Opinion

ಅಡಿಕೆ ನೆರಳಿನ ನೆಲ ಬೇವು | ಅಡಿಕೆ ತೋಟದಲ್ಲಿ ಬೇರು ಹುಳುಗಳ ನಿಯಂತ್ರಣ ಮಾಡುತ್ತೆ ಈ ಕಿರಾತಕ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕನ್ನಡದಲ್ಲಿ ನೆಲ ಬೇವು ಅಥವಾ ಕಾಲಮೇಘ ಎಂದು ಕರೆಯಲ್ಪಡುವ ಈ ಸಸ್ಯವನ್ನು ಹಿಂದಿಯಲ್ಲಿ ಕಲ್ಮೇಖಿ, ಸಂಸ್ಕೃತದಲ್ಲಿ ಕಲ್ಕಿ, ಬಿಟರ್ ರಾಜ ಮತ್ತು ಇಂಗ್ಲಿಷ್‌ನಲ್ಲಿ ಆಂಡ್ರೋಗ್ರಾಫಿಸ್ ಪ್ಯಾನಿಕ್ಯುಲಾಟಾ (Andrographis paniculata) ಎಂದು ಕರೆಯಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಭಾರತೀಯ ಭಾಷೆಗಳಲ್ಲಿ ಕಲ್ಮೇಘ್ ಅಥವಾ ಕಲ್ಕಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ, ಜ್ವರ, ಕೆಮ್ಮು, ನೆಗಡಿ ಮತ್ತು ಇತರ ಹಲವಾರು ರೋಗಗಳ ಚಿಕಿತ್ಸೆಗಾಗಿ (Medicine) ಇದನ್ನು ಔಷಧಿಯಾಗಿ ಬಳಸಲಾಗುತ್ತದೆ. ಇದು ಕೇವಲ ಮನುಷ್ಯನ ಆರೋಗ್ಯ ಸಮಸ್ಯೆಗೆ ಮಾತ್ರವಲ್ಲ. ಕೃಷಿಯಲ್ಲಿ ಕೂಡ ಇದರ ಬಲು ಉಪಯೋಗ ಇದೆ ಅನ್ನೋದನ್ನು ಸ್ವತಃ ಪ್ರಯೋಗ ಮಾಡಿ ನೋಡಿದ್ದಾರೆ ಕೃಷಿಕ, ಪರಿಸರ ತಜ್ಞರಾದಂತ ಶಿವಾನಂದ ಕಳವೆ ಅವರು.

Advertisement

ಸುಮಾರು ಹದಿನೆಂಟು ವರ್ಷಗಳ ಹಿಂದಿನ ಘಟನೆ, ನಮ್ಮ ಅಡಿಕೆ ತೋಟದಲ್ಲಿ(areca nut) ಬೇರು ಹುಳುಗಳ(rootworms) ಸಮಸ್ಯೆ ಇತ್ತು. ಬೇವಿನ ಹಿಂಡಿ(neem) ಹಾಕಿ ನಿಯಂತ್ರಣ ಪ್ರಯತ್ನ ನಡೆದಿತ್ತು. ಆದರೂ ಪರಿಹಾರ ಸಿಕ್ಕಿರಲಿಲ್ಲ. ಒಮ್ಮೆ ನೆಲ ಬೇವಿನ ಎಲೆ ತಿಂದು ಘೋರ ಕಹಿ ಅನುಭವಿಸಿದ ನಂತರ ಇದು ತೋಟದಲ್ಲಿ ನೆಟ್ಟರೆ ಹೇಗೆ ? ಅಡಿಕೆ ತೋಟದ ಬೇರು ಹುಳು ನಿಯಂತ್ರಣವಾದೀತೆಂದು ಊಹೆ. ಮನೆಗೆ ತಂದಿದ್ದ ಗಿಡಗಳು ತೋಟದಲ್ಲಿ ನಾಟಿ ಆದವು.

ಇದು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಾದ್ಯಂತ ಉಷ್ಣವಲಯದ ಪ್ರದೇಶಗಳಲ್ಲಿ, ವಿಶೇಷವಾಗಿ ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಭೂತಾನ್, ಮ್ಯಾನ್ಮಾರ್, ಥೈಲ್ಯಾಂಡ್, ಕಾಂಬೋಡಿಯಾ, ಲಾವೋಸ್, ವಿಯೆಟ್ನಾಂ, ಮಲೇಷ್ಯಾ, ಇಂಡೋನೇಷ್ಯಾ, ಸಿಂಗಾಪುರ್, ಫಿಲಿಪೈನ್ಸ್, ಚೀನಾ, ಜಪಾನ್ ದೇಶಗಳಲ್ಲಿ ಕಂಡುಬರುತ್ತದೆ. ಆಯುರ್ವೇದ ಗ್ರಂಥಗಳ ಪ್ರಕಾರ, ಕಾಲ ಮೇಘವು “ಆಂಡ್ರೋಗ್ರಾಫೋಲೈಡ್” ಎಂಬ ಆಲ್ಕಲಾಯ್ಡ್ ಸಂಯುಕ್ತವನ್ನು ಹೊಂದಿದೆ. ಈ ವಸ್ತುವು ಅದರ ಔಷಧೀಯ ಗುಣಗಳಿಗೆ ಕಾರಣವಾಗಿದೆ. “ಕಾಲ” ಎಂದರೆ ಕಪ್ಪು ಮತ್ತು “ಮೇಘ” ಎಂದರೆ ನೀರು. ಹೀಗಾಗಿ, “ಕಾಲಮೇಘಗಳು” ಅಕ್ಷರಶಃ “ಕಪ್ಪು ನೀರು” ಎಂದು ನಾವು ಹೇಳಬಹುದು.

ಈಗ ನಮ್ಮ ತೋಟದಲ್ಲಿ ಅಂದು ನೆಟ್ಟ ನೆಲ ಬೇವು ನಗುತ್ತಿವೆ, ಇವನ್ನು ವರ್ಷಕ್ಕೆ ಒಮ್ಮೆ ಕಡಿದು ಮರದ ಬುಡಕ್ಕೆ ಹಾಕ್ತಾ ಇರುವುದರಿಂದ ಬೇರು ಹುಳು ಕಡಿಮೆ ಆಗಿವೆ. ತೋಟದ ನೆರಳಿನಲ್ಲಿ ಇದು ಸಮೃದ್ಧವಾಗಿ ಬೆಳೆಯುತ್ತದೆ. ಒಮ್ಮೆ ನೆಟ್ಟರೆ ಪ್ರತಿ ವರ್ಷ ಮಳೆಯಲ್ಲಿ ಚಿಗುರುತ್ತದೆ. ಚಳಿಗಾಲದ ಹೊತ್ತು ಸವರಿ ಮುಚ್ಚಿದರೆ ಕಹಿ ಎಲೆಗಳು ಮಣ್ಣಲ್ಲಿ ಕರಗಿ ಬೇರು ಹುಳುಗಳ ನಿಯಂತ್ರಣಕ್ಕೆ ನೆರವಾಗುತ್ತವೆ , ಹುಳುಗಳ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆ ಮಾಡುವ ತಾಕತ್ತು ಇದರ ಕಹಿತನಕ್ಕೆ ಇದೆ. ಕಳೆದ ಹತ್ತಾರು ವರ್ಷಗಳಿಂದ ಇದನ್ನು ಗಮನಿಸಿ ಹಲವರಿಗೆ ಹೇಳಲಾಗಿದೆ, ಆಸಕ್ತ ಕೆಲವರು ನೆಟ್ಟಿದ್ದಾರೆ.

About eighteen years ago, we had a problem with rootworms in our areca nut.. There was an attempt to control neem by herding. However, there was no solution. After eating a neem leaf and experiencing severe bitterness, how can it be planted in the garden? It is assumed that it is a root worm control in the groundnut garden. The plants brought home were planted in the garden.

Advertisement
ಬರಹ :
ಶಿವಾನಂದ ಕಳವೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಸಹಕಾರಿ ಸಂಸ್ಥೆಗಳ ಮೂಲಕ ಹಲಸಿನ ಮೌಲ್ಯ ವರ್ಧನೆ ಸಾಧ್ಯವೇ?

ಗ್ರಾಮೀಣ ಮತ್ತು ಸಣ್ಣ ನಗರ ಪ್ರದೇಶಗಳಲ್ಲಿ ಹಲಸಿನ ಮೌಲ್ಯ ವರ್ಧನೆ ಘಟಕಗಳು ಕಾರ್ಯನಿರ್ವಹಿಸುತ್ತಿವೆ.…

1 hour ago

ಸಾವಯವ ಕೃಷಿ ಉತ್ತೇಜನ | ಜೋಯಿಡಾ ತಾಲೂಕು ಸಾವಯವ ಕೃಷಿ ತಾಲೂಕು ಗುರಿ

ರಾಸಾಯನಿಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಗ್ಗುತ್ತಿದ್ದು, ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ನೈಸರ್ಗಿಕ…

6 hours ago

ವಿಕಸಿತ ಕೃಷಿ ಸಂಕಲ್ಪ ಅಭಿಯಾನ | 1 ಕೋಟಿ 34 ಲಕ್ಷಕ್ಕೂ ಅಧಿಕ ರೈತರೊಂದಿಗೆ ಸಂವಾದ

ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಅಡಿಯಲ್ಲಿ 2 ಸಾವಿರದ 170 ತಂಡಗಳನ್ನು ರಚಿಸಲಾಗಿತ್ತು.…

6 hours ago

ರಾಜ್ಯದಲ್ಲಿ 60 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ

ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲಿ ರಾಜ್ಯದ ಕೊಡುಗೆ ಅಪಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.…

6 hours ago

ಮಲೆನಾಡಿನಲ್ಲಿ “ಭಾರಿ” ಮಳೆಯ ದಿನದಲ್ಲಿ ಶಾಲೆಗೆ ರಜೆ ಕೊಡುವರಾರು…!?

ಮಲೆನಾಡು ಕರಾವಳಿಯ ಪ್ರದೇಶದ ಸರ್ಕಾರಿ ಶಾಲೆಗೆ ಹೋಗುವ ಅನೇಕ ಮಕ್ಕಳು ಹಳ್ಳ-ಹೊಳೆ ದಾಟಬೇಕು,…

6 hours ago