Opinion

#Obesity | ಅತಿಬೊಜ್ಜು ನಿಯಂತ್ರಣಕ್ಕೆ ಏನು ಪರಿಹಾರ…? |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ದಿನದಿಂದ ದಿನಕ್ಕೆ ಬದಲಾಗುತ್ತಿರುವ ಈ ಆಧುನಿಕ ಜೀವನ ಶೈಲಿಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಕಾಣಬಹುದು. ಅತಿಯಾದ ಕೆಲಸದ ಒತ್ತಡ ಹಾಗೂ ಅನಿಮಿಯಿತ, ಅಸಮತೋಲನ ಆಹಾರ ಕ್ರಮವು ಅತಿ ಬೊಜ್ಜಿನ ಸಮಸ್ಯೆಗೆ ಒಂದು ಮೂಲ ಕಾರಣವಾಗಿದೆ.

Advertisement

ಅತಿಯಾದ ದೇಹ ತೂಕಕ್ಕೆ ಕಾರಣಗಳು: ಅತಿಯಾದ ಕೊಬ್ಬಿನ ಆಹಾರ ಸೇವನೆ, ಹಾರ್ಮೋನ್#Harmon ವ್ಯತ್ಯಾಸ #pcos, #Thyroid diseases ), ವ್ಯಾಯಾಮ, ವಾಕಿಂಗ್ ಮಾಡದೇ ಇರುವುದು, ಮಾನಸಿಕ ಒತ್ತಡ ಇತ್ಯಾದಿ.

ಆಯುರ್ವೇದ ಶಾಸ್ತ್ರವು ಆರೋಗ್ಯಕರ ಆಹಾರ ವಿಹಾರ, ದಿನಚರ್ಯ, ಋತುಚರ್ಯ, ಊಟದ ಸಮಯದ ಬಗ್ಗೆ ನಿರ್ದಿಷ್ಟ ಶಿಫಾರಸ್ಸುಗಳನ್ನು ಒದಗಿಸಿರುತ್ತದೆ. ಸ್ಥೂಲಕಾಯ ಸಮಸ್ಯೆಯ ಮೂಲವು ಆಹಾರದಲ್ಲಿ ಮಾತ್ರ ಅಲ್ಲ, ಆಹಾರ ಬಳಕೆಯ ವಿಧಾನ ಮತ್ತು ಮನಸ್ಸಿನ ಸ್ಥಿತಿಯನ್ನು ಅವಲಂಬಿಸಿದೆ. ಸಂಸ್ಕರಿಸಿದ/ ಫಾಸ್ಟ್ ಫುಡ್, ಅತಿಯಾದ ಕೊಬ್ಬಿನ ಆಹಾರ ಇವುಗಳನ್ನು ನಿರ್ಬಂಧಿಸಬೇಕು. ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ಎಲ್ಲಾ ರೀತಿಯ ಪೌಷ್ಟಿಕಾಂಶಗಳು ಒಳಗೊಂಡಿರಬೇಕು.ನಮ್ಮ ಪ್ರಕೃತಿಯನ್ನು ರೂಪಿಸುವ ವಿವಿಧ ಶಕ್ತಿಗಳು ಅಥವಾ ದೋಷಗಳನ್ನು ಅರಿತು ಅದಕ್ಕೆ ಅನುಗುಣವಾಗಿ ತಿನ್ನುವುದು ಸಹ ಮುಖ್ಯ. ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ಆಮ ಹೆಚ್ಚಾಗಿ ಅಗ್ನಿ ದರ್ಬಲಗೊಂಡು ದೋಷಗಳು ಉಲ್ಬಣಗೊಳ್ಳುವುದು. ಇದರಿಂದ ತೂಕ ಹೆಚ್ಚಳ ವಾಗುವುದು ಹಾಗೂ ಜಡತ್ವ ಉಂಟಾಗಿ ಅನೇಕ ಆರೋಗ್ಯ.ಸಮಸ್ಯೆ ಕಾಡಬಹುದು

ಆಹಾರ ಸೇವಿಸುವಾಗ ಟಿವಿ ವೀಕ್ಷಣೆ, ಪುಸ್ತಕ ಮೊಬೈಲ್‌ಗಳ ಬಳಕೆ ಮುಂತಾದ ಗೊಂದಲಮಯ ವಾತಾವರಣದಿಂದ ದೂರವಿರಬೇಕು. ನಾವು ತಿನ್ನುವ ಆಹಾರದ ಮೇಲೆ ಕೇಂದ್ರೀಕರಿಸಿ ಮನಸ್ಸನ್ನು ಶಾಂತಗೊಳಿಸಿ ತಿನ್ನುವುದರಿಂದ ದೇಹದ ತೂಕವನ್ನು ಸಮತೋಲನದಲ್ಲಿರಿಸಬಹುದು.. ಆಯುರ್ವೇದದ ಅನೇಕ ಔಷಧಿಗಳು ಮತ್ತು ಆಹಾರ ಪದ್ಧತಿಯಲ್ಲಿ ಬಳಸಲಾಗುವ ಗಿಡಮೂಲಿಕೆಗಳಿಂದ ತೂಕ ಕಡಿಮೆ ಮಾಡಬಹುದು. ಅವುಗಳಲ್ಲಿ ಬೆಳ್ಳುಳ್ಳಿ, ಮೆಂತೆ, ಅರಿಶಿನ, ನೆಲ್ಲಿಕಾಯಿ, ಗುಗ್ಗುಲು, ತ್ರಿಫಲ, ಚಕ್ಕೆಇತ್ಯಾದಿ ಗಿಡಮೂಲಿಕೆಗಳು

ಅತಿಯಾದ ತೂಕದಿಂದ ಆಗುವ ಕೆಲವು ಸಮಸ್ಯೆಗಳು:ದೇಹದ ತೂಕ ಹೆಚ್ಚಾದಾಗ ಅನೇಕ ಲಕ್ಷಣಗಳನ್ನು ಕಾಣಬಹುದು – ಅತಿಯಾದ ಆಯಾಸ, ಆಲಸ್ಯ, ಅತಿಯಾದ ನಿದ್ರೆ, ಕೀಲುಗಳಲ್ಲಿ ನೋವು ಮುಟ್ಟಿನ ಸಮಸ್ಯೆ, ಗರ್ಭಧಾರಣೆಯಲ್ಲಿ ಸಮಸ್ಯೆ ಇತ್ಯಾದಿ.

ಅತಿಯಾದ ಬೊಜ್ಜು ಅಥವಾ ಸ್ಥೂಲಕಾಯ ಸರಿಯಾದ ಸಮಯದಲ್ಲಿ ತಡೆಗಟ್ಟದೆ ಹೋದಲ್ಲಿ ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ.. ಹೃದಯಾಘಾತ ಸಂಭವಿಸಬಹುದು ಮಧುಮೇಹ, ರಕ್ತದೊತ್ತಡ, ಮಾನಸಿಕ ರೋಗಗಳಾದ ಖಿನ್ನತೆ ಆತಂಕ, ಸಂಧಿವಾತ, ಗರ್ಭಕೋಶ ಸಮಸ್ಯೆ ಇತ್ಯಾದಿ ಅನೇಕ ರೋಗಗಳನ್ನು ಎದುರಿಸಬೇಕಾಗುತ್ತದೆ.

ನಿಯಮಿತ ವ್ಯಾಯಾಮ, ದಿನನಿತ್ಯ ಯೋಗಾಭ್ಯಾಸ, ಸಮತೋಲಿತ ಆಹಾರ, ಇವುಗಳ ಜೊತೆಗೆ ಆಯುರ್ವೇದ ಔಷಧಿ ಮತ್ತು ಪಂಚಕರ್ಮ ಚಿಕಿತ್ಸೆಗಳಾದ ಉದ್ವರ್ತನ, ವೀರೇಚನ, ಲೇಖನ ಬಸ್ತಿ ಇತ್ಯಾದಿ. ಇವುಗಳನ್ನು ನುರಿತ ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳುವುದರಿಂದ ದೇಹದಲ್ಲಿ ಅನಗತ್ಯ ಕೊಬ್ಬನ್ನು ತೆಗೆದು ಹಾಕಿ ದೇಹದ ತೂಕವನ್ನು ಕಡಿಮೆ ಮಾಡಬಹುದು.

ಬರಹ :
ಡಾ.ಜ್ಯೋತಿ ಕೆ., ಲಕ್ಷ್ಮೀ ಕ್ಲಿನಿಕ್ ಮಂಗಳೂರು. 94481 68053
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಪುತ್ತೂರು ಜಾತ್ರೆ ಎಂದರೆ “ನಮ್ಮ ಮನೆ ಉತ್ಸವ”

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಪುತ್ತೂರು ಶ್ರೀ ಮಹತೋಭಾರ ಶ್ರೀ…

6 hours ago

ಕೆಲವು ವಿಶೇಷ ಯೋಗಗಳು ಮತ್ತು ಗ್ರಹಗಳ ಸಂಯೋಜನೆ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490

11 hours ago

ಮೀಸಲಾತಿಗಾಗಿ ಜಾತಿಯಾಗುವ ಮತಧರ್ಮ

ಜಾತಿಗಣತಿ ಮಾಡಿ ಏನನ್ನು ಸಾಧಿಸಲು ಸಾಧ್ಯ? ಸದ್ಯ ಬಹಿರಂಗ ಆಗಿರುವ ವರದಿಯು ಇನ್ನಷ್ಟು…

19 hours ago

ಸರಕಾರಿ ಶಾಲೆಯಲ್ಲಿ ಬೆಳೆಸಿದ ತರಕಾರಿ ಜಿಲ್ಲಾಧಿಕಾರಿಗೆ ಕೊಡುಗೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಸರಕಾರಿ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು…

20 hours ago

ಅನ್ನದ ಪರಿಮಳ ಮನವರಳಿಸ ಬಹುದಲ್ಲವೇ..!

ಅನ್ನದ ಪರಿಮಳ ಎಷ್ಟು ಸೊಗಸು. ಅಡುಗೆ ಮನೆಯ ಭಾಷೆಯೇ ಅಂತಹದ್ದು.

1 day ago

ಹೆಚ್ಚಿನ ಮೌಲ್ಯದ ಹಣ್ಣಿನ ಬೆಳೆಗಳ ಕುರಿತು ಚರ್ಚೆ | ಹಲಸು , ಡ್ರಾಗನ್‌ಫ್ರುಟ್‌ ಕೃಷಿಯ ಕಡೆಗೆ ಆದ್ಯತೆ |

ಭಾರತದ ವಿವಿಧ ಕಡೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇರುವ ಡ್ರಾಗನ್‌ ಫ್ರುಟ್(ಕಮಲಂ) ಹಾಗೂ…

1 day ago