Advertisement
ಸುದ್ದಿಗಳು

ಮುಂಗಾರು ಪೂರ್ವ ಮಳೆ ತಂದ ಸಂಕಷ್ಟ | ಆಹಾರ ಉತ್ಪನ್ನಗಳ ಧಾರಣೆ ಮೇಲೆ ಪರಿಣಾಮ ?

Share
News Summary
ಮುಂಗಾರು ಪೂರ್ವ ಮಳೆ ಉತ್ತಮವಾಗಿಯೇ ಬಂದಿದೆ. ಕೃಷಿಗೆ, ಭೂಮಿ, ಪರಿಸರಕ್ಕೆ ಉತ್ತಮವಾಗಿತ್ತಾದರೂ ಕೃಷಿ ಬೆಳೆಗೆ, ಇಳುವರಿಗೆ ಸಂಕಷ್ಟವಾಗಿದೆ.

ಹಲವಾರು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮುಂಗಾರು ಪೂರ್ವ ಮಳೆಯಿಂದಾಗಿ ಕರ್ನಾಟಕದಾದ್ಯಂತ ರೈತರು ಸಂಕಷ್ಟ ಅನುಭವಿಸಿದ್ದಾರೆ. ಇನ್ನೊಂದು ಕಡೆ ಆಹಾರ ಸಂಸ್ಕರಣಾ ಗುಡಿ ಕೈಗಾರಿಕೆಗಳೂ ಹೊಡೆತವನ್ನು ಅನುಭವಿಸಿವೆ.

ಮಳೆಯು ದಕ್ಷಿಣ  ಕನ್ನಡ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ದೊಡ್ಡ ಹೊಡೆತ ಈಗ ನೀಡಿಲ್ಲವಾದರೂ ರಬ್ಬರ್‌ ಬೆಳೆಗಾರರಿಗೆ ಸಂಕಷ್ಟವಾಗಿದೆ. ಮಳೆಗಾಲ ಪೂರ್ವದಲ್ಲಿ  ರಬ್ಬರ್‌ ಮರಗಳಿಗೆ ಪ್ಲಾಸ್ಟಿಕ್‌ ಹೊದಿಕೆ ಅಳವಡಿಕೆ ಕಷ್ಟವಾಗಿದೆ. ಮಳೆಗಾಲದಲ್ಲಿ ರಬ್ಬರ್‌ ಟ್ಯಾಪಿಂಗ್‌ ಮಾಡಲು ಪ್ಲಾಸ್ಟಿಕ್‌ ಹೊದಿಕೆ ಅನಿವಾರ್ಯವಾಗಿದೆ. ಆದರೆ ಮಳೆಯ ಕಾರಣದಿಂದ ನಿಗದಿತ ಸಮಯಕ್ಕೆ ಪ್ಲಾಸ್ಟಿಕ್‌ ಹೊದಿಕೆ ಅಳವಡಿಕೆ ಕಷ್ಟವಾಗಿದೆ.  ಕಳೆದ ವರ್ಷ ಅಕಾಲಿಕ ಮಳೆ ಅಡಿಕೆ ಒಣಗಿಸಲು ಕಷ್ಟವಾಗಿತ್ತು.

ದಾವಣಗೆರೆಯಂತಹ ಜಿಲ್ಲೆಗಳಲ್ಲಿ ಮಳೆಯಿಂದಾಗಿ ಭತ್ತ ಮತ್ತು ರಾಗಿ ಕಟಾವು ಚಟುವಟಿಕೆಗಳಿಗೆ ಅಡ್ಡಿಯುಂಟಾಗಿದೆ. ಮಾತ್ರವಲ್ಲದೆ ತೇವಾಂಶದ ಜೊತೆಗೆ ಅವುಗಳ ಗುಣಮಟ್ಟದ ಮೇಲೂ ಪರಿಣಾಮ ಬೀರಿದೆ. ಇನ್ನೂ ಕೆಲ ದಿನ ಮಳೆ ಮುಂದುವರಿದರೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ದಕ್ಷಿಣ ಕನ್ನಡದ ರೈತರು ಬೇಯಿಸಿದ ಅಕ್ಕಿ ಉತ್ಪಾದನೆಗೆ ಸಹ ಹೊಡೆತ ಬಿದ್ದಿದೆ. ಹಲವು ಕಡೆಗಳಲ್ಲಿ ಈ ವರ್ಷ ಮಾರ್ಚ್‌ನಲ್ಲಿ ಕಟಾವು ಮಾಡಿದ ಬೆಳೆ ಇನ್ನೂ ಹಲವೆಡೆ ಬೇಯಿಸಿ ಒಣಗಿಸಿಲ್ಲ. ಹೀಗಾಗಿ ಇಲ್ಲಿನ ಕುಚುಲಕ್ಕಿ ಇನ್ನೂ ತಯಾರಿ ಹಂತದಲ್ಲಿಯೇ ಇದೆ.

ದ್ವಿದಳ ಧಾನ್ಯಗಳು ಮತ್ತು ತರಕಾರಿಗಳಂತಹ ಅಲ್ಪಾವಧಿಯ ಬೆಳೆಗಳು ಕೂಡಾ ಸಂಕಷ್ಟದಲ್ಲಿದೆ. ತರಕಾರಿ ಕಟಾವು ಮಾಡಿದರೆ ಮಾರುಕಟ್ಟೆ ಸಾಗಿಸಲು ಕಷ್ಟವಾಗುತ್ತದೆ. ಮಳೆ ಬಿದ್ದೊಡನೆ ಕೊಳೆಯಲು ಆರಂಭವಾಗುತ್ತದೆ. ಕಟಾವು ಮಾಡಿದರೂ ಸಂಕಷ್ಟ, ಕಟಾವು ಮಾಡದೇ ಇದ್ದರೂ ಸಂಕಷ್ಟ.ಈ ವರ್ಷ ಅತಿವೃಷ್ಟಿಯಿಂದ ಶೇ.50 ರಷ್ಟು ತರಕಾರಿ ನಾಶವಾಗಿದೆ. ಈಗಾಗಲೇ ಟೊಮೊಟೋ ದರ ಏರಿಕೆಯ ಹಾದಿಯಲ್ಲಿದೆ, ಇದೀಗ ಮಳೆಯ ಕಾರಣದಿಂದ ತರಕಾರಿ ಸರಬರಾಜೂ ಆಗದೆ ಇನ್ನಷ್ಟು ಧಾರಣೆ ಏರಿಕೆ ಸಾಧ್ಯತೆ ಇದೆ.

ಚಿತ್ರದುರ್ಗ ಸೇರಿದಂತೆ ಮಾವು ಬೆಳೆಯುವ ಪ್ರದೇಶದಲ್ಲಿ  ಭಾರಿ ಗಾಳಿ, ಆಲಿಕಲ್ಲು ಮಳೆಯಿಂದಾಗಿ ಮಾವಿನ ಹೂವುಗಳು, ಬೇಗನೆ ಕಟಾವು ಆಗಬೇಕಿದ್ದ ಮಾವಿನ ಹೂವುಗಳು ಸಹ ಬಾಡದ ಹಣ್ಣನ್ನು ಕಳೆದುಕೊಂಡಿದೆ. .ಹಾಗಾಗಿ ಈ ಬಾರಿ ಹೂವು ಕಡಿಮೆಯಾಗಿದೆ. ಮಳೆಯಿಂದ ಮಾವಿಗೆ ಹೆಚ್ಚಿನ ಹಾನಿಯಾಗಿದೆ.

ಈಗಿನ ಮಳೆಗೆ ಕಂದಾಯ ಇಲಾಖೆಯು 7,010 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ನಷ್ಟದ ಪ್ರಮಾಣವನ್ನು ಅಂದಾಜಿಸಿದೆ ಮತ್ತು 5,736 ಹೆಕ್ಟೇರ್‌ಗಳಲ್ಲಿನ ತೋಟಗಾರಿಕೆ ಬೆಳೆಗಳು ಸಹ ನಾಶವಾಗಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

18 hours ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

1 day ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

1 day ago

ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…

1 day ago

ಹವಾಮಾನ ವರದಿ | 24-07-2026 | ಕರಾವಳಿಯಲ್ಲಿ ಮುಂದುವರಿಯುವ ಮಳೆ, ಜುಲೈ ಅಂತ್ಯದ ವೇಳೆಗೆ ಮುಂಗಾರು ಹೇಗೆ..?

ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…

1 day ago