ಮಾಯಿದೇ ದೇವುಸ್ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಸಂಘಕ್ಕೆ ಪ್ರಜಾಸತ್ತಾತ್ಮಕ ಚುನಾವಣೆ ಕಾಲೇಜಿನ ಚುನಾವಣಾ ನೀತಿಸಂಹಿತೆಯ ಪಾಲನೆಯೊಂದಿಗೆ ಕಾಲೇಜಿನ
ಪ್ರಾಚಾರ್ಯರಾದ ಡಾ । ಆಂಟೋನಿ ಪ್ರಕಾಶ್ ಮೊಂತೆರೋ ಅವರ ನಿರ್ದೇಶನ ಹಾಗು ಮಾರ್ಗದರ್ಶನ, ಕ್ಯಾಂಪಸ್
ನಿರ್ದೇಶಕ ಸ್ಟ್ಯಾನಿ ಪಿಂಟೊ ಅವರ ಸಹಕಾರದೊಂದಿಗೆ ,ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳ ನೇತೃತ್ವದಲ್ಲಿ ನಡೆಯಿತು .
ಚುನಾವಣೆಯಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಜಂಟಿ ಹುದ್ದೆಗಳಿಗೆ ತಲಾ ಇಬ್ಬರು ಸ್ಪರ್ಧಿಗಳು, ಆರು ಸ್ಪರ್ಧಿಗಳಿದ್ದು ಅನುಕ್ರಮವಾಗಿ ಕಾರ್ಯದರ್ಶಿ 3ನೇ ಬಿಸಿಎಯ ಜಾನ್ವಿಸ್ಟನ್ ಟೈಟಸ್ ಡೈಸ್ ಮತ್ತು 3ನೇ ಬಿ. ಕಾಂ ಮೊಹಮ್ಮದ್ ಆಶಿಕ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಿ ಮೊಹಮ್ಮದ್ ಆಶಿಕ್ ವಿಜೇತರಾಗಿ ಹೊರಹೊಮ್ಮಿದರು. ಮೂರನೇ ಬಿಸಿಎಯ ಅನುಶ್ರೀ ಕೆ ಮತ್ತು 3ನೇಬಿ.ಎಸ್ಸಿರಕ್ಷಾ ಅಂಚನ್ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸಿದ್ದರ. ಕಾರ್ಯದರ್ಶಿಯಾಗಿ ಅನುಶ್ರೀ ಕೆ ಆಯ್ಕೆಯಾದರು.3ನೇ ಬಿ.ಎಸ್ಸಿ ನಯನಾ ಮತ್ತು 3ನೇ ಬಿಕಾಂನ ಶಿವಾನಿ ಜಂಟಿ ಹುದ್ದೆಗೆ ಸ್ಪರ್ಧಿಸಿದ್ದರು. ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು.
ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಡಾ| ಚಂದ್ರಶೇಖರ್ ಮತ್ತು ಭಾರತೀ ಎಸ್ ರೈ ಚುನಾವಣಾ
ಪ್ರಕ್ರಿಯೆ ನಡೆಸಿದರು . ಉಪ ಪ್ರಾಚಾರ್ಯರಾದ ಪ್ರೊ । ಗಣೇಶ್ ಭಟ್ ಹಾಗೂ ಡಾ। ಎ ಪಿ ರಾಧಾಕೃಷ್ಣ ಇವರ
ಉಪಸ್ಥಿತಿಯಲ್ಲಿ , ಡಾ| ವಿಜಯಕುಮಾರ್ ಮೊಳೆಯಾರ್ , ವಿನಯಚಂದ್ರ , ಡಾ| ರಾಧಾಕೃಷ್ಣ ಗೌಡ ,
ವಾಸುದೇವ ಎನ್ ಮತ್ತು ಪ್ರಾಧ್ಯಾಪಕ ವರ್ಗ ಹಾಗು ಕಚೇರಿ ಸಿಬ್ಬಂದಿ ಸಹಕಾರದೊಂದಿಗೆ ಚುನಾವಣೆ ನೆರವೇರಿತು.
ದೇಶದಲ್ಲಿ 19 ರಾಜ್ಯಗಳಲ್ಲಿ 9.25 ಕೋಟಿ ರೈತ ಐಡಿ ನಿರ್ಮಾಣವಾಗಿದೆ. ಮುಂದಿನ 6…
ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಪೋಷಕರಿಗೆ ತುಮಕೂರು ಪೊಲೀಸ್ ಎಚ್ಚರಿಕೆ ನೀಡಿದೆ.…
ಕರ್ನಾಟಕದಲ್ಲಿ ಏಪ್ರಿಲ್ 5ರವರೆಗೆ ಗುಡುಗು ಸಹಿತ ಮಳೆಯ ಚಟುವಟಿಕೆ ಮುಂದುವರಿಯಲಿದೆ. ಏಪ್ರಿಲ್ 10ರಿಂದ…
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ದಕ್ಷಿಣ ಕನ್ನಡ…
ಮಂಗಳೂರು ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ₹500 ಮತ್ತು ಹಳೆ ಅಡಿಕೆ ₹555…
ರಸ್ತೆ ಬದಿ ಕಸ ಎಸೆಯುವವರಿಗೆ ದಂಡ ವಿಧಿಸಲಾಗುತ್ತದೆ, ಪಾವತಿಸದಿದ್ದರೆ FIR ದಾಖಲಾಗುತ್ತದೆ. ಗ್ರಾಮ…