Advertisement
MIRROR FOCUS

ನಿಯಂತ್ರಣಕ್ಕೆ ಬಾರದ ದೆಹಲಿ ವಾಯು ಮಾಲಿನ್ಯ | ಹೊಗೆ ಮತ್ತು ಮಂಜಿನಿಂದ ಆವೃತವಾದ ತಾಜ್​ ಮಹಲ್​ |ಪ್ರವಾಸಿಗರಿಗೆ ನಿರಾಸೆ

Share

ರಾಷ್ಟ್ರ ರಾಜಧಾನಿ ದೆಹಲಿಯ ವಾತಾವರಣ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ನಿಯಂತ್ರಣಕ್ಕೆ ತರಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆಯಾದರೂ ಕೈ ಮೀರಿ ಹೋಗುತ್ತಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದೀಗ ದೆಹಲಿಯಲ್ಲಿನ ವಾಯು ಮಾಲಿನ್ಯ ತಾಜ್​ಮಹಲ್​ಗೂ ತಟ್ಟಿದೆ. ತಾಜ್​ಮಹಲ್​ ನೋಡಲೆಂದು ಆಗ್ರಾ ಗೆ ಹೋಗುವ ತಮ್ಮ ಪ್ಲಾನ್‌ ಅನ್ನು ಕೊಂಚ ಮುಂದಕ್ಕೆ ಹಾಕಿ.

Advertisement
Advertisement
Advertisement
Advertisement
ದೆಹಲಿಯಲ್ಲಿ ವಾತಾವರಣ ಕುರಿತು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ನೀಡಿದ ಮಾಹಿತಿ ಪ್ರಕಾರ ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) ತೀವ್ರವಾಗಿ ಇಳಿಕೆ ಕಂಡಿದೆ. ಇನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶದ (NCR) ಇತರ ಭಾಗಗಳಲ್ಲಿನ ಗಾಳಿಯ ಗುಣಮಟ್ಟವು ದೆಹಲಿಯಂತೆಯೇ ಇಳಿಕೆ ಕಂಡಿದೆ ಎನ್ನಲಾಗಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಇಳಿಕೆಯಾಗಿರುವುದರಿಂದ, ಸೌಂದರ್ಯದಿಂದಲೇ ವಿಶ್ವವಿಖ್ಯಾತ ಕಟ್ಟಡವಾಗಿರುವ ಆಗ್ರಾದ ತಾಜ್ ಮಹಲ್ ಸೌಂದರ್ಯವೂ ಈ ಮಾಲಿನ್ಯದಿಂದ ಹದಗೆಟ್ಟಿದೆ. ದೆಹಲಿಯಲ್ಲಿನ ವಾಯು ಮಾಲಿನ್ಯ ತಾಜ್​ಮಹಲ್​ಗೂ ತಟ್ಟಿದೆ. ಹೊಗೆ ಮತ್ತು ಹಿಮದಿಂದಾಗಿ ತಾಜ್ ಮಹಲ್​ನ ಸೌಂದರ್ಯವೇ ಕಾಣುತ್ತಿಲ್ಲ. ದೂರದಿಂದ ನೋಡಿದ್ರೆ ತಾಜ್ ಮಹಲ್ ಸಂಪೂರ್ಣವಾಗಿ ಧೂಳು ಮತ್ತು ಹೊಗೆಯಿಂದ ಆವೃತವಾಗಿದೆ.
ದೆಹಲಿ NCR ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಪರಿಣಾಮವು ಆಗ್ರಾದಲ್ಲಿನ ಸ್ಮಾರಕಗಳ ಮೇಲೂ ಗೋಚರಿಸುತ್ತಿದೆ. ತಾಜ್ ಮಹಲ್‌ನ ನೈಜ ಸೌಂದರ್ಯ ಮಾಲಿನ್ಯದಿಂದಾಗಿ ಮುಚ್ಚಿಹೋಗಿದೆ. ಇನ್ನು ದೀಪಾವಳಿಗೂ ಮುನ್ನವೇ ಆಗ್ರಾ ನಗರದಲ್ಲಿ ವಾಯು ಮಾಲಿನ್ಯ ತೀವ್ರವಾಗಿ ಹೆಚ್ಚಾಗಿದೆ. ಗಾಳಿಯಲ್ಲಿ ಧೂಳಿನ ಕಣಗಳು ಮತ್ತು ಹೊಗೆಯ ಪ್ರಮಾಣ ನಿರಂತರವಾಗಿ ಹೆಚ್ಚುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ದೆಹಲಿ ಎನ್‌ಸಿಆರ್, ಹರಿಯಾಣ, ಗುರ್‌ಗಾಂವ್‌ನಿಂದ ಮಾಲಿನ್ಯದ ಹೊಗೆಯು ಆಗ್ರಾ ಕಡೆಗೆ ಚಲಿಸುತ್ತಿದೆ. ದೀಪಾವಳಿಗೆ ಮುಂಚಿತವಾಗಿ, ಆಗ್ರಾದ ವಾಯು ಗುಣಮಟ್ಟ ಸೂಚ್ಯಂಕ (AQI) 200 ದಾಟಿದೆ. ಗಾಳಿಯಲ್ಲಿರುವ ಸೂಕ್ಷ್ಮ ಕಣಗಳ ಸಂಖ್ಯೆ PM 2.5 ಆಗಿದೆ.

ವ್ಯೂ ಪಾಯಿಂಟ್‌ನಿಂದಲೂ ನೀವು ತಾಜ್‌ನ ಸೌಂದರ್ಯವನ್ನು ನೋಡಿ ಆನಂದಿಸಲು ಸಾಧ್ಯವಿಲ್ಲ. ತಾಜ್‌ಮಹಲ್‌ನ ಸೌಂದರ್ಯವನ್ನು ನೋಡಲು ಪ್ರತಿದಿನ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ವ್ಯೂ ಪಾಯಿಂಟ್‌ಗೆ ಭೇಟಿ ನೀಡುತ್ತಾರೆ. ಪ್ರವಾಸಿಗರು ಮೆಹ್ತಾ ಬಾಗ್ ವ್ಯೂ ಪಾಯಿಂಟ್, ಯಮುನಾ ತೆಂಡಾರಿ, ದಸರಾ ಘಾಟ್‌ನಿಂದ ತಾಜ್ ಮಹಲ್‌ನ ಸೌಂದರ್ಯವನ್ನು ನೋಡಬಹುದು. ಆದ್ರೆ ಈಗ ಅದೂ ಸಾಧ್ಯವಿಲ್ಲ. ಬೆಳಗ್ಗಿನ ವೇಳೆಯೂ ತಾಜ್​ಮಹಲ್ ಹೊಗೆ ಮತ್ತು ಮಂಜಿನಿಂದ ಸಂಪೂರ್ಣವಾಗಿ ಆವೃತವಾಗಿರುತ್ತದೆ. ದೀಪಾವಳಿ ನಂತರ ಪರಿಸ್ಥಿತಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ದೀಪಾವಳಿಗೆ ಇನ್ನು ಒಂದು ವಾರವೂ ಇಲ್ಲ. ಈ ಅವಧಿಯಲ್ಲಿ ಜನರು ಪಟಾಕಿಗಳನ್ನು ಸಹ ಸುಡುತ್ತಾರೆ. ಇದರಿಂದ ಮಾಲಿನ್ಯ ಹೆಚ್ಚಾಗಲಿದೆ. ಆಗ್ರಾದಲ್ಲಿ ಐದು ದಿನಗಳ ಕಾಲ ಪಟಾಕಿ ಸಿಡಿಸಲಾಗುತ್ತದೆ. ಹೀಗಾಗಿ ವಾತಾವರಣ ಹೊಗೆಯಿಂದ ತುಂಬುವ ಸಾಧ್ಯತೆಗಳಿರುತ್ತದೆ. ತಾಪಮಾನ ಕಡಿಮೆಯಾದಾಗ ಮಂಜು ಕೂಡ ಹೆಚ್ಚಾಗುತ್ತದೆ.

Advertisement
According to the information provided by the Central Pollution Control Board about the atmosphere in Delhi, the overall air quality index of Delhi has decreased drastically. As the air quality in Delhi-NCR has drastically decreased, the beauty of Agra's Taj Mahal, a world famous building for its beauty, has also deteriorated due to this pollution. Due to smoke and snow, the beauty of Taj Mahal is not visible. From a distance, the Taj Mahal is completely covered in dust and smoke.
- ಅಂತರ್ಜಾಲ ಮಾಹಿತಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ ಒತ್ತುವರಿ ತೆರವು

ಹಸಿರು ನ್ಯಾಯಾಧೀಕರಣ ಆದೇಶ ಹಾಗೂ ಜಿಲ್ಲಾಧಿಕಾರಿ ಸೂಚನೆಯಂತೆ ಮುಳಬಾಗಿಲು ತಾಲೂಕಿನ ಎಲ್ಲಾ ಕೆರೆಗಳ…

5 hours ago

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ ಕಳಸ ಬಂದ್ |

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವಂತೆ ಒತ್ತಾಯಿಸಿ  ಚಿಕ್ಕಮಗಳೂರು ಜಿಲ್ಲೆಯ ಕಳಸ ಪಟ್ಟಣದಲ್ಲಿ ಅಂಗಡಿ-ಮುಂಗಟ್ಟುಗಳನ್ನು…

5 hours ago

ಗ್ರಾಮೀಣ ಮಹಿಳೆಯರ ಸಶಕ್ತೀಕರಣ, ಡ್ರೋನ್ ದೀದಿ ನೆರವು | ಈವರೆಗೂ 500 ಡ್ರೋನ್ ಗಳ ವಿತರಣೆ

ಭವಿಷ್ಯದಲ್ಲಿ ದೇಶದ 6 ಲಕ್ಷ ಗ್ರಾಮಗಳಿಗೆ ತಲಾ 10 ಡ್ರೋಣ್ ಗಳನ್ನು ವಿತರಿಸುವ…

5 hours ago

ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳ

ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಆಯುಷ್ಮಾನ್ ಆರೋಗ್ಯ ಮಂದಿರಗಳಲ್ಲಿ, 30…

5 hours ago

15000 ಶಿಕ್ಷಕರ ಶೀಘ್ರ ನೇಮಕ | ಶಿಕ್ಷಣ ಸಚಿವ ಮಧು ಬಂಗಾರಪ್ಪ

ಹದಿನೈದು ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ರಾಜ್ಯ ಶಿಕ್ಷಣ ಮತ್ತು…

5 hours ago

ರಾಜ್ಯದ ಗ್ರಾಮ ಪಂಚಾಯತ್‌ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ʼದರ್ಶಿನಿʼ ವಿನೂತನ ಕಾರ್ಯಕ್ರಮಕ್ಕೆ  ಸರ್ಕಾರ ಚಾಲನೆ

ರಾಜ್ಯದ ಗ್ರಾಮ ಪಂಚಾಯತ್‌ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರಿವು ಕೇಂದ್ರಗಳು ಜ್ಞಾನದ ಕೇಂದ್ರಗಳಾಗಿದ್ದು, ಸ್ಪರ್ಧಾತ್ಮಕ…

1 day ago