ಕಂಪೌಂಡ್‌ ವಾಲಿನಲ್ಲಿ ಕಾಳುಮೆಣಸು ಕೃಷಿ | ನಗರದಲ್ಲಿ ಕಾಳುಮೆಣಸು ಸ್ವಾವಲಂಬನೆ |

October 14, 2024
10:58 AM
ಮನೆಯ ಪಕ್ಕದ ಕಂಪೌಂಡ್‌ ವಾಲ್‌ಗೆ ಕಾಳುಮೆಣಸು ಬಳ್ಳಿಯನ್ನು ಬಿಡುವ ಮೂಲಕ ನಗರ ಪ್ರದೇಶದಲ್ಲೂ ಕಾಳುಮೆಣಸು ಸ್ವಾವಲಂಬನೆ ಸಾಧ್ಯವಾಗಿದೆ.

ಈಗ ಹಲವು ಕಡೆ ಕಾಳುಮೆಣಸು ಬೆಳೆಯುವ ವಿವಿಧ ಪ್ರಯತ್ನಗಳ ಬಗ್ಗೆ ಚರ್ಚೆಯಾಗುತ್ತಿದೆ. ಈ ನಡುವೆ ನಗರ ಪ್ರದೇಶದಲ್ಲೂ ಮನೆ ಬಳಕೆಗೆ ಅಗತ್ಯವಿದ್ದಷ್ಟು ಕಾಳುಮೆಣಸು ಹೇಗೆ ಬೆಳೆಯಬಹುದು ಎನ್ನುವುದು ಕೂಡಾ ಆಸಕ್ತಿಯ ವಿಷಯ. ಇದನ್ನು ಬ್ಯಾಂಕ್‌ ಉದ್ಯೋಗಿ, ಪುತ್ತೂರಿನ ವಿಶ್ವಾಸ್‌ ಸುಬ್ರಹ್ಮಣ್ಯ ಅವರು ಮಾಡಿದ್ದಾರೆ. ತಮ್ಮ ಮನೆಗೆ ಅಗತ್ಯ ಇರುವಷ್ಟು ಕಾಳುಮೆಣಸು ಬೆಳೆಯುತ್ತಿದ್ದಾರೆ.…..ಮುಂದೆ ಓದಿ….

ವಿಶ್ವಾಸ್‌ ಸುಬ್ರಹ್ಮಣ್ಯ ಅವರು ಪುತ್ತೂರಿನಲ್ಲಿ ಮನೆ ನಿರ್ಮಾಣದ ಮಾಡಿದ ಬಳಿಕ ಮನೆಯ ಪಕ್ಕದ ಕಂಪೌಂಡ್‌ ವಾಲ್‌ಗೆ ಸುಮಾರು 10 ವರ್ಷಗಳ ಹಿಂದೆ ಕಾಳುಮೆಣಸು ಬಳ್ಳಿ ಬಿಟ್ಟಿದ್ದರು. ಅದಾಗಿ 3-4 ವರ್ಷಗಳ ಬಳಿಕ ಕಾಳುಮೆಣಸು ಕೊಯ್ಲು ಆರಂಭವಾಗಿದೆ, ಗೋಡೆಯ ತುಂಬೆಲ್ಲಾ ಕಾಳುಮೆಣಸು ಬಳ್ಳಿ ಹಬ್ಬುತ್ತಾ ಸಾಗಿದೆ. ಬಹುದೊಡ್ಡ ಆರೈಕೆ ಮಾಡುತ್ತಿಲ್ಲ ಎನ್ನುವ ವಿಶ್ವಾಸ್‌ ಕೃಷ್ಣ ಅವರು, ವರ್ಷಕ್ಕೊಂದು ಬಾರಿ ಸಾವಯವ ಗೊಬ್ಬರ ನೀಡುತ್ತೇವೆ. ಒಂದೆರಡು ಬಳ್ಳಿ ಅಂದು ನಾಟಿ ಮಾಡಿದ್ದು, ಈಗ ಅದು ಇಡೀ ಗೋಡೆ ತುಂಬಾ ವ್ಯಾಪಿಸಿದೆ, ಸದ್ಯ  5 ಕೆಜಿಯಷ್ಟು ಕಾಳುಮೆಣಸು ಲಭ್ಯವಾಗುತ್ತದೆ. ನಮ್ಮ ಮನೆ ಬಳಕೆಗೆ ಸಾಕಾಗುತ್ತದೆ ಎನ್ನುತ್ತಾರೆ ವಿಶ್ವಾಸ್‌ ಸುಬ್ರಹ್ಮಣ್ಯ. ಯಾವುದೇ ಔಷಧಿ ಸಿಂಪಡಣೆ ಮಾಡುತ್ತಿಲ್ಲ, ರೋಗವೂ ಕಡಿಮೆ ಎಂದು ಹೇಳುತ್ತಾರೆ.

ನಗರ ಪ್ರದೇಶದಲ್ಲಿ ಗೋಡೆಯ ಅಲಂಕಾರಕ್ಕೂ ಕಾಳುಮೆಣಸು ಬಳ್ಳಿಯ ಮಾದರಿ ಆದರೆ, ಮನೆ ಉಪಯೋಗಕ್ಕೆ ಕಾಳುಮೆಣಸು ಕೂಡಾ ಲಭ್ಯವಾದಂತಾಗುತ್ತದೆ. ಈ ಮೂಲಕ ಕಾಳುಮೆಣಸು ಸ್ವಾವಲಂಬನೆಯ ಮಾದರಿಯನ್ನು ವಿಶ್ವಾಸ್‌ ಸುಬ್ರಹ್ಮಣ್ಯ ತೋರಿಸಿದ್ದಾರೆ.

Vishwas subrahmanya from Puttur has set a model in urban households by successfully growing a pepper vine on the compound wall of his residence.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ
September 12, 2026
7:30 AM
by: ದ ರೂರಲ್ ಮಿರರ್.ಕಾಂ
ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?
September 12, 2026
7:08 AM
by: ದ ರೂರಲ್ ಮಿರರ್.ಕಾಂ
ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?
September 11, 2026
8:34 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ
September 11, 2026
4:00 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror