Advertisement
MIRROR FOCUS

ಕಂಪೌಂಡ್‌ ವಾಲಿನಲ್ಲಿ ಕಾಳುಮೆಣಸು ಕೃಷಿ | ನಗರದಲ್ಲಿ ಕಾಳುಮೆಣಸು ಸ್ವಾವಲಂಬನೆ |

Share

ಈಗ ಹಲವು ಕಡೆ ಕಾಳುಮೆಣಸು ಬೆಳೆಯುವ ವಿವಿಧ ಪ್ರಯತ್ನಗಳ ಬಗ್ಗೆ ಚರ್ಚೆಯಾಗುತ್ತಿದೆ. ಈ ನಡುವೆ ನಗರ ಪ್ರದೇಶದಲ್ಲೂ ಮನೆ ಬಳಕೆಗೆ ಅಗತ್ಯವಿದ್ದಷ್ಟು ಕಾಳುಮೆಣಸು ಹೇಗೆ ಬೆಳೆಯಬಹುದು ಎನ್ನುವುದು ಕೂಡಾ ಆಸಕ್ತಿಯ ವಿಷಯ. ಇದನ್ನು ಬ್ಯಾಂಕ್‌ ಉದ್ಯೋಗಿ, ಪುತ್ತೂರಿನ ವಿಶ್ವಾಸ್‌ ಸುಬ್ರಹ್ಮಣ್ಯ ಅವರು ಮಾಡಿದ್ದಾರೆ. ತಮ್ಮ ಮನೆಗೆ ಅಗತ್ಯ ಇರುವಷ್ಟು ಕಾಳುಮೆಣಸು ಬೆಳೆಯುತ್ತಿದ್ದಾರೆ.…..ಮುಂದೆ ಓದಿ….

ವಿಶ್ವಾಸ್‌ ಸುಬ್ರಹ್ಮಣ್ಯ ಅವರು ಪುತ್ತೂರಿನಲ್ಲಿ ಮನೆ ನಿರ್ಮಾಣದ ಮಾಡಿದ ಬಳಿಕ ಮನೆಯ ಪಕ್ಕದ ಕಂಪೌಂಡ್‌ ವಾಲ್‌ಗೆ ಸುಮಾರು 10 ವರ್ಷಗಳ ಹಿಂದೆ ಕಾಳುಮೆಣಸು ಬಳ್ಳಿ ಬಿಟ್ಟಿದ್ದರು. ಅದಾಗಿ 3-4 ವರ್ಷಗಳ ಬಳಿಕ ಕಾಳುಮೆಣಸು ಕೊಯ್ಲು ಆರಂಭವಾಗಿದೆ, ಗೋಡೆಯ ತುಂಬೆಲ್ಲಾ ಕಾಳುಮೆಣಸು ಬಳ್ಳಿ ಹಬ್ಬುತ್ತಾ ಸಾಗಿದೆ. ಬಹುದೊಡ್ಡ ಆರೈಕೆ ಮಾಡುತ್ತಿಲ್ಲ ಎನ್ನುವ ವಿಶ್ವಾಸ್‌ ಕೃಷ್ಣ ಅವರು, ವರ್ಷಕ್ಕೊಂದು ಬಾರಿ ಸಾವಯವ ಗೊಬ್ಬರ ನೀಡುತ್ತೇವೆ. ಒಂದೆರಡು ಬಳ್ಳಿ ಅಂದು ನಾಟಿ ಮಾಡಿದ್ದು, ಈಗ ಅದು ಇಡೀ ಗೋಡೆ ತುಂಬಾ ವ್ಯಾಪಿಸಿದೆ, ಸದ್ಯ  5 ಕೆಜಿಯಷ್ಟು ಕಾಳುಮೆಣಸು ಲಭ್ಯವಾಗುತ್ತದೆ. ನಮ್ಮ ಮನೆ ಬಳಕೆಗೆ ಸಾಕಾಗುತ್ತದೆ ಎನ್ನುತ್ತಾರೆ ವಿಶ್ವಾಸ್‌ ಸುಬ್ರಹ್ಮಣ್ಯ. ಯಾವುದೇ ಔಷಧಿ ಸಿಂಪಡಣೆ ಮಾಡುತ್ತಿಲ್ಲ, ರೋಗವೂ ಕಡಿಮೆ ಎಂದು ಹೇಳುತ್ತಾರೆ.

ನಗರ ಪ್ರದೇಶದಲ್ಲಿ ಗೋಡೆಯ ಅಲಂಕಾರಕ್ಕೂ ಕಾಳುಮೆಣಸು ಬಳ್ಳಿಯ ಮಾದರಿ ಆದರೆ, ಮನೆ ಉಪಯೋಗಕ್ಕೆ ಕಾಳುಮೆಣಸು ಕೂಡಾ ಲಭ್ಯವಾದಂತಾಗುತ್ತದೆ. ಈ ಮೂಲಕ ಕಾಳುಮೆಣಸು ಸ್ವಾವಲಂಬನೆಯ ಮಾದರಿಯನ್ನು ವಿಶ್ವಾಸ್‌ ಸುಬ್ರಹ್ಮಣ್ಯ ತೋರಿಸಿದ್ದಾರೆ.

Vishwas subrahmanya from Puttur has set a model in urban households by successfully growing a pepper vine on the compound wall of his residence.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಹಾನಿಕಾರಕವಲ್ಲ – ಅಧ್ಯಯನ ಪ್ರಗತಿಯಲ್ಲಿ | ಹಾಳೆತಟ್ಟೆ ಹಾನಿಕಾರಕವಲ್ಲ

ಅಡಿಕೆಯ ಆರೋಗ್ಯ ಪರಿಣಾಮ ಹಾಗೂ ಸುರಕ್ಷತೆ ಕುರಿತು ರಾಷ್ಟ್ರೀಯ ಮಟ್ಟದ ಸಂಸ್ಥೆಗಳೊಂದಿಗೆ ಸಂಯುಕ್ತ…

5 hours ago

ಗಿರಿಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ | ಮುಳ್ಳಯ್ಯನಗಿರಿ–ಸೀತಾಳಯ್ಯಗಿರಿಯಲ್ಲಿ ಜಾಗೃತಿ ಕಾರ್ಯ

ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯಗಿರಿ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಪ್ರವಾಸಿಗರಿಗೆ ಜಾಗೃತಿ ಮೂಡಿಸಲಾಯಿತು.…

7 hours ago

ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ | ಲೀಟರ್‌ಗೆ ₹2 ಹೆಚ್ಚಳ ಘೋಷಿಸಿದ ಕೋಮುಲ್

ಯುಗಾದಿ ಹಿನ್ನೆಲೆ ಕೋಲಾರ ಜಿಲ್ಲೆಯಲ್ಲಿ ಹಾಲಿನ ದರ ಲೀಟರ್‌ಗೆ ₹2 ಹೆಚ್ಚಳ ಮಾಡಲಾಗಿದೆ.…

7 hours ago

ಅಡಿಕೆ ರೋಗಕ್ಕೆ “100% ಬಯೋ ಗ್ಯಾರಂಟಿ” ಔಷಧಿ? — ICAR ಸ್ಪಷ್ಟನೆ | ಇನ್ನೂ ಅಧ್ಯಯನವೇ ಆಗಿಲ್ಲ…!

ಅಡಿಕೆ ಎಲೆಚುಕ್ಕಿ ರೋಗಕ್ಕೆ 100% ಪರಿಣಾಮಕಾರಿ ಎಂದು ಹೇಳಲಾಗುತ್ತಿರುವ ಬಯೋ ಔಷಧಿಗಳಿಗೆ ICAR…

8 hours ago

ಹವಾಮಾನ ವರದಿ | 17-03-2026 | ಬೇಸಿಗೆಗೆ ಬ್ರೇಕ್ ಕೊಟ್ಟ ಮಳೆ..! ಮಾರ್ಚ್ ಅಂತ್ಯದವರೆಗೂ ರಾಜ್ಯದ ಹಲವೆಡೆ ಗುಡುಗು-ಸಹಿತ ಮಳೆಯ ಅಲರ್ಟ್

ರಾಜ್ಯದ ಹಲವೆಡೆ ಗುಡುಗು-ಸಹಿತ ಮಳೆಯ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ…

13 hours ago

ಅತಿಹೆಚ್ಚು ಮಳೆ ಬೀಳುವ ಬೆಟ್ಟಗಳು ಒಣಗುತ್ತಿವೆಯೇ? – ಮೇಘಾಲಯದ ನೀರಿನ ಸಂಕಷ್ಟದ ಎಚ್ಚರಿಕೆ

ಭೂಮಿಯಲ್ಲೇ ಅತಿಹೆಚ್ಚು ಮಳೆಯಾಗುವ ಮೇಘಾಲಯ ಈಗ ನೀರಿನ ಕೊರತೆಯ ಆತಂಕ ಎದುರಿಸುತ್ತಿದೆ. ಹವಾಮಾನ…

21 hours ago