ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಡೆಯಲಿದೆ. ಈ ಸಂದರ್ಭ 9 ದಿನಗಳ ಕಾಲ ವಿವಿಧ ಕಲಾವಿದರಿಂದ ಕಲಾಸೇವೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.
ಅ.15 ರಿಂದ 23 ವರೆಗೆ ಪಂಜ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿಶೇಷ ಪೂಜಾದಿಗಳು ಹಾಗೂ ವಿಶೇಷ ಕಲಾ ಪ್ರಕಾರಗಳ ಸೇವೆಗಳು ಜರಗಲಿದೆ.
ನವರಾತ್ರಿ ಪೂಜಾ ಸಮಯದಲ್ಲಿ ಅಮ್ಮನವರಿಗೆ ಕಲಾ ಸೇವೆ ಹಲವು ಮಂದಿ ನೀಡಲಿದ್ದಾರೆ. ಅ.15 ರಂದು ಚೆಂಡೆ : ಸುಬ್ರಹ್ಮಣ್ಯ ಭಟ್ ದೇವಸ್ಯ ಅವರಿಂದ, ಅ.16 ರಂದು ತಬಲಾ : ಎನ್.ಪಿ. ಪವನ್ ಆಚಾರ್ ಅವರಿಂದ, ಅ.17 ರಂದುವೇದಮಂತ್ರ : ವೈದಿಕರಿಂದ, ಅ.18 ರಂದು ಯಕ್ಷ-ಗಾನ : ಗೋಪಾಲಕೃಷ್ಣ ಭಟ್ ದೇವಸ್ಯ, ಸುಭಾಷ್ ಪಂಜ, ರಚನಾ ಚಿತ್ಕಲ್, ಸುಬ್ರಹ್ಮಣ್ಯ ಭಟ್ ದೇವಸ್ಯ, ಲಕ್ಷ್ಮೀಶ ಶಗ್ರಿತ್ತಾಯ, ಗಗನ್ ಪಂಜ ಮತ್ತು ಇತರರಿಂದ, ಅ.19 ರಂದು ಭರತನಾಟ್ಯ : ಸರಯು ವಿ. ಮುಚ್ಚಲ, ಶಂಖನಾದ : ಸುಂದರ ದೇವಾಡಿಗ, ಅ.20 ರಂದು ವೇಣುವಾದನ : ರಾಮಚಂದ್ರ ಕಲ್ಕಣ್ಣ ಮತ್ತು ತಂಡದವರು, ಅ.21 ರಂದು ಭರತನಾಟ್ಯ : ವಸುಧಾ ಬಿ. ಮುಚ್ಚಿಲ, ಸ್ತುತಿ ರೈ ಅಡ್ಡಬೈಲು ಅವರಿಂದ, ಅ.22 ರಂದು ಭಕ್ತಿ ಸಂಗೀತ : ಸುಮಾ ಕೋಟೆ ಅವರಿಂದ, ಅ.23 ರಂದು ಪುರಾಣ ವಾಚನ : ಕೃಷ್ಣ ಭಟ್ ಸಂಪ ಅವರಿಂದ ನಡೆಯಲಿದೆ.
ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…
ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…
ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…
2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…
ನಾಗಾಲ್ಯಾಂಡ್ನಲ್ಲಿ ರಬ್ಬರ್ ಕೃಷಿ ಸುಮಾರು 29,794 ಹೆಕ್ಟೇರ್ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್ನಲ್ಲಿ ಸೂಕ್ತ…
ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…