ಭೂತಾನ್‌ನಲ್ಲಿ ಅಡಿಕೆ ಇಳುವರಿ ಕುಸಿತ | ಮ್ಯಾನ್ಮಾರ್‌ ಅಡಿಕೆಯೇ ಭಾರತಕ್ಕೆ ಸಂಕಷ್ಟ | ಮತ್ತೆ 442 ಚೀಲ ಮ್ಯಾನ್ಮಾರ್ ಅಡಿಕೆ ವಶಕ್ಕೆ ಪಡೆದ ಅಧಿಕಾರಿಗಳು |

October 2, 2023
8:28 PM
ಮ್ಯಾನ್ಮಾರ್‌ ಮೂಲಕ ಭಾರತದೊಳಕ್ಕೆ ಬರುವ ಅಡಿಕೆ ಈಗ ಸಮಸ್ಯೆಯಾಗುತ್ತಿದೆ. ಇದೀಗ ಮತ್ತೆ 442 ಚೀಲ ಅಡಿಕೆ  ಕಳ್ಳಸಾಗಾಣಿಕೆಯನ್ನು ಅಸ್ಸಾಂ ರೈಪಲ್ಸ್‌ ಪಡೆ ವಶಕ್ಕೆ ಪಡೆದುಕೊಂಡಿದೆ.

ಭೂತಾನ್ 2022 ರಲ್ಲಿ ಸುಮಾರು 11,106 ಮೆಟ್ರಿಕ್ ಟನ್ ಅಡಿಕೆ ಉತ್ಪಾದಿಸಿತ್ತು. ಈ ಬಾರಿ ಶೇ.52 ರಷ್ಟು ಕಡಿಮೆ ಇಳುವರಿಯಾಗಿದೆ. ಭಾರತಕ್ಕೆ ಭೂತಾನ್‌ ಅಡಿಕೆ ಈಗ ಸಮಸ್ಯೆಯಾಗುತ್ತಿಲ್ಲ. ಆದರೆ ಮ್ಯಾನ್ಮಾರ್‌ ಮೂಲಕ ಭಾರತದೊಳಕ್ಕೆ ಬರುವ ಅಡಿಕೆ ಈಗ ಸಮಸ್ಯೆಯಾಗುತ್ತಿದೆ. ಇದೀಗ ಮತ್ತೆ 442 ಚೀಲ ಅಡಿಕೆ  ಕಳ್ಳಸಾಗಾಣಿಕೆಯನ್ನು ಅಸ್ಸಾಂ ರೈಪಲ್ಸ್‌ ಪಡೆ ವಶಕ್ಕೆ ಪಡೆದುಕೊಂಡಿದೆ.

ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು 442 ಚೀಲ ಅಡಿಕೆ ಸಹಿತ ಮೂವರನ್ನು ಗಡಿ ಭದ್ರತಾ ಪಡೆ ವಶಕ್ಕೆ ತೆಗೆದುಕೊಂಡಿದೆ.ಮಣಿಪುರದ ಕಾಮ್‌ಜಾಂಗ್ ಮತ್ತು ಉಖ್ರುಲ್ ಜಿಲ್ಲೆಗಳಲ್ಲಿ ಇಂಡೋ-ಮ್ಯಾನ್ಮಾರ್ ಗಡಿಯಲ್ಲಿ ಗಡಿಯಾಚೆಗಿನ ಅಡಿಕೆ ಕಳ್ಳಸಾಗಣೆಯನ್ನು ತಡೆದಿದೆ. 442 ಚೀಲ ಅಡಿಕೆಗಳನ್ನು ವಶಪಡಿಸಿಕೊಂಡಿದೆ. ಗಡಿ ಭದ್ರತಾ ಪಡೆಯು ಸೆ.29 ರಿಂದ ಕಾರ್ಯಾಚರಣೆ ಆರಂಭಿಸಿತ್ತು.ಒಟ್ಟು ಕಾರ್ಯಾಚರಣೆಯಲ್ಲಿ  442 ಚೀಲ ಅಡಿಕೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ತಲಾ 100 ಕೆಜಿಯ 50 ಚೀಲಗಳು ಮತ್ತು ತಲಾ 80 ಕೆಜಿಯಂತೆ 392 ಚೀಲಗಳು ಸೇರಿವೆ ಎಂದು ಅಸ್ಸಾಂ ಗಡಿಭದ್ರತಾ ಪಡೆ ಮಾಹಿತಿ ನೀಡಿದೆ.

ಭೂತಾನ್‌ನಲ್ಲಿ ಕಡಿಮೆಯಾದ ಅಡಿಕೆ ಇಳುವರಿ : ಭೂತಾನ್ 2022 ರಲ್ಲಿ ಸುಮಾರು 11,106 ಮೆಟ್ರಿಕ್ ಟನ್  ಅಡಿಕೆಗಳನ್ನು ಉತ್ಪಾದಿಸಿತ್ತು. ಹಿಂದಿನ ವರ್ಷಕ್ಕಿಂತ 52 ಪ್ರತಿಶತ ಕಡಿಮೆಯಾಗಿದೆ. ಭೂತಾನ್‌ ತನ್ನ ದೇಶದಲ್ಲಿ ಅಡಿಕೆ ಹೆಚ್ಚು ಉತ್ಪಾದಿಸಿದ ಸಂದರ್ಭ  ಭಾರತಕ್ಕೆ ಅಡಿಕೆಯನ್ನು ರಫ್ತು ಮಾಡುತ್ತದೆ ಮತ್ತು ಕಡಿಮೆ ಋತುವಿನಲ್ಲಿ ಭಾರತದಿಂದ  ಆಮದು ಮಾಡಿಕೊಳ್ಳುತ್ತದೆ.2022 ರಲ್ಲಿ ಉತ್ಪಾದನೆಯು 10,271 ಮೆಟ್ರಿಕ್ ಟನ್  ರಷ್ಟು ಕಡಿಮೆಯಾಗಿದೆ ಎಂದು ಭೂತಾನ್ ಕೃಷಿ ಮಾರುಕಟ್ಟೆ ಮತ್ತು ಸಹಕಾರಿ ಇಲಾಖೆಯ ದಾಖಲೆಗಳು ಹೇಳಿವೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ
August 22, 2026
6:47 AM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ
August 21, 2026
7:49 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ
August 21, 2026
4:04 PM
by: ಸಾಯಿಶೇಖರ್ ಕರಿಕಳ
ನಿಮ್ಮ ಹೆಸರಲ್ಲಿ 9 ಸಿಮ್‌ಗಳಿವೆಯೇ? ಆಗಸ್ಟ್ 24ರಿಂದ ಹೊಸ ನಿಯಮ – ಹೆಚ್ಚುವರಿ ನಂಬರ್‌ಗೆ ಬ್ರೇಕ್
August 21, 2026
7:04 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror