MIRROR FOCUS

#BlackPepper | ಕಾಳುಮೆಣಸು ಧಾರಣೆ ಏರಿಕೆ | 500+ ಧಾರಣೆಗೆ ಕಾಳುಮೆಣಸು ಖರೀದಿ | ಏಕೆ ಬೇಡಿಕೆ ಹೆಚ್ಚಾಯ್ತು… ? | ಹೇಗಿದೆ ಮಾರುಕಟ್ಟೆ ಟ್ರೆಂಡ್…?‌ |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅನೇಕ ಸಮಯಗಳ ಬಳಿಕ ಕಾಳುಮೆಣಸು ಧಾರಣೆಯಲ್ಲಿ ಚೇತರಿಕೆ ಕಾಣುತ್ತಿದೆ. ವಾರದಿಂದ ವಾರಕ್ಕೆ ಧಾರಣೆಯಲ್ಲಿ  ಏರಿಕೆ ಕಾಣುತ್ತಿದೆ. ಇದೀಗ 530 ರೂಪಾಯಿವರೆಗೂ ಖರೀದಿ ನಡೆದಿದೆ. 

Advertisement

ಕಳೆದ ಅನೇಕ ವರ್ಷಗಳಿಂದ ಕಾಳುಮೆಣಸು ಧಾರಣೆ ಏರಿಕೆ ಕಾಣಲಿಲ್ಲ. 450 ರೂಪಾಯಿ ಆಸುಪಾಸಿನಲ್ಲಿ ಕಾಳುಮೆಣಸು ಧಾರಣೆ ಸ್ಥಿರವಾಗಿತ್ತು. ಇದೀಗ ಕಳೆದ ಒಂದು ತಿಂಗಳಿನಿಂದ ಕಾಳುಮೆಣಸು ಧಾರಣೆ ಚೇತರಿಕೆ ಕಾಣುತ್ತಿತ್ತು. ಈಗ 500 + ಧಾರಣೆಯ ಮೂಲಕ ಮತ್ತೆ ಕೃಷಿಕರ ಗಮನ ಸೆಳೆದಿದೆ. ಕೆಲವು ವರ್ಷಗಳ ಹಿಂದೆ 700 ರೂಪಾಯಿವರೆಗೂ ತಲಪಿದ್ದ ಧಾರಣೆಯ ಮೂಲಕ ಕೃಷಿಕರ ಕಪ್ಪುಚಿನ್ನ ಎಂದೇ ಗುರುತಿಸಿಕೊಂಡಿತ್ತು. ಅದಾಗಿ ಇಳಿಕೆಯಾದ ಮಾರುಕಟ್ಟೆ ಚೇತರಿಕೆ ಕಂಡಿರಲಿಲ್ಲ. ಇದೀಗ ಮತ್ತೆ ಚೇತರಿಕೆ ಕಾಣುತ್ತಿದೆ.

ಸದ್ಯದ ಮಾರುಕಟ್ಟೆ ಮಾಹಿತಿ ಪ್ರಕಾರ, ಮಾರುಕಟ್ಟೆಯಲ್ಲಿ ಕಾಳುಮೆಣಸು ಕೊರತೆ ಕಂಡುಬಂದಿದೆ. ವಿದೇಶಗಳಲ್ಲೂ ಏರುಗತಿಯ ಮಾರುಕಟ್ಟೆ ವಾತಾವರಣ ಇದೆ. ವಿಯೆಟ್ನಾಂನಂತಹ ದೇಶದಲ್ಲಿ ಕೂಡಾ ಕಾಳುಮೆಣಸು ಬೇಡಿಕೆ ಶುರುವಾಗಿದೆ. ಧಾರಣೆ ಇಳಿಕೆಯ ಕಾರಣದಿಂದ ದೇಶೀಯ ಮಾರುಕಟ್ಟೆಯಲ್ಲಿ ಕೃಷಿಕರು ಕಾಳುಮೆಣಸು ಮಾರುಕಟ್ಟೆಗೆ ಬಿಡುತ್ತಿರಲಿಲ್ಲ. ದಾಸ್ತಾನು ಇರಿಸಿಕೊಂಡರೆ, ಅಲ್ಪಸ್ವಲ್ಪ ಪ್ರಮಾಣದಲ್ಲಿ ಕೃಷಿಕರು ಕಾಳುಮೆಣಸು ಮಾರುಕಟ್ಟೆಗೆ ಬಿಡುತ್ತಿದ್ದರು.

ದೇಶದ ಕಾಳುಮೆಣಸು ಉತ್ಪಾದನೆ 70 ಸಾವಿರ ಟನ್‌ ಇದೆ. ಆದರೆ ಅದರಲ್ಲಿ ಕರ್ನಾಟಕದ ಉತ್ಪಾದನೆಯೇ 33 ಸಾವಿರ ಟನ್‌.  ಕೇರಳದಲ್ಲಿ 28 ಸಾವಿರ ಟನ್‌ ಬೆಳೆಯಲಾಗುತ್ತದೆ. ಕಾಳುಮೆಣಸನ್ನು ಭಾರತದಲ್ಲಿ ಪ್ರಮುಖವಾಗಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಒಡಿಶಾ, ಮಹಾರಾಷ್ಟ್ರ, ಗೋವಾ, ಅಸ್ಸಾಂ, ಮೇಘಾಲಯ ಹಾಗೂ ತ್ರಿಪುರಾಗಳಲ್ಲಿ ಬೆಳೆಯಲಾಗುತ್ತದೆ. ಈಚೆಗೆ ಧಾರಣೆ ಹಾಗೂ ರೋಗದ ಸಮಸ್ಯೆಯಿಂದ ಕಾಳುಮೆಣಸು ಗಿಡ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ.

ಇದೀಗ ಔಷಧಿ ಸಹಿತ ಸಾಂಬಾರ ವಸ್ತುವಾಗಿ ಕಾಳುಮೆಣಸು ಮತ್ತೆ ಬೇಡಿಕೆ ಶುರುವಾಗಿದೆ. ಪ್ರತೀ ಕೆಜಿಗೆ 500 ರೂಪಾಯಿ ತಲುಪಿದರೂ ಮಾರುಕಟ್ಟೆಗೆ ಕಾಳುಮೆಣಸು ಪ್ರವೇಶವಾಗುತ್ತಿಲ್ಲ. ಹೀಗಾಗಿ ಧಾರಣೆ ಏರಿಕೆಯ ಹಾದಿಯಲ್ಲಿ ಸಾಗುತ್ತಿದೆ. ಇದೇ ವೇಳೆ ಕಾಳುಮೆಣಸು ಬೆಳೆಯಲ್ಲೂ ಕೊರತೆ ಇದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿದೆ.

ಕಳೆದ ಬೆಳೆಯಲ್ಲೂ ಕಾಳುಮೆಣಸು ಇಳುವರಿ ಕೊರತೆಯಾಗಿತ್ತು. ಈ ಬಾರಿ ಕೂಡಾ ಸುಮಾರು 5-8 ಸಾವಿರ ಟನ್‌ ಕಾಳುಮೆಣಸು ಕೊರತೆ ಉಂಟಾಗಿದೆ. ವಿದೇಶಗಳಲ್ಲಿ ಕೂಡಾ ಕಾಳುಮೆಣಸು ಇಳುವರಿಯಲ್ಲಿ  ಕೊರತೆ ಕಂಡುಬಂದಿದೆ. ಮುಂದಿನ ಋತುವಿನಲ್ಲಿ ಇಂಡೋನೇಷ್ಯಾದಲ್ಲಿ ಬೆಳೆ ಕಡಿಮೆ ಆಗಲಿದೆ ಎಂದು ಅಂದಾಜಿಸಲಾಗಿದೆ.  ಜಾಗತಿಕ ಬೆಲೆಗಳು ಸಹ ಏರಿಕೆಯ ಸಾಧ್ಯತೆಯಿದೆ. ಆದರೆ ವಿಯೆಟ್ನಾಂನಲ್ಲಿ ಕಾಳುಮೆಣಸು ಉತ್ಪಾದನೆಯು ಕಳೆದ ವರ್ಷ 1.30 ಲಕ್ಷ ಟನ್‌ಗೆ ಹತ್ತಿರದಲ್ಲಿದೆ ಎಂದು ಅಂದಾಜಿಸಲಾಗಿದೆ.

ಹೀಗಾಗಿ ಸದ್ಯ ಕಾಳುಮೆಣಸು ದರ ಏರಿಕೆಯ ನಿರೀಕ್ಷೆ ಇದೆ. ಆದರೆ ಇದೇ ಟ್ರೆಂಡ್‌ ಮುಂದುವರಿಯುವ ಲಕ್ಷಣಗಳ ಬಗ್ಗೆ ಕಾಳುಮೆಣಸು ಮಾರುಕಟ್ಟೆ ವಲಯವು ಯಾವ ಸ್ಪಷ್ಟತೆಯನ್ನೂ ನೀಡುವುದಿಲ್ಲ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಹೇಶ್ ಪುಚ್ಚಪ್ಪಾಡಿ

ಕೃಷಿಕ ಹಾಗೂ ಕೃಷಿ ಪತ್ರಕರ್ತ | 2007 ರಿಂದ ವಿವಿಧ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಉಷಾಕಿರಣ, ಹೊಸದಿಗಂತ, ವಿಜಯವಾಣಿ ಹಾಗೂ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ವರದಿಗಾರರಾಗಿ, ವಿಭಾಗ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಇವರ ಆಸಕ್ತಿಯ ವಿಷಯವಾಗಿದೆ.  

Published by
ಮಹೇಶ್ ಪುಚ್ಚಪ್ಪಾಡಿ

Recent Posts

ಬದರೀನಾಥ ಧಾಮ ಯಾತ್ರಾ ಆರಂಭ | ಭಾರೀ ಪ್ರಮಾಣದಲ್ಲಿ ಆಗಮಿಸಿರುವ ಭಕ್ತರು | ಸುರಕ್ಷತೆಗಾಗಿಅರೆಸೇನಾ ಪಡೆ ನಿಯೋಜನೆ

ಉತ್ತರಾಖಂಡದ ಪ್ರಸಿದ್ಧ ಯಾತ್ರಾ ಕ್ಷೇತ್ರ ಬದರೀನಾಥ ಧಾಮವನ್ನು  ತೆರೆಯಲಾಗಿದೆ. ಮುಂಜಾನೆ 6 ಗಂಟೆಯ…

6 hours ago

ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ – ಅರಣ್ಯ ಸಚಿವ ಈಶ್ವರ ಖಂಡ್ರೆ

ಅರಣ್ಯ ಪ್ರದೇಶದಲ್ಲಿ ಆಗಿರುವ ಅಕ್ರಮ ಮಂಜೂರಾತಿ ರದ್ದುಪಡಿಸಿ, ಅರಣ್ಯ ಭೂಮಿ ಕಬಳಿಸಲು ಪ್ರಯತ್ನಿಸುತ್ತಿರುವವರ…

6 hours ago

ಅಡಿಕೆ ಧಾರಣೆ ಏರಿಕೆಗೆ ಕಾರಣ ಇದೆ | ಈಗ ಅಡಿಕೆ ಮಾರುಕಟ್ಟೆಗೆ ಅನ್ವಯಿಸುವ ಸಿದ್ಧಾಂತಗಳು ಯಾವುದು..?

ಈ ಬಾರಿ ಅಡಿಕೆ ಮಾರುಕಟ್ಟೆಯಲ್ಲಿ ಏರಿಳಿತ, ಅಡಿಕೆ ಬೆಳೆ ಕಡಿಮೆ, ಧಾರಣೆ ಏರಿಕೆ…

11 hours ago

2025: ಲಕ್ಷ್ಮೀನಾರಾಯಣ ಯೋಗ | ಈ ರಾಶಿಗೆ ಅದೃಷ್ಟದ ಬಾಗಿಲು ಓಪನ್

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜೋತಿಷಿಗಳನ್ನು ಸಂಪರ್ಕಿಸಿ 9535156490

11 hours ago

ರೈತರ ಪಂಪ್ ಸೆಟ್ ಗಳಿಗೆ ಹಗಲು ಹೊತ್ತಿನಲ್ಲಿಯೇ ವಿದ್ಯುತ್ ನೀಡಲು ತೀರ್ಮಾನ

ಕುಸುಮ್ ಯೋಜನೆ ಮೂಲಕ ಪ್ರತಿ ತಾಲ್ಲೂಕಿನಲ್ಲಿ 20 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ವಿದ್ಯುತ್…

19 hours ago

ಹೀಟ್‌ವೇವ್‌ ಸಂಕಷ್ಟದಲ್ಲಿ ತೆಲಂಗಾಣ-ಹೈದರಾಬಾದ್‌ |

ತೆಲಂಗಾಣ ಹಾಗೂ ಹೈದ್ರಾಬಾದ್‌ ಪ್ರದೇಶದಲ್ಲಿ ಹೀಟ್‌ವೇವ್‌ ಪರಿಸ್ಥಿತಿ ಕಂಡುಬಂದಿದೆ. ಹೀಗಾಗಿ ಹೆಚ್ಚುತ್ತಿರುವ ಉಷ್ಣ…

19 hours ago