Advertisement
Rural Mirror - ಅತಿಥಿ

ಕೃಷಿ ಬೆಳೆಯಲು ಕೃಷಿಯೂ ಪಠ್ಯದ ಭಾಗವಾಗಬೇಕು | ಪದ್ಮಶ್ರೀ ಸತ್ಯನಾರಾಯಣ ಬೆಳೆರಿ ಅಭಿಪ್ರಾಯ |

Share

ಸುಮಾರು 650ಕ್ಕೂ ಮಿಕ್ಕಿದ ವಿವಿಧ ತಳಿಗಳನ್ನು ಸಂರಕ್ಷಿಸುತ್ತಿರುವ ಕಾಸರಗೋಡು ಜಿಲ್ಲೆಯ ಬೆಳ್ಳೂರು ಗ್ರಾಪಂ ವ್ಯಾಪ್ತಿಯ ಬೆಳೆರೆ ಸತ್ಯನಾರಾಯಣ ಅವರು ಈ ಬಾರಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಗುರುವಾರ ಪ್ರಶಸ್ತಿಯನ್ನು ಸ್ವೀಕರಿಸಿದರು. …….ಮುಂದೆ ಓದಿ…..

Advertisement
Advertisement
ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುತ್ತಿರುವ ಸತ್ಯನಾರಾಯಣ ಬೆಳೆರಿ

ಪೂರ್ವಜರಿಂದ ಬಳುವಳಿಯಾಗಿ ಬಂದ ಸುಮಾರು 4 ಎಕರೆ ಜಮೀನಿನಲ್ಲಿ ಕೃಷಿ ನಡೆಸಿಕೊಂಡು ಬರುತ್ತಿರುವ ಸತ್ಯನಾರಾಯಣ ಅವರು  ಅಡಿಕೆ, ತೆಂಗು , ರಬ್ಬರ್ ಹಾಗು ಇತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.‌ ಹಲಸು ಗಿಡ ಕಸಿ ಮಾಡುವುದರಲ್ಲೂ ಅವರು ಪರಿಣಿತರು.  ಮೊದಲು ಗ್ರೋ ಬ್ಯಾಗ್ ನಲ್ಲಿ ಭತ್ತದ ತಳಿಗಳನ್ನು ಬೆಳೆಸಲು ಆರಂಭಿಸಿದ ಸತ್ಯನಾರಾಯಣ ಅವರಿಗೆ ಅಡಿಕೆ ಪತ್ರಿಕೆ ಮೂಲಕ ಚೆರ್ಕಾಡಿ ರಾಮಚಂದ್ರ, ಬೆಳ್ತಂಗಡಿಯ ಬಿ.ಕೆ. ದೇವರಾಯರ ಪರಿಚಯವಾಗಿ ಭತ್ತದ ತಳಿ ಸಂರಕ್ಷಣೆಯ ಆಸಕ್ತಿ ಮತ್ತಷ್ಟು ಹೆಚ್ಚಾಯಿತು. ಹಲವು ಕಡೆಗಳಿಂದ ಭತ್ತದ ತಳಿಗಳ ಸಂಗ್ರಹಿಸಿರುವ ಇವರ ಸಂಗ್ರಹದಲ್ಲಿ 650ಕ್ಕೂ ಮಿಕ್ಕಿದ ವಿವಿಧ ಭತ್ತದ ತಳಿಗಳಿವೆ. ತಳಿಗಳನ್ನು ಕೃಷಿ ವಿಶ್ವವಿದ್ಯಾನಿಲಯಗಳಿಗೆ, ಅಧ್ಯಯನಶೀಲ ವಿದ್ಯಾರ್ಥಿಗಳಿಗೆ, ಆಸಕ್ತ ಕೃಷಿಕರಿಗೆ ಉಚಿತವಾಗಿ ನೀಡುತ್ತಿರುವ ಸತ್ಯನಾರಾಯಣ ಬೆಳೆರಿ ಮೂಲ ತಳಿಯನ್ನು ಸಂರಕ್ಷಿಸುವ ಕೆಲಸ ಅತ್ಯಂತ ಕಷ್ಟಕರ ಎನ್ನುತ್ತಾರೆ. ಈ ವಾರದ ದ ರೂರಲ್‌ ಮಿರರ್.ಕಾಂ ಅತಿಥಿಯಾಗಿ ಕೃಷಿ-ಗ್ರಾಮೀಣ ಬದುಕಿನ ಬಗ್ಗೆ ಅವರು ಮಾತನಾಡಿದ್ದು ಹೀಗೆ….

Advertisement
ಸತ್ಯನಾರಾಯಣ ಬೆಳೆರಿ
ಇಂದು ಕೃಷಿಯಿಂದ ಯುವ ತಲೆಮಾರು ವಿಮುಖವಾಗುತ್ತಿದ್ದಾರೆ. ಕೃಷಿಗೆ ಪೂರಕವಾದ ವ್ಯವಸ್ಥೆ ಸರ್ಕಾರ, ಸಮಾಜದಿಂದ ಸಿಗುತ್ತಿಲ್ಲ. ಹೀಗಾಗಿ ಯುವ ಜನತೆ ಪೇಟೆಗೂ ಹೋಗುತ್ತಾರೆ. ಹೀಗಾಗಿ ಮಕ್ಕಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡುವ ಹಾಗೆ ಆಗಬೇಕು. ಇದಕ್ಕಾಗಿ ಶಿಕ್ಷಣ ಪದ್ದತಿ ಬದಲಾಗಬೇಕು. ಕೃಷಿಯೂ ಪಠ್ಯದಭಾಗವಾಬೇಕು.ಎಳವೆಯಲ್ಲಿಯೇ ಕೃಷಿಯನ್ನು ಕಲಿಯುವ ಹಾಗೆ ಆಗಬೇಕು. ಶಿಕ್ಷಣದ ಭಾಗವಾಗಿ ಕೃಷಿಯೂ ಬಂದರೆ ಮಕ್ಕಳಿಗೆ ಎಳವೆಯಲ್ಲಿಯೇ ಆಸಕ್ತಿ ಬೆಳೆಯುತ್ತದೆ.

ಕಲಿಕೆಯ ನಂತರ ಕೃಷಿಗೆ ಬಂದರೆ ಉನ್ನತವಾದ ಹೊಸ ಹೊಸ ಪ್ರಯೋಗ ಮಾಡಬಹುದು, ಅಧ್ಯಯನ ಕೂಡಾ ಮಾಡಬಹುದು ಹೀಗಾಗಿ ಕಲಿತವರು ಕೃಷಿಗೆ ಬರಬೇಕು. ಕೃಷಿಯಲ್ಲಿ ಇರುವಷ್ಟು ಸ್ವಾವಲಂಬನೆ ಬೇರೆಲ್ಲೂ ಇಲ್ಲ. ಬೇರೆಲ್ಲಾ ಕಡೆ ಬೇರೆಯವರ ಕೈಕೆಳಗೆ ದುಡಿಯಬೇಕು. ಇಲ್ಲಿ ಹಾಗಿಲ್ಲ. ಕೃಷಿಯಲ್ಲಿ ಇರುವಷ್ಟು ನೆಮ್ಮದಿ ಬೇರೆಲ್ಲೂ ಇಲ್ಲ.ನಾವೇ ಕೃಷಿ ಮಾಡುವ ಕಾರಣದಿಂದ ನಮ್ಮಲ್ಲಿಯ ಸ್ವಾತಂತ್ರ್ಯದಿಂದ ಉನ್ನತ ಸ್ಥಾನಮಾನ ಸಿಗಬಹುದು.ಜೀವನದಲ್ಲಿ ನೆಮ್ಮದಿ ಬಹುಮುಖ್ಯ, ಅದು ಕೂಡಾ ಕೃಷಿಯಿಂದ ಸಾಧ್ಯ.

Advertisement
ಜೀವನದಲ್ಲಿ ಆರೋಗ್ಯ ಮುಖ್ಯ. ಆರೋಗ್ಯ ಇಲ್ಲದಿದ್ದರೆ ಏನಿದ್ದರೂ ಪ್ರಯೋಜನ  ಇಲ್ಲ. ಆರೋಗ್ಯ ಉಳಿಸಿಕೊಳ್ಳಲು ಹೀಗಾಗಿ ಕೀಟನಾಶಕ ಬಳಕೆ ಮಾಡದ ಆಹಾರ ಬಳಕೆ ಮಾಡಬೇಕು. ಎಲ್ಲವೂ ವಿಷಯುಕ್ತವಾಗುತ್ತಿರುವ ಇಂದು, ನಾವೇ ಸ್ವತ: ಬೆಳೆಯುವಾಗ ಕಡಿಮೆ ರಾಸಾಯನಿಕ ಬಳಕೆ ಮಾಡಿದರೆ ಉತ್ತಮ ಗುಣಮಟ್ಟದ ಆಹಾರವೂ ಕೃಷಿಯಿಂದ ಸಾಧ್ಯವಿದೆ. ಅವಲಂಬನೆ ಮಾಡದೇ ಇದ್ದಾಗ ಕ್ವಾಲಿಟಿ ಆಹಾರವೂ ಸಾಧ್ಯ. ಕಡಿಮೆ ಜಾಗದಲ್ಲಿ ಇದ್ದವರಿಗೂ ಇದು ಸಾಧ್ಯ. ಅವರಿಗೆ ಬೇಕಾದ ತರಕಾರಿ ಬೆಳೆಯಲು ಕಡಿಮೆ ಜಾಗದಲ್ಲೂ ಸಾಧ್ಯವಿದೆ. ಎಲ್ಲದಕ್ಕೂ ಮನಸ್ಸು ಬಹಳ ಮುಖ್ಯ.

Education system should change. Agriculture should also be part of the curriculum. Agriculture should be learned through education Says PadmaShri awardee farmer Satyanarayan Beleri.

Advertisement

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಬೆವರುವುದು ಕಿರಿಕಿರಿ ಎನಿಸಿದರೂ ಬೆವರಿನಿಂದಾಗುವ ಪ್ರಯೋಜನಗಳನ್ನು ತಿಳಿದರೆ ಅಚ್ಚರಿಪಡುತ್ತೀರಿ..!

ಬೇಸಿಗೆ(summer) ಮತ್ತು ಬೆವರು(Sweating) ಒಂದು ಪರಿಪೂರ್ಣ ಸಮೀಕರಣವಾಗಿದೆ. ಬೇಸಿಗೆಯಲ್ಲಿ ಬೆವರುವುದು ಒಂದು ದೊಡ್ಡ…

5 hours ago

ದ್ವಿತೀಯ ಪಿಯುಸಿ 2ನೇ ಪರೀಕ್ಷೆ ಫಲಿತಾಂಶ ನಂತರವೇ CET ಫಲಿತಾಂಶ | ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ದ್ವಿತೀಯ ಪಿಯುಸಿಯ ಎರಡನೇ ಪರೀಕ್ಷೆ ಮತ್ತು ಕೃಷಿ ಪ್ರಾಯೋಗಿಕ ಪರೀಕ್ಷೆಗಳ ಫಲಿತಾಂಶ ಘೋಷಣೆಯಾದ…

11 hours ago

ಚುನಾವಣಾ ಕಣ | ಇಂದು 5 ನೇ ಹಂತದ ಮತದಾನ | 8 ರಾಜ್ಯಗಳ 49 ಕ್ಷೇತ್ರಗಳಲ್ಲಿ ಮತದಾನ

ದೇಶದ ಮಹಾ ಸಮರ ಲೋಕಸಭೆ ಚುನಾವಣೆ ೨೦೨೪. ದೇಶದ ಜನತೆ ಬಹಳ ಕುತೂಹಲದಿಂದ…

12 hours ago

Open Talk | ಆರಂಭದ ಮಳೆ ಹಾಗೂ ಗ್ರಾಮೀಣ ಭಾಗದಲ್ಲಿ ಕೈಕೊಡುವ ವಿದ್ಯುತ್..!‌ | ಪರಿಹಾರ ಏನು..?

ಮಳೆಗಾಲದ ಆರಂಭದಲ್ಲಿ ಮೂಲಭೂತ ಸೇವೆ ಎಂದು ಇಂದು ಗ್ರಾಮೀಣ ಭಾಗದಲ್ಲೂ ಬಯಸುವ ವಿದ್ಯುತ್‌…

15 hours ago