Advertisement
Opinion

ಕೃಷಿ ದೇಶದ ಬೆನ್ನೆಲುಬು | ಅರೆಕಾಲಿಕ ರೈತನಿಗೂ ಇತರ ಕ್ಷೇತ್ರದಂತೆ ಮಹತ್ವ ಸಿಗಲಿ | ಗ್ರಾಮೀಣಾಭಿವೃದ್ಧಿಗೆ ಸರ್ಕಾರಕ್ಕೆ ಸಲಹೆ ನೀಡಿದ ಆರ್ಥಿಕ ತಜ್ಞರು

Share

ದೇಶದ ಬೆಳವಣಿಗೆಯಲ್ಲಿ  ಪ್ರಮುಖ ಪಾತ್ರ ವಹಿಸೋದು ಕೃಷಿ. ಕೃಷಿಗೆ ಒತ್ತು ಕೊಟ್ಟಷ್ಟು ದೇಶ ಸುಭೀಕ್ಷವಾಗುತ್ತದೆ. ಭಾರತ (India) ದಿನದಿಂದ ದಿನಕ್ಕೆ ಅಭಿವೃದ್ಧಿಯ ಪಥದತ್ತ ಸಾಗುತ್ತಿರುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರದ(Agricultural sector)ಮೇಲೂ ಗಮನ ಹರಿಸಬೇಕು. ಇದರ ಜೊತೆಗೆ ಅರೆಕಾಲಿಕ ರೈತರಾದ ಸಣ್ಣ ಹಾಗೂ ಕನಿಷ್ಠ ವ್ಯವಸಾಯ ಮಾಡುತ್ತಿರುವ ರೈತರಿಗೆ ಸಹಕಾರಿಯಾಗಿರುವ ಅವರ ಕೃಷಿ ಉತ್ಪನ್ನಗಳಿಂದ ಸಾಕಷ್ಟು ಆದಾಯ ಪಡೆದುಕೊಳ್ಳಬಹುದಾದ ಹೊಸ ಗ್ರಾಮೀಣ ಅಭಿವೃದ್ಧಿ ಮಾದರಿಯ ಅಗತ್ಯವಿದೆ ಎಂದು NITI ಆಯೋಗದ ಸದಸ್ಯ ಮತ್ತು ಖ್ಯಾತ ಕೃಷಿ ಅರ್ಥಶಾಸ್ತ್ರಜ್ಞ ರಮೇಶ್ ಚಂದ್ (Agricultural economist Ramesh Chand) ತಿಳಿಸಿದ್ದಾರೆ.

Advertisement
Advertisement

ದೇಶವು 2047 ರಲ್ಲಿ ಅಭ್ಯುದಯ ಭಾರತ ಎಂದೆನಿಸಿದಾಗ ಇದಕ್ಕೆ ಸುಮಾರು 50 ಪ್ರತಿಶತದಷ್ಟು ಕೊಡುಗೆಯು ಗ್ರಾಮೀಣ ಭಾಗದಿಂದಲೇ ದೊರೆಯಲಿದೆ ಹಾಗಾಗಿ ಆ ಕ್ಷೇತ್ರಕ್ಕೆ ಹೆಚ್ಚಿನ ಮಾನ್ಯತೆ ನೀಡಬೇಕಾಗಿದೆ ಎಂದು ತಿಳಿಸಿದ್ದಾರೆ. ಪ್ರಸಕ್ತ ವಿದ್ಯಮಾನದಂತೆ ಗ್ರಾಮೀಣ ಆರ್ಥಿಕತೆಯ ಸುಮಾರು ಮೂರನೇ ಒಂದು ಭಾಗವು ಕೃಷಿಯನ್ನು ಆಧರಿಸಿದೆ ಹಾಗೂ ಮೂರನೇ ಎರಡರಷ್ಟು ಆದಾಯವು ಕೃಷಿಯೇತರ ಮೂಲಗಳಿಂದ ಬರುತ್ತದೆ ಆದ್ದರಿಂದ ಗ್ರಾಮೀಣ ಅಭಿವೃದ್ಧಿಯಲ್ಲಿ ಅರೆಕಾಲಿಕ ರೈತರಿಗೆ ಮಹತ್ವ ನೀಡಬೇಕು. ಅದರಲ್ಲೂ ಸಣ್ಣ ಹಾಗೂ ಕನಿಷ್ಠ ವ್ಯವಸಾಯ ಮಾಡುವ ವ್ಯವಸಾಯಿಗರಿಗೆ ಆದ್ಯತೆ ನೀಡಬೇಕು ಎಂದು ರಮೇಶ್ ಚಂದ್ ತಿಳಿಸಿದ್ದಾರೆ.

Advertisement
ಪ್ರಪಂಚದ ಇತರ ದೇಶಗಳಿಗೆ ಹೋಲಿಸಿದರೆ ಕೃಷಿಕರಿಗೆ ಬೆಂಬಲ ಸೀಮಿತವಾಗಿದೆ: ಗ್ರಾಮೀಣ ಕೃಷಿಯೇತರ ವಲಯದಿಂದ ಆದಾಯವನ್ನು ಹೆಚ್ಚಿಸಲು NITI ಆಯೋಗ್ ಭಾರತಕ್ಕೆ ಹೊಸ ಅಭಿವೃದ್ಧಿ ಮಾದರಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಚಂದ್ ಮಾಹಿತಿ ನೀಡಿದರು. ವಿಶ್ವದ ಇತರ ದೇಶಗಳು ಅಭಿವೃದ್ಧಿ ಹೊಂದುತ್ತಿರುವ ಅದೇ ಬಗೆಯಲ್ಲಿ ಭಾರತ ಕೂಡ ಪ್ರಗತಿ ಸಾಧಿಸುತ್ತಿದೆ. ಆದರೆ ಭಾರತದ ಜನಸಂಖ್ಯೆಯ ಸುಮಾರು 64-65 ಪ್ರತಿಶತದಷ್ಟು ಜನರು ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ, ಇನ್ನು ಬ್ರೆಜಿಲ್‌ಗೆ ಹೋಲಿಸಿದರೆ 12-14% ದಷ್ಟು ಜನರು ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿದ್ದಾರೆ ಎಂದು ರಮೇಶ್ ಮಾಹಿತಿ ನೀಡಿದ್ದಾರೆ.

ನಗರೀಕರಣವು ಭಾರತದಲ್ಲಿ ನಡೆಯುತ್ತಿದೆ ಆದರೆ ಪ್ರಪಂಚದಾದ್ಯಂತ ಬಹಳ ನಿಧಾನಗತಿಯಲ್ಲಿದೆ. ಆರ್ಥಿಕತೆಯಲ್ಲಿ ಕೃಷಿಯ ಪಾಲು ಕಡಿಮೆಯಾದಾಗ, ಜನರು ಕೃಷಿಯೇತರ ವಲಯದಲ್ಲಿ ಉದ್ಯೋಗಗಳನ್ನು ಪಡೆಯುತ್ತಾರೆ. ಇದು ಭಾರತದಲ್ಲಿ ನಡೆಯುತ್ತಿಲ್ಲ ಎಂಬುದು ರಮೇಶ್ ಚಂದ್ ಮಾತಾಗಿದೆ. ಕೃಷಿ ಹಾಗೂ ಕೃಷಿಕರಿಗೆ ಯಾವ ಮಟ್ಟಿಗೆ ಬೆಂಬಲ ಸಹಕಾರ ದೊರೆಯುತ್ತಿದೆ ಎಂಬುದನ್ನು ಗಮನಿಸುವುದಾದರೆ ಕಳೆದ ಏಳು ವರ್ಷಗಳ ಇತ್ತೀಚಿನ ಪಿಎಲ್‌ಎಫ್‌ಎಸ್ ಅಂಕಿ ಅಂಶಗಳ ಪ್ರಕಾರ ಕೃಷಿಯಿಂದ ಉದ್ಯಮಕ್ಕೆ ಕಾರ್ಮಿಕ ಬಲವನ್ನು ಬದಲಾಯಿಸುವ ಪ್ರವೃತ್ತಿ ನಿಂತುಹೋಗಿದೆ ಎಂಬುದು ತಿಳಿದು ಬಂದಿದೆ ಎಂಬುದಾಗಿ ಹೇಳಿದ್ದಾರೆ. ರಚನಾತ್ಮಕ ರೂಪಾಂತರವು ಉತ್ಪಾದನೆಯಲ್ಲಿ ನಡೆಯುತ್ತಿದೆ ಆದರೆ ಉದ್ಯೋಗದಲ್ಲಿ ಅಲ್ಲ ಎಂದು ಚಂದ್ ತಿಳಿಸಿದ್ದಾರೆ.

ಸಣ್ಣ ಹಾಗೂ ಕನಿಷ್ಠ ವ್ಯವಸಾಯ ಮಾಡುವ ರೈತರಿಗೆ ಬೆಂಬಲ ದೊರೆಯಬೇಕು: ಪಂಚಾಯಿತಿಗಳು ಮತ್ತು ಇತರ ಸ್ಥಳೀಯ ಸಂಸ್ಥೆಗಳಿಗೆ ಸಮರ್ಪಕವಾಗಿ ಅಧಿಕಾರ ನೀಡಬೇಕಾಗಿದೆ, ಮತ್ತು ಗ್ರಾಮೀಣ ಸಾಮಾನ್ಯ ಆಸ್ತಿಗಳ ವ್ಯಾಪಾರೀಕರಣವನ್ನು ತಡೆಯಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎಂದು ಅವರು ಕರೆ ನೀಡಿದರು. ನಗರೀಕರಣವು ಸಂಭವಿಸಿದಾಗ ಪ್ರಪಂಚದ ಇತರ ಭಾಗಗಳಿಗಿಂತ ಭಿನ್ನವಾಗಿ, ಏಷ್ಯಾದಲ್ಲಿ ದೊಡ್ಡ ಕೃಷಿಕ್ಷೇತ್ರಗಳು ತಯಾರಾಗಲು ಸಾಧ್ಯವಿಲ್ಲ ಎಂದು ಚಂದ್ ಹೇಳಿದ್ದು ಇದಕ್ಕೆ ಅಧ್ಯಯನದ ದಾಖಲೆಯನ್ನು ಅವರು ಮುಂದಿಟ್ಟಿದ್ದಾರೆ. 47% ದಷ್ಟು ಸಣ್ಣ ಹಾಗೂ ಮಾರ್ಜಿನಲ್ ರೈತರುಗಳು ದೊಡ್ಡ ದೊಡ್ಡ ಶ್ರೀಮಂತ ಕೃಷಿಕರಿಗಿಂತ ಹೆಚ್ಚು ದಕ್ಷರಾಗಿದ್ದಾರೆ ಅವರ ಕೃಷಿ ಭೂಮಿ ಸಣ್ಣದಾಗಿದೆ ಹಾಗಾಗಿ ಅವರ ಕೃಷಿಭೂಮಿಯಿಂದ ಸಾಕಷ್ಟು ಆದಾಯ ಪಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

Advertisement

Ramesh, a member of the NITI Commission and a renowned agricultural economist, said that as India is moving towards the path of development day by day, attention should be paid to the agricultural sector and a new rural development model that can help small and marginal farmers such as part-time farmers and get sufficient income from their agricultural products. Chand (Agricultural economist Ramesh Chand) said. – ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಕ್ಷಯ ತೃತೀಯ : ಅನಂತ ಶುಭವನ್ನು ತರುವ ಹಬ್ಬ : ಚಿನ್ನ ಖರೀದಿಸುವುದೊಂದೆ ಅಕ್ಷಯ ತೃತೀಯ ಅಲ್ಲ

ಅಕ್ಷಯ ತೃತೀಯ(Akshaya Trutiya)... ಅಕ್ಷಯ ತೃತೀಯ ತಾರೀಕು 10/05/2024, ಶುಕ್ರವಾರ, ಈ ದಿನದಂದು…

3 hours ago

ಪಾರಂಪರಿಕ ಬೀಜೋತ್ಸವ : ದಾವಣಗೆರೆಯಲ್ಲಿ ನಡೆಯಲಿದೆ ಸಂಭ್ರಮದ ಬೀಜ ವೈಭವ

ಬೀಜ(Seed) ಎಂಬುದು ಬರೀ ಬಿತ್ತನೆ ವಸ್ತುವಲ್ಲ. ಅದು ಕೃಷಿಯ(Agriculture) ಜೀವನಾಡಿ. ಸಾವಿರಾರು ವರ್ಷಗಳಿಂದ…

3 hours ago

ಬ್ರೆಜಿಲ್‌ನಲ್ಲಿ ಹೆಚ್ಚಿದ ಪ್ರವಾಹ ತೀವ್ರತೆ : ಸಾವಿನ ಸಂಖ್ಯೆ 78ಕ್ಕೆ ಏರಿಕೆ, 105 ಮಂದಿ ನಾಪತ್ತೆ : 1,15,000ಕ್ಕೂ ಹೆಚ್ಚು ಜನರ ಸ್ಥಳಾಂತರ

ಎಲ್‌ ನಿನೋ ಪ್ರಭಾವ ಹಿನ್ನೆಲೆ ದೇಶದಾದ್ಯಂತ ಬರಗಾಲದ ಛಾಯೆ ಆವರಿಸಿತ್ತು. ಕಳೆದ ೧೫…

3 hours ago

ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣ : ಬೃರೋಬ್ಬರಿ 2 ವರ್ಷಗಳ ಬಳಿಕ ಪ್ರಮುಖ ಆರೋಪಿ ಬಂಧನ

ಒಬ್ಬ ಅಮಯಾಕ ಯುವಕನ ಹತ್ಯೆ(Murder) ಮಾಡಿದ ಆರೋಪಿಯನ್ನು ಕಂಡು ಹಿಡಿಯಲು ಸರ್ಕಾರ ಬರೋಬ್ಬರಿ…

4 hours ago

Karnataka Weather | 10-05-2024 | ಮಳೆ ಮುನ್ಸೂಚನೆ ಇಂದೂ ಇದೆ | ಆದರೆ….?

ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯ ಮುನ್ಸೂಚನೆ ಇರುವುದರಿಂದ ಇಂತಹಲ್ಲೆ ಮಳೆಯಾಗುತ್ತದೆ ಅಂತ ಹೇಳಲು…

6 hours ago