Opinion

ಅಡಿಕೆ ನೆರಳಿನ ನೆಲ ಬೇವು | ಅಡಿಕೆ ತೋಟದಲ್ಲಿ ಬೇರು ಹುಳುಗಳ ನಿಯಂತ್ರಣ ಮಾಡುತ್ತೆ ಈ ಕಿರಾತಕ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಕನ್ನಡದಲ್ಲಿ ನೆಲ ಬೇವು ಅಥವಾ ಕಾಲಮೇಘ ಎಂದು ಕರೆಯಲ್ಪಡುವ ಈ ಸಸ್ಯವನ್ನು ಹಿಂದಿಯಲ್ಲಿ ಕಲ್ಮೇಖಿ, ಸಂಸ್ಕೃತದಲ್ಲಿ ಕಲ್ಕಿ, ಬಿಟರ್ ರಾಜ ಮತ್ತು ಇಂಗ್ಲಿಷ್‌ನಲ್ಲಿ ಆಂಡ್ರೋಗ್ರಾಫಿಸ್ ಪ್ಯಾನಿಕ್ಯುಲಾಟಾ (Andrographis paniculata) ಎಂದು ಕರೆಯಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಭಾರತೀಯ ಭಾಷೆಗಳಲ್ಲಿ ಕಲ್ಮೇಘ್ ಅಥವಾ ಕಲ್ಕಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ, ಜ್ವರ, ಕೆಮ್ಮು, ನೆಗಡಿ ಮತ್ತು ಇತರ ಹಲವಾರು ರೋಗಗಳ ಚಿಕಿತ್ಸೆಗಾಗಿ (Medicine) ಇದನ್ನು ಔಷಧಿಯಾಗಿ ಬಳಸಲಾಗುತ್ತದೆ. ಇದು ಕೇವಲ ಮನುಷ್ಯನ ಆರೋಗ್ಯ ಸಮಸ್ಯೆಗೆ ಮಾತ್ರವಲ್ಲ. ಕೃಷಿಯಲ್ಲಿ ಕೂಡ ಇದರ ಬಲು ಉಪಯೋಗ ಇದೆ ಅನ್ನೋದನ್ನು ಸ್ವತಃ ಪ್ರಯೋಗ ಮಾಡಿ ನೋಡಿದ್ದಾರೆ ಕೃಷಿಕ, ಪರಿಸರ ತಜ್ಞರಾದಂತ ಶಿವಾನಂದ ಕಳವೆ ಅವರು.

Advertisement
Advertisement

ಸುಮಾರು ಹದಿನೆಂಟು ವರ್ಷಗಳ ಹಿಂದಿನ ಘಟನೆ, ನಮ್ಮ ಅಡಿಕೆ ತೋಟದಲ್ಲಿ(areca nut) ಬೇರು ಹುಳುಗಳ(rootworms) ಸಮಸ್ಯೆ ಇತ್ತು. ಬೇವಿನ ಹಿಂಡಿ(neem) ಹಾಕಿ ನಿಯಂತ್ರಣ ಪ್ರಯತ್ನ ನಡೆದಿತ್ತು. ಆದರೂ ಪರಿಹಾರ ಸಿಕ್ಕಿರಲಿಲ್ಲ. ಒಮ್ಮೆ ನೆಲ ಬೇವಿನ ಎಲೆ ತಿಂದು ಘೋರ ಕಹಿ ಅನುಭವಿಸಿದ ನಂತರ ಇದು ತೋಟದಲ್ಲಿ ನೆಟ್ಟರೆ ಹೇಗೆ ? ಅಡಿಕೆ ತೋಟದ ಬೇರು ಹುಳು ನಿಯಂತ್ರಣವಾದೀತೆಂದು ಊಹೆ. ಮನೆಗೆ ತಂದಿದ್ದ ಗಿಡಗಳು ತೋಟದಲ್ಲಿ ನಾಟಿ ಆದವು.

ಇದು ದಕ್ಷಿಣ ಮತ್ತು ಆಗ್ನೇಯ ಏಷ್ಯಾದಾದ್ಯಂತ ಉಷ್ಣವಲಯದ ಪ್ರದೇಶಗಳಲ್ಲಿ, ವಿಶೇಷವಾಗಿ ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಭೂತಾನ್, ಮ್ಯಾನ್ಮಾರ್, ಥೈಲ್ಯಾಂಡ್, ಕಾಂಬೋಡಿಯಾ, ಲಾವೋಸ್, ವಿಯೆಟ್ನಾಂ, ಮಲೇಷ್ಯಾ, ಇಂಡೋನೇಷ್ಯಾ, ಸಿಂಗಾಪುರ್, ಫಿಲಿಪೈನ್ಸ್, ಚೀನಾ, ಜಪಾನ್ ದೇಶಗಳಲ್ಲಿ ಕಂಡುಬರುತ್ತದೆ. ಆಯುರ್ವೇದ ಗ್ರಂಥಗಳ ಪ್ರಕಾರ, ಕಾಲ ಮೇಘವು “ಆಂಡ್ರೋಗ್ರಾಫೋಲೈಡ್” ಎಂಬ ಆಲ್ಕಲಾಯ್ಡ್ ಸಂಯುಕ್ತವನ್ನು ಹೊಂದಿದೆ. ಈ ವಸ್ತುವು ಅದರ ಔಷಧೀಯ ಗುಣಗಳಿಗೆ ಕಾರಣವಾಗಿದೆ. “ಕಾಲ” ಎಂದರೆ ಕಪ್ಪು ಮತ್ತು “ಮೇಘ” ಎಂದರೆ ನೀರು. ಹೀಗಾಗಿ, “ಕಾಲಮೇಘಗಳು” ಅಕ್ಷರಶಃ “ಕಪ್ಪು ನೀರು” ಎಂದು ನಾವು ಹೇಳಬಹುದು.

ಈಗ ನಮ್ಮ ತೋಟದಲ್ಲಿ ಅಂದು ನೆಟ್ಟ ನೆಲ ಬೇವು ನಗುತ್ತಿವೆ, ಇವನ್ನು ವರ್ಷಕ್ಕೆ ಒಮ್ಮೆ ಕಡಿದು ಮರದ ಬುಡಕ್ಕೆ ಹಾಕ್ತಾ ಇರುವುದರಿಂದ ಬೇರು ಹುಳು ಕಡಿಮೆ ಆಗಿವೆ. ತೋಟದ ನೆರಳಿನಲ್ಲಿ ಇದು ಸಮೃದ್ಧವಾಗಿ ಬೆಳೆಯುತ್ತದೆ. ಒಮ್ಮೆ ನೆಟ್ಟರೆ ಪ್ರತಿ ವರ್ಷ ಮಳೆಯಲ್ಲಿ ಚಿಗುರುತ್ತದೆ. ಚಳಿಗಾಲದ ಹೊತ್ತು ಸವರಿ ಮುಚ್ಚಿದರೆ ಕಹಿ ಎಲೆಗಳು ಮಣ್ಣಲ್ಲಿ ಕರಗಿ ಬೇರು ಹುಳುಗಳ ನಿಯಂತ್ರಣಕ್ಕೆ ನೆರವಾಗುತ್ತವೆ , ಹುಳುಗಳ ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆ ಮಾಡುವ ತಾಕತ್ತು ಇದರ ಕಹಿತನಕ್ಕೆ ಇದೆ. ಕಳೆದ ಹತ್ತಾರು ವರ್ಷಗಳಿಂದ ಇದನ್ನು ಗಮನಿಸಿ ಹಲವರಿಗೆ ಹೇಳಲಾಗಿದೆ, ಆಸಕ್ತ ಕೆಲವರು ನೆಟ್ಟಿದ್ದಾರೆ.

About eighteen years ago, we had a problem with rootworms in our areca nut.. There was an attempt to control neem by herding. However, there was no solution. After eating a neem leaf and experiencing severe bitterness, how can it be planted in the garden? It is assumed that it is a root worm control in the groundnut garden. The plants brought home were planted in the garden.

Advertisement
ಬರಹ :
ಶಿವಾನಂದ ಕಳವೆ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹೊಸರುಚಿ | ಹಲಸಿನ ಹಣ್ಣಿನ ಜಾಮ್

ಹಲಸಿನ ಹಣ್ಣಿನ ಜಾಮ್ ಗೆ ಬೇಕಾಗುವ ಸಾಮಗ್ರಿಗಳು : ಹಲಸಿನ ಹಣ್ಣು 3…

8 hours ago

ಅಡಿಕೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಸರಕಾರಗಳಿಂದ ರಚಿಸಲಾದ ಸಮಿತಿಗಳು ಏನು ಹೇಳಿವೆ..?

ಅಡಿಕೆಗೆ ಸಂಬಂಧಿಸಿ ಸುಮಾರು 7 ಸಮಿತಿಗಳು-ವರದಿಗಳು ಆಗಿವೆ. ಎಲ್ಲಾ ಸಂದರ್ಭದಲ್ಲೂ ಅಡಿಕೆಯ ಪರ್ಯಾಯ…

8 hours ago

ಮೇ ಕೊನೆಯ ವಾರದಂದು ಈ ಐದು ರಾಶಿಯವರಿಗೆ ಶುಕ್ರ ದೆಸೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

9 hours ago

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಬಾಗಲಕೋಟೆ ಜಿಲ್ಲೆಯ  ಶೂರ್ಪಾಲಿಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯ

ಕೆಲ ದೇವಾಲಯಗಳು ತಮ್ಮ ಶಿಲ್ಪಕಲೆ, ಇತಿಹಾಸ, ಸೌಂದರ್ಯಕ್ಕೆ ಹೆಸರಾದರೆ ಮತ್ತೆ ಕೆಲವು ಭಕ್ತರ…

18 hours ago

ಕಾಯಕ ಗ್ರಾಮ  ಯೋಜನೆ | ಹಿಂದುಳಿದ ಗ್ರಾಮಗಳನ್ನು ದತ್ತು ಸ್ವೀಕರಿಸುವಂತೆ ಸಲಹೆ

ʼಕಾಯಕ ಗ್ರಾಮʼ ಯೋಜನೆಯಡಿ ಹಿಂದುಳಿ ದಿರುವ  ಗ್ರಾಮ ಪಂಚಾಯತಿಯನ್ನು  ದತ್ತು ಸ್ವೀಕಾರ ಮಾಡಬೇಕೆಂದು…

18 hours ago

ಡೆಂಘೀ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರದ ಸೂಚನೆ

ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ದೃಷ್ಟಿಯಿಂದ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು…

18 hours ago