ಈಗ ಹಲವು ಕಡೆ ಕಾಳುಮೆಣಸು ಬೆಳೆಯುವ ವಿವಿಧ ಪ್ರಯತ್ನಗಳ ಬಗ್ಗೆ ಚರ್ಚೆಯಾಗುತ್ತಿದೆ. ಈ ನಡುವೆ ನಗರ ಪ್ರದೇಶದಲ್ಲೂ ಮನೆ ಬಳಕೆಗೆ ಅಗತ್ಯವಿದ್ದಷ್ಟು ಕಾಳುಮೆಣಸು ಹೇಗೆ ಬೆಳೆಯಬಹುದು ಎನ್ನುವುದು ಕೂಡಾ ಆಸಕ್ತಿಯ ವಿಷಯ. ಇದನ್ನು ಬ್ಯಾಂಕ್ ಉದ್ಯೋಗಿ, ಪುತ್ತೂರಿನ ವಿಶ್ವಾಸ್ ಸುಬ್ರಹ್ಮಣ್ಯ ಅವರು ಮಾಡಿದ್ದಾರೆ. ತಮ್ಮ ಮನೆಗೆ ಅಗತ್ಯ ಇರುವಷ್ಟು ಕಾಳುಮೆಣಸು ಬೆಳೆಯುತ್ತಿದ್ದಾರೆ.…..ಮುಂದೆ ಓದಿ….
ವಿಶ್ವಾಸ್ ಸುಬ್ರಹ್ಮಣ್ಯ ಅವರು ಪುತ್ತೂರಿನಲ್ಲಿ ಮನೆ ನಿರ್ಮಾಣದ ಮಾಡಿದ ಬಳಿಕ ಮನೆಯ ಪಕ್ಕದ ಕಂಪೌಂಡ್ ವಾಲ್ಗೆ ಸುಮಾರು 10 ವರ್ಷಗಳ ಹಿಂದೆ ಕಾಳುಮೆಣಸು ಬಳ್ಳಿ ಬಿಟ್ಟಿದ್ದರು. ಅದಾಗಿ 3-4 ವರ್ಷಗಳ ಬಳಿಕ ಕಾಳುಮೆಣಸು ಕೊಯ್ಲು ಆರಂಭವಾಗಿದೆ, ಗೋಡೆಯ ತುಂಬೆಲ್ಲಾ ಕಾಳುಮೆಣಸು ಬಳ್ಳಿ ಹಬ್ಬುತ್ತಾ ಸಾಗಿದೆ. ಬಹುದೊಡ್ಡ ಆರೈಕೆ ಮಾಡುತ್ತಿಲ್ಲ ಎನ್ನುವ ವಿಶ್ವಾಸ್ ಕೃಷ್ಣ ಅವರು, ವರ್ಷಕ್ಕೊಂದು ಬಾರಿ ಸಾವಯವ ಗೊಬ್ಬರ ನೀಡುತ್ತೇವೆ. ಒಂದೆರಡು ಬಳ್ಳಿ ಅಂದು ನಾಟಿ ಮಾಡಿದ್ದು, ಈಗ ಅದು ಇಡೀ ಗೋಡೆ ತುಂಬಾ ವ್ಯಾಪಿಸಿದೆ, ಸದ್ಯ 5 ಕೆಜಿಯಷ್ಟು ಕಾಳುಮೆಣಸು ಲಭ್ಯವಾಗುತ್ತದೆ. ನಮ್ಮ ಮನೆ ಬಳಕೆಗೆ ಸಾಕಾಗುತ್ತದೆ ಎನ್ನುತ್ತಾರೆ ವಿಶ್ವಾಸ್ ಸುಬ್ರಹ್ಮಣ್ಯ. ಯಾವುದೇ ಔಷಧಿ ಸಿಂಪಡಣೆ ಮಾಡುತ್ತಿಲ್ಲ, ರೋಗವೂ ಕಡಿಮೆ ಎಂದು ಹೇಳುತ್ತಾರೆ.
ನಗರ ಪ್ರದೇಶದಲ್ಲಿ ಗೋಡೆಯ ಅಲಂಕಾರಕ್ಕೂ ಕಾಳುಮೆಣಸು ಬಳ್ಳಿಯ ಮಾದರಿ ಆದರೆ, ಮನೆ ಉಪಯೋಗಕ್ಕೆ ಕಾಳುಮೆಣಸು ಕೂಡಾ ಲಭ್ಯವಾದಂತಾಗುತ್ತದೆ. ಈ ಮೂಲಕ ಕಾಳುಮೆಣಸು ಸ್ವಾವಲಂಬನೆಯ ಮಾದರಿಯನ್ನು ವಿಶ್ವಾಸ್ ಸುಬ್ರಹ್ಮಣ್ಯ ತೋರಿಸಿದ್ದಾರೆ.
Vishwas subrahmanya from Puttur has set a model in urban households by successfully growing a pepper vine on the compound wall of his residence.
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…
ಈ ಬಾರಿ ಫೆಬ್ರವರಿ ತಿಂಗಳಲ್ಲಿ 34 ಡಿಗ್ರಿ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ…