ಟು ಸ್ಥಾಪಿಸಿದ ಹೆಗ್ಗಳಿಕೆ. ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಗೆ ಇವರ ಅನುಭವದ ಕೊಡುಗೆ ಅನನ್ಯ.
ಅಪಾರ ಶಿಷ್ಯವೃಂದವನ್ನು ಹೊಂದಿದ ಶಾಸ್ತ್ರಿಗಳಿಗೆ ಎರಡು ವರುಷದ ಹಿಂದೆ ಪದ್ಯಾಣ ಪ್ರಶಸ್ತಿ ಪ್ರಾಪ್ತವಾಗಿತ್ತು. ಈ ಸಂದರ್ಭದಲ್ಲಿ ಕಿರು ಪುಸ್ತಿಕೆಯೊಂದು ಮುದ್ರಣಗೊಂಡಿತ್ತು. ತಿರುಮಲೇಶ್ವರ ಶಾಸ್ತ್ರಿಯವರ ಪುತ್ರ ಮುರಳಿಕೃಷ್ಣ. ಇವರ ಅಧ್ಯಾಪಕರು. ತಂದೆಯ ಶೈಲಿಯನ್ನು ಮುಂದುವರಿಸುತ್ತಿರುವ ಭಾಗವತ.
ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಮುಂದುವರಿಯಲಿದ್ದು, ಉತ್ತರ ಒಳನಾಡಿನಲ್ಲಿ ಏಪ್ರಿಲ್ 25ರವರೆಗೆ…
ವಿದ್ಯುತ್ ದರ ಏರಿಕೆ ಮತ್ತು ಹಿಂಬದಿ ಬಿಲ್ಲಿಂಗ್ ಕ್ರಮದಿಂದ ಸಣ್ಣ ಮತ್ತು ಮಧ್ಯಮ…
ಮುಳಬಾಗಿಲಿನ ಹೋಟೆಲ್ ಮೇಲೆ ದಾಳಿ ನಡೆಸಿ 30 ಲೀಟರ್ ಅವಧಿ ಮೀರಿದ ತುಪ್ಪ…
ತೊಗರಿ ಬೆಳೆಗಾರರ ಹಿತಕ್ಕಾಗಿ ಖರೀದಿ ಅವಧಿಯನ್ನು ಮೇ 15ರವರೆಗೆ ವಿಸ್ತರಿಸಲಾಗಿದೆ. ಇದರಿಂದ ರೈತರಿಗೆ…
ವಿಜಯಪುರದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಳ ಹಿನ್ನೆಲೆ ಜಿಲ್ಲಾಸ್ಪತ್ರೆಯಲ್ಲಿ 10 ಬೆಡ್ ವಿಶೇಷ ವಾರ್ಡ್…
ಗುಜ್ಜೆ ಬಳಸಿ ತಯಾರಿಸುವ ಮಂಚೂರಿ ರುಚಿಕರ ಫ್ಯೂಷನ್ ತಿನಿಸಾಗಿದೆ. ಮನೆಯಲ್ಲಿ ಸುಲಭವಾಗಿ ಮಾಡುವ…