2022 | ಹೊಸವರ್ಷದ ಶುಭಾಶಯಗಳು | ಸಂತಸದತ್ತ ಮುಖಮಾಡೋಣ |

January 1, 2022
9:12 AM
Advertisement

ಡಿಸೆಂಬರ್ ಬರುತ್ತಿದ್ದಂತೆ ಬೀದಿ ಬೀದಿಗಳು ಕಳೆಗಟ್ಟುವುದು, ವಿದ್ಯುತ್ ದೀಪಗಳಿಂದ ಅಲಂಕರಿಸ್ಪಡುವುದು, ಸುಂದರವಾದ ಕ್ರಿಸ್ ಮಸ್ ಟ್ರೀ ಗಳು, ತಯಾರಿ ಹಂತದಲ್ಲಿರುವ ನಮೂನೆವಾರು ಕೇಕ್ ಗಳು . ಪ್ರತಿ ವರ್ಷ ಡಿಸೆಂಬರ್ ಇಪ್ಪತೈದರ ಕ್ರಿಸ್ಮಸ್ ಹಬ್ಬ ಮುಗಿಯುವುದು ಜನವರಿ ಒಂದರ ಆರಂಭದೊಂದಿಗೆ.

Advertisement
Advertisement
Advertisement

ವರ್ಷದ ಕೊನೆಯ ತಿಂಗಳು ಆರಂಭವಾತ್ತಿರುವಂತೆ ವಿದೇಶದಲ್ಲಿ ನೆಲೆಸಿರುವ ಬಂಧು ಬಳಗ, ಮಿತ್ರರು ಕಳುಹಿಸುವ ಅಲ್ಲಿನ ಛಾಯಾಚಿತ್ರಗಳನ್ನು ನೋಡುವುದೇ ಸಂಭ್ರಮ. ಒಂದೊಂದು ಕಡೆ ಒಂದೊಂದು ಬಗೆಯ ಆಚರಣೆ. ಕ್ಯಾಲೆಂಡರ್ ವರ್ಷಾಚರಣೆಗೆ ಇತ್ತೀಚೆಗೆ ನಮ್ಮಲ್ಲೂ ಬಹಳ ಸಂಭ್ರಮ ಪಡುತ್ತೇವೆ. ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವುದು , ಉಡುಗೊರೆ ಕೊಡುವುದು, ಚಾಕಲೇಟ್, ಸಿಹಿ ಹಂಚುವುದು ಎಲ್ಲಾ ಇದ್ದದ್ದೇ ಅಲ್ಲವೇ . ಇವಕ್ಕೆ ಒಂದು ಕಾರಣ ಬೇಕಷ್ಟೇ!2020 ಹಾಗೂ 2021 ಬಹಳ ನೆನಪಿನಲ್ಲಿ ಉಳಿಯುವ ವರ್ಷಗಳು. ಖುಷಿಯ ವಿಚಾರಕ್ಕಿಂತ ದುರಂತ ವರ್ಷಗಳೇ ಅನ್ನಬಹುದು.

Advertisement

ಅಲ್ಲಾ ಬದಲಾವಣೆ ಜಗದ ನಿಯಮ ಸರಿ, ಆದರೆ ಈ ಪರಿಯ ಬದಲಾವಣೆ?!?!.. ನೈಸರ್ಗಿಕ ಅವಘಡಗಳು ನಿತ್ಯವೆಂಬಂತೆ ನಡೆಯುತ್ತಿವೆ. ಮಳೆಯ ಸ್ವರೂಪ ಬದಲಾಗುತ್ತಿದೆ. ಪರಿಸರದಲ್ಲಿನ ಕಾಯಿಲೆಗಳ ತೀವ್ರತೆ , ಬಾಧಿಸುವ ವ್ಯಾಪ್ತಿ ದಿನದಿಂದ ದಿನಕ್ಕೆ ಬೇರೆ ಬೇರೆಯೇ. ಒಬ್ಬನಿಂದ ಇನ್ನೊಬ್ಬನಿಗೆ ಹರಡುವ , ಆಮೇಲಿನ ಪ್ರಭಾವ ಎಲ್ಲವೂ ವಿಭಿನ್ನ. ಎಲ್ಲವೂ ಆಯೋಮಯವೆನಿಸುತ್ತಿದೆ. ಈ ಕಷ್ಟ, ಸಂಕಷ್ಟ, ಬೇಸರಿಕೆ,ನೋವು ,ನಷ್ಟಗಳ ಭಾವನೆಗಳೆಲ್ಲವನ್ನು ಒಂದು ಗಂಟು ಮಾಡಿ ಬದಿಯಲ್ಲಿರಿಸೋಣ. ಮನಸನ್ನು ಹೊಸ ವರುಷದ ಸ್ವಾಗತಕ್ಕೆ ಸಿದ್ಧಗೊಳಿಸೋಣ.

Advertisement

Advertisement

2022 ದೇಶಕ್ಕೆ ಹಿತವನ್ನೇ ನೀಡಲಿ. ಅಭಿವೃದ್ಧಿಯ ಪಥದಲ್ಲಿ ದಿಟ್ಟ ಹೆಜ್ಜೆಗಳೊಂದಿಗೆ ಮುನ್ನಡೆಯಲಿ. ಮನಸಿನ ಸ್ವಾರ್ಥ, ಲೋಭ, ಹೊಟ್ಟೆಗಿಚ್ಚು ಬದಿಗಿಟ್ಟು ದೇಶಹಿತವೇ ಮುಖ್ಯವಾಗಲಿ . ಉಲ್ಲಾಸಕರವಾಗಿ ಮನಮನದಲ್ಲಿ ಸಂತಸವೇ ತುಂಬಿರಲಿ.‌ ಹೊಸ ವರುಷದ ಶುಭಾಶಯಗಳು.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಅಂಕುರಿತ ಕಾಳುಗಳನ್ನು ಹೇಗೆ ಬಳಸುವುದು? : ಅತಿಯಾದ ಮೊಳಕೆ ಅಪಾಯಕಾರಿಯೆ?
April 20, 2024
5:19 PM
by: The Rural Mirror ಸುದ್ದಿಜಾಲ
ಪರಿಸರ ಸ್ನೇಹಿ ಕೈಚೀಲಗಳ ಕುರಿತು ಒಂದಿಷ್ಟು ಮಾಹಿತಿ ನಿಮಗಾಗಿ : ನಮ್ಮ ದೇಶದ ಡಿಫೆನ್ಸ್ ರೀಸರ್ಚ ಡೆವಲಪ್ಮೆಂಟ್ ಸೆಂಟರ್‌ನಿಂದ ತಯಾರಿ
April 20, 2024
5:07 PM
by: The Rural Mirror ಸುದ್ದಿಜಾಲ
ಭೂ ಅಂತರ್ಗತ ನೀರಿನ ಒರತೆಗಳು.. ಮೇಲ್ಮೈ ಒರತೆ ಮತ್ತುಶಿಲಾಸ್ತರದ ನಡುವಣ… : ಸಮುದ್ರ ಸೇರುವ ನೀರು ವ್ಯರ್ಥವೇ ? ಖಂಡಿತ ಅಲ್ಲ.
April 20, 2024
4:46 PM
by: The Rural Mirror ಸುದ್ದಿಜಾಲ
ಎಲ್ಲರೂ ಒಂದಾಗಿ ಬಾಳುವ, ಮೇಳು-ಕೀಳು ಮದ -ಮತ್ಸರ ಬಿಟ್ಟು ಬದುಕುವ : ಎಲ್ಲಾರೂ ಮಾಡುವದು ಹೊಟ್ಟೆಗಾಗಿ… ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ :
April 20, 2024
4:21 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror