ವಿವಿಧ ಶೈಲಿಗಳ ನಡುವೆ ಹೊಸತನದ ಭಾಗವತರ ಕೊಂಡಿಯಾಗಿ ಯಕ್ಷಗಾನ ರಂಗ ಸಾಗಿಸಿದವರು ಪದ್ಯಾಣ ಗಣಪತಿ ಭಟ್ ಅವರು ಕಲಾವಿದನಾಗಿಯೂ ಅಭಿಜಾತ ಕಲಾವಿದನಾಗಿಯೂ ಬೆಳೆದವರು. ಅನೇಕರನ್ನು ಬೆಳೆಸಿದವರು ಪದ್ಯಾಣ ಗಣಪತಿ ಭಟ್ ಎಂದು ನ್ಯಾಯವಾದಿ ಗಿರೀಶ್ ಭಟ್ ಮುಳಿಯಾಲ ಹೇಳಿದರು.
ಅವರು ಗುತ್ತಿಗಾರಿನ ವಳಲಂಬೆಯಲ್ಲಿ ಯಕ್ಷಕಲಾಭಿಮಾನಿ ಮಿತ್ರರ ವತಿಯಿಂದ ನಡೆದ ಯಕ್ಷಗಾನ ಗಾನಾರ್ಚನೆ ಕಾರ್ಯಕ್ರಮದಲ್ಲಿ “ಪದ್ಯಾಣ ಗಣಪತಿ ಭಟ್ ” ಅವರಿಗೆ ನುಡಿನಮನ ಸಲ್ಲಿಸಿದರು. ಪದಯಾನದ ಚಿಗುರು ಹೆಮ್ಮರವಾಗಿ ಬೆಳೆದದ್ದು ಮಾತ್ರವಲ್ಲ ಅನೇಕರನ್ನು ಬೆಳೆಯಿಸಿದ್ದಾರೆ ಕೂಡಾ. ಪದ್ಯಾಣ ಎಂಬ ಶಬ್ದದಲ್ಲಿಯೇ ಪದ್ಯ ಎನ್ನುವ ಭಾವವೂ ಇದೆ, ಹೀಗಾಗಿ ವಿವಿಧ ಶೈಲಿಗಳ ನಡುವೆ ಹೊಸತನದ ಅಧ್ಯಯನದಲ್ಲಿ ನಿರತರಾಗಿ ಹೊಸಶೈಲಿಯ ಜೊತೆಗೆ ಪರಿಪಕ್ವವಾದ ಪದಯಾನ ಮಾಡಿದ್ದಾರೆ ಎಂದರು.
ಸೂಕ್ತವಾದ ರಾಗ ಅಳವಡಿಕೆ, ಪಕ್ಕವಾದ್ಯದವರೊಂದಿಗೆ ಕಸರತ್ತು ಇತ್ಯಾದಿಗಳಲ್ಲೂ ಪ್ರೌಢಿಮೆ ಮೆರೆದವರು. ಸಂಘಟನೆ ದೃಷ್ಟಿಯಿಂದಲೂ ಸಹಭಾಗಿತ್ವ ನೀಡುವ ಪದ್ಯಾಣರು , ಒಡನಾಡಿಯಾಗಿ ಕಲಾವಿದರನ್ನು ಮಾತನಾಡಿಸುವವರಾಗಿದ್ದರು. ಯಕ್ಷಗಾನ ರಂಗದಲ್ಲಿ ಪದ್ಯಾಣರು ಅಭಿಜಾತ ಎನಿಸಿಕೊಂಡವರು, ಕಲೆಯನ್ನು ಧಾರೆ ಎರೆದು ಬೆಳೆಸುವವರು ಆಗಿದ್ದರು, ಅಂತಹ ಮೇರು ವ್ಯಕ್ತಿತ್ವ ಇಲ್ಲವಾಗಿರುವುದು ಯಕ್ಷರಂಗಕ್ಕೆ ತುಂಬಲಾರದ ನಷ್ಟ, ಆದರೆ ಅದೇ ಪರಂಪರೆ ಮುಂದುವರಿಯಲಿ ಎಂದು ಗಿರೀಶ್ ಮುಳಿಯಾಲ ಹೇಳಿದರು.
ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 12ರವರೆಗೆ ಬಿಟ್ಟುಬಿಟ್ಟು ಮಳೆಯಾಗುವ ಸಾಧ್ಯತೆ ಇದೆ. ಜಪಾನ್ ಸಮೀಪದ…
ನಬಾರ್ಡ್ ಸಮೀಕ್ಷೆಯ ಪ್ರಕಾರ, ಭಾರತದ ಗ್ರಾಮೀಣ ಕುಟುಂಬಗಳ ಪೈಕಿ ಶೇ.53ರಷ್ಟು ಕುಟುಂಬಗಳ ಆದಾಯ…
ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್ 4ರಂದು ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು…
ಯಡಕುಮೇರಿ ಭೂಕುಸಿತ ಪ್ರದೇಶದಲ್ಲಿ ಮಣ್ಣು ತೆರವು ಹಾಗೂ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದ್ದು,…
ಜಾಗತಿಕ ತಾಪಮಾನ ಪ್ರತಿ 1 ಡಿಗ್ರಿ ಏರಿದರೆ ಭಾರತದ ಭತ್ತದ ಇಳುವರಿ ಶೇ.6.6ರಷ್ಟು…
ಹಗಲು ನಿದ್ರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ರಾಘವೇಶ್ವರ ಶ್ರೀ ಎಚ್ಚರಿಸಿದ್ದಾರೆ.…