ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಇವರು “ವಿಷಮುಕ್ತ ಆಹಾರ ಆಂದೋಲನದ(Toxic Free Food Movement) ಅಂಗವಾಗಿ ಸಾವಯವ ಕೈತೋಟ ತರಬೇತಿ”(Organic Horticulture Training) ಮತ್ತು ಸರ್ಟಿಫಿಕೇಟ್ ಕೋರ್ಸ್(Certificate course) ನ್ನು ನವಂಬರ್ 26, ಡಿಸೆಂಬರ್ 3, 10, 17 ರ ನಾಲ್ಕು ಭಾನುವಾರಗಳಲ್ಲಿ ತರಗತಿ ಪಾಠ ಮತ್ತು ಕ್ಷೇತ್ರಪ್ರಾಯೋಗಿಕ ತರಬೇತಿ ತರಗತಿಯನ್ನು ನಡೆಸಲಿದ್ದಾರೆ.
ಸಾವಯವ ಕೃಷಿಕ ಗ್ರಾಹಕ ಬಳಗ( ರಿ) ಮಂಗಳೂರು ಮತ್ತು ಶ್ರೀಭಾರತೀ ಸಮೂಹ ಸಂಸ್ಥೆಗಳು ನಂತೂರು ಇವರುಗಳ ಆಶ್ರಯದಲ್ಲಿ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ)ಮಂಗಳೂರು(Mangaluru) (ಬ್ಯಾಂಕ್ ಆಫ್ ಬರೋಡ ಸಂಯೋಜಿತ ಸಂಸ್ಥೆ) ಸಹಕಾರ ಹಾಗೂ ಸಹಯೋಗದಿಂದ ನಡೆಯಲಿದೆ.
ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಮಹಾನಗರ ವ್ಯಾಪ್ತಿ ಪ್ರದೇಶದಲ್ಲಿ ಕಳೆದ ಹತ್ತುವರ್ಷಗಳಿಂದ ವಿಷಮುಕ್ತ ಅನ್ನದ ಬಟ್ಟಲು ಮಾಡಬೇಕೆಂಬ ಉದ್ದೇಶದಿಂದ ವಿವಿಧ ಆಯಾಮಗಳಲ್ಲಿ ಜನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುತ್ತಾರೆ. ನಾವು ನಿತ್ಯ ಬಳಸುವ ವಿವಿಧ ಆಹಾರ ವಸ್ತುಗಳಲ್ಲಿ ಕಲಬೆರೆಕೆಯ ಸಮಸ್ಯೆ ಒಂದಾದರೆ ಬೇಸಾಯ ಇಳುವರಿ ಹೆಚ್ಚಿಸುವ ಸ್ವಾರ್ಥ ಲಾಭದ ಅಪೇಕ್ಷೆಯಿಂದ ಬಳಸಬಾರದ ವಿವಿಧ ರೀತಿಯ ರಾಸಾಯನಿಕ ಬಳಸಿ ಬೆಳೆಸಿದ ವಿವಿಧ ತರಕಾರಿಗಳು , ಹಣ್ಣು ಹಂಪಲುಗಳು ನಮ್ಮ ಆರೋಗ್ಯವನ್ನು ಸಂಪೂರ್ಣ ಹಾಳು ಮಾಡುತಿರುವ ಪರಿ ಇನ್ನೊಂದು ಕಡೆ. ಈ ಎಲ್ಲಾ ಸಮಸ್ಯೆಗಳನ್ನು ನಾವೇ ಬಗೆಹರಿಸಿ ನಮ್ಮ ನಮ್ಮ ಮನೆಯ ಸಣ್ಣ ಸಣ್ಣ ಜಾಗಗಳಲ್ಲಿ ಕೈತೋಟ ಕೃಷಿಯನ್ನು ಮಾಡುವ ಅತೀ ಸುಲಭ ಮತ್ತು ಸರಳ ವಿಧಾನಗಳನ್ನು ತಿಳಿಹೇಳುವ, ಕಲಿಸುವ 4 ಭಾನುವಾರಗಳ ಸರಣಿ ತರಬೇತಿ ಕಾರ್ಯಕ್ರಮ ಈ ಕೆಳಕಂಡಂತೆ ನಡೆಯಲಿದೆ.
ತರಬೇತಿಯ ಉದ್ಧೇಶಗಳು:
ಈ ಶಿಬಿರದ ಫಲಿತಾಂಶ
ಶಿಬಿರದಲ್ಲಿ ಪಾಲ್ಗೊಳ್ಳುವವರಿಗೆ ಸೂಚನೆಗಳು
ಸ್ಥಳ : # ಶ್ರೀಭಾರತೀ ಸಮೂಹ ಸಂಸ್ಥೆಗಳು ನಂತೂರು ವಿವೇಕಾನಂದ ರಸ್ತೆ 6ನೇ ಕ್ರಾಸ್ ನಂತೂರು ಪದವು ಮಂಗಳೂರು. ಮಾಹಿತಿ ಮತ್ತು ಸಂಪರ್ಕಕ್ಕಾಗಿ 9448835606 ಹಾಗೂ 9343569694
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…