ಹಲವಾರು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯಿಂದಾಗಿ ಕರ್ನಾಟಕದಾದ್ಯಂತ ರೈತರು ಸಂಕಷ್ಟ ಅನುಭವಿಸಿದ್ದಾರೆ. ಇನ್ನೊಂದು ಕಡೆ ಆಹಾರ ಸಂಸ್ಕರಣಾ ಗುಡಿ ಕೈಗಾರಿಕೆಗಳೂ ಹೊಡೆತವನ್ನು ಅನುಭವಿಸಿವೆ.
ಮಳೆಯು ದಕ್ಷಿಣ ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ದೊಡ್ಡ ಹೊಡೆತ ಈಗ ನೀಡಿಲ್ಲವಾದರೂ ರಬ್ಬರ್ ಬೆಳೆಗಾರರಿಗೆ ಸಂಕಷ್ಟವಾಗಿದೆ. ಮಳೆಗಾಲ ಪೂರ್ವದಲ್ಲಿ ರಬ್ಬರ್ ಮರಗಳಿಗೆ ಪ್ಲಾಸ್ಟಿಕ್ ಹೊದಿಕೆ ಅಳವಡಿಕೆ ಕಷ್ಟವಾಗಿದೆ. ಮಳೆಗಾಲದಲ್ಲಿ ರಬ್ಬರ್ ಟ್ಯಾಪಿಂಗ್ ಮಾಡಲು ಪ್ಲಾಸ್ಟಿಕ್ ಹೊದಿಕೆ ಅನಿವಾರ್ಯವಾಗಿದೆ. ಆದರೆ ಮಳೆಯ ಕಾರಣದಿಂದ ನಿಗದಿತ ಸಮಯಕ್ಕೆ ಪ್ಲಾಸ್ಟಿಕ್ ಹೊದಿಕೆ ಅಳವಡಿಕೆ ಕಷ್ಟವಾಗಿದೆ. ಕಳೆದ ವರ್ಷ ಅಕಾಲಿಕ ಮಳೆ ಅಡಿಕೆ ಒಣಗಿಸಲು ಕಷ್ಟವಾಗಿತ್ತು.
ದಾವಣಗೆರೆಯಂತಹ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಭತ್ತ ಮತ್ತು ರಾಗಿ ಕಟಾವು ಚಟುವಟಿಕೆಗಳಿಗೆ ಅಡ್ಡಿಯುಂಟಾಗಿದೆ. ಮಾತ್ರವಲ್ಲದೆ ತೇವಾಂಶದ ಜೊತೆಗೆ ಅವುಗಳ ಗುಣಮಟ್ಟದ ಮೇಲೂ ಪರಿಣಾಮ ಬೀರಿದೆ. ಇನ್ನೂ ಕೆಲ ದಿನ ಮಳೆ ಮುಂದುವರಿದರೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ದಕ್ಷಿಣ ಕನ್ನಡದ ರೈತರು ಬೇಯಿಸಿದ ಅಕ್ಕಿ ಉತ್ಪಾದನೆಗೆ ಸಹ ಹೊಡೆತ ಬಿದ್ದಿದೆ. ಹಲವು ಕಡೆಗಳಲ್ಲಿ ಈ ವರ್ಷ ಮಾರ್ಚ್ನಲ್ಲಿ ಕಟಾವು ಮಾಡಿದ ಬೆಳೆ ಇನ್ನೂ ಹಲವೆಡೆ ಬೇಯಿಸಿ ಒಣಗಿಸಿಲ್ಲ. ಹೀಗಾಗಿ ಇಲ್ಲಿನ ಕುಚುಲಕ್ಕಿ ಇನ್ನೂ ತಯಾರಿ ಹಂತದಲ್ಲಿಯೇ ಇದೆ.
ದ್ವಿದಳ ಧಾನ್ಯಗಳು ಮತ್ತು ತರಕಾರಿಗಳಂತಹ ಅಲ್ಪಾವಧಿಯ ಬೆಳೆಗಳು ಕೂಡಾ ಸಂಕಷ್ಟದಲ್ಲಿದೆ. ತರಕಾರಿ ಕಟಾವು ಮಾಡಿದರೆ ಮಾರುಕಟ್ಟೆ ಸಾಗಿಸಲು ಕಷ್ಟವಾಗುತ್ತದೆ. ಮಳೆ ಬಿದ್ದೊಡನೆ ಕೊಳೆಯಲು ಆರಂಭವಾಗುತ್ತದೆ. ಕಟಾವು ಮಾಡಿದರೂ ಸಂಕಷ್ಟ, ಕಟಾವು ಮಾಡದೇ ಇದ್ದರೂ ಸಂಕಷ್ಟ.ಈ ವರ್ಷ ಅತಿವೃಷ್ಟಿಯಿಂದ ಶೇ.50 ರಷ್ಟು ತರಕಾರಿ ನಾಶವಾಗಿದೆ. ಈಗಾಗಲೇ ಟೊಮೊಟೋ ದರ ಏರಿಕೆಯ ಹಾದಿಯಲ್ಲಿದೆ, ಇದೀಗ ಮಳೆಯ ಕಾರಣದಿಂದ ತರಕಾರಿ ಸರಬರಾಜೂ ಆಗದೆ ಇನ್ನಷ್ಟು ಧಾರಣೆ ಏರಿಕೆ ಸಾಧ್ಯತೆ ಇದೆ.
ಚಿತ್ರದುರ್ಗ ಸೇರಿದಂತೆ ಮಾವು ಬೆಳೆಯುವ ಪ್ರದೇಶದಲ್ಲಿ ಭಾರಿ ಗಾಳಿ, ಆಲಿಕಲ್ಲು ಮಳೆಯಿಂದಾಗಿ ಮಾವಿನ ಹೂವುಗಳು, ಬೇಗನೆ ಕಟಾವು ಆಗಬೇಕಿದ್ದ ಮಾವಿನ ಹೂವುಗಳು ಸಹ ಬಾಡದ ಹಣ್ಣನ್ನು ಕಳೆದುಕೊಂಡಿದೆ. .ಹಾಗಾಗಿ ಈ ಬಾರಿ ಹೂವು ಕಡಿಮೆಯಾಗಿದೆ. ಮಳೆಯಿಂದ ಮಾವಿಗೆ ಹೆಚ್ಚಿನ ಹಾನಿಯಾಗಿದೆ.
ಈಗಿನ ಮಳೆಗೆ ಕಂದಾಯ ಇಲಾಖೆಯು 7,010 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ನಷ್ಟದ ಪ್ರಮಾಣವನ್ನು ಅಂದಾಜಿಸಿದೆ ಮತ್ತು 5,736 ಹೆಕ್ಟೇರ್ಗಳಲ್ಲಿನ ತೋಟಗಾರಿಕೆ ಬೆಳೆಗಳು ಸಹ ನಾಶವಾಗಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
.
ಮೇ 7 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆ…
ನಿನ್ನೆ ನನ್ನ ಬಂಧುಗಳ ಮನೆಯ ಸಮಾರಂಭದಲ್ಲಿ ಭಾಗವಹಿಸಿ ಮನೆಗೆ ಮರಳಿ ಬರುವಾಗ ಮಾರ್ಗ…
ಸತತವಾಗಿ ತಾಪಮಾನ 40 ಡಿಗ್ರಿ ದಾಟಿದ ಕಾರಣ ಅಡಿಕೆ ಬೆಳೆಗೆ ಸಮಸ್ಯೆಯಾಗಿದೆ. ಎಳೆ…
ಮೇ 6 ಅಥವಾ 7ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ…
ಮೇ 6 ರಿಂದ ಕೊಡಗು ಹಾಗೂ ದಕ್ಷಿಣ ಕರಾವಳಿ, ಚಿಕ್ಕಮಗಳೂರು ಭಾಗಗಳಲ್ಲಿ ಮತ್ತೆ…
ಕೊಕೋ ಧಾರಣೆಯಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ.