Advertisement
MIRROR FOCUS

#BlackPepper | ಕಾಳುಮೆಣಸು ಧಾರಣೆ ಏರಿಕೆ | 500+ ಧಾರಣೆಗೆ ಕಾಳುಮೆಣಸು ಖರೀದಿ | ಏಕೆ ಬೇಡಿಕೆ ಹೆಚ್ಚಾಯ್ತು… ? | ಹೇಗಿದೆ ಮಾರುಕಟ್ಟೆ ಟ್ರೆಂಡ್…?‌ |

Share

ಅನೇಕ ಸಮಯಗಳ ಬಳಿಕ ಕಾಳುಮೆಣಸು ಧಾರಣೆಯಲ್ಲಿ ಚೇತರಿಕೆ ಕಾಣುತ್ತಿದೆ. ವಾರದಿಂದ ವಾರಕ್ಕೆ ಧಾರಣೆಯಲ್ಲಿ  ಏರಿಕೆ ಕಾಣುತ್ತಿದೆ. ಇದೀಗ 530 ರೂಪಾಯಿವರೆಗೂ ಖರೀದಿ ನಡೆದಿದೆ. 

Advertisement
Advertisement

ಕಳೆದ ಅನೇಕ ವರ್ಷಗಳಿಂದ ಕಾಳುಮೆಣಸು ಧಾರಣೆ ಏರಿಕೆ ಕಾಣಲಿಲ್ಲ. 450 ರೂಪಾಯಿ ಆಸುಪಾಸಿನಲ್ಲಿ ಕಾಳುಮೆಣಸು ಧಾರಣೆ ಸ್ಥಿರವಾಗಿತ್ತು. ಇದೀಗ ಕಳೆದ ಒಂದು ತಿಂಗಳಿನಿಂದ ಕಾಳುಮೆಣಸು ಧಾರಣೆ ಚೇತರಿಕೆ ಕಾಣುತ್ತಿತ್ತು. ಈಗ 500 + ಧಾರಣೆಯ ಮೂಲಕ ಮತ್ತೆ ಕೃಷಿಕರ ಗಮನ ಸೆಳೆದಿದೆ. ಕೆಲವು ವರ್ಷಗಳ ಹಿಂದೆ 700 ರೂಪಾಯಿವರೆಗೂ ತಲಪಿದ್ದ ಧಾರಣೆಯ ಮೂಲಕ ಕೃಷಿಕರ ಕಪ್ಪುಚಿನ್ನ ಎಂದೇ ಗುರುತಿಸಿಕೊಂಡಿತ್ತು. ಅದಾಗಿ ಇಳಿಕೆಯಾದ ಮಾರುಕಟ್ಟೆ ಚೇತರಿಕೆ ಕಂಡಿರಲಿಲ್ಲ. ಇದೀಗ ಮತ್ತೆ ಚೇತರಿಕೆ ಕಾಣುತ್ತಿದೆ.

Advertisement

ಸದ್ಯದ ಮಾರುಕಟ್ಟೆ ಮಾಹಿತಿ ಪ್ರಕಾರ, ಮಾರುಕಟ್ಟೆಯಲ್ಲಿ ಕಾಳುಮೆಣಸು ಕೊರತೆ ಕಂಡುಬಂದಿದೆ. ವಿದೇಶಗಳಲ್ಲೂ ಏರುಗತಿಯ ಮಾರುಕಟ್ಟೆ ವಾತಾವರಣ ಇದೆ. ವಿಯೆಟ್ನಾಂನಂತಹ ದೇಶದಲ್ಲಿ ಕೂಡಾ ಕಾಳುಮೆಣಸು ಬೇಡಿಕೆ ಶುರುವಾಗಿದೆ. ಧಾರಣೆ ಇಳಿಕೆಯ ಕಾರಣದಿಂದ ದೇಶೀಯ ಮಾರುಕಟ್ಟೆಯಲ್ಲಿ ಕೃಷಿಕರು ಕಾಳುಮೆಣಸು ಮಾರುಕಟ್ಟೆಗೆ ಬಿಡುತ್ತಿರಲಿಲ್ಲ. ದಾಸ್ತಾನು ಇರಿಸಿಕೊಂಡರೆ, ಅಲ್ಪಸ್ವಲ್ಪ ಪ್ರಮಾಣದಲ್ಲಿ ಕೃಷಿಕರು ಕಾಳುಮೆಣಸು ಮಾರುಕಟ್ಟೆಗೆ ಬಿಡುತ್ತಿದ್ದರು.

ದೇಶದ ಕಾಳುಮೆಣಸು ಉತ್ಪಾದನೆ 70 ಸಾವಿರ ಟನ್‌ ಇದೆ. ಆದರೆ ಅದರಲ್ಲಿ ಕರ್ನಾಟಕದ ಉತ್ಪಾದನೆಯೇ 33 ಸಾವಿರ ಟನ್‌.  ಕೇರಳದಲ್ಲಿ 28 ಸಾವಿರ ಟನ್‌ ಬೆಳೆಯಲಾಗುತ್ತದೆ. ಕಾಳುಮೆಣಸನ್ನು ಭಾರತದಲ್ಲಿ ಪ್ರಮುಖವಾಗಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಒಡಿಶಾ, ಮಹಾರಾಷ್ಟ್ರ, ಗೋವಾ, ಅಸ್ಸಾಂ, ಮೇಘಾಲಯ ಹಾಗೂ ತ್ರಿಪುರಾಗಳಲ್ಲಿ ಬೆಳೆಯಲಾಗುತ್ತದೆ. ಈಚೆಗೆ ಧಾರಣೆ ಹಾಗೂ ರೋಗದ ಸಮಸ್ಯೆಯಿಂದ ಕಾಳುಮೆಣಸು ಗಿಡ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.

Advertisement

ಇದೀಗ ಔಷಧಿ ಸಹಿತ ಸಾಂಬಾರ ವಸ್ತುವಾಗಿ ಕಾಳುಮೆಣಸು ಮತ್ತೆ ಬೇಡಿಕೆ ಶುರುವಾಗಿದೆ. ಪ್ರತೀ ಕೆಜಿಗೆ 500 ರೂಪಾಯಿ ತಲುಪಿದರೂ ಮಾರುಕಟ್ಟೆಗೆ ಕಾಳುಮೆಣಸು ಪ್ರವೇಶವಾಗುತ್ತಿಲ್ಲ. ಹೀಗಾಗಿ ಧಾರಣೆ ಏರಿಕೆಯ ಹಾದಿಯಲ್ಲಿ ಸಾಗುತ್ತಿದೆ. ಇದೇ ವೇಳೆ ಕಾಳುಮೆಣಸು ಬೆಳೆಯಲ್ಲೂ ಕೊರತೆ ಇದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ.

ಕಳೆದ ಬೆಳೆಯಲ್ಲೂ ಕಾಳುಮೆಣಸು ಇಳುವರಿ ಕೊರತೆಯಾಗಿತ್ತು. ಈ ಬಾರಿ ಕೂಡಾ ಸುಮಾರು 5-8 ಸಾವಿರ ಟನ್‌ ಕಾಳುಮೆಣಸು ಕೊರತೆ ಉಂಟಾಗಿದೆ. ವಿದೇಶಗಳಲ್ಲಿ ಕೂಡಾ ಕಾಳುಮೆಣಸು ಇಳುವರಿಯಲ್ಲಿ  ಕೊರತೆ ಕಂಡುಬಂದಿದೆ. ಮುಂದಿನ ಋತುವಿನಲ್ಲಿ ಇಂಡೋನೇಷ್ಯಾದಲ್ಲಿ ಬೆಳೆ ಕಡಿಮೆ ಆಗಲಿದೆ ಎಂದು ಅಂದಾಜಿಸಲಾಗಿದೆ.  ಜಾಗತಿಕ ಬೆಲೆಗಳು ಸಹ ಏರಿಕೆಯ ಸಾಧ್ಯತೆಯಿದೆ. ಆದರೆ ವಿಯೆಟ್ನಾಂನಲ್ಲಿ ಕಾಳುಮೆಣಸು ಉತ್ಪಾದನೆಯು ಕಳೆದ ವರ್ಷ 1.30 ಲಕ್ಷ ಟನ್‌ಗೆ ಹತ್ತಿರದಲ್ಲಿದೆ ಎಂದು ಅಂದಾಜಿಸಲಾಗಿದೆ.

Advertisement

ಹೀಗಾಗಿ ಸದ್ಯ ಕಾಳುಮೆಣಸು ದರ ಏರಿಕೆಯ ನಿರೀಕ್ಷೆ ಇದೆ. ಆದರೆ ಇದೇ ಟ್ರೆಂಡ್‌ ಮುಂದುವರಿಯುವ ಲಕ್ಷಣಗಳ ಬಗ್ಗೆ ಕಾಳುಮೆಣಸು ಮಾರುಕಟ್ಟೆ ವಲಯವು ಯಾವ ಸ್ಪಷ್ಟತೆಯನ್ನೂ ನೀಡುವುದಿಲ್ಲ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಹವಾಮಾನ ವರದಿ | 01-10-2024 | ಗುಡುಗು ಸಹಿತ ಮಳೆ ಸಾಧ್ಯತೆ | 10 ದಿನಗಳವರೆಗೂ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ |

ರಾಜ್ಯದಲ್ಲಿ ತಮಿಳುನಾಡು ಕಡೆಯಿಂದ ಬೀಸುತ್ತಿರುವ ಗಾಳಿಯ ಪ್ರಭಾವ ಹಾಗೂ ಅಧಿಕ ತಾಪಮಾನದಿಂದ ಸ್ಥಳೀಯ…

48 mins ago

ಆರ್ಥಿಕ ವರ್ಷದಲ್ಲಿ 33% ರಬ್ಬರ್‌ ಬೆಲೆ ಹೆಚ್ಚಳ | ಪೂರೈಕೆಯಲ್ಲೂ ಕೊರತೆ | ಒತ್ತಡದಲ್ಲಿ ಟಯರ್‌ ಕಂಪನಿಗಳು |

ಜಾಗತಿಕ ನೈಸರ್ಗಿಕ ರಬ್ಬರ್ ಉತ್ಪಾದನೆಯು ಶೇಕಡಾ 35 ರಷ್ಟು ಬೆಳೆದಿದೆ, ಆದರೆ ಬೇಡಿಕೆಯು…

8 hours ago

ಕೋಲಾರದಲ್ಲಿ ಸೌರ ವಿದ್ಯುತ್ ಯೋಜನೆ ಜಾರಿ | ಒಣಗುತ್ತಿರುವ ತೋಟವನ್ನು ಉಳಿಸಿಕೊಂಡ ರೈತರು |

ಕೋಲಾರ ಜಿಲ್ಲೆಯ 9 ಮಂದಿ ರೈತರು ಕೇಂದ್ರ ಸರ್ಕಾರದಿಂದ ಸಹಾಯಧನದೊಂದಿಗೆ ಸೌರ ವಿದ್ಯುತ್…

18 hours ago

ಅ.3-14 | ಮಂಗಳೂರಿನ ಕುದ್ರೋಳಿ ದಸರಾ | ದಸರಾ ಮೆರವಣಿಗೆ ವೇಳೆ ಡಿಜೆ ಮ್ಯೂಸಿಕ್ ಕಡಿಮೆ ಆದ್ಯತೆಗೆ ಮನವಿ |

ಮಂಗಳೂರು ದಸರಾ ಎಂದೇ ಖ್ಯಾತಿ ಪಡೆದ ಕುದ್ರೋಳಿಯ ಶ್ರೀಗೋಕರ್ಣನಾಥ ಕ್ಷೇತ್ರದ ನವರಾತ್ರಿ ಉತ್ಸವ…

21 hours ago

ಕಾವೇರಿ ವಿಚಾರದಲ್ಲಿ ರಾಜಕೀಯ ಸಲ್ಲದು | ತಮಿಳುನಾಡಿನ ರೈತರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ

ಕಾವೇರಿ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸಾಮಿ…

21 hours ago

2025ರ ವೇಳೆಗೆ ತುಮಕೂರಿಗೆ ಎತ್ತಿನಹೊಳೆ ನೀರು

ತುಮಕೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ ,ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ…

21 hours ago