Advertisement
ಸುದ್ದಿಗಳು

ಅಡಿಕೆ ಬೆಳೆಗೆ ಕೇಂದ್ರ ಸರ್ಕಾರದಿಂದ ಸಹಾಯ ಇಲ್ಲ.. ? | ಅಚ್ಚರಿ ಮೂಡಿಸಿದ ಮೇಘಾಲಯ ಕೃಷಿ ಸಚಿವರ ಹೇಳಿಕೆ |

Share

ಅಡಿಕೆಯ ಬಗ್ಗೆ , ಅಡಿಕೆ ಬೆಳೆಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿದ್ದಂತೆಯೇ ಇದೀಗ ಮೇಘಾಲಯ ಕೃಷಿ ಸಚಿವ ಬಾಂಟೆಡೋರ್ ಲಿಂಗ್ಡೋಹ್ ಅವರು ಅಡಿಕೆಯಿಂದ ಆರೋಗ್ಯದ ಮೇಲೆ ಅಪಾಯದ ಕಾರಣ ಮುಂದಿರಿಸಿ ಭಾರತ ಸರ್ಕಾರವು ಇನ್ನು ಮುಂದೆ ಅಡಿಕೆಗೆ ಸಂಬಂಧಿಸಿದ ಯಾವುದೇ ಯೋಜನೆಗಳನ್ನು ಅನುಮೋದಿಸುವುದಿಲ್ಲ ಎಂದು ನೀಡಿರುವ ಹೇಳಿಕೆ ಇದೀಗ ಅಚ್ಚರಿಗೆ ಕಾರಣವಾಗಿದೆ.

ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಕಳೆದ ಹಲವು ಸಮಯಗಳಿಂದ ಆಗಾಗ ವರದಿಗಳು ಕಂಡುಬರುತ್ತಿದ್ದವು. ಅಂತರಾಷ್ಟ್ರೀಯ ಮಟ್ಟದಲ್ಲಿ ಅಡಿಕೆಯ ಗುಣಲಕ್ಷಣಗಳ ಬಗ್ಗೆ ಅಧ್ಯಯನಗಳು ನಡೆದು ಋಣಾತ್ಮಕ ವರದಿಗಳೇ ಹೆಚ್ಚಾಗಿ ಪ್ರಕಟವಾಗುತ್ತಿದ್ದವು. ಭಾರತದಲ್ಲೂ ಅಂತಹದ್ದೇ ವರದಿಗಳು ಆಗಾಗ ಬರುತ್ತಿರುವ ಬೆನ್ನಲ್ಲೇ ಇದೀಗ ಮೇಘಾಲಯದ ಕೃಷಿ ಸಚಿವ ಬಾಂಟೆಡೋರ್ ಲಿಂಗ್ಡೋಹ್ ಅವರು ಆರೋಗ್ಯದ ಮೇಲಿನ ಅಪಾಯಗಳನ್ನು ಗುರುತಿಸಿ ಅಡಿಕೆಗಾಗಿ ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್ (MIDH)  ಅಡಿಯಲ್ಲಿ ಭಾರತ ಸರ್ಕಾರವು ಇನ್ನು ಮುಂದೆ ಯೋಜನೆಗಳನ್ನು ಅನುಮೋದಿಸುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಮೇಘಾಲಯ ಸರ್ಕಾರದ ಬಜೆಟ್ ಅಧಿವೇಶನದ ಸಂದರ್ಭ ಈ ಹೇಳಿಕೆಯನ್ನು ಸದನದಲ್ಲಿ ನೀಡಿರುವುದು  ಅಚ್ಚರಿ ಮೂಡಿಸಿದೆ. ಈ ಬಗ್ಗೆ ಮೇಘಾಲಯದ ದಿ ಶಿಲ್ಲಾಂಗ್‌ ಟೈಮ್ಸ್‌ ವರದಿ ಮಾಡಿದೆ.

ಈ ಬಗ್ಗೆ ಇನ್ನೂ ಮುಂದುವರಿಸಿ ಹೇಳಿದ ಮೇಘಾಲಯ ಕೃಷಿ ಸಚಿವ ಬಾಂಟೆಡೋರ್ ಲಿಂಗ್ಡೋಹ್, ಕೇಂದ್ರವು ಮಾರುಕಟ್ಟೆ ಮತ್ತು ತಪಾಸಣೆ ನಿರ್ದೇಶನಾಲಯದ ಅಡಿಯಲ್ಲಿನ  ಸರಕು ಪಟ್ಟಿಯ ಡ್ರಗ್ಸ್ ಮತ್ತು ನಾರ್ಕೋಟಿಕ್ಸ್ ವಿಭಾಗದ ಅಡಿಯಲ್ಲಿ ಅಡಿಕೆಯನ್ನು ಗುರುತಿಸಿದೆ ಎಂದೂ ಹೇಳಿರುವ ಬಗ್ಗೆ ಮೇಘಾಲಯ ಮಾಧ್ಯಮ ವರದಿ ಮಾಡಿದೆ.

ಮೇಘಾಲಯದಲ್ಲಿ ಕೂಡಾ ಅಡಿಕೆಯನ್ನು ಬೆಳೆಯುವ ಕೃಷಿಕರು ಇದ್ದಾರೆ. ಈ ಕಾರಣದಿಂದ ಮೇಘಾಲಯ ಸರ್ಕಾರವು ಈ ಬೆಳೆಗಾರರಿಗೆ ನೆರವು ನೀಡುತ್ತದೆ. ಅಡಿಕೆಯನ್ನು ಪ್ರಸ್ತುತ ಮೇಘಾಲಯ ರಾಜ್ಯವು ಕೃಷಿ ಉತ್ಪನ್ನ ಎಂದು ಪಟ್ಟಿ ಮಾಡಿದೆ ಎಂದು ಹೇಳಿದರು.

ಮೇಘಾಲಯದ ಅಡಿಕೆ ಕೃಷಿಯು ಮಳೆಯಿಂದ ಸುಳಿಕೊಳೆಯ ರೋಗಕ್ಕೆ ತುತ್ತಾಗಿರುವುದು  ಹಾಗೂ ಇತರ ರೋಗಗಳಿಂದ ಕೃಷಿಕರು ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ಬಂದಿರುವ ಪ್ರಶ್ನೆಗೆ ಕೃಷಿ ಸಚಿವರು ಉತ್ತರಿಸಿದ್ದರು. ಮಾಹಿತಿ ಪ್ರಕಾರ ಮೇಘಾಲಯದ  43 ಹಳ್ಳಿಗಳ ಸುಮಾರು 298.4 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಹಾನಿಗೊಳಗಾಗಿವೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಹವಾಮಾನ ವರದಿ |13-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಹಂತ ಹಂತವಾಗಿ ಚುರುಕಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು, ಬಿಸಿಲು ಹೆಚ್ಚಾಗಿರುವ ನಡುವೆಯೇ ಸೆ.14ರಿಂದ ದಕ್ಷಿಣ ಒಳನಾಡಿನಲ್ಲಿ…

1 hour ago

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

5 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

1 day ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

1 day ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

1 day ago

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

2 days ago