Advertisement
ಅಂತರಂಗ

ಅಂತರಂಗ | ಸ್ವಾರ್ಥರಹಿತ ಬೇಡಿಕೆಗಳಿಗೆ ರಾಜಕೀಯದಲ್ಲಿ ಮಾನ್ಯತೆಯಿಲ್ಲ…!

Share

ವರ್ಷದ ಹಿಂದೆ ಅಡಿಕೆ ಹಳದಿ ಎಲೆ ರೋಗದ ನಿಯಂತ್ರಣಕ್ಕಾಗಿ ರೋಗ ನಿರೋಧಕ ತಳಿ ಅಭಿವೃದ್ಧಿ ಪಡಿಸ ಬೇಕು ಎಂಬ ನಮ್ಮಗಳ ಬೇಡಿಕೆಯನ್ನು ಸಂಶೋಧನಾಲಯವೂ ಮಾನ್ಯ ಮಾಡಿತ್ತು.ಅದಕ್ಕಾಗಿ ಸೂಕ್ತ ಯೋಜನೆಯನ್ನೂ ರೂಪಿಸಿತ್ತು.ಯೋಜನೆಯ ಯಶಸ್ಸು ವಿಜ್ಞಾನಿಗಳೊಂದಿಗೆ ಕೃಷಿಕರೂ ಒಡಗೂಡಿದರೆ ಮಾತ್ರ ಸಿಗುವಂತಿತ್ತು.ಅದಕ್ಕಾಗಿ ಕೃಷಿಕರ ಸಭೆಯನ್ಬು ಮರ್ಕಂಜ ಮತ್ತು ಕಲ್ಲುಗುಂಡಿಯಲ್ಲಿ ನಡೆಸಲಾಯ್ತು. ………ಮುಂದೆ ಓದಿ……..

ಯೋಜನೆಯ ವಿವರ ಕೇಳಿದಾಗ ಇದರ ಅನುಷ್ಟಾನ ಸಾಧ್ಯತೆ ಇರುವುದು ಸಂಪಾಜೆ ಮತ್ತು ಚೆಂಬು ಗ್ರಾಮಗಳಲ್ಲಿ ಮಾತ್ರ ಎಂಬ ತೀರ್ಮಾನಕ್ಕೆ ನಾವೆಲ್ಲರೂ ಬಂದಿದ್ದೆವು.ಏಕೆಂದರೆ ಸಂದೇಹಾತೀತವಾಗಿ ನೈಸರ್ಗಿಕವಾದ ಹಳದಿ ಎಲೆ ರೋಗ ತಡೆ ಗಿಡ ಅಲ್ಲಷ್ಟೇ ಗುರುತಿಸ ಬಹುದು .ಅದೇ ಗಿಡಗಳನ್ಬು ವೈಜ್ಞಾನಿಕ ಮಾನದಂಡಗಳಿಗೆ ಅನುಗುಣವಾಗಿ ಅಭಿವೃದ್ಧಿ ಪಡಿಸುವುದು ನಮ್ಮ ಯೋಜನೆ. ಒಮ್ಮೆ ಹಳದಿ ಎಲೆ ರೋಗ ತಡೆ ಗಿಡ ಬಿಡುಗಡೆ ಗೊಂಡರೆ ಅದಕ್ಕೆ ಬರಬಹುದಾದ ಬೇಡಿಕೆ ಎಷ್ಟಿರ ಬಹುದೆಂಬ ಅಂದಾಜೂ ಇತ್ತು.ಪ್ರಥಮ‌ಹಂತದಲ್ಲಿ‌ ಹತ್ತು ಸಾವಿರದಷ್ಟಾದರೂ ಹಳದಿ ಎಲೆ ರೋಗ ತಡೆ ಗಿಡಗಳು ಕೃಷಿಕರಿಗೆ ಬಿಡುಗಡೆ ಆದರಷ್ಟೇ ಬೇಡಿಕೆಯನ್ನು ನಿಯಂತ್ರಿಸಲು ಸಾಧ್ಯ ಎಂಬುದು ನಮ್ಮ ಊಹೆಯಾಗಿತ್ತು.ಆ ಕಾರಣಕ್ಕೆ ಬೃಹತ್ ಗಾತ್ರದಲ್ಲೇ ಯೋಜನೆಯ ಅನುಷ್ಟಾನ ಆಗಬೇಕು ಎಂಬುದು ನಮ್ಮ ಅಪೇಕ್ಷೆಯಾಗಿತ್ತು.ಸಂಶೋಧನಾಲಯಕ್ಕೆ ಸಾಕಷ್ಟು ಹಣಕಾಸಿನ ಬೆಂಬಲ ಸಿಕ್ಕರೆ ಮಾತ್ರ ಇದು ಸಾಧ್ಯ ಅಂತ ನಮಗೆ ಮಾಹಿತಿ ಸಿಕ್ಕಿತ್ತು.

ನನ್ನಲ್ಲೊಂದು ಮೌಢ್ಯ ಇತ್ತು. ಸ್ವಾರ್ಥ ಇಲ್ಲದ ,ಸಮಾಜಮುಖಿಯಾದ ಕೆಲಸಕ್ಕೆ ಯಾವುದೇ ಅಡ್ಡಗಾಲೂ ಬೀಳದು ಅಂತ.ಅಡಿಕೆ ಕೃಷಿ ಎಲ್ಲರಿಗೂ ಸೇರಿದ್ದು.ಎಲ್ಲ ಪಕ್ಷೀಯರಲ್ಲೂ ಅಡಿಕೆ ಕೃಷಿಕರು ಇದ್ದಾರೆ. ಎಲ್ಲಾ ಪಕ್ಷದವರೂ ಹಳದಿ ಎಲೆ ರೋಗದಿಂದ ಪೀಡಿತರಾಗಿದ್ದಾರೆ ಮತ್ತು ಬಸವಳಿದಿದ್ದಾರೆ. ಆದ್ದರಿಂದ ಸರ್ವ ಪಕ್ಷೀಯರ ಬೆಂಬಲ ಈ ಯೋಜನೆಗೆ ನಿಶ್ಚಿತ ಅಂತ ಭ್ರಮಿಸಿದ್ದೆ.ಏನಾದರೂ ಸಂದೇಹ ಇದ್ದರೆ ಯೋಜನೆಯ ಯಶಸ್ಸಿನ ಬಗ್ಗೆ ಮಾತ್ರ ಇರುವಂತಹದ್ದು. ಅದನ್ಜು ವೈಜ್ಞಾನಿಕ ಮಾಹಿತಿಗಳ ಮುಖಾಂತರ ಬಗೆಹರಿಸಿಕೊಳ್ಳಬಹುದು ಎಂಬ ಹುಂಬ ವಿಶ್ವಾಸ ನನ್ನಲ್ಲಿತ್ತು. ಕಲ್ಲುಗುಂಡಿಯಲ್ಲಿ ನಡೆದಿದ್ದ ಸಭೆಯಲ್ಲಿ ಎಲ್ಲ ಪಕ್ಷೀಯರೂ ಇದ್ದರು.ಪ್ರತಿಯೋರ್ವರೂ ತಮ್ಮ ಬೆಂಬಲವನ್ನೂ ಸೂಚಿಸಿದರು.ಸಭೆಯ ಮುಕ್ತಾಯದ ಬಳಿಕ ಅನೌಪಚಾರಿಕ ಮಾತುಕತೆಗಳು ನಡೆದಿದ್ದವು. ಆಗ ನಾನು ಹೇಳಿದ್ದೆ.’ ರಾಜಕೀಯವನ್ನು ದೂರ ಇಟ್ಟು ಯೋಜನೆಯನ್ನು ಮುನ್ನಡೆಸುವ ಯತ್ನ ಮಾಡೋಣ’ ಅಂತ.
ಅಲ್ಲಿನ ಕಾಂಗ್ರೆಸ್ ಪಕ್ಷದ ನೇತಾರರು ಉತ್ತರಿಸಿದರು,’ ರಾಜಕೀಯ ದೂರ ಇಟ್ಟರೆ ಸರಕಾರದಿಂದ ಯಾವುದೇ ನೆರವೂ ಸಿಗದು.ಆದ್ದರಿಂದ ನೇರವಾಗಿ ಭಾಜಪದ ಹೆಸರಲ್ಲೇ ಮುನ್ನಡೆಯಿರಿ.ಇದು ಪಕ್ಷದ ಕಾರ್ಯಕ್ರಮವೇ ಆಗಲಿ.ಅವರುಗಳು ರಾಜಕೀಯ ಲಾಭ ತೆಗೆದುಕೊಳ್ಳಲಿ.ಆದರೂ ಈ ಹಳದಿ ಎಲೆ ರೋಗಕ್ಕೊಂದು ಪರಿಹಾರ ಸಿಕ್ಕಲಿ.’

ಮುಂದುವರೆದು ಹೇಳಿದರು,’ ಅಲ್ಲೋರ್ವರು ಬಲಿಷ್ಟರಿದ್ದಾರೆ.ರಾಮಚಂದ್ರನಂತಹವರು.ಅವರನ್ನು ಒಪ್ಪಿಸಿದರೆ ಮತ್ತೆಲ್ಲಾ ಸುಲಭವಾದೀತು.ಅವರನ್ನು ಮಾತನಾಡಿಸಿ’ ಅಂತ. ಬಲಿಷ್ಟರೊಡನೆ ಮಾತುಕತೆಗೆ ಸಮಯಾವಕಾಶ ಕೇಳಿದೆ.ದಿನ,ಸಮಯ ನಿರ್ಧಾರವಾಯ್ತುಸುಳ್ಯದಲ್ಲಿ ಮಾತುಕತೆ ನಡೆಯಿತು. ಬೇರಾರೂ ಇಲ್ಲ.ನಾವು ಮೂವರು ಮಾತ್ರ.ಬಲಿಷ್ಟರು ಸಂಪೂರ್ಣ ಸಹಕಾರದ ಭರವಸೆ ನೀಡಿದರು.ಅವರಿಗಿದ್ದ ಏಕೈಕ ಸಂದೇಹ ಎಂದರೆ ತಮ್ಮ ಮಾತನ್ನು ತೋಟಗಾರಿಕಾ ಸಚಿವರು ಎಷ್ಟರ ಮಟ್ಟಿಗೆ ಮಾನ್ಯ ಮಾಡ್ತಾರೆ ಎಂಬುದು ಮಾತ್ರ ಆಗಿತ್ತು.

ಸುಳ್ಯದ ಶಾಸಕರಿಗೆ ನಮ್ಮೆದುರಲ್ಲೇ ಫೋನ್ ಮಾಡಿದರು.ತೋಟಗಾರಿಕಾ ಸಚಿವರೊಡನೆ ಮಾತುಕತೆಗೆ ಸಮಯಾವಕಾಶ ನಿಗದಿಸಲು ಸೂಚಿಸಿದರು.ಐದು ನಿಮಿಷದ ಒಳಗಡೆ ಶಾಸಕರು ಉತ್ತರಿಸಿ ಮುಂದಿನ ಬುಧವಾರ ತೋಟಗಾರಿಕಾ ಸಚಿವರೊಡನೆ ಸುಳ್ಯದ ಕೃಷಿಕರ ತಂಡದೊಡನೆ ಭೇಟಿಯನ್ನು ನಿಗದಿಸಲಾಗಿದೆ ಎಂದರು.ಯಾರೆಲ್ಲ ಹೋಗುವುದು,ಹೇಗೆ ,ಯಾವಾಗ ಹೋಗುವುದು ಎಂಬುದನ್ನು ಮುಂದಕ್ಕೆ ನಿರ್ಧರಿಸೋಣ ಎಂಬಲ್ಲಿಗೆ ನಮ್ಮ ಅಂದಿನ ಸಭೆ ಮುಕ್ತಾಯ ಕಂಡಿತ್ತು.

Advertisement

ಮುಂದಿನ ಬುಧವಾರ ಕಳೆಯಿತು.ಸುಳ್ಯದ ಪ್ರಸಿದ್ದ ವಾರ ಪತ್ರಿಕೆಯ ಮುಖಾಂತರ ಮಾಹಿತಿ ಸಿಕ್ಕಿತು. ಸುಳ್ಯದ ಸುಮಾರು ಹತ್ತು ಜನ ಕೃಷಿಕರ ತಂಡ ಹಿಂದಿನ ಬುಧವಾರ ಶಾಸಕರೊಡಗೂಡಿ ತೋಟಗಾರಿಕಾ ಸಚಿವರನ್ನು ಭೇಟಿಯಾಗಿದ್ದರು.ಭೇಟಿಯಲ್ಲಿ ಕೃಷಿಕರ ತಂಡ ಸಚಿವರ ಜೊತೆ ಅಡಿಕೆಯ ಹಳದಿ ಎಲೆ ರೋಗ ಪೀಡಿತ ಕೃಷಿಕರುಗಳಿಗೆ ಆರ್ಥಿಕ ಪರಿಹಾರ ಒದಗಿಸಲು ನೂರು ಕೋಟಿ ರುಪಾಯಿಯ ಬೇಡಿಕೆ ಮುಂದಿಟ್ಟಿತ್ತು.ಹಳದಿ ಎಲೆ ರೋಗ ತಡೆ ಗಿಡಗಳ ಬಗೆಗೆ ಬೇಡಿಕೆ ಮುಂದೆ ಇಟ್ಟಿರಲಿಲ್ಲ. ಅಲ್ಲಿಗೆ ಈ ಪ್ರಯತ್ನ ಕೊನೆಗೊಂಡಿತು.ಆ ತಂಡ ಮುಂದಿಟ್ಟಿದ್ದ ನೂರು ಕೋಟಿ ರೂಪಾಯಿಯ ಮನವಿಯನ್ನು ಅವರುಗಳು ಹೊರಗಡೆಗೆ ಹೋದಕೂಡಲೇ ಮಾನ್ಯ ತೋಟಗಾರಿಕಾ ಸಚಿವರು ಏನು ಮಾಡಿದರು ಗೊತ್ತುಲ್ಲ, ಏಕೆಂದರೆ, ಮತ್ತೆಂದೂ ಅದರ ಬಗ್ಗೆ ಯಾರೂ ಮಾತನಾಡಲಿಲ್ಲ….!

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರಮೇಶ್‌ ದೇಲಂಪಾಡಿ

ರಮೇಶ್‌ ದೇಲಂಪಾಡಿ ಅವರು ಕೃಷಿಕರು. ಪ್ರಯೋಗಶೀಲ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಅಡಿಕೆ, ತೆಂಗು, ತಾಳೆ, ರಬ್ಬರ್‌ ಇವರ ಪ್ರಮುಖ ಕೃಷಿ. ಅಡಿಕೆ ಬೇರುಹುಳ, ಅಡಿಕೆ ಹಳದಿ ಎಲೆರೋಗ ಸೇರಿದಂತೆ ಕೃಷಿ ಸಂಬಂಧಿತ ವಿಚಾರಗಳಲ್ಲಿ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ.

Published by
ರಮೇಶ್‌ ದೇಲಂಪಾಡಿ

Recent Posts

2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…

3 hours ago

ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..

ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…

4 hours ago

ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ

ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…

4 hours ago

2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು

ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…

4 hours ago

ಕುಕ್ಕುಟ ಸಂಜೀವಿನಿ ಯೋಜನೆ : ಉಚಿತ ಕೋಳಿ ಮರಿ ಶೇಡ್ ನಿರ್ಮಾಣಕ್ಕೆ ಆರ್ಥಿಕ ನೆರವು

ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…

4 hours ago

ಹವಾಮಾನ ವರದಿ | 16-12-2025 | ಮೋಡ ಮಾತ್ರವೇ ಮಳೆ ಇದೆಯೇ…? | ಮುಂದೆ ಚಳಿಯ ಪ್ರಭಾವ ಹೇಗಿರಬಹುದು..?

17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

21 hours ago