ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ನಡೆಯಲಿದೆ. ಈ ಸಂದರ್ಭ 9 ದಿನಗಳ ಕಾಲ ವಿವಿಧ ಕಲಾವಿದರಿಂದ ಕಲಾಸೇವೆ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.
ಅ.15 ರಿಂದ 23 ವರೆಗೆ ಪಂಜ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ವಿಶೇಷ ಪೂಜಾದಿಗಳು ಹಾಗೂ ವಿಶೇಷ ಕಲಾ ಪ್ರಕಾರಗಳ ಸೇವೆಗಳು ಜರಗಲಿದೆ.
ನವರಾತ್ರಿ ಪೂಜಾ ಸಮಯದಲ್ಲಿ ಅಮ್ಮನವರಿಗೆ ಕಲಾ ಸೇವೆ ಹಲವು ಮಂದಿ ನೀಡಲಿದ್ದಾರೆ. ಅ.15 ರಂದು ಚೆಂಡೆ : ಸುಬ್ರಹ್ಮಣ್ಯ ಭಟ್ ದೇವಸ್ಯ ಅವರಿಂದ, ಅ.16 ರಂದು ತಬಲಾ : ಎನ್.ಪಿ. ಪವನ್ ಆಚಾರ್ ಅವರಿಂದ, ಅ.17 ರಂದುವೇದಮಂತ್ರ : ವೈದಿಕರಿಂದ, ಅ.18 ರಂದು ಯಕ್ಷ-ಗಾನ : ಗೋಪಾಲಕೃಷ್ಣ ಭಟ್ ದೇವಸ್ಯ, ಸುಭಾಷ್ ಪಂಜ, ರಚನಾ ಚಿತ್ಕಲ್, ಸುಬ್ರಹ್ಮಣ್ಯ ಭಟ್ ದೇವಸ್ಯ, ಲಕ್ಷ್ಮೀಶ ಶಗ್ರಿತ್ತಾಯ, ಗಗನ್ ಪಂಜ ಮತ್ತು ಇತರರಿಂದ, ಅ.19 ರಂದು ಭರತನಾಟ್ಯ : ಸರಯು ವಿ. ಮುಚ್ಚಲ, ಶಂಖನಾದ : ಸುಂದರ ದೇವಾಡಿಗ, ಅ.20 ರಂದು ವೇಣುವಾದನ : ರಾಮಚಂದ್ರ ಕಲ್ಕಣ್ಣ ಮತ್ತು ತಂಡದವರು, ಅ.21 ರಂದು ಭರತನಾಟ್ಯ : ವಸುಧಾ ಬಿ. ಮುಚ್ಚಿಲ, ಸ್ತುತಿ ರೈ ಅಡ್ಡಬೈಲು ಅವರಿಂದ, ಅ.22 ರಂದು ಭಕ್ತಿ ಸಂಗೀತ : ಸುಮಾ ಕೋಟೆ ಅವರಿಂದ, ಅ.23 ರಂದು ಪುರಾಣ ವಾಚನ : ಕೃಷ್ಣ ಭಟ್ ಸಂಪ ಅವರಿಂದ ನಡೆಯಲಿದೆ.
ದಕ್ಷಿಣ ಕನ್ನಡದಲ್ಲಿ ಕಾಡಾನೆಗಳ ಹಾವಳಿ ಕೃಷಿಕರ ಜೀವ ಮತ್ತು ಕೃಷಿಭೂಮಿಗೆ ಗಂಭೀರ ಅಪಾಯವಾಗುತ್ತಿರುವ…
ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 10 ದಿನಗಳವರೆಗೆ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…
ದಕ್ಷಿಣ-ಪೂರ್ವ ಏಷ್ಯಾದಿಂದ ಆಮದು ಮಾಡಿದ ಅಡಿಕೆಯನ್ನು ಬಾಂಗ್ಲಾದೇಶ ಮೂಲದ ಅಡಿಕೆಯೆಂದು ತಪ್ಪಾಗಿ ಘೋಷಿಸಿ…
ಕರಾವಳಿ ಮತ್ತು ಮಲೆನಾಡಿನಲ್ಲಿ ಆಗಸ್ಟ್ 24ರವರೆಗೂ ಬಿಸಿಲು, ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ…
ಗ್ರಾಮೀಣ ಹಾಗೂ ಸಾರಿಗೆ ಸಂಪರ್ಕದಿಂದ ವಂಚಿತ ಪ್ರದೇಶಗಳಿಗೆ ಸಾರ್ವಜನಿಕ ಸಾರಿಗೆ ಸೇವೆ ಹೆಚ್ಚಿಸುವ…
ಕರ್ನಾಟಕದಲ್ಲಿ ಮಳೆ ಚಟುವಟಿಕೆ ಸದ್ಯಕ್ಕೆ ಇಳಿಕೆಯಾಗಿದ್ದು, ಕರಾವಳಿಯಲ್ಲಿ ಮುಂದಿನ 10 ದಿನವೂ ಚದುರಿದ…